ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೋಟ: ದಿನಾಂಕ: 31/07/2022 ರಂದು ಕೋಟ ಪೊಲೀಸ್‌ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮಧು ಬಿ.ಇ. ರವರು ಸಿಬ್ಬಂದಿಯವರೊಂದಿಗೆ ಕೋಟ ಹೈಸ್ಕೂಲ್‌ ಜಂಕ್ಷನ್‌ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಮಧ್ಯಾಹ್ನ 12:30 ಗಂಟೆಗೆ ಸಾಲಿಗ್ರಾಮ ಕಡೆಯಿಂದ ಕೋಟ ಕಡೆಗೆ ಸಿಲ್ವರ್‌ ಬಣ್ಣದ ನಂ: KA-20-EV-7107 ನೇ Suzuki Access 125 ನೇ ಸ್ಕೂಟಿಯಲ್ಲಿ 3 ಜನ ಅಪ್ರಾಪ್ತರಂತೆ ಕಾಣುವ ಯುವಕರು ತ್ರಿಬಲ್‌ ರೈಡ್‌ ನೊಂದಿಗೆ ಅದರ ಸವಾರ ಹೆಲ್ಮೇಟ್‌ ಕೂಡಾ ಧರಿಸದೇ ಅತೀವೇಗವಾಗಿ ಬರುತ್ತಿರುವುದನ್ನು ಕಂಡು ಸ್ಕೂಟಿ ಸವಾರನಿಗೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ ಸ್ಕೂಟಿ ಸವಾರನು ಮೋಟಾರ್ ಸೈಕಲ್ ಅನ್ನು ನಿಧಾನಿಸದೇ ಇನ್ನೂ ಹೆಚ್ಚಿನ ಎಕ್ಸಲೈಟರ್ ನೊಂದಿಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ವಾಹನ ತಪಾಸಣೆ ಮಾಡುತ್ತಿದ್ದವರ ಮೈಮೇಲೆ ಬಂದಂತೆ ಚಲಾಯಿಸಿ, ಕರ್ತವ್ಯದಲ್ಲಿದ್ದವರ ದೈಹಿಕ ಸುರಕ್ಷತೆಗೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿ ಕೋಟ ಕಡೆಗೆ ಸ್ಕೂಟಿ ಚಲಾಯಿಸಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2022 ಕಲಂ: 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಶಿವರಂಜನ್‌ (21), ತಂದೆ:ಸುಧಿಂದ್ರ ಪ್ರಭು, ವಾಸ: ಮನೆ ನಂ: 3-145-2, ದೇವಸ ಬೈಲು ಹೀರೆಬೆಟ್ಟು ಗ್ರಾಮ, ಪರ್ಕಳ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ: 30/07/2022 ರಂದು ರಾತ್ರಿ ಸ್ನೇಹಿತರಾದ ಆಶಿಶ್‌, ಪ್ರಸಾದ್‌, ನಿಶಾಂತ್‌ ರವರೊಂದಿಗೆ ಎಡ್ಜ್‌ ಪಬ್‌ ನಲ್ಲಿ ಊಟ ಮುಗಿಸಿ ರಾತ್ರಿ 12:15 ಗಂಟೆಗೆ ಪ್ರಸಾದ್‌ ಮತ್ತು ನಿಶಾಂತ್‌ ಮಣಿಪಾಲದಲ್ಲಿರುವ ಅವರ ರೂಮಿಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಹಿರೇಬೆಟ್ಟು ಕಡೆಗೆ ತನ್ನ ಮೋಟಾರ್‌ ಸೈಕಲ್‌ನಲ್ಲಿ ಹಾಗೂ ಆಶಿಶ್‌ ನು ಆತನ KA-20-EX- 9311 ನೇ ಮೋಟಾರ್‌ ಸೈಕಲ್‌ ನಲ್ಲಿ ಆತ್ರಾಡಿ ಮದಗ ಕಡೆಗೆ ಹೋಗುತ್ತಾ ರಾತ್ರಿ 00:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಪರ್ಕಳ ದೇವಿನಗರ ತಲುಪುತ್ತಿದ್ದಂತೆ ಆಶಿಶ್‌ನು ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗಕತೆಯಿಂದ ಚಲಾಯಿಸಿ ರಸ್ತೆಯ ಮಧ್ಯೆ ಇದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಲ ಕೈ ಮುರಿತವಾಗಿ ಮೈಕೈಗೆ ರಕ್ತ ಗಾಯವಾಗಿ ಬಿದ್ದಿರುತ್ತಾರೆ. ಪಿರ್ಯಾದಿದಾರರು ತನ್ನ ಬೈಕ್‌ನಲ್ಲಿ ಹಿಂದುಗಡೆಯಿಂದ ಬರುತ್ತಿದ್ದವರು ಆಶಿಶ್‌ನ್ನು ಕೂಡಲೇ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಮನೋಜ್‌ ಕುಮಾರ್‌(48), ತಂದೆ:ದಿ. ರಾಮನ್‌, ವಾಸ: ಕಮಲಾಕ್ಷಿ ನಿಲಯ, ಪಂದುಬೆಟ್ಟು, ಅಂಬಲ್ಪಾಡಿ ಅಂಚೆ, ಉಡುಪಿ ತಾಲೂಕು ಇವರ ದೊಡ್ಡಮ್ಮ ರುಕ್ಮಿಣಿ(80) ರವರು ಅವಿವಾಹಿತರಾಗಿದ್ದು, ದಿನಾಂಕ 28/07/2022 ರಂದು 13:00 ಗಂಟೆಗೆ ದೇವರ ಕೋಣೆಯಲ್ಲಿ ದೀಪ ಹಚ್ಚಿ ಊದುಬತ್ತಿಯನ್ನು ಬಗ್ಗಿ ತೆಗೆಯುವಾಗ ಅವರು ಉಟ್ಟಿದ್ದ ನೈಲಾನ್‌ ಸೀರೆಗೆ ದೀಪದ ಬೆಂಕಿ ತಗುಲಿ, ಮೈಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಸಾಗಿಸಿ, ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದು, ದಿನಾಂಕ 31/07/2022 ರಂದು ಬೆಳಿಗ್ಗೆ 09:22 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 36/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 31-07-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080