Feedback / Suggestions

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ವಿನೋದ್‌ಕುಮಾರ್‌ ಇವರ ಬಾಬ್ತು ಹೀರೋ ಹೊಂಡಾ ಸ್ಪ್ಲೆಂಡರ್‌ ಮೋಟಾರ್‌ ಸೈಕಲ್‌ ನಂಬ್ರ: KA 20 V 9418 (Chassis No: MBLHA10EE9HD47094, Engine No: HA10EA9HD35760) ನೇದನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ ಗೌರಿ ನಿಲಯ ಬಿಲ್ಡಿಂಗ್‌ನ ಕಂಪೌಂಡ್‌ ಒಳಗೆ ನಿಲ್ಲಿಸಿದ್ದು, ದಿನಾಂಕ 29/10/2021 ರಂದು 20:00 ಗಂಟೆಯಿಂದ ದಿನಾಂಕ 30/10/2021 ರಂದು ಬೆಳಿಗ್ಗೆ 06:00 ಗಂಟೆ ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ನ ಅಂದಾಜು ಮೌಲ್ಯ ರೂ. 12,000/- ಆಗಬಹುದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2021ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿ ಕೆ ಶಶಿಕಾಂತ್ ಹೆಬ್ಬಾರ್ ಇವರು ಕಾರ್ಕಳ ಆನೆಕೆರೆ ಭವಾನಿ ಮಿಲ್‌ ಬಳಿ ಬಾಟಾ ಶೋ ರೂಂ ಮುಂಭಾಗ ಸುಮಾರು 7 ವರ್ಷಗಳಿಂದ  K B T  ಟ್ರಕ್  ಸರ್ವಿಸ್ ಎಂಬ ಗ್ಯಾರೇಜನ್ನು ನಡೆಸಿಕೊಂಡಿದ್ದು, ಎಂದಿನಂತೆ ಫಿರ್ಯಾದಿದಾರರು ದಿನಾಂಕ: 13.10.2021 ರಂದು ರಾತ್ರಿ 9:00 ಗಂಟೆಗೆ ಗ್ಯಾರೇಜ್‌ಗೆ ಬಾಗಿಲು ಹಾಕಿ ಮನೆಗೆ ಹೋಗಿದ್ದು ಮರುದಿನ ದಿನಾಂಕ: 14.10.2021 ರಂದು ಬೆಳಿಗ್ಗೆ 8:30 ಗಂಟೆಗೆ ಗ್ಯಾರೇಜ್‌ಗೆ ಬಂದಿದ್ದು ಬಳಿಕ ಗ್ಯಾರೇಜ್‌ನ ಮುಂಭಾಗದ ಸ್ಥಳದಲ್ಲಿ ರಿಪೇರಿಗೆ ನಿಲ್ಲಿಸಿದ್ದ 2 ಟಿಪ್ಪರ್ ಲಾರಿಗಳನ್ನು ಪರಿಶೀಲಿಸಿದಾಗ  KA 19 AC 617 ಮತ್ತು  KA 21 A 50 ನಂಬ್ರದ ಟಿಪ್ಪರ್ ಲಾರಿಗಳಿಗೆ ಅಳವಡಿಸಿದ ಬ್ಯಾಟರಿ ಇಲ್ಲದಿರುವುದು ಕಂಡು ಬಂತು. ಕೂಡಲೇ ಫಿರ್ಯಾದಿದಾರರು ಟಿಪ್ಪರ್ ಲಾರಿ ಮಾಲಕರಾದ ಗಣೇಶ್ ಶೆಟ್ಟಿ ಯವರಿಗೆ ಪೋನ್  ಮೂಲಕ ಮಾಹಿತಿ ತಿಳಿಸಿದ್ದು. ಬಳಿಕ ಫಿರ್ಯಾದಿದಾರರು ಮತ್ತು ಗಣೇಶ್ ಶೆಟ್ಟಿ ರವರು ಕಳವಾದ ಬ್ಯಾಟರಿಯ ಬಗ್ಗೆ ಎಲ್ಲಾ ಕಡೆ ಹುಡುಕಾಡಿದ್ದು ಈ ದಿನದ ತನಕ ಕಳವಾದ ಬ್ಯಾಟರಿ ಪತ್ತೆಯಾಗಿರುವುದಿಲ್ಲ. ದಿನಾಂಕ: 13.10.2021 ರಂದು ರಾತ್ರಿ 9:00 ಗಂಟೆಯಿಂದ ಮರುದಿನ ದಿನಾಂಕ: 14.10.2021 ರ ಬೆಳಿಗ್ಗೆ  8:30  ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಗ್ಯಾರೇಜ್‌ನಲ್ಲಿ ರಿಪೇರಿಗೆ ತಂದು  ನಿಲ್ಲಿಸಿದ್ದ KA 19 AC 617 ಮತ್ತು  KA 21 A 50 ನಂಬ್ರದ ಟಿಪ್ಪರ್ ಲಾರಿಗಳಿಗೆ ಅಳವಡಿಸಿದ 2  ಬ್ಯಾಟರಿಗಳನ್ನು   ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 2 ಬ್ಯಾಟರಿಗಳ ಮೌಲ್ಯ ಒಟ್ಟು ರೂ. 20,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 30-10-2021 ರಂದು ಪಿರ್ಯಾದಿ ಮಾಧವ ಇವರು ಬೈಂದೂರು ತಾಲೂಕು ಕಂಬದಕೋಣೆಯಲ್ಲಿರುವ  ಅವರ  ಮಾವನಾದ ಶೇಷ ದೇವಾಡಿಗರವರ ಮನೆಗೆ ಬಂದಿದ್ದು ಮದ್ಯಾಹ್ನ ಮನೆಯಿಂದ ವಾಪಾಸು ಪಿರ್ಯದಿದಾರರು ಶೇಷ ದೇವಾಡಿಗರವರೊಂದಿಗೆ ಕಂಬದ ಕೋಣೆ ಪೇಟೆಗೆ ಬಂದವರು  ಫಿರ್ಯಾದಿದಾರರು ಅರೆಹೊಳೆ ಕ್ರಾಸ್‌ಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತು ಕೊಂಡಿದ್ದು,  ಶೇಷ ದೇವಾಡಿಗರವರು ಅವರ ಮನೆ ಕಡೆಗೆ   ರಾ, ಹೆ. 66 ರಲ್ಲಿ  ರಸ್ತೆಯ ಎಡ ಬದಿಯಲ್ಲಿ  ನಡೆದು ಕೊಂಡು ಹೋಗುತ್ತಿದ್ದಾಗ ಮನೀಶ್  ಬಾರ್‌ ಎದುರು ಮದ್ಯಾಹ್ನ 12.00 ಗಂಟೆಗೆ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಕೆಎ 47 ಎಂ 7875 ನೇದರ ಕಾರು ಚಾಲಕ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಶೇಷ ದೇವಾಡಿಗರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಅದರ ಪರಿಣಾಮ  ಶೇಷ ದೇವಾಡಿಗರವರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಅವರನ್ನು ಎತ್ತಿ ಉಪಚರಿಸಿದ್ದು ಶೇಷ ದೇವಾಡಿಗರವರ ಬಲಕಾಲಿಗೆ ಒಳ ಜಖಂ ಉಂಟಾಗಿದ್ದು 108 ಆಂಬುಲೆನ್ಸ್ ವಾಹನದಲ್ಲಿ ಶೇಷ ದೇವಾಡಿಗರವರ ಮಗ ಗಿರೀಶನು ಚಿಕಿತ್ಸೆ ಬಗ್ಗೆ ಕುಂದಾಪುರ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 171/2021 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 30-10-2021 05:53 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080