ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಅನುಪಮ್ (20), ತಂದೆ: ವಾಸುದೇವ ಮೊಗವೀರ, ವಾಸ:ಸೂರಾಲು ಬಾಳ್ಕಟ್ಟು ಮನೆ ಕೊಕ್ಕರ್ಣೆ ಪೆಜಮಂಗೂರು ಗ್ರಾಮ ಕೊಕ್ಕರ್ಣೆ ಅಂಚೆ ಬ್ರಹ್ಮಾವರ ತಾಲೂಕು ಇವರು ದಿನಾಂಕ 29/03/2021 ರಂದು ತನ್ನ KA-20-EN-4236 ನೇ ಪ್ಯಾಷನ್ ಪ್ರೋ ಮೋಟಾರ್ ಸೈಕಲಿನಲ್ಲಿ ತಾಯಿ ಸಾಕು ಎಂಬುವವರೊಂದಿಗೆ ಕುಂದಾಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು  ವಾಪಾಸ್ಸು ಮನೆಗೆ ಹೊರಟು ಕೋಟ ಹೈಸ್ಕೂಲ್ ಸೈಬ್ರಕಟ್ಟೆ ರಸ್ತೆಯಲ್ಲಿ ಸಾಗುತ್ತಾ ಮಧ್ಯಾಹ್ನ 1:20 ಗಂಟೆಗೆ ವಡ್ಡರ್ಸೆಯ ಎಳಹಕ್ಲು  ಕ್ರಾಸ್ ಬಳಿಯ ಮಹಾಲಿಂಗೇಶ್ವರ ಕ್ಯಾಂಟೀನ್ ಬಳಿಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂದಿನಿಂದ ಕೋಟ ಹೈಸ್ಕೂಲ್ ಕಡೆಯಿಂದ ಸೈಬ್ರ ಕಟ್ಟೆ ಕಡೆಗೆ ಸಿಲ್ವರ್ ಬಣ್ಣದ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತಿದ್ದ ಪಿರ್ಯಾದಿದಾರರ ತಾಯಿ ಸಾಕು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಕಾರಿನ ನಂಬ್ರವನ್ನು ನೋಡಲು ಸಾಧ್ಯವಾಗಿರುವುದಿಲ್ಲ.  ಅಪಘಾತದಿಂದ ಪಿರ್ಯಾದಿದಾರರ  ಬಲ ಕಾಲಿಗೆ ಒಳ ನೋವು ಉಂಟಾಗಿದ್ದು ಹಾಗೂ ತಾಯಿ ಸಾಕು ಅವರಿಗೆ ತಲೆಗೆ ತೀವೃ ತರಹದ ರಕ್ತ ಗಾಯವಾಗಿದ್ದು ಅಲ್ಲದೇ  ಕೈಗೆ ಕಾಲಿಗೆ ಮತ್ತು ದೇಹಕ್ಕೆ  ತೀವೃ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಅಲ್ಲಿ ಸೇರಿದ ಜನರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021  ಕಲಂ: 279,337,338 ಐಪಿಸಿ  & 134(A)(B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಮಲ್ಲಿಕಾ (27), ಗಂಡ: ದೀಪಕ್ ಮೇಸ್ತಾ, ವಾಸ: 36/1, 4 ನೇ ವಾರ್ಡ್, ಹೇಮ ಲಕ್ಷ್ಮಣ ನಿಲಯ, ಮದ್ದುಗುಡ್ಡೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ಇವರು ಆಪಾದಿತ ದೀಪಕ್ ಮೇಸ್ತಾರವರೊಂದಿಗೆ ದಿನಾಂಕ 28/08/2020 ರಂದು ಕುಂದಾಪುರದ ನಾವಡರ ಕೇರಿ ಶಕ್ತಿಕೃಪಾ ಕಲ್ಯಾಣ ಮಂಟಪದಲ್ಲಿ ಹಿಂದೂ ಧಾರ್ಮಿಕ ಪದ್ದತಿಯಂತೆ ಮದುವೆಯಾಗಿದ್ದು, ಮದುವೆಯ ಪೂರ್ವದಲ್ಲಿ ಆಪಾದಿತನು 12 ಪವನ್ ಚಿನ್ನವನ್ನು  ವರದಕ್ಷಿಣೆ ರೂಪದಲ್ಲಿ ನೀಡಬೇಕೆಂದು ಕೇಳಿದ್ದು ಮದುವೆಯ ಸಮಯದಲ್ಲಿ 7 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದುಕೊಂಡು, ಮದುವೆಯಾದ ನಂತರದ ದಿನಗಳಲ್ಲಿ ಆಪಾದಿತರಾದ 1) ದೀಪಕ್ ಮೇಸ್ತಾ, 2) ಶ್ರೀಮತಿ ರೂಪಾ, 3) ದೇವದಾಸ ಮೇಸ್ತಾ, 4) ಶಾಂತಾ ಇವರು ಪಿರ್ಯಾದಿದಾರರಿಗೆ ಇನ್ನೂ ಹೆಚ್ಚಿನ  ವರದಕ್ಷಿಣೆಗಾಗಿ  ಕಿರುಕುಳ ನೀಡಿ ಅವಾಚ್ಯವಾಗಿ ಬೈದು, ಕೈಯಿಂದ ಮತ್ತು ಹೊಡೆದು ಕಾಲಿನಿಂದ ತುಳಿಯುತ್ತಿದ್ದುದಾಗಿರುತ್ತದೆ. ಆಪಾದಿತರು ಪಿರ್ಯಾದಿದಾರರಿಂದ ಒಂದು ಚಿನ್ನದ ನೆಕ್ಲೇಸ್ ಹಾಗೂ ಉಂಗುರವನ್ನು ತೆಗೆದುಕೊಂಡು ವಾಪಾಸು ನೀಡಿರುವುದಿಲ್ಲ. ಹೀಗಿರುತ್ತಾ ದಿನಾಂಕ 29/03/2021 ರಂದು ರಾತ್ರಿ 20:30 ಗಂಟೆಗೆ ಆಪಾದಿತರುಗಳು ಏಕಾಏಕಿ ಪಿರ್ಯಾದಿದಾರರಿಗೆ ಹೊಡೆದು ಪಿರ್ಯಾದಿದಾರರನ್ನು ಗಂಡನ ಮನೆಯಿಂದ ಹೊರಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 323, 324, 504 ಜೊತೆಗೆ 34 ಐಪಿಸಿ ಕಲಂ: 3, 4, 6  DP Act ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-03-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080