ಅಭಿಪ್ರಾಯ / ಸಲಹೆಗಳು

ಮನುಷ್ಯಕಾಣೆ ಪ್ರಕರಣ

  • ಬೈಂದೂರು: ಪಿರ್ಯಾದಿ ಸುರೇಶ್ ಪ್ರಾಯ:28 ವರ್ಷ, ತಂದೆ: ಶೇಷು ಪೂಜಾರಿ, ವಾಸ: ಅಯ್ಯಣ್ಣನಮನೆ, ಅಮ್ಮನವರತೊಪ್ಲು, ಉಪ್ಪುಂದ ಗ್ರಾಮ ಬೈಂದೂರು ಇವರ ತಂದೆ ಶೇಷು ಪೂಜಾರಿ ಪ್ರಾಯ 58 ವರ್ಷದವರು ದಿನಾಂಕ; 27/08/2021 ರಂದು ಬೆಳಿಗ್ಗೆ 07:30 ಗಂಟೆಗೆ ಅವರ ತಾಯಿ ಮನೆಯಾದ ಹಳಗೇರಿಯ ಕಾಳುಮನೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋಗಿದ್ದು ರಾತ್ರಿ 08:00 ಗಂಟೆಯಾದರೂ ಮನೆಗೆ ಬಾರದೇ ಇದ್ದು ಫಿರ್ಯಾದಿದಾರರು ಅವರ ತಂದೆಯ ತಾಯಿ ಮನೆಗೆ ಕರೆ ಮಾಡಿ, ಸಂಬಂಧಿಕರ ಮನೆಯವರಲ್ಲಿ ಹಾಗೂ ಅಕ್ಕಪಕ್ಕದಲ್ಲಿ ವಿಚಾರಿಸಿದ್ದು ಫಿರ್ಯಾದಿದಾರರ ತಂದೆಯವರ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ನಂತರ ದಿನಾಂಕ; 28/08/2021 ರಂದು ಪುನ: ಫಿರ್ಯಾದಿದಾರರ ತಂದೆಯವರನ್ನು ಸಂಬಂಧಿಕರ ಮನೆಯವರಲ್ಲಿ ಹಾಗೂ ತಂದೆಯ ತಾಯಿ  ಮನೆಯವರಲ್ಲಿ ಹೋಗಿ ವಿಚಾರಿಸಿದ್ದಲ್ಲಿ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 142/2021 ಕಲಂ: ಮನುಷ್ಯ  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

  • ಪಡುಬಿದ್ರಿ:  ಪಿರ್ಯಾದಿ ಸಾಗರ್ ಕುಮಾರ್ ವರ್ಮಾ (28)ತಂದೆ: ಅಮರ್ ನಾಥ್  ವರ್ಮ ವಾಸ:ಶತೃದನ್ ಪ್ರಸಾದ್ ವರ್ಮ    ಪ್ಲಾಟ್ ನಂಬ್ರ 87, ಸರ್ವೆ ನಂಬ್ರ 388, ಭಾಗ್ಯಶ್ರೀ, ಟೌನ್‌ ಶಿಪ್‌, ವರ್ಸಮೆಡಿ ಗ್ರಾಮ, ಅಂಜಾರ್‌ಗಾಂಧಿ ಧಾಮ ಸಿಟಿ,  ಕಚ್ ಜಿಲ್ಲೆ, ಗುಜರಾತ್ ರಾಜ್ಯ, ಇವರು ನಂದಿಕೂರು ಗ್ರಾಮದ ಅಡ್ವೆ ಸುಂದರಿ ಕಾಂಪೆಕ್ಸ್ ಅಪಾರ್ಟಮೆಂಟ್‌ ನಲ್ಲಿ  ತನ್ನ  ತಂದೆ ಅಮರ ನಾಥ ವರ್ಮ (57 ವರ್ಷ), ತಾಯಿ, ಹೆಂಡತಿ ಮತ್ತು ಮಗುವಿನೊಂದಿಗೆ  ವಾಸವಾಗಿದ್ದು,  ದಿನಾಂಕ 28/08/2021 ರಂದು ರಾತ್ರಿ ಉಟ ಮಾಡಿ ಮಲಗಿದ್ದು  ದಿನಾಂಕ 29/08/2021 ರಂದು ಬೆಳಗಿನ ಜಾವ 04:00 ಗಂಟೆಗೆ ತಂದೆಗೆ ಗ್ಯಾಸ್‌ ಟ್ರಬಲ್‌ ನಿಂದಾಗಿ ಎದೆನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದಂತೆ ಮನೆಯಲ್ಲಿ ಆರೈಕೆ ಮಾಡುತ್ತಿದ್ದಾಗ ಎದೆ ನೋವು ಜಾಸ್ತಿ ಆಗಿದ್ದು ಕೂಡಲೇ  ಒಂದು ಕಾರಿನಲ್ಲಿ ಅಜ್ಜರಕಾಡು ಆಸ್ಪತ್ರೆಗೆ ಬೆಳಿಗ್ಗೆ 05:45 ಗಂಟೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಅಮರ್ ನಾಥ ವರ್ಮ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಪಡುಬಿದ್ರಿ ಠಾಣಾ ಯುಡಿಆರ್  ನಂಬ್ರ 20/2021, ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-08-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080