Feedback / Suggestions

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಈಶ್ವರಿ (28),  ಗಂಡ : ಬಾಲಕೃಷ್ಣ, ವಾಸ :ತೋಟ್ಲಗುರಿ,  ಶಿರ್ವ  ಗ್ರಾಮ ಮತ್ತು ಅಂಚೆ ಕಾಪು ತಾಲೂಕು  ಉಡುಪಿ  ಜಿಲ್ಲೆ ಇವರ ಗಂಡ ಬಾಲಕೃಷ್ಣ (35)  ರವರು ದಿನಾಂಕ 28/07/2022 ರಂದು ಸಂಜೆ  4:35 ಗಂಟೆಗೆ ಕಾಪು ಪೇಟೆಯ ಉಡುಪಿ ಬಸ್‌ ನಿಲ್ದಾಣ ಬಳಿ ನಿಂತಿರುವಾಗ ನೌಷೀದ್ ತನ್ನ KA-20-D-1323  ನೇ ಬಸ್ಸನ್ನು  ಉಡುಪಿ ಕಡೆಯಿಂದ ಕಾಪು ಪೇಟೆಯ ಒಳರಸ್ತೆಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ  ಬಾಲಕೃಷ್ಣ ರವರಿಗೆ   ತಾಗಿಸಿದ ಪರಿಣಾಮ  ಅವರ ಎರಡು ಕಾಲು ಸಂಪೂರ್ಣ ಜಖಂಗೊಂಡಿದ್ದು,  ಸ್ಥಳೀಯರು  ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ  ಉಡುಪಿ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ  ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮನೋಜ ಖಾರ್ವಿ (21), ತಂದೆ:ತಿಮ್ಮಪ್ಪ ಖಾರ್ವಿ , ವಾಸ: ಕನಕನ ಮನೆ, ಕರ್ಕಿಕಳಿ ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 27/07/2022 ರಂದು ಮನೆಯಲ್ಲಿರುವಾಗ  ಅವರ ಸ್ನೇಹಿತ ಪ್ರಸನ್ನ ದೇವಾಡಿಗ ರವರು ಮನೆಗೆ ಬಂದಿದ್ದು ಊಟದ ಸಲುವಾಗಿ ರಾತ್ರಿ 8:00 ಗಂಟೆಗೆ ನಂದನವನ ಗ್ರಾಮದ  ಪರಿಚಯ ಹೋಟೇಲ್ ನಲ್ಲಿರುವ ಬಾರ್ & ರೆಸ್ಟೋರೆಂಟ್ ಗೆ  ಬಂದಿದ್ದು ರಾತ್ರಿ ಊಟ ಮಾಡಿ 10:30 ಗಂಟೆಗೆ  ಹಣ ಕೊಡಲು ಕ್ಯಾಶ್ ಕೌಂಟರ್ ಬಳಿ ಬಂದಾಗ  ಪ್ರಸನ್ನನು  ಹೊರಗಡೆ ಯಾರನ್ನೋ ನೋಡಿ ಪಿರ್ಯಾದಿದಾರರಲ್ಲಿ ಹಣ ಪೇ ಮಾಡುವಂತೆ ಹೇಳಿ ಹೊರಗಡೆ ಬಂದು ಪಿರ್ಯಾದಿದಾರರ ಸ್ನೇಹಿತರಾದ ಯತೀಶ ಹಾಗೂ ಸುದರ್ಶನ್ ರವರೊಂದಿಗೆ ಮಾತನಾಡುತ್ತಿದ್ದನ್ನು  ನೋಡಿ ಪಿರ್ಯಾದಿದಾರರು ಸಹಾ ಹೊರಗೆ ಬಂದು ಅವರ ಬಳಿ ಹೋದಾಗ   ಪ್ರಸನ್ನನು  ಸುದರ್ಶನ್  ನಲ್ಲಿ ಏನು ಮಾತನಾಡುತ್ತಿದ್ದೀರಿ ಎಂದು ವಿಚಾರಿಸಿದ್ದು ಆ ಸಮಯ ಸುದರ್ಶನನು ಪ್ರಸನ್ನನಿಗೆ ಅವಾಚ್ಯವಾಗಿ ಬೈದು ಕೇಳಲು ನೀನು ಯಾರು ಎಂಬುದಾಗಿ  ಕೇಳಿದಾಗ ಪ್ರಸನ್ನ ಹಾಗೂ  ಸುದರ್ಶನ್ ನ ಮಧ್ಯೆ ಮಾತಿಗೆ ಮಾತು ಬೆಳೆದು ರಾತ್ರಿ 10:45 ಗಂಟೆಗೆ ಒಬ್ಬರಿಗೊಬ್ಬರು ಕೈಯಿಂದ ದೂಡಾಡಿಕೊಂಡು  ಸುದರ್ಶನನು ಪ್ರಸನ್ನನಿಗೆ ನಿನ್ನನ್ನು ಕೊಂದೆ ಬಿಡುವುದಾಗಿ ಹೇಳಿ ಆತನ ಕಿಸೆಯಿಂದ ಚಾಕುವನ್ನು ತೆಗೆದು ಪ್ರಸನ್ನನನ್ನು ಕೊಲ್ಲುವ ಉದ್ದೇಶದಿಂದ ಚೂರಿಯಿಂದ ಕುತ್ತಿಗೆ ಕೊಯ್ದಿದ್ದು ಇದರ ಪರಿಣಾಮ  ಪ್ರಸನ್ನನಿಗೆ ತೀವ್ರ  ತರಹದ ಗಾಯವಾಗಿ  ರಕ್ತ ಸ್ರಾವ ಆಗಿ ಬೊಬ್ಬೆ ಹಾಕಿದ್ದು ಆಗ  ಸುದರ್ಶನನು ತಾನು ತಂದಿದ್ದ  ಯಮಹಾ R 15 ಮೋಟಾರು ಸೈಕಲ್ ನಂಬ್ರ KA-20-EZ-2342 ನೇದನ್ನು ಅಲ್ಲಿಯೇ  ಬಿಟ್ಟು  ಓಡಿ ಹೋಗಿರುತ್ತಾನೆ. ಪಿರ್ಯಾದಿದಾರರು, ಯತೀಶ್ ಹಾಗೂ ಇತರರು ಸೇರಿ ಗಾಯಗೊಂಡ ಪ್ರಸನ್ನರವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿಯ ವೈದ್ಯರು  ಪರೀಕ್ಷಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ  ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಒಳ ರೋಗಿಯಾಗಿ ದಾಖಲಿಸಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2022 ಕಲಂ: 307 , 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮೊಹಮ್ಮದ್ ಅಕ್ಬರ್ (34), ತಂದೆ: ಬಿ.ಎಂ ಉಮ್ಮರ್ ಪಾರೂಕ್, ವಾಸ: ಮಲಬಾರ್ ಹೌಸ್, ನಾಕಟ್ಟೆ, ಯಡ್ತರೆ ಅಂಚೆ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು  ಬೈಂದೂರಿನ ಎಸ್‌.ಬಿ.ಐ ಬ್ಯಾಂಕ್ ನಲ್ಲಿ ಖಾತೆ  ಹೊಂದಿದ್ದು, ಪಿರ್ಯಾದಿದಾರರಿಗೆ ದಿನಾಂಕ 10/04/2022 ರಂದು  ಪಾನ್‌ಕಾರ್ಡ್ ಅಪ್‌ಡೇಟ್ ಮಾಡಲು ಮೊಬೈಲ್ ಗೆ ಸಂದೇಶ ಬಂದಿದ್ದು, ಆ ಬಳಿಕ ಯಾರೋ ಅಪರಿಚಿತ ವ್ಯಕ್ತಿ  ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಪಿರ್ಯಾದಿದಾರರಿಂದ  OTP ಪಡೆದು  ಖಾತೆಯಿಂದ ದಿನಾಂಕ 10/04/2022 ರಂದು ರೂಪಾಯಿ 25,000/- ಹಾಗೂ ರೂಪಾಯಿ 1,25,000/-  ರಂತೆ ಒಟ್ಟು ರೂಪಾಯಿ 1,50,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಪಿರ್ಯಾದಿದಾರರಿಗೆ ನಷ್ಟ ಉಂಟು ಮಾಡಿದ್ದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 66(ಸಿ) 66(ಡಿ) ಐ.ಟಿ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.   

Last Updated: 29-07-2022 09:50 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080