ಅಭಿಪ್ರಾಯ / ಸಲಹೆಗಳು

  • ಅಘಘಾತ ಪ್ರಕರಣ
    ಬ್ರಹ್ಮಾವರ: ದಿನಾಂಕ: 28.06.2021 ರಂದು ಪಿರ್ಯಾದಿದಾರ ಶಿವರಾಯ ಮೊಗವೀರ ರವರ ನೆರೆಮನೆ ವಾಸಿ ಮಂಜುನಾಥ ರವರ ಮೋಟಾರ್ ಸೈಕಲ್‌ನ್ನು ರಿಪೇರಿ ಬಗ್ಗೆ ಮಂದಾರ್ತಿ ಗ್ಯಾರೇಜ್‌ನಲ್ಲಿ ಇಟ್ಟು ವಾಪಾಸ್ಸು ಒಟ್ಟಿಗೆ ಪಿರ್ಯಾದಿದಾರರ ಮೋಟಾರ್ ಸೈಕಲ್‌ನಲ್ಲಿ ಬರುವ ಬಗ್ಗೆ ಮಾತನಾಡಿಕೊಂಡು ಪಿರ್ಯಾದಿದಾರರು ಅವರ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಹಾಗೂ ಅವರ ಮುಂದಿನಿಂದ ಮಂಜುನಾಥ ರವರು ಅವರ ಬಾಬ್ತು KA20Y1548 ನೇ ನಂಬ್ರದ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್‌ನಲ್ಲಿ ಕೊಕ್ಕರ್ಣೆ-ಮಂದಾರ್ತಿ ರಸ್ತೆಯಲ್ಲಿ ಮಂದಾರ್ತಿ ಕಡೆಗೆ ಹೋಗುತ್ತಾ ಕಾಡೂರು ಗ್ರಾಮದ ನೀರ್‌ಮಕ್ಕಿ ಎಂಬಲ್ಲಿಸಂಜೆ 5:30 ಗಂಟೆ ಸುಮಾರಿಗೆ ತಲುಪುವಾಗ ಅವರ ಎದುರುರಿನಿಂದ ಅಂದರೆ ಮಂದಾರ್ತಿ ಕಡೆಯಿಂದ ಆರೋಪಿ ಸುರೇಶ್ ಎಂಬವರು ಆತನ ಬಾಬ್ತು KA20V1863 ನೇ ನಂಬ್ರದ ಹೀರೋ ಹೊಂಡಾ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ಆತನ ತೀರಾ ಬಲ ಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ರಸ್ತೆಯ ತೀರಾ ಎಡಭಾಗದಲ್ಲಿ ಸವಾರಿ ಮಾಡುತ್ತಿದ್ದ ಮಂಜುನಾಥ ರವರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಮಂಜುನಾಥ ರವರ ಕಾಲಿನ ಎರಡೂ ಬೆರಳುಗಳು ಮೂಳೆ ಮುರಿತವಾಗಿ, ಹೆಬ್ಬರಳ ಬಳಿ ಸೀಳಿದ ರಕ್ತಗಾಯವಾಗಿರುತ್ತದೆ. ಅಲ್ಲದೇ ಆರೋಪಿ ಹರೀಶ್ ರವರ ಬಲಕಾಲಿನ ಮಂಡಿಯ ಕೆಳಭಾಗಕ್ಕೆ ರಕ್ತಗಾಯ ಉಂಟಾಗಿರುತ್ತದೆ.  ಗಾಯಗೊಂಡ ಮಂಜುನಾಥ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಹಾಗೂ ಹರೀಶ್ ರವರನ್ನ  ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 29.06.2021  ರಂದು  ಬೆಳಿಗ್ಗಿನ ಜಾವ  ಸುಮಾರು   4;45  ಘಂಟೆಗೆ  ಆರೋಪಿಯು  ಕೆಎ. 20 ಎಎ. 2724  ನೇ ನಂಬ್ರದ  ಕೋಳಿ ತುಂಬಿದ  ಪಿಕಪ್  ವಾಹನವನ್ನು ವಾಹನ ಚಾಲಕ ಹರೀಶ  ಮೊಗವೀರ  ಹೆಬ್ರಿ ತಾಲೂಕಿನ  ಬೆಳ್ವೆ   ಗ್ರಾಮದ   ತಾರೀಕಟ್ಟೆ   ಕ್ರಾಸ್  ಬಳಿ   ಇರುವ   ಪೆಟ್ರೋಲ್ ಬಂಕ್ ಎದುರುಗಡೆ ಅಲ್ಬಾಡಿ  ಕಡೆಯಿಂದ   ಗೋಳಿಯಂಗಡಿ ಕಡೆಗೆ ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಆತನ  ತೀರಾಬಲಬದಿಗೆ  ಚಲಾಯಿಸಿ ಗೋಳಿಯಂಗಡಿ  ಕಡೆಯಿಂದ  ಬೆಳ್ವೆ ಕಡೆಗೆ  ಲಕ್ಷಣ ನಾಯ್ಕ  ಎಂಬುವರು  ಚಲಾಯಿಸಿಕೊಂಡು ಹೋಗುತ್ತಿದ್ದ   ಕೆಎ, 20  ಇಇ.2327  ನೇ  ನಂಬ್ರದ   ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಇದರ ಮೋಟಾರ್ ಸೈಕಲ್ ಸವಾರ ಲಕ್ಷಣ ನಾಯ್ಕ ಈತನು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ  ಮೃತಪಟ್ಟಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ:   279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ರವಿ ಪೂಜಾರಿ ಎಂಬುವರು ಅಮಲು ಪದಾರ್ಥ ಸೇವಿಸುವ ಚಟ ದವರಾಗಿದ್ದು ಕಳೆದ 3 ತಿಂಗಳ ಹಿಂದೆ ಅಮಲು ಪದಾರ್ಥ ತ್ಯಜಿಸಿ ಸುಮಾರು 15 ದಿನಗಳಿಂದ ಅಮಲು ಪದಾರ್ಥ ಸೇವಿಸುತ್ತಿದ್ದು ಅವರು ಸುಮಾರು 15 ದಿನಗಳ ಹಿಂದೆ ತನ್ನ ತಾಯಿ ಮನೆಯಾದ ಪಾಪುಜೆಗೆ ಬಂದಿದ್ದು ದಿನಾಂಕ 28/06/2021 ರಂದು ರಾತ್ರಿ 22:00 ಗಂಟೆಗೆ ಊಟವನ್ನು ಮಾಡಿ ಮೂತ್ರ ವಿಸರ್ಜನೆಗೆಂದು ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ 29/06/2021 ರಂದು ಬೆಳಿಗ್ಗೆ 07:00 ಗಂಟೆಗೆ ಪಿಳಿಚಂಡಿ ಬಾಕ್ಯಾರು ಹಾಡಿಯಲ್ಲಿ ನೇಣು ಬೀಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಅನಂತ ದೇವಾಡಿಗ(65ವರ್ಷ) ರವರು ವಿಪರೀತ ಮಧ್ಯಪಾನ ಮಾಡುವ ಚಟ ಹೊಂದಿದ್ದು, ದಿನಾಂಕ  27-06-2021ರ 20:00 ಗಂಟೆಯಿಂದ   ನೇರಂಬಳ್ಳಿಯಲ್ಲಿರುವ ಅವರ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು ಈ ಬಗ್ಗೆ ಹುಡುಕಲಾಗಿ ದಿನಾಂಕ 29-06-2021 ರಂದು ಬೆಳಿಗ್ಗೆ 07:00 ಗಂಟೆಯ ವೇಳೆಗೆ ಕೋಣಿ ಗ್ರಾಮದ ಪ್ರಕಾಶ ಕಾರಂತರವರ ಅಕ್ಕಿ ಮಿಲ್ ಇರುವ ಜಾಗದ ಆವರಣ ಇರುವ ಬಾವಿಯಲ್ಲಿ ಅನಂತ ದೇವಾಡಿಗರವರ ಮೃತ ದೇಹ ನೀರಿನಲ್ಲಿ ತೇಲಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಅನಂತ ದೇವಾಡಿಗರವರು ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 27-06-2021ರ 20:00 ಗಂಟೆಯಿಂದ   29-06-2021  ರಂದು ಬೆಳಿಗ್ಗೆ  07:00  ಗಂಟೆಯ ಮಧ್ಯಾವದಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-06-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080