ಅಭಿಪ್ರಾಯ / ಸಲಹೆಗಳು

ಆಫಘಾತ ಪ್ರಕರಣಗಳು

  • ಕಾಪು: ದಿನಾಂಕ 29/05/2021 ರಂದು ಪಿರ್ಯಾದಿ ಶಾಹಿದ್ ಇವರ ಸಂಬಂಧಿ ಶಾವೂರು ಎಂಬವರು ಅವರ ಬಾಬ್ತು ಕೆ.ಎ. 20 ಡಿ. 5548 ಆಟೋ ರಿಕ್ಷಾದಲ್ಲಿ ಕಾಪು ಶಿರ್ವ ರಸ್ತೆಯಲ್ಲಿ ಪಕೀರನಕಟ್ಟೆಗೆ ಹೋಗಿ ವಾಪಾಸ್ಸು ಬರುವಾಗ ಮಲ್ಲಾರು ಗ್ರಾಮದ ಸ್ವಾಗತನಗರ ಎಂಬಲ್ಲಿ ಬೆಳಗ್ಗೆ 06.30 ಗಂಟೆಯ ಸಮಯಕ್ಕೆ ಕಾಪು ಕಡೆಯಿಂದ ಶಿರ್ವ ಕಡೆಗೆ ಹೋಗುವ ರಸ್ತೆಯಲ್ಲಿ  ಕೆ.ಎ. 35 ಎ. 4149 ನೇದರ ಟಿಪ್ಪರ್ ಲಾರಿಯ ಚಾಲಕ ರಫೀಕ್ ನು ತನ್ನ ಬಾಬ್ತು  ಟಿಪ್ಪರ್ ಲಾರಿಯನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಿಣಾಮ ರಿಕ್ಷಾ ಜಖಂ ಆಗಿ ಚಾಲಕನಾದ ಶಾವೂರು ರವರು ತೀವೃ ಗಾಯಗೊಂಡು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವ ಶಾವೂರು ರವರು ಚಿಕಿತ್ಸೆಗೆ ಸ್ಪಂದಿಸದೇ ಬೆಳಗ್ಗೆ 10.20 ಗಂಟೆಯ ಸಮಯಕ್ಕೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021  ಕಲಂ 279, 304(A)  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು : ಫಿರ್ಯಾದಿ ರಾಮ ಪೂಜಾರಿ   ಇವರ ತಂಗಿಯ ಮಗನಾದ ಪ್ರಮೋದ ಪ್ರಾಯ 31 ವರ್ಷ ರವರು ಸುಮಾರು 12 ವರ್ಷಗಳಿಂದ ಮನೆಗೆ ಬಾರದೇ ಮುಂಬೈನ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದು.  ದಿನಾಂಕ; 27/05/2021 ರಂದು ಮುಂಬೈನಿಂದ ಊರಿಗೆ ಬಂದು ದಿನಾಂಕ; 28/05/2021 ರಂದು ಪಿರ್ಯಾದಿದಾರರ ಮನೆಗೆ ಬಂದಿದ್ದು, ನಂತರ ಪಿರ್ಯಾದಿದಾರರು ಸಂಜೆ ಸಮಯ ಅವರ ಹೆಂಡತಿ ಮನೆಯಾದ ಆಲೂರಿಗೆ ಹೋಗಿರುತ್ತಾರೆ. ದಿನಾಂಕ; 29/05/2021 ರಂದು ಪಿರ್ಯಾದಿದಾರರಿಗೆ ಅವರ ತಂಗಿಯ ಮಗಳಾದ ದೀಕ್ಷಾಳು ಕರೆ ಮಾಡಿ ಪ್ರಮೋದನು ರಾತ್ರಿ ಊಟ ಮಾಡಿ 10:30 ಗಂಟೆಗೆ ಮಲಗಿದ್ದವನು  ಬೆಳಗಿನ ಜಾವ 05.30 ಗಂಟೆಗೆ ಎದ್ದು ನೋಡಿ, ಆಸುಪಾಸಿನಲ್ಲಿ ಹುಡುಕಾಡಿದ್ದಲ್ಲಿ ಪತ್ತೆಯಾಗಿರುವುದಿಲ್ಲವಾಗಿ ತಿಳಿಸಿದ್ದು. ಪಿರ್ಯಾದಿದಾರರು ಕೂಡಲೇ ಬಂದು ಅಸುಪಾಸಿನಲ್ಲಿ ಹುಡುಕಾಡುತ್ತಿರುವಾಗ ಅವರ ಮನೆಯ  ಜಾಗದಲ್ಲಿರುವ ತೋಟದ ಬಾವಿಯ ಬಳಿ ಪ್ರಮೋದನ ಚಪ್ಪಲಿಗಳು ಇದ್ದು, ಬಾವಿಯಲ್ಲಿ ಹುಡುಕುತ್ತಿರುವಾಗ ಪ್ರಮೋದನ ಮೃತ ದೇಹವು ಬಾವಿಯಲ್ಲಿ ದೊರೆತಿರುತ್ತದೆ. ಪ್ರಮೋದನು ಸುಮಾರು 12 ವರ್ಷಗಳಿಂದ ಮನೆಗೆ ಬಾರದೇ ಇದ್ದು, ಅಲ್ಲದೆ ಕಳೆದ ಡಿಸೆಂಬರ್ ನಲ್ಲಿ ತಂಗಿಯ ಮದುವೆಗೂ ಕೂಡಾ ಮನೆಗೆ ಬಾರದೇ ಇದ್ದು ಈ ಬಗ್ಗೆ ಆತನಲ್ಲಿ ವಿಚಾರಿಸಿ, ಮನೆಯ ಸುಖಕಷ್ಟಗಳ ಬಗ್ಗೆ ತಿಳಿಸಿದ್ದು, ಮನೆಯ ಪರಿಸ್ಥಿತಿಯನ್ನು ನೋಡಿ ಪ್ರಮೋದನು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 28/05/2021 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ; 29/05/2021 ರಂದು ಬೆಳಿಗ್ಗೆ 05.30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ತೋಟದಲ್ಲಿರುವ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-05-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080