ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

 

ಶಂಕರನಾರಾಯಣ: ಫಿರ್ಯಾದಿ ರಮೇಶ ಪೂಜಾರಿ ಇವರು ದಿನಾಂಕ 28.04.2023 ರಂದು ಸುಮಾರು 18;45 ಘಂಟೆಗ ಅವರ ಕಾರಿನಲ್ಲಿ   ಸಿದ್ದಾಪುರ  ಸರ್ಕಲ್ ಬಳಿ ಅವರ ಲಾಡ್ಜ್ಗೆ ಹೋಗುತ್ತಿರುವಾಗ ಸಿದ್ದಾಪುರ ಸರ್ಕಲ್ ಬಳಿ ಒಂದು ಗೂಡ್ಸ  ಟೆಂಪೊ  ರಸ್ತೆಯಲ್ಲಿ  ನಿಂತಿರುವುದರಿಂದ   ಅದರ  ಚಾಲಕನಿಗೆ ಟೆಂಪೊ  ತೆಗೆಯಲು  ಹೇಳಿದ್ದು, ಈ  ಸಮಯ  ಟೆಂಪೊವನ್ನು  ಅದರ  ಚಾಲಕ  ತೆಗೆಯದೇ  ಇದ್ದ  ಕಾರಣ   ಫಿರ್ಯಾಧುದಾರರು  ಇಕ್ಕಟ್ಟು ರಸ್ತೆಯಲ್ಲಿ  ಕಾರನ್ನು ಚಲಾಯಿಸಿಕೊಂಡು  ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ   ಡಿ.ಜೆ ಲಾಡ್ಜ್  ಬಳಿ ಹೋಗಿ  ಅಲ್ಲಿ   ಲಾಡ್ಜ ಎದುರುಗಡೆ  ಕಾರನ್ನು ನಿಲ್ಲಿಸುತ್ತಿರುವಾಗ  ಆರೋಪಿಗಳು  ಸಮಾನ   ಉದ್ದೇಶದಿಂದ ಕೆಎ, 20 ಎಮ್‌‌ಸಿ. 4737 ನೇ ನಂಬ್ರದ ಕಾರಿನಲ್ಲಿ  ಬಂದು   ಫಿರ್ಯಾದುದಾರರಿಗೆ ಕಾರಿನಿಂದ ಕೆಳಗಡೆ  ಇಳಿಯ ದಂತೆ ಅಕ್ರಮವಾಗಿ  ಕಾರಿನ  ಬಾಗಿಲನ್ನು  ಒತ್ತಿ  ಹಿಡಿದು  ತಡೆದು ನಿಲ್ಲಿಸಿರುತ್ತಾರೆ, ಈ ಸಮಯ  ಫಿರ್ಯಾಧುದಾರರು  ಕಾರಿನ ಬಾಗಿಲನ್ನು  ದೂಡಿ ಜುವೆಲ್ಲರಿ  ಅಂಗಡಿಯ  ಒಳಗಡೆ   ಹೋದಾಗ  ಅಲ್ಲಿ  ಆರೋಪಿತ 1.ಪ್ರಸಾದ  2.ರಾಜೇಶ 3.ಸುಬ್ರಹ್ಮಣ್ಯ ಮತ್ತು ಇನ್ನೊಬ್ಬ ವ್ಯಕ್ತಿ  ಕೈಯಿಂದ ಹಲ್ಲೆ ಮಾಡಿ  ಅವಾಚ್ಯ ಶಬ್ದದಿಂದ ಬೈದಿರುತ್ತಾರೆ, ಈ ಸಮಯ   ತಪ್ಪಿಸಲು ಬಂದ  ಫಿರ್ಯಾದುದಾರರ  ಹೆಂಡತಿ   ಶ್ರೀಮತಿ  ಶಾಂತ  ಹಾಗೂ ಫಿರ್ಯಾಧುದಾರರಿಗೆ  ಜೀವ  ಬೆದರಿಕೆ  ಹಾಕಿರುತ್ತಾರೆ  ಆರೋಪಿಗಳು ಹಲ್ಲೆ ಮಾಡಿದ  ಪರಿಣಾಮ  ಫಿರ್ಯಾಧುದಾರರ  ಎಡ ಕಣ್ಣಿನ ಬಳಿ  ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ   ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ: 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ

 

ಬೈಂದೂರು: ಫಿರ್ಯಾದಿ ವೆಂಕಟೇಶ್ ಪೂಜಾರಿ ಇವರ ಚಿಕ್ಕಮ್ಮ ಪಾರ್ವತಿ ರವರ ಮಗನಾದ ಕರುಣಾಕರ ಪೂಜಾರಿ ಪ್ರಾಯ:33 ವರ್ಷ ರವರು ಅವಿವಾಹಿತರಾಗಿದ್ದು ಫಿರ್ಯಾದುದಾರರ ಜೊತೆಯಲ್ಲಿ  ವಾಸ ಮಾಡಿಕೊಂಡಿರುತ್ತಾರೆ.  ಕರುಣಾಕರ ಪೂಜಾರಿಯವರು  ಕಳೆದ 6 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕರುಣಾಕರ ಪೂಜಾರಿಯವರು ಒಬ್ಬರೇ  ಎಲ್ಲಿಗಾದರೂ ಹೋಗಿ ತಿರುಗಾಡಿಗೊಂಡು ಮನೆಗೆ ಬರುವ ಸ್ವಭಾವದವರಾಗಿದ್ದು ದಿನಾಂಕ 26-04-2023 ರಂದು ಸಂಜೆ 5:00 ಗಂಟೆಗೆ  ಮನೆಯಲ್ಲಿ ಧರ್ಮಸ್ಥಳಕ್ಕೆ ಹೋಗುವುದಾಗಿ ತಿಳಿಸಿ ಹೋಗಿದ್ದವರು  ಎಲ್ಲಿಯೋ  ತಿರುಗಾಡಿಕೊಂಡಿದ್ದು ಈ ದಿನ ದಿನಾಂಕ 29-04-2023 ರಂದು  ಬೆಳಗ್ಗಿನ ಜಾವ 07:26 ಗಂಟೆಯ ಮೊದಲು ಕಿರಿಮಂಜೇಶ್ವರ ಗ್ರಾಮದ ನಾಗೂರಿನ  ಸಂದೀಪನ್ ಶಾಲೆಯ ಹಿಂಭಾಗದ ರೈಲ್ವೆ  ಹಳಿಯಲ್ಲಿ ನಡೆದುಕೊಂಡು ಹೋಗುವಾಗ  ಯಾವುದೋ ರೈಲು ಡಿಕ್ಕಿ ಹೊಡೆದು  ಮೃತ ಪಟ್ಟಿರುತ್ತಾರ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 26/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಿರಿಯಡ್ಕ: ಪಿರ್ಯಾದಿ ಶಿವರಾಜ್ ಇವರ ತಮ್ಮ ಪರಶುರಾಮ (21) ರವರು ಬೊಮ್ಮಾರಬೆಟ್ಟು ಗ್ರಾಮದ ಹಿರಿಯಡ್ಕದಲ್ಲಿನ ಗೇರು ಬೀಜ ಫ್ಯಾಕ್ಟರಿಯಲ್ಲಿ ಸುಮಾರು ಎರಡುವರೆ ವರ್ಷದಿಂದ ಕೆಲಸ ಮಾಡುತ್ತಿದ್ದು, ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿ:28/04/2023 ರಂದು ಸಂಜೆ 4:00 ಗಂಟೆಗೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ  ದಿನಾಂಕ: 29/04/2023 ರ ಬೆಳಗ್ಗೆ 04:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 16/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕುಂದಾಪುರ: ಪಿರ್ಯಾದಿ ರೇಣುಕಾ ಕೆ ಇವರ ತಮ್ಮನಾದ ಗುರುರಾಜ ಪ್ರಾಯ:37 ವರ್ಷ ಈತನು ತನ್ನ ತಾಯಿ ಪ್ರೇಮಾರೊಂದಿಗೆ  ಕುಂದಾಪುರ ತಾಲೂಕು ಕಸಬಾ ಗ್ರಾಮದ  ಪೂರ್ಣಿಮಾ ಟಾಕೀಸ್‌ ಬಳಿ, ಬೆಟ್ಟಿನಮನೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ 29/04/2023 ರಂದು ಬೆಳಿಗ್ಗೆ 10:50  ಗಂಟೆಗೆ ಪಿರ್ಯಾದುದಾರರ ತಮ್ಮನು ವಾಸಮಾಡಿಕೊಂಡಿದ್ದ ಮನೆಯ ರೂಮಿನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 21/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-04-2023 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080