Feedback / Suggestions

ಅಫಘಾತ ಪ್ರಕರಣ

  • ಮಣಿಪಾಲ: ದಿನಾಂಕ: 28.04.2022 ರಂದು 18:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಅಮಿತ್‌ ಬೇಕರಿ ಸಮೀಪ ರಾ.ಹೆ 169(ಎ) ರಲ್ಲಿ ಕಾರು ನಂಬರ್ KA 19 MH 8620 ನೇದರ ಚಾಲಕನು ತನ್ನ ಕಾರನ್ನು ಪರ್ಕಳ ಕಡೆಯಿಂದ ಮಣಿಪಾಲ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಸಂತೋಷ ಮಡಿವಾಳ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ ನಂಬರ್ KA 20 EV 9102 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 29.04.2022 ರಂದು ಮದ್ಯಾಹ್ನ 12-10 ಗಂಟೆಗೆ ಕಾಳಾವರ ಗ್ರಾಮದ ನಡುಬೆಟ್ಟು ಎಂಬಲ್ಲಿ ಫಿರ್ಯಾದಿ ಅಶೋಕ ಶೆಟ್ಟಿ ಇವರ  ತಾಯಿ ಪದ್ದಮ್ಮ ಶೆಡ್ತಿ (72) ಇವರು ಮನೆಗೆ ನಡೆದುಕೊಂಡು ಬರುತ್ತಿರುವಾಗ ದಾರಿಯಲ್ಲಿ ಆರೋಪಿತನು ಬೈಕ್‌‌ ನಿಲ್ಲಿಸಿಕೊಂಡಿದ್ದು, ಫಿರ್ಯಾದುದಾರರ ತಾಯಿಯಲ್ಲಿ ‘ ಇಲ್ಲಿ ರಾಮಣ್ಣನ ಮನೆ ಎಲ್ಲಿ’  ಎಂದು ಹೇಳಿದ್ದು, ಅವರು ‘ಇಲ್ಲಿ ಯಾರೂ ಇಲ್ಲ’ ಎಂದು ಹೇಳುತ್ತಿದ್ದಂತೆ ಅವರ ಕುತ್ತಿಗೆಯಲ್ಲಿದ್ದ 2 ಪವನ್ ತೂಕದ ಚಿನ್ನದ ರೋಪ್‌ ಚೈನ್‌‌ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಬೈಕ್‌ನಲ್ಲಿ ವೇಗವಾಗಿ ಹೋಗಿರುತ್ತಾನೆ. ಇವನು ಬೆನ್ನಿಗೆ ಸ್ಕೂಲ್‌‌ ಬ್ಯಾಗ್‌‌ ಹಾಕಿಕೊಂಡಿದ್ದು, ತಲೆಗೆ ಹೆಲ್ಮೆಟ್‌ ಹಾಕಿಕೊಂಡಿದ್ದಾಗಿ ತಿಳಿಸಿರುತ್ತಾರೆ. ಬೈಕ್‌ ಸವಾರನು ಸುಲಿಗೆ ಮಾಡಿಕೊಂಡು ಹೋಗಿರುವ ಚಿನ್ನದ ರೋಪ್‌‌ ಚೈನ್‌‌‌ನ ತೂಕ ಮೌಲ್ಯ 75,000/- ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2022 ಕಲಂ: 392  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ರಾಜೇಶ್‌ ಕುಂದರ್‌ ಪ್ರಾಯ: 44 ವರ್ಷ ರವರು ಉಡುಪಿ ಡಿ.ಎ.ಆರ್‌ ಘಟಕದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 28/04/2022 ರಂದು 21:30 ಗಂಟೆಯಿಂದ ದಿನಾಂಕ 29/04/2022 ರಂದು ಬೆಳಿಗ್ಗೆ 10:00 ಗಂಟೆ ನಡುವಿನ ಸಮಯದಲ್ಲಿ ಆದಿಉಡುಪಿ ಶಾಲೆಯಲ್ಲಿ ಗಾರ್ಡ್‌ ಕರ್ತವ್ಯದಲ್ಲಿರುವಾಗ, ಅವರ ಬಳಿಯಿದ್ದ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿ ರಾಜೇಶ್‌ ಕುಂದರ್ ರವರ ಕುತ್ತಿಗೆ ಭಾಗಕ್ಕೆ ಸಿಡಿದು ತಲೆ ಒಡೆದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ಶೇಖರ ನಾಯ್ಕ ಇವರ ಅಣ್ಣನ ಮಗನಾದ ರಜತನು ಸುಮಾರು  7 - 8 ತಿಂಗಳಿನಿಂದ ಮಣಿಪಾಲದ ಹೋಟೆಲ್ ನಲ್ಲಿ  ಕೆಸಮಾಡಿಕೊಂಡಿದ್ದು, ದಿನಾಂಕ: 13.04.2022 ರಿಂದ ಕೆಲಸದಿಂದ ರಜೆಯನ್ನು ಪಡೆದು ಮನೆಯಲ್ಲಿ ಇದ್ದವನು ದಿನಾಂಕ:18.04.2022 ರಂದು ಮತ್ತೆ ಕೆಲಸಕ್ಕೆಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಟು ಹೋಗಿ ಅದೇ ದಿನ ರಾತ್ರಿ 12:00 ಗಂಟೆಗೆ ವಾಪಸ ಮನೆಗೆ ಬಂದಿದ್ದು, ರಾತ್ರಿ ಮನೆಯಲ್ಲಿಯೇ ಮಲಗಿದ್ದವನು ದಿನಾಂಕ: 19.04.2022 ರಂದು ಬೆಳಿಗ್ಗೆ 05:00 ಗಂಟೆಗೆ ವಾಂತಿ ಮಾಡಲು ಪ್ರಾರಂಭಿಸಿದ್ದು, ಮನೆಯವರು ವಿಚಾರಿಸಿದಾಗ  ರಜತನು Rattol ವಿಷವನ್ನು ಸೇವಿಸಿದ್ದಾಗಿ ತಿಳಿಸಿದನು, ಕೂಡಲೇ ರಜತನನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ಕೆ ಎಂ ಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದವನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 29.04.2022 ರಂದು ಬೆಳಿಗ್ಗೆ 11:20 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 29-04-2022 05:50 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080