ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಮಹೇಂದ್ರ ಪ್ರಾಯ  27 ವರ್ಷ ತಂದೆ ಶಂಕರ ಮರಕಾಲ ಚೇರ್ಕಾಡಿ ಪೇತ್ರಿ ಬ್ರಹ್ಮಾವರ ರವರು ದಿನಾಂಕ 28-01-2023 ರಂದು ಮೋಟಾರ್‌ ಸೈಕಲ್ಲಿನಲ್ಲಿ ಮನೆಯಿಂದ  ಬೋಳಕಟ್ಟೆಗೆ ಹೊರಟು ಕೊಕ್ಕರ್ಣೇ-ಬೋಳಕಟ್ಟೆ ರಸ್ತೆಯಲ್ಲಿ ಹೋಗತ್ತಾ ಸಂಜೆ ಸಮಯ ಸುಮಾರು 05.15 ಗಂಟೆ ಸಮಯಕ್ಕೆ   ಚೇರ್ಕಾಡಿ ಗ್ರಾಮದ ಮೂಡುರು ಕಮಲಾಕ್ಷ ಎಂಬುವವರ  ಮನೆಯ ಸಮೀಪ ಹೋಗುವಾಗ, ಪಿರ್ಯಾದಿ  ಎದುರಿನಿಂದ ಅಂದರೆ ಪೇತ್ರಿ ಕಡೆಯಿಂದ ಕೊಕ್ಕರ್ಣೆ ಕಡೆಗೆ ಟಿವಿಎಸ್‌‌ ಕೆ.ಎ 20 ಎಬಿ 2659 ಆಟೋ ರಿಕ್ಷಾವನ್ನು ಅದರ ಚಾಲಕ ವಸಂತ ನಾಯ್ಕ್‌‌ ಎಂಬವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಅವರ ತೀರಾ ಎಡ ಭಾಗಕ್ಕೆ ಚಲಾಯಿಸಿದ್ದು ನಿಯಂತ್ರಣ ತಪ್ಪಿ ಡಾಂಬಾರು ರೋಡಿನ ಅಂಚಿನಲ್ಲಿರುವ ಟೆಲಿಪೋನ್‌ ಕಂಬಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ನಿಂತುಕೊಂಡಿದ್ದು, ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಶೇಖರ ಮರಕಾಲ ಎಂಬವರಿಗೆ ಎಡ ಕಾಲಿನ ಪಾದದ ಬಳಿ ತೀವ್ರ ಗಾಯವಾಗಿದ್ದು ಮಂಡಿ ಹಾಗೂ ಎಡ ಕಾಲಿ ಚರ್ಮ  ಕಿತ್ತು ಬಂದಿದ್ದು, ಎಡ ಸೊಂಟದ ಬಳೊ ಒಳ ಜಖಂ ಉಂಟಾಗಿರುತ್ತದೆ.ರಿಕ್ಷಾದ ಎಡ ಭಾಗ ಜಖಂ ಗೊಂಡು ಟಾಪ್‌‌ ತರಚಿ ಎಡಬಾಗದ ಮಿರರ್‌ ಜಖಂ ಗೊಂಡಿರುತ್ತದೆ. ಗಾಯಗೊಂಡ ಶೇಖರ ಮರಕಾಲರವರನ್ನು ಕೆ ಎಂಸಿ ಅಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಅಫಘಾತಕ್ಕೆ ಟಿವಿಎಸ್‌‌ ಕೆಎ 20 ಎಬಿ 2659 ಆಟೋ ರಿಕ್ಷಾದ ಚಾಲಕ ವಸಂತ ನಾಯ್ಕರವರ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ  ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ 12/2023 : ಕಲಂ 279, 337, 338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 28/01/2023 ರಂದು ಸಂಜೆ 16:00 ಗಂಟೆಯಿಂದ 29/01/2023 08:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ಈದು  ಗ್ರಾಮದ ಗಂಗೆನೀರು ಹದಿನಡ್ಕ ಎಂಬಲ್ಲಿ ಇರುವ ಪಿರ್ಯಾದಿದಾರರ   ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆರದು  ಮನೆಯ ಒಳಗಡೆ ಪ್ರವೇಶಿಸಿ ಪಿರ್ಯಾದುದಾರರ ಮನೆಯ ಕೊಠಡಿಯಲ್ಲಿದ್ದ ಗೋದ್ರೆಜ್ ನ ಬದಿಯಲ್ಲಿರುವ ಸೆಲ್ಪ್ ನ ಅಡಿಯಲ್ಲಿ ಇರಿಸಿದ್ದ ಗೋದ್ರೆಜ್ ಬೀಗದಿಂದ ಲಾಕರ್ ನ್ನು ತೆರೆದು ಸುಮಾರು 4,00,000/- ರೂ ಮೌಲ್ಯದ ಸುಮಾರು 105 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣ 15000  ರೂಪಾಯಿಗಳನ್ನು   ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ  ಶ್ರೀಮತಿ ಹರಿಣಾಕ್ಷಿ (39),ಗಂಡ: ಉಮೇಶ್ ಕುಲಾಲ್ ವಾಸ: ಹದಿನಡ್ಕ ಗಂಗೇನೀರು ಹೊಸ್ಮಾರು ಈದು ಅಂಚೆ, ಮತ್ತು  ಗ್ರಾಮ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2023 ಕಲಂ:454,457, 380 ಭಾದಸಂ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 29-01-2023 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080