ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 27/11/2022 ರಂದು 13:00 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಚೆಂಡೆ ಬಸದಿ ಕ್ರಾಸ್ ಬಳಿ ತಿರುವಿನಲ್ಲಿ  ಬೆಳ್ತಂಗಡಿ –ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ  KL-14-AA- 0729  ನೇ ನಂಬ್ರದ ಕಾರು ಚಾಲಕ ರಂಜಿತ್ ಸಿ ಹೆಚ್  ಬಜಗೋಳಿ  ಕಡೆಯಿಂದ  ಬೆಳ್ತಂಗಡಿ ಕಡೆಗೆ ತನ್ನ ಕಾರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ಚಲಾಯಿಸಿಕೊಂಡು ಹೋಗುವಾಗ  ಕಾರಿನ ಮೇಲೆ ನಿಯಂತ್ರಣ ತಪ್ಪಿ ಕಾರು ಆತನ ಬಲಬದಿಯ ಹೊಂಡಕ್ಕೆ ಬಿದ್ದು ಕಾರು ಜಖಂಗೊಂಡಿದ್ದು, ಈ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 144/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 27/11/2022 ರಂದು ಮಧ್ಯಾಹ್ನ 12:30  ಗಂಟೆಗೆ ಕುಂದಾಪುರ ತಾಲೂಕು, ಕಂದಾವರ  ಗ್ರಾಮದ ಮುಡ್ಲಕಟ್ಟೆಯ ಸಟ್ವಾಡಿಯ ಸೇತುವೆ ಬಳಿ ರಾಜ್ಯ  ರಸ್ತೆ 52ರಲ್ಲಿ, ಆಪಾದಿತ  ಪ್ರದೀಪ್‌‌‌ ಮಸ್ಕರನೆಸ್‌ KA-20-EE-4119 ನೇ HONDA ACTIVA ಸ್ಕೂಟರ್‌‌‌ನಲ್ಲಿ ಅವರ ಸ್ನೇಹಿತ  ಪಿರ್ಯಾದಿದಾರರಾದ   ಶ್ರೀಧರ್‌‌ (33), ತಂದೆ: ರಮೇಶ, ವಾಸ:  ಸಟ್ವಾಡಿ, ಮುಡ್ಲಕಟ್ಟೆ ಅಂಚೆ. ಕಂದಾವರ ಗ್ರಾಮ, ಕುಂದಾಪುರ ತಾಲುಕು ಇವರನ್ನು ಸಹ ಸವಾರಾಗಿ ಕುಳ್ಳಿರಿಸಿಕೊಂಡು ಸಟ್ವಾಡಿ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ರಸ್ತೆಗೆ ಅಡ್ಡ ಬಂದ ನಾಯಿಯನ್ನು  ನೋಡಿ  ಒಮ್ಮೇಲೆ  ಬ್ರೇಕ್‌ ಹಾಕಿದ ಪರಿಣಾಮ, ಸ್ಕೂಟರ್‌ ಸ್ಕಿಡ್‌ ಆಗಿ, ರಸ್ತೆಯ ಬಲಬದಿಯ ತಡೆಬೇಲಿಗೆ ಡಿಕ್ಕಿ ಹೊಡೆದು  ರಸ್ತೆಗೆ ಬಿದ್ದು,  ಪಿರ್ಯಾದಿದಾರರ ಎಡಕಾಲಿನ ಮುಂಗಾಲು ಗಂಟಿನ ಹಿಂಬದಿಗೆ, ಮುಂಗಾಲು ಗಂಟಿನ ಕೆಳಗೆ ಮೂಳೆ ಮುರಿತ ಹಾಗೂ ರಕ್ತಗಾಯವಾಗಿದ್ದು, ಹಾಗೂ  ಆಪಾದಿತನಿಗೆ ಎಡಕೈ ಮೊಣಗಂಟಿನ ಹತ್ತಿರ ಹಾಗೂ ಬಲಭುಜಕ್ಕೆ  ಮೂಳೆ ಮುರಿತ ಗಾಯ ಹಾಗೂ ಒಳ ನೋವಾದ  ಗಾಯವಾಗಿ, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು, ಬಳಿಕ  ಕುಂದಾಪುರ ಚಿನ್ಮಯಿ   ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022   ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ವಿಠಲ ನಾಯ್ಕ (43), ತಂದೆ: ದಿ.ಕೃಷ್ಣ ನಾಯ್ಕ, ವಾಸ: ವಿರೇಶ್ವರ ಜಡ್ಡುಬೈಲು ಸಂತೆಕಟ್ಟೆ ಅಂಚೆ 38 ಕಳ್ತೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂಗಿಯ ಗಂಡ ರವಿ ನಾಯ್ಕ (38) ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೂ ಗುಣಮುಖರಾಗಿರುವುದಿಲ್ಲ. ರವಿನಾಯ್ಕ್ ಇವರು ದಿನಾಂಕ 19/11/2022 ರಂದು ಸಂಜೆ 04:00 ಗಂಟೆಗೆ ತನ್ನ ಹುಳುಕಜ್ಜಿಯ ಬಗ್ಗೆ ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ವೈದ್ಯರ ಬಳಿ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು. ದಿನಾಂಕ 27/11/2022 ರಂದು ಸಂಜೆ 06:00 ಗಂಟೆಗೆ ಕಳ್ತೂರು ಗ್ರಾಮದ ಜಡ್ಡುಬೈಲು ಎಂಬಲ್ಲಿನ ರಿಸರ್ವ್‌ ಫಾರೆಸ್ಟ್‌ ಗೇರು ಪ್ಲಾಂಟೇಶನ್‌ ಹಾಡಿಯ ಪೊದೆಯ ಬಳಿವಿರುವ ಒಂದು ಗೇರು ಮರದ ಕೊಂಬೆಗೆ ನೈಲಾನ್‌ ಹಗ್ಗವನ್ನು ಕಟ್ಟಿ  ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಸಂಪೂರ್ಣ ಕೊಳೆತು ಹೋಗಿರುವ ಸ್ಥಿತಿಯಲ್ಲಿ ರವಿನಾಯ್ಕ್ ರವರ ಮೃತದೇಹವು ದೊರೆತಿದ್ದು. ರವಿನಾಯ್ಕ್  ಇವರು ಮಾನಸಿಕ ಖಾಯಿಲೆಯು ಗುಣಮುಖವಾಗದ ವಿಚಾರದಲ್ಲಿ ಮನನೊಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 33/2022 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಂದೀಪ್‌ ಆಚಾರಿ 34), ತಂದೆ: ಬಸವ ಆಚಾರಿ, ವಾಸ: ಬೂದಾಡಿ, ಬಿಲ್ಲಾಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರು ಒಂದೂವರೆ ವರ್ಷದಿಂದ ಬನ್ನೇರಳಕಟ್ಟೆಯ ಮಾನ್ಯ ಎಂಬಲ್ಲಿರುವ ಶ್ರೀಮತಿ ಸುಶೀಲಾ ಹೆಗ್ಡೆ ರವರ ಮನೆಯಲ್ಲಿ ಸಂಸಾರದೊಂದಿಗೆ  ವಾಸವಾಗಿದ್ದು,  ಸುಶೀಲಾ ಹೆಗ್ಡೆ ರವರ ಮಕ್ಕಳು ಬೆಂಗಳೂರು ಹಾಗೂ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದು ಸುಶೀಲಾ ಹೆಗ್ಡೆ ರವರು ಒಬ್ಬಂಟಿಯಾಗಿ ವಾಸವಾಗಿದ್ದರಿಂದ ಅವರ ಭದ್ರತೆಯ ಸಲುವಾಗಿ ಅವರ ಮಗಳು ಸುಜಾತ ಶೆಟ್ಟಿ ರವರು ಪಿರ್ಯಾದಿದಾರರಿಗೆ ಅವರ ಮನೆಯಲ್ಲಿ ತಮ್ಮ ತಾಯಿಯೊಂದಿಗೆ ವಾಸವಾಗಿರುವಂತೆ ಕೇಳಿಕೊಂಡಿದ್ದು ಅದರಂತೆ ಪಿರ್ಯಾದಿದಾರರ ಅವರ ಮನೆಯಲ್ಲಿ ವಾಸವಾಗಿರುವುದಾಗಿದೆ.  15 ದಿನಗಳ ಹಿಂದೆ ಸುಶೀಲಾ ಹೆಗ್ಡೆ ರವರು ತಮ್ಮ ಹಿರಿ ಮಗಳೊಂದಿಗೆ ಶಿವಮೊಗ್ಗಕ್ಕೆ ಹೋಗಿರುತ್ತಾರೆ. ಪಿರ್ಯಾದಿದಾರರು ತಮ್ಮ  ಊರಿನಲ್ಲಿ ಹೊಸತಾಗಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ದಿನಾಂಕ 26/11/2022 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ವಾಪಾಸು ಸಂಜೆ 5:00 ಗಂಟೆಗೆ ಮನೆಗೆ ಬಂದಿದ್ದು, ಹೊಸತಾಗಿ ನಿರ್ಮಾಣ ಮಾಡುತ್ತಿದ್ದ ಮನೆಯಲ್ಲಿ ರಾತ್ರಿ ಕೂಡಾ ನಿರ್ಮಾಣ ಕೆಲಸ ಇದ್ದುದರಿಂದ ವಾಸವಿದ್ದ ಸುಶೀಲಾ ಹೆಗ್ಡೆ ರವರ ಮನೆಗೆ ಬೀಗ ಹಾಕಿ ಸಂಸಾರ ಸಮೇತ ಅಲ್ಲಿಗೆ ಹೋಗಿರುತ್ತಾರೆ. ದಿನಾಂಕ 26/11/2022 ರಂದು ಸಂಜೆ 5:00 ಗಂಟೆಯಿಂದ ದಿನಾಂಕ  27/11/2022 ರಂದು ಮಧ್ಯಾಹ್ನ 1:30 ಗಂಟೆಯ ಮಧ್ಯಾವಧಿಯಲ್ಲಿ ಸುಶೀಲಾ ಹಗ್ಡೆ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾರೋ ಕಳ್ಳರು ಯಾವುದೋ ವಸ್ತುವಿನಿಂದ ಬಾಗಿಲುಗಳನ್ನು ಬಲಾತ್ಕಾರವಾಗಿ ಮೀಟಿ ಜಖಂಗೊಳಿಸಿ ಮನೆಯ ಒಳಪ್ರವೇಶಿಸಿ ಕಳವು ಮಾಡಲು ಯತ್ನಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 208/2022 ಕಲಂ: 454, 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 28-11-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080