ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಮೋಹನ ಕುಮಾರ್ (32), ತಂದೆ: ವಿ. ಶ್ರೀನಿವಾಸ, ವಾಸ: 1-2-21, ಪರಪಳ್ಳಿ ಸ್ಟ್ರೀಟ್, ಸಿದ್ದಿಪೇಟ, ಸಿದ್ದಿಪೇಟ ಜಿಲ್ಲೆ, ತೆಲಂಗಾಣ ರಾಜ್ಯ ಇವರು ತನ್ನ ತಂದೆ ವಿ.ಶ್ರೀನಿವಾಸ(61) ಹಾಗೂ ತಾಯಿ, ಹೆಂಡತಿ, ಮಗು, ಚಾಲಕನೊಂದಿಗೆ ದಿನಾಂಕ 26/10/2022 ರಂದು ತನ್ನ ಊರಿಂದ ಪ್ರವಾಸದ ಮೇಲೆ ಹೊರಟು ಗೋಕರ್ಣ, ಮುರ್ಡೇಶ್ವರ, ಕೊಲ್ಲೂರಿಗೆ ಹೋಗಿ ದಿನಾಂಕ 27/10/2022 ರಂದು ಉಡುಪಿಗೆ ಹೊರಟು ರಾತ್ರಿ ಆದ್ದರಿಂದ ವಿಶ್ರಾಂತಿ ಪಡೆಯುವ ಬಗ್ಗೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಮದರ್‌ ಪ್ಯಾಲೇಸ್‌ ಹೊಟೇಲ್‌ನಲ್ಲಿ 2 ರೂಮ್‌ ಬುಕ್‌ ಮಾಡಿ ರೂಮ್ ನಂ 217 ರಲ್ಲಿ ಪಿರ್ಯಾದಿದಾರರ ತಂದೆ, ತಾಯಿ ಹಾಗೂ ಚಾಲಕ, ರೂಮ್‌ ನಂ 207 ರಲ್ಲಿ ಪಿರ್ಯಾದಿದಾರರು ತನ್ನ ಹೆಂಡತಿ ಮಗುವೊಂದಿಗೆ ಮಲಗಿದ್ದಾಗ, ದಿನಾಂಕ 28/10/2022 ರಂದು ಬೆಳಗ್ಗಿನ ಜಾವ 03:10 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ತಂದೆ ವಿ.ಶ್ರೀನಿವಾಸ ರವರಿಗೆ ಜ್ವರ ಹಾಗೂ ಉಸಿರಾಟದ ತೊಂದರೆವುಂಟಾಗಿ ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ  ಬೆಳಿಗ್ಗೆ 04:00 ಗಂಟೆಗೆ  ಕರೆದುಕೊಂಡು ಬಂದಾಗ ವೈಧ್ಯರು ಪರೀಕ್ಷಿಸಿ  ವಿ.ಶ್ರೀನಿವಾಸ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ವಿ.ಶ್ರೀನಿವಾಸ ರವರು ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರು ಲಿವರ್‌ ಸಮಸ್ಯೆ ಯಿಂದಲೊ ಅಥವಾ ಹೃದಯಾಘಾತದಿಂದಲೊ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 51/2022 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಅಜೆಕಾರು:  ದಿನಾಂಕ 27/10/2022 ರಂದು ಸಂಜೆ 4:00 ಗಂಟೆಗೆ ಉದಯ ಕುಮಾರ್ ಎಂಬ ವ್ಯಕ್ತಿಯು ಪಿರ್ಯಾದಿದಾರರಾದ ಪರಮೆಶ್ವರಯ್ಯ (33), ತಂದೆ: ಮಲ್ಲಯ್ಯ, ವಾಸ: ಜಂಗಮ ಮಠ ಎಣ್ಣೆಹೊಳೆ ಮರ್ಣೆ ಗ್ರಾಮ ಕಾರ್ಕಳ ತಾಲೂಕು ಇವರ ಜಾಗದಲ್ಲಿ ಪೈಪನ್ನು ಹಾಕಿದ್ದು, ಪೈಪನ್ನು ತೆಗೆಯಿರಿ ಹೋಗಲಿಕ್ಕೆ ಜಾಗದಲ್ಲಿ ದಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರೇ, ಕೇಳಲಿಲ್ಲ, ಪಿರ್ಯಾದಿದಾರರು ಹೋಗಲಿಕ್ಕೆ ದಾರಿ ಮಾಡಿಕೊಂಡಿದ್ದು, ಆ ಸಮಯ ಉದಯ ಎಂಬ ವ್ಯಕ್ತಿಯ ಹೆಂಡತಿ ಹಾಗೂ ತಂಗಿ, ತಾಯಿ ಹಾಗೂ ತಮ್ಮ, ಶ್ಯಾಮಲ, ವೀಣಾ, ಜಯಮ್ಮ, ವಿಶ್ವೇಶ್ವರಯ್ಯರವರು ಪಿರ್ಯಾದಿದಾರರನ್ನು ಬಲತ್ಕಾರವಾಗಿ ತಡೆದು ನಿಲ್ಲಿಸಿ ಹೊಡೆದಿದ್ದು, ಅಲ್ಲದೇ ರಾಡು,ಸರಳು ಹಾಗೂ ಕಲ್ಲು ಹಿಡಿದು ಹೊಡೆಯಲು ಬಂದಿದ್ದು ಆಗ ಪಿರ್ಯಾದಿದಾರರು ಆತ್ಮ ರಕ್ಷಣೆಗೆ ಅವರನ್ನು ನೂಕಿರುತ್ತಾರೆ ಪಿರ್ಯಾದಿದಾರರ ಹೆಂಡತಿ ಉಷಾರವರು ತಡೆಯಲು ಬಂದಾಗ ಅವರಿಗೂ ಕೂಡ ಹೊಡೆದಿದ್ದು,ಅಲ್ಲದೇ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 341, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 28-10-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080