ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕುಂದಾಪುರ : ದಿನಾಂಕ 28/07/2021 ರಂದು ಬೆಳಿಗ್ಗೆ ಸುಮಾರು 10:34 ಗಂಟೆಗೆ, ಕುಂದಾಪುರ  ತಾಲೂಕಿನ ಕಟ್‌ಬೇಲ್ತೂರು  ಗ್ರಾಮದ ಜಾಲಾಡಿಯ ಪೂರ್ವಬದಿಯ  NH 66 ರಸ್ತೆಯಲ್ಲಿ, ಆಪಾದಿತ  ಗಣಪತಿ ಸುಬ್ರಾಯ  ಬಾಗ್ವತ್‌‌ ಎಂಬವರು  KA20-Z-0759 ನೇ ಮಾರುತಿ  ವ್ಯಾಗನರ್‌ ಕಾರನ್ನು ಬೈಂದೂರು  ಕಡೆಯಿಂದ  ಕುಂದಾಪುರ  ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆ  ಮಾಡಿಕೊಂಡು ಬಂದು,  ಸಂತೋಷನಗರ ಕಡೆಯಿಂದ ರಾಮ ಕುಲಾಲರವರು  ಸೈಕಲ್‌ ಸವಾರಿ ಮಾಡಿಕೊಂಡು ಬಂದು, ಸದ್ರಿ ಸೈಕಲ್‌‌‌ ನ್ನು  ದೂಡಿಕೊಂಡು ಪಶ್ಚಿಮ ಬದಿಯ NH 66 ರಸ್ತೆ ದಾಟಿ ಬಳಿಕ ಪೂರ್ವಬದಿಯ  NH 66 ರಸ್ತೆ ದಾಟುತ್ತಿರುವಾಗ ಡಿಕ್ಕಿ ಹೊಡೆದ ಪರಿಣಾಮ ರಾಮ ಕುಲಾಲರವರ ತಲೆಗೆ, ಎಡಕಾಲಿಗೆ ಗಂಭೀರ  ರೀತಿಯ  ರಕ್ತಗಾಯ  ಹಾಗೂ ಒಳ ಪೆಟ್ಟಾಗಿ  ಪ್ರಜ್ಞೆ ಹೋಗಿದ್ದು,  ರಾಮ ಕುಲಾಲರವರಿಗೆ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ ಪ್ರಥಮ   ಚಿಕಿತ್ಸೆ  ಕೊಡಿಸಿ ಅಲ್ಲಿಂದ  ಕುಂದಾಪುರ  ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಬಂದಾಗ  ಆಸ್ಪತ್ರೆಯ  ವೈದ್ಯರು ಪರೀಕ್ಷಿಸಿ   ರಾಮ ಕುಲಾಲರವರು  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಫಿರ್ಯಾದಿ ಶ್ರೀಮತಿ  ಗುಣವತಿ ಇವರೊಂದಿಗೆ  ಮಹಾರಾಷ್ಟ್ರ  ರಾಜ್ಯದ ಥಾಣೆಯಲ್ಲಿ ವಾಸವಿದ್ದಿದ್ದ ಫಿರ್ಯಾದುದಾರರ ಗಂಡನಾದ ಸುಧಾಕರ ರಘುನಾಥ ಶೆಟ್ಟಿ(68  ವರ್ಷ)ರವರು ಈ ಹಿಂದೆ ಹೋಟೆಲ್‌ ಕೆಲಸ  ಮಾಡಿಕೊಂಡಿದ್ದವರು, 2020ನೇ ಇಸವಿಯ  ಫೆಬ್ರವರಿ ತಿಂಗಳಿನಲ್ಲಿ ಉಡುಪಿಗೆ ಬಂದವರು, ಅಲೆಮಾರಿಯಂತೆ ಊರೂರು  ಸುತ್ತಾಡಿಕೊಂಡಿದ್ದು, ನಿನ್ನೆ ದಿನ ದಿನಾಂಕ:  27/07/2021ರಂದು  ಬೆಳಿಗ್ಗೆ  7:00 ಗಂಟೆಯ ಸುಮಾರಿಗೆ ಉಡುಪಿ ಸರ್ವೀಸ್‌  ಬಸ್‌  ನಿಲ್ದಾಣದ ಬಳಿ ಮೃತಪಟ್ಟ  ಸ್ಥಿತಿಯಲ್ಲಿದ್ದವರನ್ನು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡುರವರು ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ ಕರೆತಂದಲ್ಲಿ ಪರೀಕ್ಷಿಸಿದ ವೈದ್ಯರು  ಮೃತರ ಮರಣವನ್ನು ಖಚಿತಪಡಿಸಿದ್ದು, ಮೃತರು  ಈ ಹಿಂದೆ ಹರ್ನಿಯಾ ಖಾಯಿಲೆಗೀಡಾಗಿದ್ದು, ಅವರಿಗಿದ್ದ ಖಾಯಿಲೆ ಉಲ್ಬಣಿಸಿ  ಮೃತಪಟ್ಟಿರಬಹುದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್  ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-07-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080