ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 28/03/2022  ರಂದು ಬೆಳಿಗ್ಗೆ  ಸುಮಾರು 09:15 ಗಂಟೆಗೆ,  ಕುಂದಾಪುರ  ತಾಲೂಕಿನ, ಕೊಟೇಶ್ವರ  ಗ್ರಾಮದ  ಮಹೀಂದ್ರ ಶೋರೂಮ್ ಬಳಿ ಎನ್ ಹೆಚ್ 66  ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ ಭಾಸ್ಕರ್ ಜೆ ಎಸ್  ಎಂಬವರು  KA20-AB-3814 ನೇ  ಮಹೀಂದ್ರ ಬೊಲೋರೋ ಗೂಡ್ಸ ವಾಹನವನ್ನು ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಯಾವುದೇ ಸೂಚನೆ ನೀಡದೇ ನಿರ್ಲಕ್ಷತನದಿಂದ ಬಲಬದಿಯ ಮಹೀಂದ್ರ ಶೋರೂಮ್ ಶಾಪ್  ಕಡೆಗೆ ತಿರುಗಿಸಿ  ಅದೇ ಮಾರ್ಗವಾಗಿ ಗೂಡ್ಸ ವಾಹನದ ಹಿಂಭಾಗದಲ್ಲಿ ಬರುತ್ತಿರುವ ಪಿರ್ಯಾದಿ ಮೊಹಮ್ಮದ್ ಜಕ್ವಾನ ಪ್ರಾಯ 24 ವರ್ಷ ತಂದೆ: ಅಬ್ದುಲ್ ರೆಹಮಾನ್ ವಾಸ: ಐತಾಳಬೆಟ್ಟು ಕೋಟೇಶ್ವರ ಗ್ರಾಮ ಇವರ ಬಾಬ್ತು KA20ES-3489 ನೇ  TVS ಅಪಾಚಿ ಬೈಕಿಗೆ  ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು  ಬೈಕ್ ಸಮೇತ್ ರಸ್ತೆಗೆ ಬಿದ್ದು,  ಅವರ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾದ ಗಾಯ, ಹಣೆಗೆ ಹಾಗೂ ಬಲಕೈಗೆ ತರಚಿದ ಗಾಯವಾಗಿ ಕೋಟೇಶ್ವರ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 44/2022  ಕಲಂ 279,338    IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ:  ದಿನಾಂಕ 27.03.2022 ರಂದು ಸಂಜೆ ಪಿರ್ಯಾದಿ ಜಯಂತಿ, (59), ಗಂಡ: ಸುರೇಶ್ ಪೂಜಾರಿ, ವಾಸ: ಮನೆ ನಂ 7-20, ಪಿಲ್ಕಳ, ಗರಡಿಮನೆ, ಉಪ್ಪೂರು ಗ್ರಾಮ ಇವರು ಹಾಗೂ ಅವರ ಗಂಡ ಸುರೇಶ್ ಪೂಜಾರಿ ರವರು  ಉಪ್ಪೂರು   ಗ್ರಾಮದ ಉಪ್ಪೂರು  ಲಕ್ಷ್ಮೀ ಬಾರ್ ಎದುರು ಇರುವ ಮೀನು ಮಾರುವ ಹೆಂಗಸಿನಿಂದ ಮೀನು ತೆಗೆದುಕೊಂಡು ವಾಪಾಸ್ಸು ಮನೆಯ ಕಡೆಗೆ ಹೋಗಲು ಪಿರ್ಯಾದಿದಾರರು ಉಡುಪಿ - ಬ್ರಹ್ಮಾವರ ರಾ.ಹೆ 66 ರ ರಸ್ತೆಯನ್ನು ದಾಟಿ ಡಿವೈಡರ್ ಮಧ್ಯೆ ನಿಂತುಕೊಂಡು ಅವರ ಹಿಂದಿನಿಂದ ಬರುತ್ತಿದ್ದ ಅವರ ಗಂಡ ಸುರೇಶ್ ಪೂಜಾರಿಯವರನ್ನು ನೋಡುತ್ತಿದ್ದು, ಸುರೇಶ್ ಪೂಜಾರಿಯವರು ರಸ್ತೆ ದಾಟಲು ಅಣಿಯಾಗುತ್ತಿರುವಾಗ ಸಮಯ ರಾತ್ರಿ 7:30 ಗಂಟೆ ಸುಮಾರಿಗೆ   ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿಯು ಅವರ ಬಾಬ್ತು  KA.03.HZ.1920 ನೇ ಮೋಟಾರ್ ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು  ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು  ಸುರೇಶ್ ಪೂಜಾರಿ ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಸುರೇಶ್ ಪೂಜಾರಿ ರವರು ಕೂಡ ರಸ್ತೆಗೆ ಬಿದ್ದು ಅವರ  ಕುತ್ತಿಗೆ, ಸೊಂಟಕ್ಕೆ ಒಳಜಖಂ ಉಂಟಾಗಿ, ಎಡಕಾಲಿನ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಗಾಯಗೊಂಡಸುರೇಶ್ ಪೂಜಾರಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ  ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ51/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 28-03-2022 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080