Feedback / Suggestions

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 28/03/2022  ರಂದು ಬೆಳಿಗ್ಗೆ  ಸುಮಾರು 09:15 ಗಂಟೆಗೆ,  ಕುಂದಾಪುರ  ತಾಲೂಕಿನ, ಕೊಟೇಶ್ವರ  ಗ್ರಾಮದ  ಮಹೀಂದ್ರ ಶೋರೂಮ್ ಬಳಿ ಎನ್ ಹೆಚ್ 66  ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ ಭಾಸ್ಕರ್ ಜೆ ಎಸ್  ಎಂಬವರು  KA20-AB-3814 ನೇ  ಮಹೀಂದ್ರ ಬೊಲೋರೋ ಗೂಡ್ಸ ವಾಹನವನ್ನು ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಯಾವುದೇ ಸೂಚನೆ ನೀಡದೇ ನಿರ್ಲಕ್ಷತನದಿಂದ ಬಲಬದಿಯ ಮಹೀಂದ್ರ ಶೋರೂಮ್ ಶಾಪ್  ಕಡೆಗೆ ತಿರುಗಿಸಿ  ಅದೇ ಮಾರ್ಗವಾಗಿ ಗೂಡ್ಸ ವಾಹನದ ಹಿಂಭಾಗದಲ್ಲಿ ಬರುತ್ತಿರುವ ಪಿರ್ಯಾದಿ ಮೊಹಮ್ಮದ್ ಜಕ್ವಾನ ಪ್ರಾಯ 24 ವರ್ಷ ತಂದೆ: ಅಬ್ದುಲ್ ರೆಹಮಾನ್ ವಾಸ: ಐತಾಳಬೆಟ್ಟು ಕೋಟೇಶ್ವರ ಗ್ರಾಮ ಇವರ ಬಾಬ್ತು KA20ES-3489 ನೇ  TVS ಅಪಾಚಿ ಬೈಕಿಗೆ  ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು  ಬೈಕ್ ಸಮೇತ್ ರಸ್ತೆಗೆ ಬಿದ್ದು,  ಅವರ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾದ ಗಾಯ, ಹಣೆಗೆ ಹಾಗೂ ಬಲಕೈಗೆ ತರಚಿದ ಗಾಯವಾಗಿ ಕೋಟೇಶ್ವರ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 44/2022  ಕಲಂ 279,338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ:  ದಿನಾಂಕ 27.03.2022 ರಂದು ಸಂಜೆ ಪಿರ್ಯಾದಿ ಜಯಂತಿ, (59), ಗಂಡ: ಸುರೇಶ್ ಪೂಜಾರಿ, ವಾಸ: ಮನೆ ನಂ 7-20, ಪಿಲ್ಕಳ, ಗರಡಿಮನೆ, ಉಪ್ಪೂರು ಗ್ರಾಮ ಇವರು ಹಾಗೂ ಅವರ ಗಂಡ ಸುರೇಶ್ ಪೂಜಾರಿ ರವರು  ಉಪ್ಪೂರು   ಗ್ರಾಮದ ಉಪ್ಪೂರು  ಲಕ್ಷ್ಮೀ ಬಾರ್ ಎದುರು ಇರುವ ಮೀನು ಮಾರುವ ಹೆಂಗಸಿನಿಂದ ಮೀನು ತೆಗೆದುಕೊಂಡು ವಾಪಾಸ್ಸು ಮನೆಯ ಕಡೆಗೆ ಹೋಗಲು ಪಿರ್ಯಾದಿದಾರರು ಉಡುಪಿ - ಬ್ರಹ್ಮಾವರ ರಾ.ಹೆ 66 ರ ರಸ್ತೆಯನ್ನು ದಾಟಿ ಡಿವೈಡರ್ ಮಧ್ಯೆ ನಿಂತುಕೊಂಡು ಅವರ ಹಿಂದಿನಿಂದ ಬರುತ್ತಿದ್ದ ಅವರ ಗಂಡ ಸುರೇಶ್ ಪೂಜಾರಿಯವರನ್ನು ನೋಡುತ್ತಿದ್ದು, ಸುರೇಶ್ ಪೂಜಾರಿಯವರು ರಸ್ತೆ ದಾಟಲು ಅಣಿಯಾಗುತ್ತಿರುವಾಗ ಸಮಯ ರಾತ್ರಿ 7:30 ಗಂಟೆ ಸುಮಾರಿಗೆ   ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿಯು ಅವರ ಬಾಬ್ತು  KA.03.HZ.1920 ನೇ ಮೋಟಾರ್ ಸೈಕಲ್‌ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು  ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು  ಸುರೇಶ್ ಪೂಜಾರಿ ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಸುರೇಶ್ ಪೂಜಾರಿ ರವರು ಕೂಡ ರಸ್ತೆಗೆ ಬಿದ್ದು ಅವರ  ಕುತ್ತಿಗೆ, ಸೊಂಟಕ್ಕೆ ಒಳಜಖಂ ಉಂಟಾಗಿ, ಎಡಕಾಲಿನ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಗಾಯಗೊಂಡಸುರೇಶ್ ಪೂಜಾರಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ  ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 

Last Updated: 28-03-2022 05:55 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080