Feedback / Suggestions

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ರಾಜು (40), ತಂದೆ: ಬಸವ, ವಾಸ: ಗಾಂಧಿನಗರ, ಮರವಂತೆ, ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 26/10/2021 ರಂದು ಶ್ರೀನಿವಾಸ ಖಾರ್ವಿಯವರ ಅಂಗಡಿಯ ಎದುರು ನಿಂತುಕೊಂಡಿದ್ದಾಗ ಮದ್ಯಾಹ್ನ  2:00 ಗಂಟೆಗೆ ಅವರ ಪರಿಚಯದ ವೇದಾವತಿ ಖಾರ್ವಿಯವರು ಮೀನು ಖರೀದಿಯ ಬಗ್ಗೆ ತಲೆಯಲ್ಲಿ ಬುಟ್ಟಿ ಇಟ್ಟುಕೊಂಡು ಮರವಂತೆಯಿಂದ ಬ್ರೇಕ್ ವಾಟರ್ ಕಡೆಗೆ ಹೋಗುವ ರಸ್ತೆಯಲ್ಲಿ ಬೈಂದೂರು ತಾಲೂಕು ಮರವಂತೆ ಗ್ರಾಮದ ಶ್ರೀನಿವಾಸ ಕೆ.ಎಂ ರವರ ಅಂಗಡಿಯ ಎದುರುಗಡೆ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರವಿ ಮೆಂಡನ್ ಎಂಬವರು KA-20-EB-2137 ನೇ ಮೋಟಾರ್ ಸೈಕಲ್ ನ್ನು ಮರವಂತೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ವೇದಾವತಿ ಖಾರ್ವಿಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವೇದಾವತಿ ಖಾರ್ವಿಯವರು ಬುಟ್ಟಿ ಸಮೇತ ರಸ್ತೆಗೆ ಬಿದ್ದು  ಸೊಂಟಕ್ಕೆ, ಬಲ ಭುಜಕ್ಕೆ  ಒಳಜಖಂ  ಆಗಿದ್ದು ಬಲ ಕಾಲಿನ ತೋರುಬೆರಳಿಗೆ  ರಕ್ತಗಾಯ ಹಾಗೂ ಎಡ ಕೋಲು ಕೈಗೆ ತರಚಿದ ಗಾಯ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021  ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾಪು :  ಪಿರ್ಯಾದಿದಾರರಾದ ಇಲಿಯಾಸ್ (31), ತಂದೆ : ಅಬುಬಕ್ಕರ್, ವಾಸ : ಮಾಷಾ ಅಲ್ಲಾ ಮಂಜಿಲ್ ಚಂದ್ರನಗರ, ಜನತಾ ಕಾಲೋನಿ ಪಾದೂರು ಅಂಚೆ ಮಜೂರು  ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ  ಇವರು ಗುಜುರಿ ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ದಿನಾಂಕ 26/10/2021 ರಂದು ಸಂಜೆ ಪಿರ್ಯಾದಿದಾರರು ಅವರ ಸ್ನೇಹಿತ ಅಶ್ರಫ್ ರವರ KA-19-EV- 0407 ನೇ ಮೋಟಾರು ಸೈಕಲ್‌ನಲ್ಲಿ  ಹಿಂಬದಿ ಕುಳಿತುಕೊಂಡು ಪಿರ್ಯಾದಿದಾರರು ಅವರ ಅಣ್ಣ ಹುಸೇನ್ ಎಂಬವರ ಮನೆಯಾದ ಕುಡ್ತಿಮಾರ್ ಮಲ್ಲಾರಿಗೆ ಹೋಗಿ ವಾಪಾಸ್ಸು ಪಿರ್ಯಾದಿದಾರರು ಮನೆಗೆ ಬರುವಾಗ ಮಲ್ಲಾರು  ಗ್ರಾಮದ ಗುಡ್ಡೆಕೇರಿ ಎಂಬಲ್ಲಿ ಶಾಬನ್‌ರವರ ಅಂಗಡಿ ಸಮೀಪ  ಸಂಜೆ  6:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಪರಿಚಯವಿರುವ ಉಮ್ಮರ್, ನಾಜೀಂ ಮತ್ತು ಸತ್ತರ್ ಎಂಬುವವರು ಪಿರ್ಯಾದಿದಾರರು ಸಹ ಸವಾರನಾಗಿ ಕುಳಿತುಕೊಂಡು ಬರುವ  ಮೋಟಾರು ಸೈಕಲ್‌ನ್ನು ತಡೆದು ನಿಲ್ಲಿಸಿ ಉಮ್ಮರ್‌ನು ಏಕಾಏಕಿ ಬಂದು ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದಿದ್ದು, ನಾಜೀಂ ನು ಅಲ್ಲಿಯೇ ಶಾಬನ್‌ರವರ ಅಂಗಡಿಯ ಬೊಂಡ ಕೆತ್ತುವ ಕತ್ತಿ ತಂದು ಉಮ್ಮರ್‌ನಿಗೆ ಕೊಟ್ಟಿದ್ದು, ಉಮ್ಮರನ್ನು ಕತ್ತಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು, ಉಳಿದವರು ಪಿರ್ಯಾದಿದಾರರಿಗೆ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ತಲೆಯಲ್ಲಿ ಗಾಯವಾಗಿದ್ದು ಅಶ್ರಫ್‌ನು ಗಲಾಟೆಯನ್ನು ಬಿಡಿಸಿದ್ದು, ಆಗ 3 ಜನರು ಸೇರಿ ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಕತ್ತಿಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ. ಪಿರ್ಯಾದಿದಾರರಿಗೆ ಅಶ್ರಫ್‌ನು ಚಿಕಿತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ  ವೈದ್ಯರು ಪಿರ್ಯಾದಿದಾರರಿಗೆ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2021 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 27-10-2021 05:57 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080