ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 25/09/2021 ರಂದು ಪಿರ್ಯಾದಿದಾರರಾದ ಜಿತೇಶ ಕುಲಾಲ್‌ (29) ತಂದೆ:ಕೃಷ್ಣ ಮೂಲ್ಯ,vವಾಸ: ಶ್ರೀನಿಧಿ ನಿಲಯ, ನಿಟ್ಟೂಲ್‌ಹೌಸ್‌, ಮೂಡುಬೆಳ್ಳೆ ಇವರು ತನ್ನ KA-20 EL-4818 ನೇ  ದ್ವಿಚಕ್ರ ವಾಹನದಲ್ಲಿ ಸುಂದರ ಮೂಲ್ಯ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ದ್ವಿ ಚಕ್ರ ವಾಹನವನ್ನು  ಮೂಡುಬೆಳ್ಳೆಯಿಂದ ಕಾರ್ಕಳ ಕಡೆಗೆ ಸಾಗಿರುವ ಸಾರ್ವಜನಿಕ ರಾಜ್ಯ  ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಸಮಯ ಸುಮಾರು ಸಂಜೆ 7:30 ಗಂಟೆಗೆ ಪಳ್ಳಿ ಶಾಲೆಯ ಬಳಿ ತಲುಪಿದಾಗ ರಸ್ತೆಯ  ಎಡಬದಿಯಲ್ಲಿ ನಿಲ್ಲಿಸಿದ್ದ KA-20 R-1619 ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರವಾಹನವನ್ನು  ಅದರ ಸವಾರನು ಯಾವುದೇ ಸೂಚನೇ ನೀಡದೇ ನಿರ್ಲಕ್ಷತನದಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ ದ್ವಿಚಕ್ರ ವಾಹನಕ್ಕೆ  ಡಿಕ್ಕಿಹೊಡೆದ ಪರಿಣಾಮ ಜಿತೇಶ ಕುಲಾಲ್‌ ರವರು ಹಾಗೂ ಸಹಸವಾರ ಸುಂದರ ಮೂಲ್ಯರವರು ರಸ್ತೆಗೆ ಬಿದ್ದಿದ್ದು ಅಪಘಾತದಿಂದ ಜಿತೇಶ ಕುಲಾಲ್‌ ರವರ ಎರಡು ಕಾಲುಗಳಿಗೆ ಮತ್ತು ಎರಡು ಕೈಗಳಿಗೆ ತರಚಿದ ಗಾಯವಾಗಿದ್ದಲ್ಲದೆ ಸುಂದರ ಮೂಲ್ಯರವರ ಬಲಕಾಲಿನ ಮೂಳೆ ಮುರಿತವಾಗಿದ್ದಲ್ಲದೆ, ಮುಖಕ್ಕೆ ರಕ್ತ  ಗಾಯವಾಗಿರುತ್ತದೆ. ಸುಂದರ  ಮೂಲ್ಯರವರು ಚಿಕಿತ್ಸೆಯ ಬಗ್ಗೆ ಸಿಟಿ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುತ್ತಾರೆ. ಈ ಅಪಘಾತಕ್ಕೆ KA-20 R-1619  ನೇ  ನೊಂದಣಿ ಸಂಖ್ಯೆಯ ದ್ವಿ ಚಕ್ರವಾಹನದ ಸವಾರ ಜಗದೀಶ ಈತನ ನಿರ್ಲಕ್ಷತನದ ಸವಾರಿಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 120/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಅಮಲ್ ಬಿಜು (19) ತಂದೆ: ಬಿಜು ಆಂಜನಿ ಬೆಣಗಲ್ ಉಬ್ಬುಮನೆ ಹಿಲಿಯಾಣ ಇವರು ಮಧುವನದಲ್ಲಿರುವ ECR ಕಾಲೇಜ್ ಆಫ್ ನರ್ಸಿಂಗ್ ನಲ್ಲಿ 2 ನೇ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಅಮಲ್ ಬಿಜು ರವರ ಜೊತೆಯಲ್ಲಿ ECR ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಅವರ ಸ್ನೇಹಿತರಾದ ಜಿಬಿನ್ ಸಾಮ್ (20) ಸುದೀಶ್, ಆಲ್ವಿನ್ ಜೊಯ್ ರವರುಗಳು ಕೂಡ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ. ದಿನಾಂಕ 26/09/2021 ರಂದು ಅಮಲ್ ಬಿಜು ರವರ ಮೂವರು ಸ್ನೇಹಿತರು ಇವರ ಮನೆಗೆ ಬಂದವರು ರಾತ್ರಿ ಊಟ ಮಾಡಿ ದಿನಾಂಕ 26/09/2021 ರಂದು ಬೆಳಿಗ್ಗೆ 11:00 ಗಂಟೆಗೆ ಮನೆಯಿಂದ ಹೊರಟು ಎಲ್ಲರೂ ಸೇರಿಕೊಂಡು ಸೀತಾನದಿ ಹೊಳೆಯಲ್ಲಿ ಈಜಲು ಹೋಗಿ ನಂಚಾರು ಬ್ರಿಡ್ಜ ನ ಕೆಳಗೆ  ಇಳಿದು ಸೀತಾ ನದಿಯಲ್ಲಿ ಈಜುತ್ತಿರುವಾಗ ಸ್ವಲ್ಪ ಹೊತ್ತಿನಲ್ಲಿ  ಜಿಬಿನ್ ಸಾಮ್ ಕಾಣದೇ ಇದ್ದು  ನಂತರ ಹುಡುಕಿ ನೋಡುವಾಗ ಜಿಬಿನ್ ಸಾಬ್ ನೀರಿನ ಅಡಿಯಲ್ಲಿ ಸಿಕ್ಕಿದ್ದು  ಇತರ ಸ್ನೇಹಿತರ ಸಹಾಯದಿಂದ  ದಡಕ್ಕೆ ತಂದಾಗ ಮಾತನಾಡದೇ ಇದ್ದು ಕೂಡಲೇ ಸ್ಥಳಿಯರ ಸಹಾಯದಿಂದ ಅಂಬುಲೆನ್ಸ ನಲ್ಲಿ  ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆ ತಂದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಜಿಬಿನ್ ಸಾಮ್ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ಹಾವಂಜೆ  ಗ್ರಾಮದ ದೊಂಪದ ಕುಮೇರಿ ಎಂಬಲ್ಲಿ ವಾಸವಾಗಿರುವ  ಎಂ.ಪಿ ರಾಘವೇಂದ್ರ ರಾವ್‌ ‌(76) ಇವರ ಪತ್ನಿ ಒಂದು ತಿಂಗಳ ಹಿಂದೆ ಮೃತ ರಾಗಿದ್ದು  ಆ ದಿನದಿಂದ ಒಬ್ಬಂಟಿಗಾರಾಗಿ ವಾಸ ಮಾಡಿಕೊಂಡಿದ್ದು ಅವರಿಗೆ ಬಿ.ಪಿ ಮತ್ತು ಶುಗರ ಖಾಯಿಲೆ ಇದ್ದು ಅವರ ಎರಡು ಹೆಣ್ಣು ಮಕ್ಕಳು ಮಂಗಳೂರಿನಲ್ಲಿ ವಾಸಮಾಡಿಕೊಂಡಿದ್ದು ವಾರಕ್ಕೊಮ್ಮೆ ಬಂದು ಹೋಗುವುದಾಗಿದೆ.  ದಿನಾಂಕ 26/09/2021 ರಂದು 12:30 ಗಂಟೆಯಿಂದ ಸಂಜೆ 16:00 ಗಂಟೆಯ ಮಧ್ಯಾವಧಿಯಲ್ಲಿ ಮೃತರ ವಾಸದ ಮನೆಯ ಕೋಣೆಯ ರಾಡ್‌‌ಗೆ ಸೀರೆಯನ್ನು ಬಿಗಿದ್ದು ಇನ್ನೊಂದು ತುದಿಯಿಂದ ಗುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಇವರಿಗೆ ಬಿ. ಪಿ  ಶುಗರ್‌ ಖಾಯಿಲೆಯಿಂದ ಬಳುಲುತ್ತಿದ್ದು ಹಾಗೂ ಇವರ ಹೆಂಡತಿಯ ಮೃತರಾಗಿದ್ದು ಒಬ್ಬರೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರ  ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂಬುದಾಗಿ ಎ. ಎಂ ಮೋಹನ ರಾವ್‌‌ (73) ತಂದೆ ಎ.ಎಂ ಪಟ್ಟಾಭಿರಾಮ  ರಾವ್‌‌ವಾಸ ಬೆನಕ  ಆರೂರು ಗ್ರಾಮ, ಬ್ರಹ್ಮಾವರ  ಇವರು ನೀಡಿದ ದೂರಿನಂತೆ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 56/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 27-09-2021 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080