Feedback / Suggestions

ಕಳವು ಪ್ರಕರಣ

  • ಕಾಪು: ಪಿರ್ಯಾದಿ ರಿಶಾನ್ ಟಿ ಇವರು ರಿಶಾಲ್ ಕನ್‌ಸ್ಟ್ರಕ್ಷನ್‌ &ಡೆವಲಪರ್ಸ್‌ ಕಂಪೆನಿಯನ್ನು ನಡೆಸಿಕೊಂಡಿದ್ದು, ಪಿರ್ಯಾದಿದಾರರು ತನ್ನ ಮಾಲಕತ್ವದ KA098451, KA20D3100 ಮತ್ತು KA20AB1610 ನೇ ನಂಬ್ರದ ಮೂರು ಟಿಪ್ಪರ್‌ಗಳನ್ನು ಕೆಲಸ ಇಲ್ಲದೇ ಇದ್ದುದರಿಂದ ಅವರ ಮನೆಯ ಸಮೀಪ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು,  ಅವರ ಸೂಪರ್‌ ವೈಸರ್‌ ಲೋಹಿತಾಶ್ವ ಎಂಬವರು  ದಿನಾಲು ಬೆಳಗ್ಗೆ ಮತ್ತು ಸಾಯಂಕಾಲ ಟಿಪ್ಪರ್‌ಗಳನ್ನು ಚೆಕ್‌ ಮಾಡಿಕೊಂಡು ಬರುತ್ತಿದ್ದು, ಅದರಂತೆ ದಿನಾಂಕ 26/09/2021 ರಂದು 19.00 ಗಂಟೆಗೆ ಟಿಪ್ಪರ್‌ಗಳನ್ನು ಚೆಕ್‌ ಮಾಡಿ ಮನೆಗೆ ಹೋಗಿದ್ದು, ದಿನಾಂಕ 27/09/2021 ರಂದು ಬೆಳಗ್ಗೆ 08.00 ಗಂಟೆಯ ಸಮಯ ಟಿಪ್ಪರ್‌ಗಳನ್ನು ಚೆಕ್‌ ಮಾಡಲು ಹೋಗಿ ಟಿಪ್ಪರ್‌‌ಗಳನ್ನು ಸ್ಟಾರ್ಟ್‌ ಮಾಡಲು ನೋಡಿದಾಗ ಅವುಗಳು ಸ್ಟಾರ್ಟ್‌ ಆಗದೇ ಇದ್ದು, ಅವುಗಳ ಬ್ಯಾಟರಿಗಳು ನೋಡಿದಾಗ  ಮೂರು ಟಿಪ್ಪರ್‌‌ಗಳ  ಬ್ಯಾಟರಿಗಳನ್ನು  ದಿನಾಂಕ 26/09/2021 ರ 19:00 ಗಂಟೆಯಿಂದ ದಿನಾಂಕ 27/09/2021  ರ  ಬೆಳಗ್ಗೆ 08:00 ಗಂಟೆಯ  ನಡುವೆ ಯಾರೋ ಕಳ್ಳರು ಸದ್ರಿ   ಟಿಪ್ಪರ್‌ಗಳ ಮೂರು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಕಳವಾದ  ಮೂರು ಬ್ಯಾಟರಿಗಳ ಅಂದಾಜು ಮೌಲ್ಯ ಸುಮಾರು 24,000/- ರೂ ಆಗಬಹುದು. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2021  ಕಲಂ379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿ ಕೆ ಸುಬ್ಬಣ್ಣ ಶೆಟ್ಟಿ ಇವರು ಜಡ್ಡಿನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ದಿನಾಂಕ 22-09-2021 ರಂದು ಹಾಲು ಡೈರಿಯಲ್ಲಿ ಪಶು ಆಹಾರವನ್ನು ಮಾರಾಟ ಮಾಡಿ ಸಂಗ್ರಹಿಸಿದ ನಗದು ಹಣ ರೂಪಾಯಿ 25,047/- ಅನ್ನು ಹಾಲು ಪರೀಕ್ಷಕರಾದ ಆನಂದ ನಾಯ್ಕ ಅವರು ಸಂಗ್ರಹಿಸಿ ಹಾಲು ಡೈರಿಯ ಕಛೇರಿಯ ಮೇಜಿನ ಡ್ರಾವರಿನಲ್ಲಿ ಇರಿಸಿ ಸಂಜೆ 6:00 ಗಂಟೆಗೆ ಡೈರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 23-09-2021 ರಂದು  ಬೆಳಿಗ್ಗೆ 06:00 ಗಂಟೆಗೆ ಹಾಲು ಡೈರಿಗೆ ಬಂದಾಗ ಮೇಜಿನ ಡ್ರಾವರಿನಲ್ಲಿ ಇಟ್ಟಿದ್ದ  ಹಣ ರೂ 25,047/- ಅನ್ನು ಯಾರೋ ಕಳ್ಳರು ಕಳವು ಮಾಡಿದ್ದು ಕಛೇರಿಯ ಹಿಂಬದಿ ಕಿಟಕಿಯ ಎರಡು ಸರಳುಗಳನ್ನು ಬಗ್ಗಿಸಿರುವುದು ಕಂಡು ಬಂದಿದ್ದು ದಿನಾಂಕ 22-09-2021 ರಂದು  ಸಂಜೆ 18:00 ಗಂಟೆಯಿಂದ ದಿನಾಂಕ 23-09-2021 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯೆ ಅವಧಿಯಲ್ಲಿಯಾರೋ ಕಳ್ಳರು ಹಾಲು ಡೈರಿಯ ಕಿಟಕಿಯ ಸರಳನ್ನು ಬಗ್ಗಿಸಿ ಒಳ ಪ್ರವೇಶಿಸಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.   ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021  ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ : ಹರೀಶ  ಭಂಡಾರಿ ಪ್ರಾಯ 36 ವರ್ಷ   ಇವರು  ದಿನಾಂಕ  27.09.2021  ರಂದು  ಸುಮಾರು  14:15  ಘಂಟೆಗೆ  ಹೆಬ್ರಿ ತಾಲೂಕಿನ   ಬೆಳ್ವೆ ಗ್ರಾಮದ  ಕ್ಷೌರಿಕರ ಬೆಟ್ಟು   ಎಂಬಲ್ಲಿ  ಆತನ  ವಾಸದ   ಮನೆಯ ಬಳಿ  ಇರುವ    ಬಾವಿಯಿಂದ   ನೀರು  ತರಲು  ಹೋದಾಗ   ಆಕಸ್ಮಿಕವಾಗಿ ಆವರಣ ಇಲ್ಲದ  ಬಾವಿಗೆ   ಬಿದ್ದು ನೀರಿನಲ್ಲಿ   ಮುಳುಗಿ   ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

Last Updated: 27-09-2021 05:53 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080