ಅಭಿಪ್ರಾಯ / ಸಲಹೆಗಳು

 ಅಘಘಾತ ಪ್ರಕರಣ

  • ಮಣಿಪಾಲ: ದಿನಾಂಕ: 25/06/2021ರಂದು ಸಂಜೆ 18:45 ಗಂಟೆ ಸಮಯಕ್ಕೆ ಪಿರ್ಯಾಧಿ ನಟರಾಜ್ ಕಾಮತ್ ಇವರು ತನ್ನ ಅಟೋ ರಿಕ್ಷಾದಲ್ಲಿ ಈಶ್ವರ ನಗರದ ವೈಷ್ಣವಿ ಸಭಾಭವನದ ಸಮೀಪದ ಡಿವೈಡರ್ ಬಳಿ ಹೋಗುತ್ತಿರುವಾಗ ಸದ್ರಿ ರಸ್ತೆಯಲ್ಲಿ ವೈಷ್ಣವಿ ಸಭಾಭವನದ ಕಡೆಯಿಂದ KA 20 EU 4230 ನೇ ಸ್ಕೂಟರನ್ನು ಅದರ ಸವಾರ ನಾದ ಜಗನ್ನಾಥ ನಾಯ್ಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಎದುರಿನಿಂದ ರಂಜಿತ ರವರು ಸವಾರಿ ಮಾಡಿಕೊಂಡು ಹೊಗುತಿದ್ದ  KA 20 EM 1550 ನೇ  ಸ್ಕೂಟರ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಎರಡೂ ಸ್ಕೂಟರ ಸವಾರರು ಸ್ಕೂಟರಸಮೇತ ರಸ್ತೆಗೆ  ಬಿದ್ದು ರಂಜಿತ ರವರ ಎಡ ಕೈ ಮೂಳೆ ಮುರಿತ ಹಣೆ ಮತ್ತು ಬಲ ಭುಜ ಕ್ಕೆ  ಗಾಯ ಉಂಟಾಗಿರುತ್ತದೆ ಹಾಗೂ ಆಪಾದಿತನಿಗೂ ಸಾಮನ್ಯ ಸ್ವರೂಪದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 26-06-2021 ರಂದು ಬೆಳಿಗ್ಗೆ ಪಿರ್ಯಾದಿ ಸುಜನ್‌ ಇವರು  ಅವರ ಬಾಬ್ತು ಮೋಟಾರ್‌ ಸಐಕಲ್‌ ನಂಬ್ರ KA 21 U 9499 ನೇದನ್ನು  ಸವಾರಿ ಮಾಡಿಕೊಂಡು ಕೆದೂರು- ತೆಕ್ಕಟ್ಟೆ ಕಾಂಕ್ರೀಟ್‌ ರಸ್ತೆಯಲ್ಲಿಕೆದೂರು ಕಡೆಯಿಂದ ತೆಕ್ಕಟ್ಟೆ ಕಡೆಗೆ  ಹೊರಟಿದ್ದು ಸಮಯ  ಸುಮಾರು ಬೆಳಿಗ್ಗೆ 11-45  ಘಂಟೆಗೆ ತೆಕ್ಟಟ್ಟೆ ಗ್ರಾಮದ ಕಂಚಕಾರ  ಬೆಟ್ಟು ಕ್ರಾಸ್‌ ಹತ್ತಿರ  ನಾಗಬನ ಬಳಿ  ತಲುಪುಷ್ಟರಲ್ಲಿ  ತೆಕ್ಕಟ್ಟೆ ಕಡೆಯಿಂದ ಕಾರ್‌ ನಂಬ್ರ KA 04 MC 3195 ನೇದನ್ನು ಅದರ ಚಾಲಕ ಕರುಣಾಕರ  ಶೆಟ್ಟಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ  ಬಲಕ್ಕೆ  ಚಲಾಯಿಸಿ ಪಿರ್ಯಾದಿದಾರರ ಬಾಬ್ತು ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಯ ದಕ್ಷಿಣ ಬದಿಗೆ  ಬಿದ್ದಿದ್ದು  ಪರಿಣಾಮ ಬಲಕಾಲ ಮೊಣಗಂಟಿನ ಕೆಳಗೆ ಮೂಳೆ  ಮುರಿತದ  ರಕ್ತ ಗಾಯವಾಗಿರುತ್ತದೆ. ಸ್ಥಳೀಯ ತೆಕ್ಕಟ್ಟೆ  ಪ್ರೇಂಡ್ಸ್‌ ಅಂಬುಲೆನ್ಸ್‌ ನವರು ಸ್ಥಳಕ್ಕೆ ಬಂದು ಅಂಬುಲೆನ್ಸ್‌  ಚಾಲಕ ಸಂತೋಷ ರವರು ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸಗೆ ಬಗ್ಗೆ ಅದೇ ಅಂಬುಲೆನ್ಸ್‌ ನಲ್ಲಿ ಕುಂದಾಪುರ ಚಿನ್ಮಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕಾರ್‌ ನಂಬ್ರ KA 04 MC 3195 ನೇದನ್ನು ಅದರ ಚಾಲಕ ಕರುಣಾಕರ  ಶೆಟ್ಟಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-06-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080