ಅಭಿಪ್ರಾಯ / ಸಲಹೆಗಳು

27-05-2021 ದೈನಂದಿನ ಅಪರಾಧ ವರದಿ- ಅಪರಾಹ್ನ

ಇತರ ಪ್ರಕರಣಗಳು :

  • ಕುಂದಾಪುರ: ದಿನಾಂಕ 26-05.2021ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ರವೀಶ ಹೊಳ್ಳ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ಕರ್ತವ್ಯದಲ್ಲಿರುವ ವೇಳೆ 13:00 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಪೇಟೆ ಬಳಿ KA 20 EV 0078ನೇ ಹೊಂಡ ಆಕ್ಟೀವ್ ಸವಾರ ನದೀಮ್ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು, ಸದ್ರಿ ವಾಹನ ಚಾಲಕನು ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 44/2021 ಕಲಂ: 269,271 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ: ಪಿರ್ಯಾದಿ ಶ್ರೀ ಶೇಖರ್‌ ಸಂಚಾರ ಪಿ.ಎಸ್.ಐ-2, ಉಡುಪಿ ಸಂಚಾರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ ಇವರು ದಿನಾಂಕ 27/05/2021ರಂದು ಬೆಳ್ಳಿಗ್ಗೆ 09:30 ಗಂಟೆಗೆ ಸಿಬ್ಬಂದಿಯವರೊಂದಿಗೆ ಲಾಕ್ ಡೌನ್ ಪ್ರಯುಕ್ತ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ಕಲ್ಸಂಕ ಜಂಕ್ಷನ್ ಬಳಿ ಆರೋಪಿ ಕೆಎ-20 ಎಂಬಿ-5185ನೇ ಕಾರು ಚಾಲಕ ತನ್ನ ಮುಖಕ್ಕೆ ಮಾಸ್ಕ್ ಧರಿಸದೇ ವಾಹನ ಚಲಾಯಿಸಿಕೊಂಡು ಬಂದಿದ್ದು, ಸದ್ರಿ ಆರೋಪಿಯನ್ನು ನಿಲ್ಲಿಸಿ ತಪಾಸಣೆ ಮಾಡಿ ಕಾರಿನಲ್ಲಿ ತಿರುಗಾಡುವ ಬಗ್ಗೆ ಪ್ರಶ್ನೆ ಮಾಡಿದಾಗ ಆತನು ಸಮರ್ಪಕ ಉತ್ತರ ನೀಡಿರುವುದಿಲ್ಲ. ಸದ್ರಿ ಕಾರು ಚಾಲಕ ಮಹಮ್ಮದ್ ಅನ್ವರ್ ಹಾಗೂ ಕಾರಿನಲ್ಲಿದ್ದ ಇತರ ಇಬ್ಬರು ವ್ಯಕ್ತಿಗಳಾದ ಮಹಮ್ಮದ್ ಶಫಿ, ಮೊಹಮ್ಮದ್ ಯಾಸೀನ್ ರವರು ಮುಖಕ್ಕೆ ಮಾಸ್ಕ್ ಧರಿಸದೇ ಸಾಮಾಜಿಕ ಅಂತರವನ್ನು ಕಾಪಾಡದೇ ಕುಳಿತುಕೊಂಡಿದ್ದು ಪ್ರಸ್ತುತ ಕೋವಿಡ್ -19 ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ವಿಧಿಸಿದ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಸಾಂಕ್ರಾಮಿಕ ಕೊರೊನಾ ಕಾಯಿಲೆ ತಡೆಗಟ್ಟಲು ಸದ್ರಿ ವ್ಯಕ್ತಿಯವರು ನಿರ್ಲಕ್ಷ್ಯ ವಹಿಸಿದ್ದು, ಸದ್ರಿ ಕಾರು ಚಾಲಕ 1) ಮಹಮ್ಮದ್‌ ಅನ್ವರ್‌ ಪ್ರಾಯ 19ವರ್ಷ, ತಂದೆ: ಬೆಜ್ಜವಳ್ಳಿ ಮಹಮ್ಮದ್‌ ಅಬ್ಬಾಸ್‌ ವಾಸ: 292-20ಬಿ, ಮೈಕ್ರೋವೇವ್‌ ಹತ್ತಿರ, ಜೆರಿಗುಡ್ಡೆ, ಕಾರ್ಕಳ ತಾಲೂಕು ಮತ್ತು 2) ಮಹಮ್ಮದ್‌ ಶಫಿ ಪ್ರಾಯ 26ವರ್ಷ, ತಂದೆ: ಅಬ್ದುಲ್‌ ರೆಹಮಾನ್‌ ವಾಸ: ಸಿಎಮ್‌ಕಾಟೇಜ್‌ ಹತ್ತಿರ, ಹುಡ್ಕೋ ಕಾಲೋನಿ ಗುಳಿಗ ದೇವಸ್ಥಾನದ ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಹಾಗೂ 3) ಮಹಮ್ಮದ್‌ ಯಾಸೀನ್‌ ಪ್ರಾಯ 20 ವರ್ಷ, ತಂದೆ: ಅಬ್ದುಲ್‌ ಅಜೀಜ್‌ ವಾಸ: ಹುಡ್ಕೋ ಕಾಲೋನಿ ಗುಳಿಗ ದೇವಸ್ಥಾನದ ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಹಾಗೂ ಕೆಎ-20 ಎಂಬಿ-5185 ವಾಹನದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 89/2021 ಕಲಂ: 269 R/W 34 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ : ಕೋವೀಡ್ -19 ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ; 24/05/2021 ರಿಂದ ದಿನಾಂಕ: 07/06/2021ರ ತನಕ ರಾಜ್ಯಾದಂತ್ಯ ಲಾಕ್ ಡೌನ್ ಆದೇಶವನ್ನು ಹೊರಡಿಸಿದಲ್ಲದೇ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇದಾಜ್ಞೆ ಆದೇಶವನ್ನು ಹೊರಡಿಸಿದ್ದು. ದಿನಾಂಕ 27/05/2021ರಂದು ಮುಂಜಾನೆ ಸಮಯ ಸುಮಾರು 04:02 ಗಂಟೆಗೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೊಮೇಶ್ವರ ಎಂಬಲ್ಲಿ ಪಿರ್ಯಾದಿ ಶ್ರೀ ಮಹೇಶ.ಟಿ.ಎಂ, ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ರಾಘವೇಂದ್ರ ಹೊಟೇಲ್‌ನ ಮಾಲಕರಾದ ಗುರುರಾಜ್ ಭಕ್ತ ಎಂಬುವವರು ಬಂದ ಗಿರಾಕಿಗಳಿಗೆ ಪಾರ್ಸಲ್‌ನ್ನು ನೀಡದೇ ಹೊಟೇಲ್ ಒಳಗಡೆ ಕುಳಿತು ಉಪಾಹಾರ ಸೇವಿಸಲು ಅನುಮತಿಸಿ ಜಿಲ್ಲಾಡಳಿತದ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ನೀಡಿದ ವರದಿಯಂತೆ ಹೆಬ್ರಿ ಪೊಲೀಸ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 38/2021 ಕಲಂ: 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ : ಕೋವೀಡ್ -19 ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24/05/2021 ರಿಂದ ದಿನಾಂಕ: 07/06/2021ರ ತನಕ ರಾಜ್ಯಾದಂತ್ಯ ಲಾಕ್ ಡೌನ್ ಆದೇಶವನ್ನು ಹೊರಡಿಸಿದಲ್ಲದೇ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇದಾಜ್ಞೆ ಆದೇಶವನ್ನು ಹೊರಡಿಸಿದ್ದು. ದಿನಾಂಕ: 27/05/2021 ರಂದು ಮುಂಜಾನೆ ಸಮಯ ಸುಮಾರು 04:03 ಗಂಟೆಗೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೊಮೇಶ್ವರ ಎಂಬಲ್ಲಿ ಪಿರ್ಯಾದಿ ಮಹೇಶ.ಟಿ.ಎಂ, ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರರು ರೌಂಡ್ಸ್ ನಲ್ಲಿರುವಾಗ ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಮಹಾಲಸ ಹೊಟೇಲ್‌ನ ಮಾಲಕರಾದ ಸುಮಂತ್ ಭಕ್ತ ಎಂಬವರು ಬಂದ ಗಿರಾಕಿಗಳಿಗೆ ಪಾರ್ಸಲ್‌ನ್ನು ನೀಡದೇ ಹೊಟೇಲ್ ಒಳಗಡೆ ಕುಳಿತು ಉಪಾಹಾರ ಸೇವಿಸಲು ಅನುಮತಿಸಿ ಜಿಲ್ಲಾಡಳಿತದ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ನೀಡಿದ ವರದಿಯಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 39/2021 ಕಲಂ: 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ : ಕೋವೀಡ್ -19 ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ; 24/05/2021 ರಿಂದ ದಿನಾಂಕ: 07/06/2021ರ ತನಕ ರಾಜ್ಯಾದಂತ್ಯ ಲಾಕ್ ಡೌನ್ ಆದೇಶವನ್ನು ಹೊರಡಿಸಿದಲ್ಲದೇ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇದಾಜ್ಞೆ ಆದೇಶವನ್ನು ಹೊರಡಿಸಿದ್ದು. ದಿನಾಂಕ 27/05/2021ರಂದು ಮುಂಜಾನೆ ಸಮಯ ಸುಮಾರು 04:06 ಗಂಟೆಗೆ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೊಮೇಶ್ವರ ಎಂಬಲ್ಲಿ ಪಿರ್ಯಾದಿ ಶ್ರೀ ಮಹೇಶ.ಟಿ.ಎಂ, ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಮಹಾಲಸ ಜ್ಯೂಸ್ ಸೆಂಟರ್ ಮತ್ತು ಹೊಟೇಲ್‌ನ ಮಾಲಕರಾದ ಶ್ರೀನಾಥ ಭಕ್ತ ಎಂಬವರು ಬಂದ ಗಿರಾಕಿಗಳಿಗೆ ಪಾರ್ಸಲ್‌ನ್ನು ನೀಡದೇ ಹೊಟೇಲ್ ಒಳಗಡೆ ಕುಳಿತು ಉಪಾಹಾರ ಸೇವಿಸಲು ಅನುಮತಿಸಿ ಜಿಲ್ಲಾಡಳಿತದ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 40/2021 ಕಲಂ: 269 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ: ದಿನಾಂಕ 26-05-2021 ರಂದು ಪಿರ್ಯಾದಿ ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು (ಕಾ & ಸು), ಕೋಟ ಪೊಲೀಸ್‌ ಠಾಣೆ ಇವರು ಸಿಬ್ಬಂದಿಗಳೊಂದಿಗೆ  ಠಾಣಾ  ವ್ಯಾಪ್ತಿಯಲ್ಲಿ  ರೌಂಡ್ಸ್‌  ಕರ್ತವ್ಯದಲ್ಲಿರುವಾಗ 18-00 ಗಂಟೆಗೆ ಬೀಟ್‌ ಸಿಬ್ಬಂದಿ ನೀಡಿದ ಮಾಹಿತಿಯಂತೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮದ ಪಡುಕೆರೆ ಎಂಬಲ್ಲಿರುವ ಮಹೇಶ ಹೊಟೇಲ್‌ ಹತ್ತಿರದ ಶ್ರೀ ಮಹಾಸತಿ ಮೀನು ಮತ್ತು ಕೋಳಿ ಅಂಗಡಿ ಬದಿಯಲ್ಲಿ ಆರೋಪಿ ಮಹಾಬಲ ತಿಂಗಳಾಯ, ಪ್ರಾಯ:70 ವರ್ಷ, ತಂದೆ:ಬಸವ ಮರಕಾಲ, ವಾಸ: “ಪುಷ್ಪ ನಿಲಯ” ಪಡುಕೆರೆ, ಕೋಟ, ತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕೋಟದ ನಟರಾಜ್‌ ಬಾರ್‌ ಮತ್ತು ರೆಸ್ಟೋರೆಂಟ್‌ ನಿಂದ ಮದ್ಯದ ಟೆಟ್ರಾ ಪ್ಯಾಕ್‌ಗಳನ್ನು ಪಡೆದುಕೊಂಡು ಕೋವಿಡ್‌-19 ವೈರಾಣು ಪ್ರಯುಕ್ತ ಜಿಲ್ಲಾಡಳಿತದ ಆದೇಶದಂತೆ ಕರ್ಪ್ಯೂ ನಿಷೇಧಾಜ್ಞೆ ಸಂದರ್ಭದಲ್ಲಿ ಸ್ಕೂಟಿ ನಂಬ್ರ KA 20 EG 0683 ನೇದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸದ್ರಿ ಮದ್ಯದ ಟೆಟ್ರಾ ಪ್ಯಾಕ್‌ಗಳನ್ನು ಲಾಭದ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು. ಅಲ್ಲದೇ ಸಾರ್ವಜನಿಕರು ಆತನಿಂದ ಕತ್ತರಿಯನ್ನು ಪಡೆದುಕೊಂಡು ಟೆಟ್ರಾ ಪ್ಯಾಕ್‌ಗಳನ್ನು ಅಲ್ಲಿಯೇ ಕಟ್‌ ಮಾಡಿ ಮದ್ಯವನ್ನು ಪ್ಲಾಸ್ಟಿಕ್‌ ಲೋಟಗಳಿಗೆ ಹಾಕಿ ಕುಡಿದು ಖಾಲಿ ಟೆಟ್ರಾ ಪ್ಯಾಕ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿದ್ದು, ಸ್ಥಳದಲ್ಲಿದ್ದ ಖಾಲಿ ಟೆಟ್ರಾ ಪ್ಯಾಕ್ -3, ಖಾಲಿ ಪ್ಲಾಸ್ಟಿಕ್  ಲೋಟ-4 ಹಾಗೂ 1 ಕತ್ತರಿಯನ್ನು ಹಾಗೂ ಲಾಭದ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು 18-30 ಗಂಟೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಆತನಲ್ಲಿದ್ದ Original Choice 180 ml 12 Tetra Pack ಗಳಿದ್ದು, ಸದ್ರಿ ಮದ್ಯದ ಒಟ್ಟು ಪ್ರಮಾಣ 2,160 ಲೀಟರ್‌ ಆಗಿದ್ದು, ಮೌಲ್ಯ 850/- ರೂಪಾಯಿ ಆಗಿದ್ದು, ಆರೋಪಿ ಮತ್ತು ಸ್ವತ್ತುಗಳನ್ನು ಹಾಗೂ ಮದ್ಯ ಮಾರಾಟಕ್ಕೆ ಬಳಸಿದ ಸ್ಕೂಟಿಯನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 107/2021 ಕಲಂ: 269 IPC 15 (A), 32(3) K.E.Act  ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಮಾಸೆಬೈಲು : ಪಿರ್ಯಾದಿ ಸೂರು(52) ಗಂಡ: ದಿ ಕರಿಯ ವಾಸ: ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ  ದಸನಹೊಳೆ 5 ಸೆಂಟ್ಸ ಇವರ  ಮಗಳು ರುದ್ರು(27) ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸಕ್ಕೆ ಹೊಗುತ್ತಿದ್ದು, ದಿನಾಂಕ 17/05/2021 ರಂದು ಬೆಳಿಗ್ಗೆ 11:00 ಸುಮಾರಿಗೆ ಅನಾರೊಗ್ಯ ಉಂಟಾಗಿ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು ಅವಳನ್ನು ಬೆಳ್ವೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯಾದಿಕಾರಿಯವರ ಸಲಹೆಯಂತೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 24/05/2021ರಂದು 14:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌  ಕ್ರಮಾಂಕ : 07/2021 ಕಲಂ: 174 CRPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ : ಪಿರ್ಯಾದಿ ಕೃಷ್ಣದಾಸ ಶೆಣೈ( 50), ತಂದೆ: ಗೋಕುಲ ಶೆಣೈ, ವಾಸ: 5 ನೇ ಕ್ರಾಸ ಮೂಡುಬೆಟ್ಟು ಕೊಡವೂರು ಗ್ರಾಮ ಇವರ ತಮ್ಮನಾದ ಹರೀಶ ಶೆಣೈ( 40 ವರ್ಷ) ರವರು ಈ ಹಿಂದೆ ಯಾದಗಿರಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಆದ ಕಾರಣ ಸುಮಾರು 20 ದಿನಗಳ ಹಿಂದೆ ಪಿರ್ಯಾದಿದಾರರ ಬಾಡಿಗೆ ಮನೆಯಾದ ಮೂಡುಬೆಟ್ಟುವಿಗೆ ಬಂದು ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದು, ಪ್ರತಿದಿನ ಮಧ್ಯಪಾನ ಮಾಡುತ್ತಿದ್ದರು, ದಿನಾಂಕ 26-05-2021 ರಂದು ಮಧ್ಯಾಹ್ನ 2:00 ಗಂಟೆಗೆ ಹರೀಶನು ವಿಪರೀತ ಮಧ್ಯಪಾನ ಮಾಡಿ ಮನೆಗೆ ಬಂದು ಊಟ ಮಾಡದೆ ಮಲಗಿರುತ್ತಾನೆ. ಪಿರ್ಯಾದಿದಾರರು ರಾತ್ರಿ 10:00 ಗಂಟೆಗೆ ಮನೆಗೆ ಬಂದಾಗ ಹರೀಶನು ಬಚ್ಚಲು ಕೋಣೆಯ ಬಳಿ ಕೊಠಡಿಯಲ್ಲಿ ವಾಂತಿ ಮಾಡಿ ಮಲಗಿದ್ದವನ್ನು ಎಬ್ಬಿಸಿದಾಗ ಗಾಢ ನಿದ್ದೆಯಲ್ಲಿರುವುದನ್ನು ನೋಡಿ ಪಿರ್ಯಾದಿದಾರರು ಮಲಗಿರುತ್ತಾರೆ. ದಿನಾಂಕ 27-05-2021 ರಂದು ಬೆಳ್ಳಿಗೆ 5:30 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡುವಾಗ ಹರೀಶನು ಮಲಗಿದ್ದಲ್ಲೆ ಇದ್ದು ಹರೀಶನನ್ನು ಎಬ್ಬಿಸಿದಾಗ ಸ್ಪಂದಿಸದೆ ಅಸ್ವಸ್ಥನಾಗಿದ್ದವನನ್ನು ಕೂಡಲೆ ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಬೆಳಿಗ್ಗೆ 7:30 ಗಂಟೆಗೆ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಹರೀನು ಅತೀಯಾದ ಮಧ್ಯಪಾನ ಸೇವನೆ ಯಿಂದಲೂ ಅಥವಾ ಬೇರೆ ಯಾವುದೋ ಕಾರಣದಿಂದಲೊ ಮಲಗಿದ್ದಲ್ಲಿಯೆ ಅಸ್ವಸ್ಥಗೊಂಡ ಮೃತಪಟ್ಟಿರುವುದಾಗಿ ನೀಡದಿ ದೂರಿನಂತೆ ಮಲ್ಪೆ ಠಾಣಾ ಯುಡಿಆರ್‌ ಕ್ರಮಾಂಕ : 27/2021  ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 27-05-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080