ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ:ದಿನಾಂಕ 26/01/2022 ರಂದು ಪಿರ್ಯಾದಿದಾರರಾದ ಸುದರ್ಶನ್ ಭಂಡಾರಿ (45), ತಂದೆ: ಬಾಬು ಭಂಡಾರಿ, ವಾಸ: ಸುರಭಿ, ಹಿರಿಯಂಗಡಿ, ಕಾರ್ಕಳ ಕಸಬಾ, ಕಾರ್ಕಳ ತಾಲೂಕು ಇವರು ತನ್ನ ಪರಿಚಯದವರಾದ ರೋಶನ್, ರಂಜಿತ್ ಮತ್ತು  ಸಂತೋಷ ಎಂಬುವರೊಂದಿಗೆ ರಂಜಿತ್ ಚಲಾಯಿಸುತ್ತಿದ್ದ ಕಾರು KA-20-P-4689 ರಲ್ಲಿ ಸ್ವಂತ ಕೆಲಸದ ಬಗ್ಗೆ ಬೈಲೂರಿಗೆ ಹೋಗಿ ಕೆಲಸ ಮುಗಿಸಿ  ವಾಪಾಸು ಕಾರ್ಕಳ ಕಡೆಗೆ ಬರುತ್ತಾ ಮಧ್ಯಾಹ್ನ 12:45 ಗಂಟೆಗೆ ಕಾರ್ಕಳ- ಉಡುಪಿ ರಸ್ತೆಯ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು  ಕ್ರಾಸ್ ಎಂಬಲ್ಲಿ ತಲುಪುವಾಗ  ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅಶೋಕ್ ಲೈಲ್ಯಾಂಡ್ ಗೂಡ್ಸ್ ಲಾರಿ KA-70-2318 ನ್ನು ಅದರ ಚಾಲಕ ಅಬ್ದುಲ್ ಫಾರೂಕ್ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಯಾವುದೇ ಸೂಚನೆ ನೀಡದೇ ಬಲಕ್ಕೆ  ಹಾರ್ಜಡ್ಡು ಕಡೆಗೆ ತಿರುಗಿಸಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿ  ಪ್ರಯಾಣಿಕರಾಗಿದ್ದ ಪಿರ್ಯಾದಿದಾರರಿಗೆ ಬಲಭುಜಕ್ಕೆ ಮೂಳೆಮುರಿತದ ಒಳಜಖಂ ಆಗಿದ್ದು ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 19/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 26/01/2022 ರಂದು KA-68-1407 ನೇ ನಂಬ್ರದ ಲಾರಿ ಚಾಲಕ ರವಿ ಕುಮಾರ್ ತನ್ನ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾರೂಕತೆಯಿಂದ ವೇಗವಾಗಿ ಚಲಾಯಿಸಿಕೊಂಡು ಬರುತ್ತಾ16:15 ಗಂಟೆಗೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲ ಪಣಿಯೂರು ಕ್ರಾಸ್ ಬಳಿ ವಿದ್ಯುತ್ ಮಾರ್ಗದ ಕಂಬಕ್ಕೆ ಡಿಕ್ಕಿ ಹೊಡೆದು ಮೆಸ್ಕಾಂ ಗೆ  30,000/- ರೂಪಾಯಿ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022 ಕಲಂ:279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು: ದಿನಾಂಕ 26/01/2022 ರಂದು 16:30 ಗಂಟೆಗೆ ಪಿರ್ಯಾದುದಾರರಾದ ನೀಲು (53), ಗಂಡ: ಶೇಷು ಪೂಜಾರಿ, ವಾಸ:ಬಡಾಯಿನಬಾಳೆ ಮನೆ, ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ತನ್ನ ಮನೆಯಾದ ನಾವುಂದದಿಂದ ಕುಂದಾಪುರ ಆಸ್ಪತ್ರೆಗೆ ಹೋಗಲು ಆರೋಪಿ ತಿಮ್ಮಪ್ಪ  ಪೂಜಾರಿಯವರ ಮನೆ ಬಳಿಯ ಪಂಚಾಯತ್ ರಸ್ತೆಯಲ್ಲಿ ವಿನಾಯಕ ಬಸ್ ನಿಲ್ದಾಣದ ಕಡೆಗೆ   ನಡೆದುಕೊಂಡು ಹೋಗುತ್ತಿರುವ ಸಮಯ ಆರೋಪಿ ತಿಮ್ಮಪ್ಪ  ಪೂಜಾರಿ ಪಿರ್ಯಾದಿದಾರರನ್ನು ಅಡ್ಡ ತಡೆದು ಮುಂದಕ್ಕೆ ಹೋಗಲು ಬಿಡದೇ ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ ಹಾಕಿ ಪಿರ್ಯಾದಿದಾರರನ್ನು ಎಳೆದಾಡಿ, ತೆಂಗಿನ ಹೆಡೆಯಿಂದ ಹಲ್ಲೆ ಮಾಡಿ ರಸ್ತೆಯ ಬದಿಯಲ್ಲಿದ್ದ ಶಿಲೆ ಕಲ್ಲನ್ನು ಎತ್ತಿ ಬಿಸಾಡಿ ಪಿರ್ಯಾದಿದಾರರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ: 341, 354, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 27-01-2022 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080