ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

ಕೋಟ: ಪಿರ್ಯಾದಿದಾರರಾದ ಕಾಳ ಕಾಂಚನ್ ಪ್ರಾಯ 70 ವರ್ಷ, ತಂದೆ: ದಿ. ಬಚ್ಚ ಮರಕಾಲ, ವಾಸ: ಗುಡ್ಡಿ ಕಾಳ ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನದ ಬಳಿ ಗೋಪಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 26/10/2022 ರಂದು ಸಾಸ್ತಾನ ಪೇಟೆಗೆ ಹೋಗಲು ತನ್ನ ಪರಿಚಯದ ಸಂತೋಷ ಎಂಬುವವರ KA-20-AA-3076 ನೇ ಆಟೋ ರಿಕ್ಷಾದಲ್ಲಿ ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಕೋಡಿಯಿಂದ ಸಾಸ್ತಾನಕ್ಕೆ ಹೊರಟು ರಿಕ್ಷಾ ಚಾಲಕನು ರಿಕ್ಷಾವನ್ನು ಸಾಸ್ತಾನ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೋಡಿಯ ಕಾಯಿ ಸಂಜೀವ ಪೂಜಾರಿಯ ಮನೆ ಬಳಿ ಬಂದು ಹಾವು ರಸ್ತೆಯಲ್ಲಿ ಅಡ್ಡ ಬಂದಾಗ ರಿಕ್ಷಾ ಚಾಲಕ ಸಂತೋಷನು ರಿಕ್ಷಾವನ್ನು ಒಮ್ಮೆಲೆ ಎಡಕ್ಕೆ ತಿರುಗಿಸಿದಾಗ ರಿಕ್ಷಾ ಮಗುಚಿ ಅಡ್ಡ ಬಿತ್ತು ಆಗ ಪಿರ್ಯಾದಿದಾರರು ರಿಕ್ಷಾದ ಅಡಿಗೆ ಬಿದ್ದುದರಿಂದ ಬಲ ಕಾಲು ಹಾಗೂ ಎಡ ಕಾಲು ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 186/2022 ಕಲಂ: 279 ,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಶಂಕರನಾರಾಯಣ : ಪಿರ್ಯಾದಿದಾರರಾದ ಸುನಾಗ ಪ್ರಾಯ: 18 ವರ್ಷ, ತಂದೆ: ಸುರೇಶ ಐತಾಳ ವಾಸ: ಸಿದ್ದಾಪುರ ರಸ್ತೆ ಶಂಕರನಾರಾಯಣ ಕೆನರಾ ಬ್ಯಾಂಕ್ ಹತ್ತಿರ ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು. ಉಡುಪಿ ಜಿಲ್ಲೆ ಇವರ ತಂದೆ ಸುರೇಶ ಐತಾಳ ಪ್ರಾಯ 54 ವರ್ಷ ಇವರು ದಿನಾಂಕ : 26/10/2022 ರಂದು ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮ ಸಿದ್ದಾಪುರ ರಸ್ತೆಯ ಕೆನರಾ ಬ್ಯಾಂಕ್ ಶಂಕರನಾರಾಯಣದ ಹತ್ತಿರ ಮನೆಯಲ್ಲಿ ಮದ್ಯ ರಾತ್ರಿ 00:30 ಗಂಟೆಗೆ ಮಲಗಿದವರು ರಕ್ತ ವಾಂತಿ ಮಾಡಿದ್ದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ತಾಯಿ ವಿನಯ ಐತಾಳ ಔಷಧಿ ಕುಡಿಸಿ ಉಪಚರಿಸಿ ರೂಮಿನಲ್ಲಿ ಮಂಚದ ಮೇಲೆ ಮಲಗಿಸಿದ್ದು ಬೆಳಿಗ್ಗೆ ಸಮಯ ಸುಮಾರು 07:00 ಗಂಟೆಗೆ ಸುರೇಶ ಐತಾಳರು ಮಂಚದಿಂದ ಕೆಳಗೆ ಬಿದ್ದಿದ್ದು ಆಗ ಅವರನ್ನು ಎತ್ತಿ ಉಪಚರಿಸಿ ಸುರೇಶ ಐತಾಳರ ಸ್ನೇಹಿತ ಕಿರಣ ಐತಾಳರವರಿಗೆ ತಿಳಿಸಿ ಅವರನ್ನು ಕರೆಯಿಸಿ ಚಿಕಿತ್ಸೆಗೆ 108 ಅಂಬುಲೆನ್ಸ ನಲ್ಲಿ ಕೆ.ಎಂ.ಸಿ. ಮಣಿಪಾಲಕ್ಕೆ ಕರೆದು ಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಲ್ಲಿ ಸುರೇಶ ಐತಾಳರು ಬೆಳಿಗ್ಗೆ 08:40 ಗಂಟೆಗ ಮೃತ ಪಟ್ಟ್ರಿರುವುದಾಗಿ ತಿಳಿಸಿದ್ದು ಸುರೇಶ ಐತಾಳ ಇವರು ಹೃದಯಾಘತಾದಿಂದ ಅಥವಾ ಬೇರಾವುದೇ ಕಾಯಿಲೆಯಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 35/2022 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-10-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080