ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಸಲ್ಮಾನ್‌ ಖಾನ್‌ ಸಿಪಿಸಿ ಮಣಿಪಾಲ ಪೊಲೀಸ್‌ಠಾಣೆ , ಉಡುಪಿ ಇವರು ದಿನಾಂಕ 25/09/2022 ರಂದು ಇವರ ಸಹೋದ್ಯೋಗಿ  ಸಿಪಿಸಿ ಉಮೇಶ್‌ರವರು ಶಿವಳ್ಳಿ ಗ್ರಾಮದ ಮಣಿಪಾಲ ಮಾಂಡವಿ ಎಂಬ್ರಾಡ್‌ಸಮೀಪ ಚೆಕ್‌ಪೋಸ್ಟ್‌ಕರ್ತವ್ಯದಲ್ಲಿರುವಾಗ ಬೆಳಗಿನ ಜಾವ   ಸಮಯ ಸುಮಾರು 01:30 ಗಂಟೆಗೆ ಸಿಂಡಿಕೆಟ್‌ಸರ್ಕಲ್‌ಕಡೆಯಿಂದ ಡಿಸಿ ಆಫೀಸ್‌ಕಡೆಗೆ  ಆಪಾದಿತ Johaan Chanda ಎಂಬಾತನು ತನ್ನ KA-20 EZ-4150 ನೇ ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ಸೈಕಲ್‌ನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನೀಡಿದ ಸೂಚನೆಯನ್ನು ಗಮನಿಸದೇ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಆಪಾದಿತ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಹಾಗೂ ಮೋಟಾರ್‌ ಸೈಕಲ್‌ನ ಇಂಡಿಕೇಟರ್‌, ಹೆಡ್‌ಲೈಟ್‌ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 130/2022  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಪ್ರಸನ್ನ ನಾಯಕ್  (36) , ತಂದೆ: ಕೇಶವ ನಾಯಕ್   ವಾಸ: ಅಡಿಂಜಾರು ಅಜೆಕಾರು ಮರ್ಣೆಧ ಗ್ರಾಮ  ಕಾರ್ಕಳ ಇವರು ತನ್ನ ತಂದೆ ಕೇಶವ ನಾಯಕ್ (65) ತಾಯಿ, ಪತ್ನಿ,ಮತ್ತು ಮಕ್ಕಳೊಂದಿಗೆ  ಮರ್ಣೆ ಗ್ರಾಮದ ಅಜೆಕಾರು ಅಡಿಂಜಾರು ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಪ್ರಸನ್ನ ನಾಯಕ್  ರವರು ಮಧ್ಯಾಹ್ನದ ವರೆಗೆ ಅಂಗಡಿ ವ್ಯಾಪಾರ ಮುಗಿಸಿ ನಂತರ ಮನೆಗೆ ಹೋಗಿ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಸಂಜೆ ಸುಮಾರು 3:30 ಗಂಟೆಗೆ ಮನೆಯ ಸ್ವಲ್ಪ ದೂರಲ್ಲಿರುವ ಪ್ರಸನ್ನ ನಾಯಕ್  ರವರ ಜಾಗದಲ್ಲಿರುವ ಹಳೆಯ ಮನೆಯ ಹತ್ತಿರ ಇವರ ತಾಯಿ ಸರೋಜಿನಿಯವರು ಜೋರಾಗಿ ಕೋಗಿ ಕರೆದಾಗ, ಅಲ್ಲಿಗೆ ಹೋಗಿ ನೋಡಲಾಗಿ ಹಳೆಯ ಮನೆಯ ಕೋಣೆಯ ಮಾಡಿನ ಜಂತಿಗೆ ಕೇಶವ ನಾಯಕ್ ರವರು ನೈಲನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಕೂಡಲೇ ಅಸುಪಾಸಿನವರನ್ನು ಕರೆದು ಕೂಡಲೇ ಕೆಳಗೆ ಇಳಿಸಿ ಮಲಗಿಸಿ ಉಪಚರಿಸಿದ ಸಮಯ ಕೇಶವ ನಾಯಕ್ ರವರು ಮೃತ ಪಟ್ಟಿರುತ್ತಾರೆ. ಅವರಿಗೆ ವಿಪರೀತ ಮಧ್ಯಪಾನ ಮಾಡುವ ಅಭ್ಯಾಸ ಇದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಬಂದು ಮಧ್ಯಾಹ್ನ 12:30 ಗಂಟೆಯಿಂದ ಸಂಜೆ 3:30 ಗಂಟೆಯ ಮಧ್ಯಾವದಿಯಲ್ಲಿ ಹಳೆಯ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 14/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸಂಜೀವ ದೇವಾಡಿಗ, (64) ತಂದೆ: ಬಾಬು ದೇವಾಡಿಗ, ವಾಸ: 1-165, ಭಾಂದವ್ಯ ನಿವಾಸ, ಪೆರ್ವಾಜೆ ರೋಡ್, ಕಸಬಾ ಗ್ರಾಮ, ಕಾರ್ಕಳ ಇವರು ಹೆಂಡತಿ ರೇಣುಕ ಹಾಗೂ ತಮ್ಮ ನಾರಾಯಣ ದೇವಾಡಿಗ (63) ರವರೊಂದಿಗೆ ವಾಸವಾಗಿದ್ದು, ನಾರಾಯಣ ದೇವಾಡಿಗ ರವರು ಅವಿವಾಹಿತರಾಗಿದ್ದು ವಿಪರೀತ ಮಧ್ಯ ಸೇವನೆ ಮಾಡುವ ಚಟ ಹೊಂದಿದ್ದು, ಮಾನಸಿಕ ರೋಗದಿಂದ ಬಳಲುತ್ತಿದ್ದು ಈ ಹಿಂದೆ ಚಿಕಿತ್ಸೆಯನ್ನು ಮಾಡಿಸಿರುವುದಾಗಿದ್ದು, ದಿನಾಂಕ 25/09/2022 ರಂದು ಸಂಜೆ 4:00 ಗಂಟೆ ಸಮಯಕ್ಕೆ ಸಂಜೀವ ದೇವಾಡಿಗ ರವರ ತಮ್ಮ ನಾರಾಯಣ ದೇವಾಡಿಗ ರವರು ಕುಡಿದು ಬಂದು ಕೋಲನ್ನು ಹಿಡಿದುಕೊಂಡು ಮನೆಯ ಹೊರಗೆ ಬಂದರೆ ನಿಮಗೆ ಹೊಡೆಯುತ್ತೇನೆ ಎಂದು ಹೇಳಿದ್ದು, ಸಂಜೀವ ದೇವಾಡಿಗ ರವರು ಹಾಗೂ ಹೆಂಡತಿ ರೇಣುಕ ಹೆದರಿಕೊಂಡು ಮನೆಯ ಒಳಗೆ ಇದ್ದು ಹೊರಗಡೆ ಬಂದಿರುವುದಿಲ್ಲ. ನಂತರ ಸಂಜೆ ಸಮಯ 4:10 ಗಂಟೆಗೆ ನಾರಾಯಣ ದೇವಾಡಿಗ ರವರು ಮಾತನಾಡದೇ ಇರುವುದನ್ನು ಕೇಳಿ ಮನೆಯ ಹೊರಗಡೆ ಬಂದು ನೋಡಿದಾಗ ನಾರಾಯಣ ದೇವಾಡಿಗ ರವರು ಮನೆಯ ಹೊರಗಡೆ ಮಾಡಿಗೆ ಹಾಕಿದ ಪಕಾಸ್ಸಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ನಾರಾಯಣ ದೇವಾಡಿಗ ರವರು ವಿಪರೀತ ಮಧ್ಯ ಸೇವನೆ ಮಾಡುವ ಚಟ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಮೃತರ ಮರಣದಲ್ಲಿ ಯಾವುದೇ  ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 42/2022 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 26-09-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080