ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 25/06/2022 ರಂದು ಸಂಜೆ ಸುಮಾರು 7:15 ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ BC ರಸ್ತೆಯ ಹುಣ್ಸೆಕಟ್ಟೆ  ಸೇತುವೆ ಬಳಿ SH 66 ರಸ್ತೆಯಲ್ಲಿ, ಆಪಾದಿತ ಲಕ್ಷ್ಮಣ್‌ ಎಂಬವರು KA-20-Q-5933ನೇ ಸ್ಕೂಟರ್‌‌‌ನ್ನು ಕುಂದಾಪುರ ಕಡೆಯಿಂದ ಬಸ್ರೂರು ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, SH 66 ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರಾದ ರೋಬರ್ಟ ಡಿಸೋಜಾ (54) ತಂದೆ ದಿ. ಸಲ್ವದಾರ ಡಿಸೋಜಾ ವಾಸ: ಹುಣ್ಸೆಕಟ್ಟೆ  ಸೇತುವೆ ಬಳಿ, BC ರಸ್ತೆ, ವಡೇರಹೋಬಳಿ ಗ್ರಾಮದ ಕುಂದಾಪುರ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ರೋಬರ್ಟ ಡಿಸೋಜಾರವರ ಬಲಕಾಲಿನ ಹಿಮ್ಮಡಿ ಗಂಟಿಗೆ ಮೂಳೆ ಮುರಿತವಾದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 25/06/2022 ರಂದು ಸಂಜೆ ಸುಮಾರು 7:50 ಗಂಟೆಗೆ ಕುಂದಾಪುರ ತಾಲೂಕು, ಕೋಟೇಶ್ವರ ಗ್ರಾಮದ ಪೇಟೆ ರಸ್ತೆಯಲ್ಲಿ ಆಪಾದಿತ ಅಬೂಬಕ್ಕರ್ ಎಂಬವರು ತನ್ನ KA-20 EP-4163ನೇ ಸ್ಕೂಟರ್‌ ನನ್ನು ಕೋಟೇಶ್ವರದ ದೇವಸ್ಥಾನದ ಕಡೆಯಿಂದ ಕಿನಾರ ಜಂಕ್ಷನ್ ಕಡೆಗೆ ಡಾಮಾರು ರಸ್ತೆಯಲ್ಲಿ   ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ  ಮಾಡಿಕೊಂಡು ಬಂದು, ರಸ್ತೆ ಕ್ರಾಸ್ ಮಾಡಿ ಡಾಮಾರು ಅಂಚಿನಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಗಂಗಪ್ಪ ಯಲ್ಲಪ್ಪ ಮುರಕಟ್ನಾಳ (46) ತಂದೆ:ದಿವಂಗತ ಯಲ್ಲಪ್ಪ ಮುರಕಟ್ನಾಳ ವಾಸ:ಚಿಕೋಪ್ಪ ಕೆ.ಎಸ್,ರಾಮದುರ್ಗಾ ತಾಲೂಕು,ಬೆಳಗಾವಿ ಇವರ ಎಡ ಬದಿಯ ಸೊಂಟಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಅವರ ಸೊಂಟದ ಎಡಭಾಗಕ್ಕೆ ಒಳಜಖಂ ಉಂಟಾಗಿ ಚಿಕಿತ್ಸೆಗೆ  ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ವಿಜೇಂದ್ರ (38) ತಂದೆ: ಕಿಟ್ಟ  ಮೂಲ್ಯ ವಾಸ: ನೆಲ್ಲಿಕಟ್ಟೆ ದರ್ಖಾಸ್ ಮನೆ, ಹಿರ್ಗಾನ ಗ್ರಾಮ, ಕಾರ್ಕಳ ಇವರು ದಿನಾಂಕ 25/06/2022 ರಂದು ಮದ್ಯಾಹ್ನ 12:30 ಗಂಟೆಗೆ ತನ್ನ ಹಿರ್ಗಾನ ಬಸ್‌ಸ್ಟ್ಯಾಂಡ್ ಬಳಿ ಇರುವ ಅಟೋಸ್ಟ್ಯಾಂಡ್‌‌ ಬಳಿ ತನ್ನ ಅಟೊರಿಕ್ಷಾದೊಂದಿಗೆ ನಿಂತುಕೊಂಡಿರುವಾಗ,  ಕಾರ್ಕಳ ಕಡೆಯಿಂದ ಅಜೆಕಾರ್ ಕಡೆಗೆ KA-20 MC-4483 ನೇ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಸುಮಿತ್ರಾ (48)ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸುಮಿತ್ರಾ ರವರು ರಸ್ತೆಗೆ  ಬಿದ್ದು ಅವರ ಕೈಗೆ ತರಚಿದ ಗಾಯ ಮತ್ತು ಸೊಂಟಕ್ಕೆ ಗುದ್ದಿದಂತಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 23/06/2022 ರಂದು ಮಧ್ಯಾಹ್ನ 16:00 ಗಂಟೆಯಿಂದ ದಿನಾಂಕ 24/06/2022 ರಂದು ಬೆಳಿಗ್ಗಿ 10:30 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ತಾಲೂಕು ಬೆಳ್ವೆ ಗ್ರಾಮೆದ ಸುರ್ಗೋಳಿ ಬೆಳ್ವೆ ಗ್ರಾಮ  ಅಬ್ಲಿಕಟ್ಟೆಯ  ಶ್ರೀನಿವಾಸ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸಗಾರನಾಗಿದ್ದ ಆಸ್ಲಾಂ ರಾಜ್ಯದ ಲಾಹಿರಾಮ(60) ರವರು ವಿಪರೀತ ಕುಡಿತದ ಸ್ವಭಾವದವನಾಗಿದ್ದು ತಾನು ಉಳಿದು ಕೊಳ್ಳುವ ರೂಂನ ಒಳಗೆ ಮಾಡಿನ ಪಕಾಸಿಯ ಕಬ್ಬಿಣದ ಹುಕ್ಕಿಗೆ ಪ್ಯಾಕ್ ಮಾಡುವ ಟೇಪನಿಂದ ನೇಣು ಬಿರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂಬುದಾಗಿ ಬಿ.ಹರೀಶ್ ಕಿಣಿ (54) ತಂದೆ: ಶ್ರೀನಿವಾಸ ಕಿಣಿವಾಸ: ಬೆಳ್ವೆ ಸುರ್ಗೋಳಿ ಬೆಳ್ವೆ ಗ್ರಾಮ ಹೆಬ್ರಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-06-2022 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080