Feedback / Suggestions

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 25/06/2022 ರಂದು ಸಂಜೆ ಸುಮಾರು 7:15 ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ BC ರಸ್ತೆಯ ಹುಣ್ಸೆಕಟ್ಟೆ  ಸೇತುವೆ ಬಳಿ SH 66 ರಸ್ತೆಯಲ್ಲಿ, ಆಪಾದಿತ ಲಕ್ಷ್ಮಣ್‌ ಎಂಬವರು KA-20-Q-5933ನೇ ಸ್ಕೂಟರ್‌‌‌ನ್ನು ಕುಂದಾಪುರ ಕಡೆಯಿಂದ ಬಸ್ರೂರು ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, SH 66 ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರಾದ ರೋಬರ್ಟ ಡಿಸೋಜಾ (54) ತಂದೆ ದಿ. ಸಲ್ವದಾರ ಡಿಸೋಜಾ ವಾಸ: ಹುಣ್ಸೆಕಟ್ಟೆ  ಸೇತುವೆ ಬಳಿ, BC ರಸ್ತೆ, ವಡೇರಹೋಬಳಿ ಗ್ರಾಮದ ಕುಂದಾಪುರ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ರೋಬರ್ಟ ಡಿಸೋಜಾರವರ ಬಲಕಾಲಿನ ಹಿಮ್ಮಡಿ ಗಂಟಿಗೆ ಮೂಳೆ ಮುರಿತವಾದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 25/06/2022 ರಂದು ಸಂಜೆ ಸುಮಾರು 7:50 ಗಂಟೆಗೆ ಕುಂದಾಪುರ ತಾಲೂಕು, ಕೋಟೇಶ್ವರ ಗ್ರಾಮದ ಪೇಟೆ ರಸ್ತೆಯಲ್ಲಿ ಆಪಾದಿತ ಅಬೂಬಕ್ಕರ್ ಎಂಬವರು ತನ್ನ KA-20 EP-4163ನೇ ಸ್ಕೂಟರ್‌ ನನ್ನು ಕೋಟೇಶ್ವರದ ದೇವಸ್ಥಾನದ ಕಡೆಯಿಂದ ಕಿನಾರ ಜಂಕ್ಷನ್ ಕಡೆಗೆ ಡಾಮಾರು ರಸ್ತೆಯಲ್ಲಿ   ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ  ಮಾಡಿಕೊಂಡು ಬಂದು, ರಸ್ತೆ ಕ್ರಾಸ್ ಮಾಡಿ ಡಾಮಾರು ಅಂಚಿನಲ್ಲಿ ನಿಂತಿದ್ದ ಪಿರ್ಯಾದಿದಾರರಾದ ಗಂಗಪ್ಪ ಯಲ್ಲಪ್ಪ ಮುರಕಟ್ನಾಳ (46) ತಂದೆ:ದಿವಂಗತ ಯಲ್ಲಪ್ಪ ಮುರಕಟ್ನಾಳ ವಾಸ:ಚಿಕೋಪ್ಪ ಕೆ.ಎಸ್,ರಾಮದುರ್ಗಾ ತಾಲೂಕು,ಬೆಳಗಾವಿ ಇವರ ಎಡ ಬದಿಯ ಸೊಂಟಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಅವರ ಸೊಂಟದ ಎಡಭಾಗಕ್ಕೆ ಒಳಜಖಂ ಉಂಟಾಗಿ ಚಿಕಿತ್ಸೆಗೆ  ಕೋಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ವಿಜೇಂದ್ರ (38) ತಂದೆ: ಕಿಟ್ಟ  ಮೂಲ್ಯ ವಾಸ: ನೆಲ್ಲಿಕಟ್ಟೆ ದರ್ಖಾಸ್ ಮನೆ, ಹಿರ್ಗಾನ ಗ್ರಾಮ, ಕಾರ್ಕಳ ಇವರು ದಿನಾಂಕ 25/06/2022 ರಂದು ಮದ್ಯಾಹ್ನ 12:30 ಗಂಟೆಗೆ ತನ್ನ ಹಿರ್ಗಾನ ಬಸ್‌ಸ್ಟ್ಯಾಂಡ್ ಬಳಿ ಇರುವ ಅಟೋಸ್ಟ್ಯಾಂಡ್‌‌ ಬಳಿ ತನ್ನ ಅಟೊರಿಕ್ಷಾದೊಂದಿಗೆ ನಿಂತುಕೊಂಡಿರುವಾಗ,  ಕಾರ್ಕಳ ಕಡೆಯಿಂದ ಅಜೆಕಾರ್ ಕಡೆಗೆ KA-20 MC-4483 ನೇ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಸುಮಿತ್ರಾ (48)ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸುಮಿತ್ರಾ ರವರು ರಸ್ತೆಗೆ  ಬಿದ್ದು ಅವರ ಕೈಗೆ ತರಚಿದ ಗಾಯ ಮತ್ತು ಸೊಂಟಕ್ಕೆ ಗುದ್ದಿದಂತಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 23/06/2022 ರಂದು ಮಧ್ಯಾಹ್ನ 16:00 ಗಂಟೆಯಿಂದ ದಿನಾಂಕ 24/06/2022 ರಂದು ಬೆಳಿಗ್ಗಿ 10:30 ಗಂಟೆಯ ಮಧ್ಯಾವಧಿಯಲ್ಲಿ ಹೆಬ್ರಿ ತಾಲೂಕು ಬೆಳ್ವೆ ಗ್ರಾಮೆದ ಸುರ್ಗೋಳಿ ಬೆಳ್ವೆ ಗ್ರಾಮ  ಅಬ್ಲಿಕಟ್ಟೆಯ  ಶ್ರೀನಿವಾಸ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸಗಾರನಾಗಿದ್ದ ಆಸ್ಲಾಂ ರಾಜ್ಯದ ಲಾಹಿರಾಮ(60) ರವರು ವಿಪರೀತ ಕುಡಿತದ ಸ್ವಭಾವದವನಾಗಿದ್ದು ತಾನು ಉಳಿದು ಕೊಳ್ಳುವ ರೂಂನ ಒಳಗೆ ಮಾಡಿನ ಪಕಾಸಿಯ ಕಬ್ಬಿಣದ ಹುಕ್ಕಿಗೆ ಪ್ಯಾಕ್ ಮಾಡುವ ಟೇಪನಿಂದ ನೇಣು ಬಿರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂಬುದಾಗಿ ಬಿ.ಹರೀಶ್ ಕಿಣಿ (54) ತಂದೆ: ಶ್ರೀನಿವಾಸ ಕಿಣಿವಾಸ: ಬೆಳ್ವೆ ಸುರ್ಗೋಳಿ ಬೆಳ್ವೆ ಗ್ರಾಮ ಹೆಬ್ರಿ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 26-06-2022 06:29 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080