ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕುಂದಾಪುರ :  ಪಿರ್ಯಾದಿ ಸುಧೀಂದ್ರ ಕಟ್ಟೆ  ಇವರ ತಂದೆ 79 ವರ್ಷ ಪ್ರಾಯದ ಕೆ ಗೋಪಾಲಕೃಷ್ಣರಾವ್ ಎಂಬುವವರು ವ್ಯವಹಾರಸ್ಥರಾಗಿದ್ದು ಸದ್ರಿಯವರು ದಿನಾಂಕ 26-05-2022ರಂದು 06:20 ಸುಮಾರಿಗೆ ಪಿರ್ಯಾದುದಾರರ ಪರಿಚಯದ ಅಂಕದಕಟ್ಟೆ ನಿವಾಸಿ ಮೊಳಹಳ್ಳಿ ಗಣೇಶ್ ಶೆಟ್ಟಿಯವರ ಮನೆಯ ಸಿಟೌಟಿನಲ್ಲಿ   ಅವರ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಗಣೇಶ್ ಶೆಟ್ಟಿಯವರು ತಿಳಿಸಿದ ಮೇರೆಗೆ ಪಿರ್ಯಾದುದಾರು ಸ್ಥಳಕ್ಕೆ ಭೇಟಿ ನೀಡಲಾಗಿ  ಪಿರ್ಯಾದುದಾರರ ತಂದೆ ಗೋಪಾಲಕೃಷ್ಣರಾವ್ ರವರ ಮೃತದೇಹವು ಕುರ್ಚಿಯಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು ಮೃತದೇಹದ ಕಿವಿಯ ಬಳಿ` ಹಾಗೂ ತಲೆಯಿಂದ ರಕ್ತಸುರಿಯುತ್ತಿದ್ದು ಮೃತದೇಹದ ಬಳಿ ರಿವಾಲ್ವರ್ ಕೂಡ ಬಿದ್ದುಕೊಂಡಿರುತ್ತದೆ. ನಂತರ ಪಿರ್ಯಾದುದಾರರು ಅವರ ತಂದೆಯ ಬೆಡ್ ರೂಮಿಗೆ ಹೋಗಿ ನೋಡಲಾಗಿ ಮೃತರ ಕೈ ಬರಹದ ಡೆತ್ ನೋಟ್ ಸಿಕ್ಕಿದ್ದು ಡೆತ್ ನೋಟಿನಲ್ಲಿ “ ಮೊಳಹಳ್ಳಿ ಗಣೇಶ್ ಶೆಟ್ಟಿ ಸಿ.ಎ,  ಪಾರ್ಟ್ ನರ್ ಗೋಲ್ಡ್ ಜ್ಯುವೆಲ್ಲರ್ ಕುಂದಾಪುರ ಹಾಗೂ  ಹೆಚ್ ಇಸ್ಮಾಯಿಲ್ ಬ್ರೋಕರ್  ಇವರಿಬ್ಬರು ದಿನಾಂಕ 31-03-2013 ರಂದು ನನಗೆ ಬಡ್ಡಿಯ ಆಸೆ ತೋರಿಸಿ 3 ಕೋಟಿ 34 ಲಕ್ಷ ನಗದು ಹಾಗೂ 5ಕೆ ಜಿ 24 ಕ್ಯಾರೇಟ್ ಚಿನ್ನವನ್ನು  ಪಡೆದುಕೊಂಡಿದ್ದು ಇಲ್ಲಿಯವರೆಗೆ ವಾಪಾಸು ನೀಡಿರುವುದಿಲ್ಲ. ಈ ಬಗ್ಗೆ ಸುಮಾರು 6,7 ಬಾರಿ ಪಂಚಾಯತಿ ನಡೆದರೂ ಈವರೆಗೆ ವಾಪಾಸು ಕೊಟ್ಟಿರುವುದಿಲ್ಲ. ನಾನು ಈವರೆಗೆ ಮರ್ಯಾದೆಯಿಂದ ಬಾಳಿದವ ನಾನು ಹೊರಗಿನವರಿಗೆ ಹಣ ಕೊಡಬೇಕು ಗಣೇಶ ಶೆಟ್ಟಿ ಮನೆಗೆ ತಿರುಗಿ ತಿರುಗಿ  ಸಾಕಾಯ್ತು  ಹಾಗಾಗಿ ಗಣೇಶ್ ಶೆಟ್ಟಿ ಮನೆಯಲ್ಲಿ ನನ್ನ ರಿವಾಲ್ವರಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ”  ಎಂಬಿತ್ಯಾದಿಯಾಗಿ ಬರೆದಿರುತ್ತದೆ.   ಪಿರ್ಯಾದುದಾರರ ತಂದೆ ಗೋಪಾಲಕೃಷ್ಣ ರಾವ್ ರವರು ಸಾವಿಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸಿ.ಎ ಹಾಗೂ ಪಾರ್ಟ್ ನರ್ ಗೋಲ್ಡ್ ಜ್ಯುವೆಲ್ಲರ್ ಕುಂದಾಪುರ ಹಾಗೂ  ಹೆಚ್ ಇಸ್ಮಾಯಿಲ್ ಬ್ರೋಕರ್ ರವರೆ ದುಷ್ಪ್ರೇರಣೆಯಾಗಿದ್ದು  ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 25-05-2022 ರಂದು ಆರ್ ಗವರೋಜಿ, ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 10:30 ಗಂಟೆಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಗ್ರಾಮ ಪಂಚಾಯತ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಾತ್ಮೀದಾರರು ನೀಡಿದ ಮಾಹಿತಿಯಂತೆ, ಠಾಣಾ ಸಿಬ್ಬಂದಿಯವರನ್ನು  ಕರೆಸಿ ಸದ್ರಿ ಸ್ಥಳಕ್ಕೆ 10:45 ಗಂಟೆಗೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಕೋಣಿ  ಗ್ರಾಮದ ಪಂಚಾಯತ್ ಕಟ್ಟಡದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್ ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನುಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 11:00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದ ಅಶೋಕ  ಪೂಜಾರಿ ಪ್ರಾಯ 45 ವರ್ಷ  ತಂದೆ: ದಿವಂಗತ ಕೃಷ್ಣ ಪೂಜಾರಿ   ವಾಸ: ಹೆಚ್.ಎಮ್.ಟಿ ರೋಡ್,  ಕೋಣಿ ಗ್ರಾಮ,   ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ಈತನನ್ನು ಹಿಡಿದಾಗ ಆತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತನ್ನ ತಪ್ಪಿತತ್ವವನ್ನು ಒಪ್ಪಿಕೊಂಡಿದ್ದು  ಆತನ  ಹೆಸರು ವಿಳಾಸ ತಿಳಿದು, ಆಪಾದಿತನನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ 78 (i)(iii)ಕೆ ಪಿ  ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಮಂಜುನಾಥ ಹೊನ್ನಗೌಡ ಇವರ ತಂಗಿ ಉತ್ತರ ಕನ್ನಡ ಜಿಲ್ಲೆಯ ವಾಸಿ ಗೋದಾವರಿ (24 ವರ್ಷ) ಎಂಬವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಕೋಡಿ ಎಂಬಲ್ಲಿ ಕ್ವಾಲಿಟಿ ಮೇರೈನ್  ಪುಡ್ ಹೆಸರಿನ ಪ್ಯಾಕ್ಟರಿಯಲ್ಲಿ  ಮೀನು ಕಟಿಂಗ್ ಕೆಲಸ ಮಾಡಿಕೊಂಡಿದ್ದು, ಹೆಜಮಾಡಿ ಕೋಡಿಯಲ್ಲಿ ಒಂದು ಬಾಡಿಗೆ ಮನೆಯಲ್ಲಿ ಇತರ ಮೂರು ಜನ ಹುಡುಗಿಯರ ಜೊತೆ ವಾಸ ಮಾಡಿಕೊಂಡಿದ್ದಳು. ದಿನಾಂಕ:25.05.2022 ರಂದು ರಾತ್ರಿ 21:30 ಗಂಟೆಗೆ ಯಾರೊಂದಿಗೂ ಪೋನ್ ನಲ್ಲಿ ಮಾತಾನಾಡುತ್ತಿದ್ದು, ದಿನಾಂಕ:26.05.2022 ರಂದು  ಬೆಳಿಗ್ಗೆ. 06:00 ಗಂಟೆಗೆ ಗೋದಾವರಿ ಇಲ್ಲದಿರುವುದನ್ನು ಕಂಡು ಸುತ್ತಮುತ್ತಾ ಹುಡುಕಾಡಿದಾಗ ಬಾಡಿಗೆ ಮನೆ ಮಾಲೀಕರಾದ ರಾಜು ಕರ್ಕೇರ ರವರ ಮನೆಯ ಬಾವಿಯ ನೀರಿನಲ್ಲಿ ಗೋದಾವರಿಯ ಮೃತದೇಹ ತೇಲುತ್ತಿರುವುದು ಕಂಡು ಬಂದಿರುತ್ತದೆ. ಮೃತಳು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:25.05.2022 ರಂದು ರಾತ್ರಿ. 21:30 ಗಂಟೆಯಿಂದ ದಿನಾಂಕ:26.05.2022 ರಂದು ಬೆಳಿಗ್ಗೆ. 7:30 ಗಂಟೆಯ ಮಧ್ಯಾವಧಿಯಲ್ಲಿ ಬಾಡಿಗೆ ಮನೆ ಮಾಲೀಕರ ಮನೆಯ ಬಾವಿಗೆಹಾರಿ ಆತ್ಮಹತ್ಯೆ  ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 26-05-2022 06:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080