Feedback / Suggestions

ಹೆಂಗಸು ಕಾಣೆ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿ ನಂಜಮ್ಮ (50) ಗಂಡ: ಅಂಗಮುತ್ತು ವಾಸ: ತುಪ್ಪೆಪಾದೆ ಪದವು ಶಿರ್ವ ಗ್ರಾಮ, ಕಾಪು ಇವರ ಮಗಳು   ಆಶಾ (32) ಜನವರಿ ತಿಂಗಳಲ್ಲಿ ವಿದೇಶಕ್ಕೆ ಹೋದವಳು ದಿನಾಂಕ 23/04/2022  ರಂದು ವಾಪಸು ಊರಿಗೆ ಬಂದವಳು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ  ಜಂತ್ರದಲ್ಲಿರುವ ಗಂಡನ ಸಂಬಂಧಿಕರ ಮನೆಯಲ್ಲಿ   ವಾಸವಾಗಿದ್ದು, ,ದಿನಾಂಕ  25/4/22 ರಂದು ಮದ್ಯಾಹ್ನ 13:00 ಗಂಟೆಗೆ ಆಶಾಳು ಯಾರಿಗೂ ಹೇಳದೇ ಮನೆಯಿಂದ  ಹೋದವಳು ವಾಪಾಸು ಬಾರದೇ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ  ಈ ತನಕ ಪತ್ತೆಯಾಗಿರುವುದಿಲ್ಲ . ಕಾಣೆಯಾದವರ ಚಹರೆ ಗುರುತು: ಶ್ರೀಮತಿ ಆಶಾ ಪ್ರಾಯ: 32 ವರ್ಷ, ಎಣ್ಣೆಗೆಂಪು ಮೈಬಣ್ಣ, ಎತ್ತರ: 5 ಅಡಿ 02 ಇಂಚು, ಕನ್ನಡ,ತಮಿಳು, ತುಳು,ಹಿಂದಿ ಕೊಂಕಣಿ  ಭಾಷೆ ಮಾತನಾಡುತ್ತಾಳೆ.ಬಿಳಿ ಮತ್ತು ಕಪ್ಪು ಗೆರೆಯ ತುಂಬು ತೋಳಿನ ಟೀ ಶರ್ಟ್, ಪಿಂಕ್ಬಣ್ಣದ ಜಾಕೆಟ್ಟ ಧರಿಸಿರುತ್ತಾಳೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 50/2022  ಕಲಂ: ಹೆಂಗಸು  ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ : ಪಿರ್ಯಾದಿ ಗಣೇಶ್‌ ಪೂಜಾರಿ (32), ತಂದೆ: ಬಾಬಣ್ಣ ಪೂಜಾರಿ, ವಾಸ: ಸೌಹಾರ್ಧ ನಿಲಯ, ಕಳುವಿನ ಬಾಗಿಲು, ಕಚ್ಚೂರು ಗ್ರಾಮ, ಬಾರ್ಕೂರು ಇವರ ಅಣ್ಣನಾದ ಭಾಸ್ಕರ ಪೂಜಾರಿ, ಪ್ರಾಯ: 34 ವರ್ಷ ಎಂಬವರು ಬ್ರಹ್ಮಾವರದ ಆಶ್ರಯ ಹೊಟೇಲ್‌ನಲ್ಲಿ ರೂಮ್‌ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ  ಲಿವರ್‌  ಖಾಯಿಲೆ ಇದ್ದು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ಚಿಕಿತ್ಸೆ ಪಡೆದು ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಇರುವ ಹೊಟ್ಟೆ ನೋವಿನ ಬಗ್ಗೆ ಜೀವನದಲ್ಲಿ ಜೀಗುಪ್ಸೆಗೊಂಡು  ಈ ದಿನ ದಿನಾಂಕ 26.04.2022 ರಂದು ಬ್ರಹ್ಮಾವರದ ಆಶ್ರಯ ಹೊಟೇಲ್‌ಗೆ ಕೆಲಸಕ್ಕೆ ಹೋಗಿದ್ದಾಗ ಬೆಳಿಗ್ಗೆ 08:00 ಗಂಟೆಯಿಂದ 08:30  ಗಂಟೆಯ ಮಧ್ಯಾವಧಿಯಲ್ಲಿ ಆಶ್ರಯ ಹೊಟೇಲ್‌ನ ರೂಮ್‌ ನಂ. 302 ರಲ್ಲಿ ಸೀಲಿಂಗ್‌ ಫ್ಯಾನಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಭಾಸ್ಕರ ಪೂಜಾರಿ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 20/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಪಿರ್ಯಾದಿ ದಿವಾಕರ ನಾಯ್ಕ (46) ತಂದೆ: ನಾರಾಯಣ ನಾಯ್ಕ ವಾಸ: ದೇಕಿಬೆಟ್ಟು ಬಂಗಾರಗುಡ್ಡೆ ಹೆಬ್ರಿ ಇವರ ತಂದೆ ನಾರಾಯಣ ನಾಯ್ಕ್ ಇವರು ಪ್ರಾಯಸ್ಥರಾಗಿದ್ದು. ಅವರಿಗೆ ಸುಮಾರು 78 ವರ್ಷ ಪ್ರಾಯವಾಗಿರುತ್ತದೆ. ಅವರ ಎರಡು ಕಾಲಿನ ನೋವಿನ ಬಗ್ಗೆ ಸುಮಾರು 2 ವರ್ಷಗಳಿಂದ ಹಲವು ಅಸ್ಪತ್ರೆಗಳಲ್ಲಿ ತೋರಿಸಿ ಚಿಕಿತ್ಸೆಯನ್ನು ಮಾಡಿಸಿದ್ದು. ವೈದ್ಯರು ಅವರಿಗೆ ಯಾವುದೇ ನೋವು ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಅದರೂ ತಂದೆಯವರು ನನಗೆ ಎರಡು ಕಾಲುಗಳು ನೋವು ಇರುತ್ತದೆ ಎಂದು ಮಾನಸಿಕ ಖಿನ್ಯತೆಗೆ ಒಳಗಾಗಿ ಸುಮಾರು 3-4 ಸಾರಿ  ನಮ್ಮಲ್ಲಿ ತಾನು ಸಾಯುತ್ತೇನೆಂದು ಎಂದು ಹೇಳಿ ಅತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ ಮೇಲಿನ ವಿಚಾರದಲ್ಲಿ ನಿನ್ನೆ ದಿನ ದಿನಾಂಕ; 25/04/2022 ರಂದು ರಾತ್ರಿ 9-30  ಗಂಟೆಯಿಂದ ರಾತ್ರಿ 11-45 ಗಂಟೆಯ ಮದ್ಯಾವಧಿಯಲ್ಲಿ ಹೆಬ್ರಿ ಗ್ರಾಮದ ಬಂಗಾರುಗುಡ್ಡೆ ದೇಕಿಬೆಟ್ಟು ಎಂಬಲ್ಲಿ ತನ್ನ ಮನೆಯ ಹಿಂದುಗಡೆ ಇರುವ ದನದ ಕೊಟ್ಟಿಗೆಯ ಹೊರಭಾಗದಲ್ಲಿರುವ ಮೇಲಿನ ಮರದ ಜಂತಿಗೆ ಹುರಿಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ UDR NO 18/2022 U/s 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 26-04-2022 06:14 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080