ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶೇಖರ್ ಮೂಲ್ಯ(39), ತಂದೆ: ದಿ.ಪೂವಪ್ಪ ಮೂಲ್ಯ , ವಾಸ: ಕುದ್ರೊಟ್ಟು ಗುತ್ತು ಮನೆ ಸಚ್ಚರೀಪೇಟೆ ಅಂಚೆ ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, ಸುಧಾಕರ ಹಾಗೂ ಆರೋಪಿ ಮೃತ ಕೃಷ್ಣ ಮೂಲ್ಯ ರವರು ಸ್ವಂತ ಅಣ್ಣ ತಮ್ಮಂದಿರಾಗಿದ್ದು, ಅವರುಗಳ ಪಿತ್ರಾಜಿತ ಆಸ್ತಿಯು ಪಾಲಾಗಿದ್ದು, ಪಾಲಾದ ಆಸ್ತಿಯನ್ನು ನೋಂದಣಿ ಮಾಡಿಸಲು ತನ್ನಲ್ಲಿ ಹಣ ಇಲ್ಲ, ತನ್ನ ಹೆಸರಿನ ಆಸ್ತಿಯನ್ನು ತನ್ನ ಹೆಸರಿಗೆ ನೋಂದಣೆ ಮಾಡಿಸಿಕೊಡುವಂತೆ ಆಗಾಗ್ಗೆ ಸುಧಾಕರವರಿಗೆ ಒತ್ತಾಯಿಸುತ್ತಿದ್ದು, ಅದಕ್ಕೆ ಸುಧಾಕರವರು, ಆಸ್ತಿಯನ್ನು ನೋಂದಣೆ ಮಾಡಿಸಲು ತನ್ನಲ್ಲಿ ಹಣ ಇಲ್ಲ ಎಂದು ಹೇಳಿದ್ದರಿಂದ ಆರೋಪಿ ಕೃಷ್ಣ ಮೂಲ್ಯನು, ಸುಧಾಕರ ಮತ್ತು ಇತರ ಸಹೋದರರ ಮೇಲೆ ದ್ವೇಷ ಸಾಧನೆಯಿಂದ, ಅವರುಗಳನ್ನೆಲ್ಲಾ ಕೊಲ್ಲುವ ಉದ್ದಶದಿಂದ ದಿನಾಂಕ 25/01/2023 ರಂದು ರಾತ್ರಿ ಆತನ ಅಕ್ಕ ಜಯಂತಿ ಇವರ ಮಗಳಾದ ದೀಕ್ಷಾ ಈಕೆಯ ಮದುವೆಯ ಮೆಹಂದಿ ಕಾರ್ಯಕ್ರಮ ಮುಗಿಸಿ ಮನೆಯ ಅಂಗಳದಲ್ಲಿ ಹಾಕಿದ್ದ ಮೆಹಂದಿಯ ಸ್ಟೇಜ್‌ನಲ್ಲಿ ಮಲಗಿದ್ದ, ಪಿರ್ಯಾದುದಾರರು, ಅವರ ಭಾವ ಸದಾನಂದ ಹಾಗೂ ಪಿರ್ಯಾದಿದಾರರ ಅಕ್ಕಂದಿರ ಮಕ್ಕಳ ಮೇಲೆ ಈ ದಿನಾಂಕ 26/01/2023 ರಂದು ಬೆಳಗ್ಗಿನ ಜಾವ 03:00 ಗಂಟೆಗೆ ಆರೋಪಿ ಕೃಷ್ಣ ಮೂಲ್ಯನು ಬಾಟಲಿಗಳಲ್ಲಿ ಪೆಟ್ರೋಲ್‌ ತುಂಬಿಸಿಕೊಂಡು ಬಂದು, ಮಲಗಿದ್ದವರ ಮೇಲೆ ಚೆಲ್ಲಿದ್ದಲ್ಲದೆ, ಮನೆಯ ಬಾಗಿಲ ಬಳಿ ಹಾಕಿದ್ದ ಕಾರ್ಪೆಟ್‌‌ ಮೇಲೆ ಕೂಡಾ ಪೆಟ್ರೋಲನ್ನು ಸುರಿದು, ಅದಕ್ಕೆ ಲೈಟರ್‌‌ನಿಂದ ಬೆಂಕಿ ಹಚ್ಚಿದ್ದು ಬೆಂಕಿ ಆರಿಸಲು ಹೋದ ಪಿರ್ಯಾದಿದಾರರ ಭಾವ ಸದಾನಂದ ರವರ ಮೈ ಕೈಗೆ ಸುಟ್ಟ ಗಾಯವಾಗಿದ್ದು ಅಲ್ಲದೇ ಶೇಖರ ಮೂಲ್ಯ ರವರ ಎಡಕಣ್ಣಿನ ಬಳಿ ಹಾಗೂ ಮುಖಕ್ಕೆ ಸುಟ್ಟಗಾಯ ಉಂಟಾಗಿದ್ದು, ಆ ಬಳಿಕ ಆರೋಪಿ ಕೃಷ್ಣ ಮೂಲ್ಯನು ಆತನು ವಾಸ್ತವ್ಯ ಇದ್ದು ಮನೆಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 436 ,307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರೋಟ್ಟು ಹೌಸ್ ನಿವಾಸಿ ಶ್ರೀ ಕೃಷ್ಣ ಮೂಲ್ಯ ರವರಿಗೆ 51 ವರ್ಷ ಪ್ರಾಯವಾಗಿದ್ದು ಮದುವೆಯ ಬಳಿಕ ಕೃಷ್ಣ ಮೂಲ್ಯರವರು ತನ್ನ ಮನೆಯವರೊಂದಿಗೆ ಹಾಗೂ ತನ್ನ ಹೆಂಡತಿಯೊಂದಿಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದು ಅವರ ಕಿರಿಕಿರಿಯಿಂದ ಅವರ ಮನೆಯವರು ಬೇರೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದು, ಅವರ ಹೆಂಡತಿ ಶ್ರೀಮತಿ ಜಯಶ್ರೀ ರವರು ಸುಮಾರು 05 ವರ್ಷಗಳ ಹಿಂದೆ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿ ಅಲ್ಲಿಯೇ ವಾಸಮಾಡಿಕೊಂಡಿದ್ದು, ಆ ಬಳಿಕ ಕೃಷ್ಣ ಮೂಲ್ಯರವರು ಕುಟುಂಬದ ಮನೆಯಯಲ್ಲಿ ಒಬ್ಬರೇ ವಾಸಮಾಡಿಕೊಂಡಿದ್ದು ದಿನಾಂಕ 26/01/2023 ರಂದು ಬೆಳಗಿನ ಜಾವ 03:10 ಗಂಟೆಗೆ ಡೆತ್ ನೋಟ್ ಬರೆದು ತಾನು ವಾಸಮಾಡಿಕೊಂಡಿದ್ದ ಮನೆಯೊಳಗೆ ಹಾಗೂ ಅವರ ಮನೆಯವರು ವಾಸಮಾಡಿಕೊಂಡಿದ್ದ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಬಳಿಕ ಮನೆಯ ಬಳಿ ಇರುವ ತನ್ನ ಅವರ ಮಾರುತಿ ಒಮ್ನಿ ಕಾರಿಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿದ್ದು ಅಲ್ಲದೇ ಪೆಟ್ರೋಲ್ ನ್ನು ಮೈಗೆ ಸುರಿದುಕೊಂಡು ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶ್ರೀಮತಿ ಜಯಶ್ರೀ (41) ,ಗಂಡ: ಕೃಷ್ಣ ಮೂಲ್ಯ ವಾಸ: ಜ್ಯೋತಿ ನಿವಾಸ ಅಶ್ವತಕಟ್ಟೆ ತೆಳ್ಳಾರು ಅಂಚೆ ದುರ್ಗಾ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2023 ಕಲಂ: 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-01-2023 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080