ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸುರೇಶ, ಪ್ರಾಯ: 32 ವರ್ಷ, ತಂದೆ: ವಿಠ್ಠಲ, ವಾಸ: ಸಾನ್ವಿ ನಿಲಯ, ಗುಂಡಾಜೆ ಮನೆ, ಜಾರ್ಕಳ, ಎರ್ಲಪ್ಪಾಡಿ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ: 24/12/2022 ರಂದು ಸಂಜೆ ತನ್ನ ಮೋಟಾರ್‌ ಸೈಕಲ್‌ ನ್ನು ಸವಾರಿ ಮಾಡಿಕೊಂಡು ಕಾರ್ಕಳ ಜೋಡುರಸ್ತೆ ಕಡೆಯಿಂದ ಬೈಲೂರು ಕಡೆಗೆ ಸಾಗಿರುವ ರಾಜ್ಯ ಹೆದ್ದಾರಿಯಲ್ಲಿ ಮನೆ ಕಡೆಗೆ ಬರುತ್ತಾ ಸಮಯ ಸುಮಾರು ಸಂಜೆ 6:45 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಾರ್ಕಳ ಅಣ್ಣು ಶೆಟ್ಟಿ ಪಾದೆ ಬಳಿಯಿಂದ ಸ್ವಲ್ಪ ದೂರ ತಲುಪಿದಾಗ ಎದುರುಗಡೆಯಿಂದ ಪಿರ್ಯಾದಿದಾರೊಂದಿಗೆ ಕೆಲಸ ಮಾಡುತ್ತಿದ್ದ ನಿಟ್ಟೆ ಕಾಲೇಜಿನ ರೋನಿ ಪೆರ್ನಾಂಡೀಸ್‌ ಟಿವಿಎಸ್‌ ಕಂಪೆನಿಯ KA-20-EE-9638 ನೇ ನಂಬ್ರದ ದ್ವಿಚಕ್ರ ವಾಹನವನ್ನು ಹೆಲ್ಮೆಟ್‌ ಧರಿಸಿಕೊಂಡು ಯೋಗೀಶ್‌ ನನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಬೈಲೂರು ಕಡೆಗೆ ಸವಾರಿ ಮಾಡುತ್ತಿದ್ದು ಅದೇ ವೇಳೆ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ ತೂಫಾನ್‌ ಟ್ರ್ಯಾಕ್ಸ್‌ ವಾಹನವನ್ನು ಅದರ ಚಾಲಕನು ಒಂದು ವಾಹನವನ್ನು ಓವರ್‌ ಟೇಕ್‌ ಮಾಡಿಕೊಂಡು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರೋನಿಯು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಚಾಲಕನು ತೂಫಾನ್‌ ಟ್ರ್ಯಾಕ್ಸ್‌ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಅಪಘಾತದಿಂದ ರೋನಿಯ ಮುಖಕ್ಕೆ, ತಲೆಯ ಮುಂಭಾಗಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಯೋಗೀಶನಿಗೆ ಬಲಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ರೋನಿ ಹಾಗೂ ಯೋಗೀಶನನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ರೋನಿಯನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2022 ಕಲಂ 279, 337,338 ಐಪಿಸಿ. 134(a&b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಪ್ರತೀಮಾ ಗಣೇಶ್(35)‌, ಗಂಡ:ಗಣೇಶ್‌ ಕುಮಾರ್‌, ವಾಸ:ಗುರುವರ, ಬೊಕ್ಕಪಟ್ನ ಬೋಳೂರು, ಮಂಗಳೂರು ಇವರ ತಂದೆ: ವಿವೇಕ್‌ ಭಗವಾನ್(74)‌ ರವರು. ಡಿ.ಎಕ್ಸ್.‌ಎನ್‌ ಕಂಪೆನಿಯಲ್ಲಿ ಮಾಕೆ೯ಟಿಂಗ್‌ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನ ದಿನಾಂಕ:24/12/2022 ರಂದು ಕೆಲಸ ಪೂರೈಸಿ ಮನೆಗೆ ಬಂದು ಹಣ್ಣು ತಿಂದು ಬಳಿಕ ಕುಚಿ೯ಯಲ್ಲಿ ಕುಳಿತುಕೊಂಡಿದ್ದವರು ಸಂಜೆ ಸುಮಾರು 6:30 ಗಂಟೆ ಸುಮಾರಿಗೆ ಒಮ್ಮೆ ಕೂಗಿಕೊಂಡು ಅಲ್ಲಿಯೇ ಕುಚಿ೯ಮೇಲೆ ಕುಸಿದು ಬಿದ್ದವರನ್ನು ಪಿಯಾ೯ದಿದಾರರ ತಾಯಿ ನೆರೆಕರೆಯವರ ಸಹಾಯದಿಂದ ಉಡುಪಿ ಟಿ.ಎಂ. ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈಧ್ಯರು ರಾತ್ರಿ ಸುಮಾರು 7:00 ಗಂಟೆಗೆ ವಿವೇಕ್‌ ಭಗವಾನ್‌ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿಯಾ೯ದಿದಾರರ ತಂದೆಯವರು ಹೃದಯಾಘಾತದಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2022 ಕಲಂ: 174 ಸಿ.ಆರ್‌‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 25-12-2022 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080