ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ:

  • ಬ್ರಹ್ಮಾವರ:  ಪಿರ್ಯಾದಿ ಪ್ರಶಾಂತ್ ಕುಮಾರ್ ಶೆಟ್ಟಿ , ಪ್ರಾಯ: 42 ವರ್ಷ, ತಂದೆ: ವಿಠ್ಠಲ್ ಶೆಟ್ಟಿ, ವಾಸ: ಕೊಂಡೆಬೆಟ್ಟುಮನೆ, ಸೀತಾನದಿ, ಇವರ ಅಣ್ಣನಾದ ಅರುಣ್ ಕುಮಾರ್ ಶೆಟ್ಟಿ, ಪ್ರಾಯ: 48 ವರ್ಷ ಎಂಬವರು ಬೆಳಗಾಂನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದುಕೊಂಡು ತಿಲಕ್‌ವಾಡಿಯಲ್ಲಿ  ಅಂಗಡಿ ವ್ಯವಹಾರ ನಡೆಸಿಕೊಂಡಿರುತ್ತಾರೆ. ದಿನಾಂಕ: 24.08.2021 ರಂದು ರಾತ್ರಿ 9:00 ಗಂಟೆಯಿಂದ ಅರುಣ್ ಕುಮಾರ್ ಶೆಟ್ಟಿ ರವರು ಬೆಳಗಾಂ ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಬೆಳಗಾಂ ಜಿಲ್ಲೆಯ ತಿಲಕ್‌ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಅರುಣ್ ಕುಮಾರ್ ಶೆಟ್ಟಿ ರವರು ಬೆಳಗಾಂ ನಿಂದ  ಅವರ ಹೆಂಡತಿ ಉಮಾ ಶೆಟ್ಟಿ ರವರ ಮನೆಯಾದ ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ನಡುಬೆಟ್ಟು ವಿಗೆ ಬಂದು ದಿನಾಂಕ: 24.08.2021 ರಂದು ರಾತ್ರಿ 9:00 ಗಂಟೆಯಿಂದ  ದಿನಾಂಕ: 25.08.2021 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ವಾಸ್ತವ್ಯದ ಮನೆಯ ಹಿಂಭಾಗದ ಗೇರು ಮರದ ಕೊಂಬೆಗೆ ಹೆಂಡತಿ ಮನೆಯ ಬಾವಿಯ ನೀರು ಸೇದುವ ನೈಲಾನ್‌ ಹಗ್ಗವನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರ ಕಿಸೆಯಲ್ಲಿ ‘’ವ್ಯವಹಾರದಲ್ಲಿ ವ್ಯಾಪಾರ ಕಡಿಮೆ ಇದ್ದ ಕಾರಣ’’ ಎಂಬುದಾಗಿ ಬರೆದ ಚೀಟಿ ದೊರೆತಿರುತ್ತದೆ. ಅರುಣ್ ಕುಮಾರ್ ಶೆಟ್ಟಿ ರವರು ಕಳೆದ 2 ವರ್ಷಗಳಿಂದ ಕೊರೋನಾ ಲಾಕ್‌ಡೌನ್‌ ನಲ್ಲಿ ವ್ಯವಹಾರ ನಷ್ಟ ಇರುವುದಾಗಿ ಹೇಳುತ್ತಿದ್ದು, ಅದೇ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅಲ್ಲದೇ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ ನಂ. 52/2021 ಕಲಂ 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣ:

  • ಕಾರ್ಕಳ  ದಿನಾಂಕ  24-08-2021 ರಂದು ರಾತ್ರಿ 20:00 ಗಂಟೆಗೆ  KA19ET4906 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ನ್ನು ಅದರ ಸವಾರ  ಪ್ರವೀಣ ಪೂಜಾರಿ ಎಂಬಾತನು ನಿತೀಶ ಎಂಬಾತನನ್ನು ಸಹಸವಾರನನ್ನಾಗಿ  ಕುಳ್ಳಿರಿಸಿಕೊಂಡು ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ  ರಾಷ್ಟ್ರೀಯ ಹೆದ್ದಾರಿ 169 ರಲ್ಲಿ  ಸಾಣೂರು ಗ್ರಾಮದ ಸಾಣೂರು ಸೇತುವೆ ಹತ್ತಿರ ತಲುಪುವಾಗ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಕಾರ್ಕಳ  ಕಡೆಗೆ KA20MB8189 ನೇ ನೋಂದಣಿ ಸಂಖ್ಯೆಯ ಕಾರುನ್ನು ಅದರ ಚಾಲಕ ಪಾಂಡುರಾವ್  ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಬಲಬದಿಗೆ ಚಲಾಯಿಸಿ ಎದುರಿನಿಂದ  ಬರುತ್ತಿದ್ದ  ಪ್ರವೀಣ ಪೂಜಾರಿರವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ನೊಂದಿಗೆ  ರಸ್ತೆಗೆ ಬಿದ್ದ ಪರಿಣಾಮ ಪ್ರವೀಣ ಪೂಜಾರಿರವರಿಗೆ ಬಲಕಾಲಿಗೆ ಒಳಜಖಂ, ಸೊಂಟಕ್ಕೆ ಒಳಜಖಂ, ಹೊಟ್ಟೆಗೆ ಒಳಜಖಂ, ತಲೆಗೆ ಎಡಬದಿ ರಕ್ತಗಾಯವಾಗಿದ್ದು  ಸಹ ಸವಾರ  ನಿತೇಶರವರಿಗೆ  ಬಲಕೈ ನಡುಬೆರಳಿಗೆ ಮೂಳೆ ಮತ್ತು  ಬಲಕೈ ಮೂಳೆ ಮುರಿತದ ಗಾಯವಾಗಿದ್ದು, ಬಲಕೈಕಿರುಬೆರಳು, ಉಂಗುರ ಬೆರಳು ಮತ್ತು ಬಲಕಣ್ಣಿನ ಹತ್ತಿರ  ರಕ್ತಗಾಯವಾಗಿದ್ದು  ವಾಹನಗಳು  ಜಖಂಗೊಂಡಿರುತ್ತದೆ ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 104/2021  ಕಲಂ 279,337,338 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಜಯರಾಮ (61) ತಂದೆ: ನಾರಾಯಣ ವಾಸ: ಲಕ್ಷ್ಮೀನಾರಾಯಣ ಕೃಪಾ, ಬೈಲೂರು, ಉಡುಪಿ 76 ಬಡಗುಬೆಟ್ಟು ಗ್ರಾಮ ಇವರು  ದಿನಾಂಕ 25/08/2021 ರಂದು ತಮ್ಮ ಬಾಬ್ತು KA 19 X 6033 ನೇ ಸ್ಕೂಟರಿನಲ್ಲಿ ಸಿಟಿ ಬಸ್ ನಿಲ್ದಾಣದಿಂದ ವಾದಿರಾಜ ರೋಡ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 11:30 ಗಂಟೆಗೆ ಕಲ್ಸಂಕ ಜಂಕ್ಷನ್ ಬಳಿ ಕಲ್ಸಂಕ ವೃತ್ತವನ್ನು ಸುತ್ತುವರಿದು ರಾ.ಹೆ 169ಎ ಯ ರಾಜಾಂಗಣಕ್ಕೆ ಹೋಗುವ ರಸ್ತೆಯ ಅಂಚಿನಲ್ಲಿ ತಲುಪುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA 17 P 4949 ನೇ ಕಾರು ಚಾಲಕ ಭೀಮೇಶ್ ಎಂಬಾತನು ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕೈ ಮತ್ತು ಎಡ ಭುಜಕ್ಕೆ ಮೂಳೆ ಮುರಿತ ಉಂಟಾಗಿರುತ್ತದೆ.ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 51/2021  ಕಲಂ 279,338 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-08-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080