Feedback / Suggestions

ಅಫಘಾತ ಪ್ರಕರಣ

  • ಅಮಾಸೆಬೈಲು: ದಿನಾಂಕ 24/06/2022 ರಂದು ಪಿರ್ಯಾದಿ ದಿನಕರ ಎಂಬುವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ   KA:20EY:6393 ನೇಯದರಲ್ಲಿ ತನ್ನ ಸ್ನೇಹಿತ ಸೃಜನ್ ನಾಯ್ಕ (19)  ಎಂಬುವನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೊಸಂಗಡಿ ಸಿದ್ದಾಪುರ ಟಾರು ರಸ್ತೆಯಲ್ಲಿ, ಹೊಸಂಗಡಿ ಕಡೆಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಸಂಜೆ 05:೦೦ ಗಂಟೆಯ ಸಮಯಕ್ಕೆ ಹೊಸಂಗಡಿ ಗ್ರಾಮದ ಕೆರೆಕಟ್ಟೆ ಅಬ್ಬಿಮಕ್ಕೆ ಎಂಬಲ್ಲಿ ತಲುಪುವಾಗ ಅವರ ಎದುರುನಿಂದ ಅಂದರೆ ಸಿದ್ದಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ನಂ:KL:49 H;5838 ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಹಣೆಗೆ, ಬಲಕೈಗೆ,ಮೂಗು,ಎಡಕಾಲಿಗೆ ರಕ್ತಗಾಯವಾಗಿರುತ್ತದೆ .ಹಾಗೂ ಸಹ ಸವಾರನಾಗಿ ಕುಳಿತಿದ್ದ ಸೃಜನ್ ನ ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಅಪಘಾತಕ್ಕೆ KL:49 H;5838 ಲಾರಿ ಚಾಲಕನ ಅತೀ ವೇಗ ಮತ್ತು  ಅಜಾಗರರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ:  279, 337,304(A) ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿ ಜಗದೀಶ ವಿ ಸುವರ್ಣ ಇವರು ಪಡುಬಿದ್ರಿಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ:24.06.2022 ರಂದು ತಮ್ಮ ಬಾಬ್ತು KA-20-AA-9665 ನೇ ನಂಬ್ರದ ಆಟೋರಿಕ್ಷಾದಲ್ಲಿ ಬಾಡಿಗೆ ಬಗ್ಗೆ ಪಡುಬಿದ್ರಿ ರಿಕ್ಷಾ ನಿಲ್ದಾಣದಿಂದ ತೆಂಕ ಎರ್ಮಾಳು ಕಡೆಗೆ  ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಹೊರಟು ಸಂಜೆ ಸಮಯ 16:30 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಕಲ್ಸಂಕದ ಸೇತುವೆಗಿಂತ ಸ್ವಲ್ಪ ಹಿಂದೆ ಇರುವ ಡಿವೈಡರ್ ಬಳಿ ಯೂಟರ್ನ್ ತೆಗೆದುಕೊಳ್ಳಲು ಸೂಚನೆ ನೀಡಿ ರಿಕ್ಷಾವನ್ನು ಬಲಕ್ಕೆ ತಿರುಗಿಸುತ್ತಿದ್ದಂತೆ, ಅದೇ ರಸ್ತೆಯಲ್ಲಿ ಹಿಂಬದಿಯಿಂದ KA-19-AD-0379 ನೇ ನಂಬ್ರದ ಬಸ್ಸು ಚಾಲಕ ರಮೇಶ ಎಂಬಾತನು ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾದ ಸೇಪಿನ ಬಲಬದಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ರಿಕ್ಷಾವು ರಸ್ತೆಯ ಪಶ್ಚಿಮ ಅಂಚಿನ ತಗ್ಗು ಜಾಗಕ್ಕೆ ಹೋಗಿ ನಿಂತಿದ್ದು, ರಿಕ್ಷಾದ ಎದುರು ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಮತ್ತು ರಿಕ್ಷಾ ಚಾಲನೆ ಮಾಡುತ್ತಿದ್ದ ಪಿರ್ಯಾದಿದಾರರ ಬಲಕಾಲಿನ ಪಾದದ ಗಂಟಿನ ಬಳಿ ಸಾಮಾನ್ಯ ಗಾಯವಾಗಿದ್ದು, ಈ ಬಗ್ಗೆ ಪಡುಬಿದ್ರಿಯ  ಸಿದ್ದಿವಿನಾಯಕ ಆಸ್ಫತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ 279,  337  ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿ ಬಿ.ಆನಂದ ಶೆಟ್ಟಿ ಇವರು  ವಾಸ್ತವ್ಯದಲ್ಲಿರುವ  ಬೇಳೂರು ಗ್ರಾಮದ  ಸರ್ವೆ ನಂ 211/5P3  ನೇದಕ್ಕೆ   ಕುಂದಾಪುರ ಸಿವಿಲ್ ಕೋರ್ಟ ನ ಪ್ರತಿಬಂಧಕ ಆಜ್ಞೆ ಇರುತ್ತದೆ. ಸದ್ರಿ ಸ್ಥಳಕ್ಕೆ  ಆರೋಪಿಗಳಾದ  ಜ್ಯೋತಿ ಶೆಡ್ತಿ ಗಂಡ: ರಘುರಾಮ ಶೆಟ್ಟಿ ಮಹೇಶ ಶೆಟ್ಟಿ ತಾಯಿ:  ಜ್ಯೋತಿ ಶೆಡ್ತಿ, ರಘುರಾಮ ಶೆಟ್ಟಿ, ವಸಂತಿ ಶೆಡ್ತಿ ಗಂಡ: ವಸಂತ ಶೆಟ್ಟಿ  ಹಾಗೂ ವಸಂತ ಶೆಟ್ಟಿ,ಎಂಬವರು ಅತಿಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರಿಗೆ ದೊಣ್ಣೆಯಿಂದ ಹೊಡೆದಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2022 ಕಲಂ:447.324 ಜೊತೆಗೆ 149 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಹರ್ಷ ಕೋಟ್ಯಾನ್ ಇವರು ಪ್ರೊಸೆಸ್ಟೆಂಟ್ ಕ್ರಿಶ್ಚಿಯನ್ ಮತಕ್ಕೆ ಸೇರಿದವರಾಗಿದ್ದು, ದಿನಾಂಕ: 12-011-2020 ರವರೆಗೂ ಮೂಳೂರಿನಲ್ಲಿರುವ ಸಿ.ಎಸ್.ಐ ಬೇತಲ್ ಚರ್ಚ್ ನ ಆಡಳಿತ ಮಂಡಳಿಯ  ಸದಸ್ಯನಾಗಿ ಕೂಡಾ ಕೆಲಸ ಮಾಡಿಕೊಂಡಿರುತ್ತಾರೆ. ಸದ್ರಿ ಚರ್ಚ್ ಗೆ ದಿನಾಂಕ: 01-04-2021 ರಿಂದ ಹೊಸದಾಗಿ ಧರ್ಮಗುರುಗಳಾಗಿ ನೇಮಕಗೊಂಡ ಆರೋಪಿತ ಅಬ್ರಾಹಂ ಸುನೀಲ್ ಕೋಟ್ಯಾನ್ ರವರು ಚರ್ಚ್ ಗೆ ಬರುವಂತಹ ವಂತಿಕೆಗಳು, ಭಕ್ತರು ಕೊಡುವಂತಹ ಕಾಣಿಕ ಹಣ, ಸಭಾ ವಂತಿಕೆ, ಮಾವಿನ ಮರದ ಫಸಲಿನ ಹಣದ ಲೆಕ್ಕಗಳನ್ನು ತಿಂಗಳಿಗೊಮ್ಮೆ ಕಮಿಟಿಯವರಿಗೆ ಕೊಡದೆ, ಅವ್ಯವಹಾರ ನಡೆಸಿರುತ್ತಾರೆ. ಈ ಬಗ್ಗೆ ಚರ್ಚ್ ಆಡಳಿತ ಮಂಡಳಿಯವರು ಒತ್ತಾಯಪಡಿಸಿದ್ದುದರ ಮೇರೆಗೆ ನವೆಂಬರ್ 2022 ರಲ್ಲಿ ಕಮಿಟಿಯವರಿಗೆ ಲೆಕ್ಕ ಪತ್ರ ಕೊಟ್ಟಿದ್ದು, ಕಮಿಟಿಯವರು ಲೆಕ್ಕ ಪತ್ರ ಸರಿಯಿಲ್ಲ ಎಂದು ತಿಳಿಸಿದಾಗ ಆರೋಪಿ ಅಬ್ರಾಹಂ ಸುನೀಲ್ ಕೋಟ್ಯಾನ್ ರವರು ತಾನು ಯಾರಿಗೂ ಲೆಕ್ಕ ಕೊಡುವ ಅಗತ್ಯವಿಲ್ಲ ಎಂದು ಉಡಾಫೆಯಿಂದ ಮಾತನಾಡಿರುತ್ತಾರೆ. ಚರ್ಚಿನಲ್ಲಿ ಇರುವ ದೇವರ ಕಾಣಿಕೆ ಪುಸ್ತಕದಲ್ಲಿ ನಮೂದಾದ ಹಣವನ್ನು ಬ್ಯಾಂಕಿಗೆ ಹಾಕಿರುವುದಿಲ್ಲ. ದೇವರ  ಕಾಣಿಕೆ ಪುಸ್ತಕಕ್ಕೂ ಹಾಗೂ ಬ್ಯಾಂಕ್ ಪಾಸ್ ಪುಸ್ತಕಕ್ಕೂ ತಾಳೆ ಇರುವುದಿಲ್ಲ. ಅಲ್ಲದೇ ತನ್ನ ಸ್ವಂತ ಹೆಸರಿನಲ್ಲಿ ಚರ್ಚ್ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆದಿರುತ್ತಾರೆ. ಚರ್ಚಿನ ಆಧಾಯದ ಪುಸ್ತಕಕ್ಕೆ ಯಾವುದೇ ಸಂಬಂಧವಿಲ್ಲದ ಸುಳ್ಳು ಲೆಕ್ಕ ಪತ್ರವನ್ನು ಸಭೆಯ ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಿರುತ್ತಾರೆ. ಚರ್ಚ್ ನ ಲಕ್ಷಾಂತರ ರೂಪಾಯಿಗಳನ್ನು ದುರುಪಯೋಗಪಡಿಸಿ, ದೇವಾಲಯ ನಿಯಮಗಳಿಗೆ ಹಾನಿಯುಂಟು ಮಾಡಿ, ಸರಿಯಾದ ಲೆಕ್ಕಪತ್ರವನ್ನು ಕೊಡದೆ ಇದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ 403, 405, 406, 416, 417, 420, 506  ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಫಿರ್ಯಾದುದಾರರಾದ ಭಾಸ್ಕರ , ಪ್ರಾಯ 42 ವರ್ಷ ಎಂಬವರು ಪರಿಶಿಷ್ಟ  ಜಾತಿಗೆ  ಸೇರಿದವರಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 23-06-2022 ರಂದು ಸಂಜೆ 19-00 ಗಂಟೆಗೆ ಕೌಡೂರು ಗ್ರಾಮದ ರಂಗನಪಲ್ಕೆ  ಕೀರ್ತಿ ಬಾರ್ ಮತ್ತು ರೆಸ್ಟೋರೆಂಟ್ ಬಳಿ ನಿಂತುಕೊಂಡಿರುವಾಗ ಅಪಾದಿತ ಐವನ್ ಡಿಸೋಜ ಎಂಬಾತನು ಇಲ್ಲಿ ಏನು ನಿಂತಿರುವೆ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದು  ಅಪಾದಿತ ಹರೀಶ ಪೂಜಾರಿ ಬಾರ್‌ನಿಂದ ಹೊರಗಡೆ ಬಂದು ಫಿರ್ಯಾದುದಾರರ ಬಲಕೆನ್ನೆಗೆ ಕೈಯಿಂದ ಹೊಡೆದು ಕಣ್ಣಿನ ಬಳಿ ನೋವುಂಟು ಮಾಡಿದ್ದಲ್ಲದೇ ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.ಫಿರ್ಯಾದುದಾರರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಹಲ್ಲೆ ಸಮಯ ಫಿರ್ಯಾದುದಾರರ ಎಡಕಿವಿಯಲ್ಲಿದ್ದ ಬಂಗಾರದ ರಿಂಗ್ ಬಿದ್ದುಹೋಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2022  ಕಲಂ 323,504,506 R/W 34  ಐಪಿಸಿ ಮತ್ತು ಕಲಂ 3(1) (r),3(1)(s), 3(2) (v-a)  SC ST Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿ ಉಮೇಶ ನಾರಾಯಣ ಭಿರ್ತಿ ಇವರು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿರುವುದಾಗಿದೆ. ಪಿರ್ಯಾದುದಾರರ ಮಗ ಆಯುಷ್ ಪ್ರಾಯ 22ವರ್ಷ ಎಂಬವನು ಮೆಕ್ಯಾನಿಕಲ್‌ ಇಂಜಿನಿಯರಿಂಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದು, ಕೆಲಸ ಸಿಗದ ಕಾರಣ ಸ್ವಲ್ಪ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದಿನಾಂಕ:24/06/2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದುದಾರರು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಕಾಣೆಯಾದ ಆಯುಷ್‌ನನ್ನು ಕರೆದುಕೊಂಡು ಬಂದಿದ್ದು, ಸುಮಾರು11:30 ಗಂಟೆ ಸಮಯಕ್ಕೆ ತಾನು ಹೊರಗಡೆ ತಿರುಗಾಡಿ ಬರುವುದಾಗಿ ಹೇಳಿ ಹೋದವನು ಈವರೆಗೂ ಆಸ್ಪತ್ರೆಗೂ ವಾಪಾಸು ಬಾರದೇ, ಮನೆಗೂ ಬಾರದೇ ಮೊಬೈಲ್‌ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ: ಗಂಡಸು ಕಾಣೆ  ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಶಿವಪ್ಪ ಇವರ ತಂಗಿ  ಲಕ್ಷ್ಮೀ ಇವರನ್ನು  ಸುಮಾರು 13 ವರ್ಷಗಳ ಹಿಂದೆ  ಹಾವೇರಿಯ ನಿವಾಸಿ ಆನಂದ ಗಂಧದ ರವರನ್ನು ಮದುವೆ ಮಾಡಿಕೊಂಡಿದ್ದು , ಆನಂದ ಗಂಧದ( 44 ವರ್ಷ)  ಸುಮಾರು 8 ವರ್ಷಗಳಿಂದ ಕಲ್ಯಾಣಪುರದ ಮೌಂಟ್ ರೋಸರಿಯೋ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ  ಡ್ರಾಯಿಂಗ್  ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು , ಈ ದಿನ ದಿನಾಂಕ: 24-06-2022 ರಂದು   ಪಿರ್ಯಾದಿದಾರರು ವರ್ಕ್ ಶಾಪ ನಲ್ಲಿ ಕೆಲಸ ಮಾಡುತ್ತಿರುವಾಗ  ಸಮಯ 1:40 ಗಂಟೆಗೆ   ಮೌಂಟ್ ರೋಸರಿಯೋ ಶಾಲೆಯ ಸಿಬ್ಬಂದಿಯೊಬ್ಬರು  ಕರೆ ಮಾಡಿ ಪಿರ್ಯಾದಿದಾರರ  ಬಾವ  ಆನಂದ ಗಂಧದ  ಸಮಯ ಸುಮಾರು 1:35 ಗಂಟೆಗೆ ಎದೆನೋವು ಎಂದು ಪಿನ್ಸಿಪಾಲ್ ರೂಮಿಗೆ  ಹೋಗಿದ್ದು ಅಲ್ಲೆ ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುವವರನ್ನು  ಚಿಕಿತ್ಸೆಯ ಬಗ್ಗೆ ಕಲ್ಯಾಣಪುರ ಗೊರಟ್ಟಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿ ಅಲ್ಲಿಂದ  ವೈದ್ಯರ ಸೂಚನೆಯಂತೆ  ಕೆಎಂಸಿ ಮಣಿಪಾಲ ಆಸ್ಪತ್ರೆಗೆ  ಕರೆದುಕೊಂಡು  ಹೋಗಿರುವುದಾಗಿ ಪಿರ್ಯಾದಿದಾರರಿಗೆ ವಿಷಯ ತಿಳಿಸಿದಂತೆ ಪಿರ್ಯಾದಿದಾರರು ಕೆಎಂಸಿ  ಮಣಿಪಾಲ  ಆಸ್ಪತ್ರೆಗೆ ಹೋಗಿದ್ದು ,ಆಸ್ಪತ್ರೆಯ  ವೈದ್ಯರು   ಮಧ್ಯಾಹ್ನ 2:00 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಫಿರ್ಯಾದಿ ಮಂಜುನಾಥ ನಾಯಕ್ ಇವರ ತಂದೆ ಶ್ರೀ ರಾಘವೇಂದ್ರ ನಾಯಕ್ (56) ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಅಮಲು ಪದಾರ್ಥ ಸೇವಿಸುವ ಅಭ್ಯಾಸವುಳ್ಳವರಾಗಿದ್ದು ಕೂಲಿ ಕೆಲಸ ಮಾಡಿ ದಿನಂಪ್ರತಿ ಕುಡಿದು ಮನೆಗೆ ಬರುತ್ತಿದ್ದವರು ದಿನಾಂಕ: 24/06/2022 ರಂದು ತನ್ನ ಮನೆಯಾದ ಮಿಯಾರು ಗ್ರಾಮದ ಗುಂಡಾಜೆ ಸರಸ್ವತಿ ನಿವಾಸ ಎಂಬಲ್ಲಿ ವಾಸವಾಗಿದ್ದು, ತನ್ನ ಕುಡಿತದ ಬಗ್ಗೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸಂಜೆ 7:00 ಗಂಟೆಯಿಂದ 7:40 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಬಾತ್‌‌ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Last Updated: 25-06-2022 10:49 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080