ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೊಲ್ಲೂರು: ಪಿರ್ಯಾದಿ ಮನೋಜ್ ಕೆ.ವಿ (42) ತಂದೆ:  ವರ್ಕಿ ಕೆ.ಟಿ ವಾಸ:  ಕಟ್ಟಾಯತ್ ಮನೆ ಉದಯನಗರ ಮುದೂರು ಗ್ರಾಮ  ಬೈಂದೂರು ತಾಲೂಕು  ಮತ್ತು  ಅವರ ಪರಿಚಯದ ಬಿನೋಯ್ ರವರು  ದಿನಾಂಕ  24-01-2022 ರಂದು ರಾತ್ರಿ  8:00 ಗಂಟೆಗೆ ಮುದೂರು ಗ್ರಾಮ ಆನಂದ ಗುಡ್ಡೆ ಎಂಬಲ್ಲಿರುವ ಪಿರ್ಯಾದಿದಾರರ ಬಾಬ್ತು ಪರಂಗಿ ತೋಟದ ಎದುರು ಮುದೂರು - ಉದಯನಗರ ರಸ್ತೆಯಲ್ಲಿ  ನಿಂತುಕೊಂಡಿದ್ದಾಗ ಆರೋಪಿ ಸರೂನ್  ತನ್ನ ಬಾಬ್ತು KA20 EF 9364 ನೇ ಮೋಟಾರು ಸೈಕಲಿನಲ್ಲಿ  ಅರುಣ್ ಎಂಬವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿ ಕೊಂಡು ಉದಯನಗರ ಕಡೆಯಿಂದ ಮುದೂರು ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ  ಪಿರ್ಯಾದಿದಾರರು ನಿಂತು ಕೊಂಡಿದ್ದ ಸ್ಥಳದಿಂದ ಸುಮಾರು 25 ಮೀ ದೂರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಮುದೂರು ಕಡೆಯಿಂದ  ಉದಯ ನಗರ ಕಡೆಗೆ ಬಿಜು ಥೋಮಸ್  ರವರು  ಚಲಾಯಿಸಿಕೊಂಡು ಹೋಗುತ್ತಿದ್ದ  KA20 ET 6644 ನೇ ಮೋಟಾರು ಸೈಕಲಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ  ಮೋಟಾರು ಸೈಕಲ್‌ ಸವಾರರು ಮೋಟಾರು ಸೈಕಲ್‌ ಸಮೇತ ರಸ್ತೆ ಗೆ ಬಿದ್ದು, ಬಿಜು ಥೋಮಸ್ ರವರಿಗೆ  ಬಲ ಕಾಲು ಪಾದದಬಳಿ  ರಕ್ತ ಗಾಯ & ಒಳಜಖಂ ನೋವು  ಬಲಬದಿ ಭುಜ ಒಳಜಖಂ ನೋವು  ಬಲಕೈ ಕಿರು ಬೆರಳು ತುಂಡಾಗಿದ್ದು  ಹಾಗೂ   ಅರುಣ್ ರವರಿಗೆ ತಲೆಗೆ ರಕ್ತ ಹಾಗೂ  ಮೈಕೈ ರಕ್ತಗಾಯವಾಗಿದ್ದು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು  ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಿಜು ಥೋಮಸ್  ಮಂಗಳೂರು ಎ.ಜೆ ಆಸ್ಪತ್ರೆಗೆ  ಮತ್ತು  ಅರುಣ್ ರವರು  ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುತ್ತಾರೆ. ಮತ್ತು ಆರೋಪಿ ಸರೂನ್ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌  ಠಾಣೆ  ಅಪರಾಧ ಕ್ರಮಾಂಕ 07/2022 ಕಲಂ: 279 ,337 IPC ಯಂತೆ ಪ್ರಕರಣ ದಾಖಲಿಸಲಾಗಿದೆ. 

ಕಳವು ಪ್ರಕರಣಗಳು

  • ಶಂಕರನಾರಾಯಣ:   ದಿನಾಂಕ 24.01.2022  ರಂದು 22:00 ಘಂಟೆಯಿಂದ  ದಿನಾಂಕ 25.01.2022  ರಂದು  ಬೆಳಿಗ್ಗೆ   ಸುಮಾರು 6:00  ಘಂಟೆಯ ಮಧ್ಯದ  ಅವಧಿಯಲ್ಲಿ   ಕುಂದಾಪುರ  ತಾಲೂಕಿನ  ಶಂಕರನಾರಾಯಣ ಗ್ರಾಮದ  ಶಂಕರನಾರಾಯಣ  ಸಿಂಡಿಕೇಟ್   ಬ್ಯಾಂಕ್  ಎದುರಗಡೆ  ನಿಲ್ಲಿಸಿದ  ಕೆಎ, 21 ಬಿ.9747 ನೇ ನಂಬ್ರದ  ಟಿಪ್ಪರ   ಲಾರಿಯ  ಸುಮಾರು  25,000/- ರೂ  ಮೌಲ್ಯದ    ಎರಡು ಬ್ಯಾಟರಿಗಳನ್ನು   ಹಾಗೂ  ಕೆಎಲ್. 14  ಕೆ. 2234  ನೇ  ನಂಬ್ರದ   ಟಿಪ್ಪರ  ಲಾರಿ ಯ  ಸುಮಾರು  4000/- ರೂ ಮೌಲ್ಯದ   45 ಲೀಟರ್  ಡಿಸೇಲ್ ನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ ಈ ಬಗ್ಗೆ  ರಕ್ಷತ್  ಪ್ರಾಯ 24  ವರ್ಷ  ತಂದೆ  .ಎಸ್. ರವಿ ಕುಲಾಲ್ ವಾಸ, ಶ್ರೀ ರತ್ನ ನಿಲಯ ಶಂಕರನಾರಾಯಣ  ಗ್ರಾಮ  ಕುಂದಾಪುರ   ತಾಲೂಕು  ಇವರು ಶಂಕರನಾರಾಯಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಠಾಣಾ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022 ಕಲಂ: 379, ಐ.ಪಿಸಿ ಯಂತೆ ಪ್ರಕರಣ  ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-01-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080