ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಘವೇಂದ್ರ ಎಂ (31),  ತಂದೆ: ವೆಂಕಟೇಶ್ ಖಾರ್ವಿ, ವಾಸ:ಮಣ್ಣಿ ಮನೆ ಗಂಗೆಬೈಲು ಕೊಡೇರಿ, ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 23/09/2022 ರಂದು ಅವರ  ಮೋಟಾರು ಸೈಕಲ್ ನಲ್ಲಿ ನಾಗೂರು ಕೊಡೇರಿ ಮಾರ್ಗವಾಗಿ ಹೋಗುತ್ತಿರುವಾಗ ರಾತ್ರಿ 8:30 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಗಂಗೆಬೈಲು ಗಾಂಧಿನಗರ ಪಂಜು ರವರ ಅಂಗಡಿ ಬಳಿಯ ರಸ್ತೆಯ ಬದಿಯಲ್ಲಿ ಅವರ ಪರಿಚಯದ ಸತೀಶ್ ಪೂಜಾರಿರವರು  ನಡೆದುಕೊಂಡು ಹೋಗುತ್ತಿದ್ದು  ಆ ಸಮಯ KA-20-EU-7337 ನೇ ಮೋಟಾರು ಸೈಕಲ್ ಸವಾರ ಸತೀಶ್ ಖಾರ್ವಿ ನಾಗೂರು ಕಡೆಯಿಂದ ಕೋಡೇರಿ ಕಡೆಗೆ ಆತನ ಮೋಟಾರು  ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸತೀಶ್ ಪೂಜಾರಿಯವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ ಸತೀಶ್ ಪೂಜಾರಿಯವರು ರಸ್ತೆಯಲ್ಲಿ ಕುಸಿದು ಬಿದ್ದಿದ್ದು ಅವರ  ತಲೆ ಮತ್ತು ಬಲಕಾಲಿಗೆ ಗುದ್ದಿದ ಒಳನೋವು  ಉಂಟಾಗಿದ್ದು ಮೂಗಿನಲ್ಲಿ ರಕ್ತ ಸೋರುತ್ತಿದ್ದು  ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ.   ಪಿರ್ಯಾದಿದಾರರು ಗಾಯಾಳುವನ್ನು  ಎತ್ತಿ ಉಪಚರಿಸಿ ಚಿಕಿತ್ಸೆ ಬಗ್ಗೆ   108 ವಾಹನದಲ್ಲಿ ಕುಂದಾಪರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ  ಗಾಯಾಳು  ಸತೀಶ್ ಪೂಜಾರಿಯವರನ್ನು  ಮಣಿಪಾಲ  ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 192/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ನಾಯ್ಕ (30),  ಗಂಡ. ರಾಮ  ನಾಯ್ಕ,  ವಾಸ. ಕಾಸಾಡಿ  ಕಾರಿಮನೆ  76  ಹಾಲಾಡಿ  ಗ್ರಾಮ ಕುಂದಾಪುರ  ತಾಲೂಕು ಇವರ  ಅಮ್ಮ ಶ್ರೀಮತಿ ಪಾರ್ವತಿ  (47 ) ಇವರು  ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಕಾಸಾಡಿ  ಕಾರಿಮನೆ  ಎಂಬಲ್ಲಿ ಅವರ ಮಗ  ಕೃಷ್ಣ ನಾಯ್ಕ  ಇವರೊಂದಿಗೆ ವಾಸವಾಗಿದ್ದು, ಆರೋಪಿ  ಕೃಷ್ಣ ನಾಯ್ಕ  ಈತನು  ಯಾವಾಗಲೂ    ಪಾರ್ವತಿ   ಇವರೊಂದಿಗೆ   ಗಲಾಟೆ  ಮಾಡಿ  ಹೊಡೆಯುತ್ತಿದ್ದನು, ಈ ಸಮಯ ಪಾರ್ವತಿ ಇವರು  ಪಿರ್ಯಾದಿದಾರರ ಮನೆಯಲ್ಲಿ  ಇದ್ದು, ವಾಪಾಸು  ಹೋಗಿ ಮಗ  ಕೃಷ್ಣನೊಂದಿಗೆ ಇರುತ್ತಿದ್ದರು, ದಿನಾಂಕ  19/09/2022 ರಂದು ಸಂಜೆ ಸುಮಾರು 6:30  ಗಂಟೆಗೆ ಆರೋಪಿಯು ಪಿರ್ಯಾದಿದಾರರ ಮನೆಗೆ  ಬಂದು ಅಮ್ಮ  ಪಾರ್ವತಿ  ಇವರು  ನಿನ್ನೆ ದಿನ  ದಿನಾಂಕ  18/09/2022  ರಂದು  ರಾತ್ರಿ ಸುಮಾರು 8:30  ಗಂಟೆಗೆ ಶರಾಬು  ಕುಡಿದುಕೊಂಡು ಮನೆಯ ಒಳಗಿನ  ಅಡಿಗೆ  ಕೋಣೆಯಲ್ಲಿ  ಕುಸಿದು  ಕಡೆಯುವ  ಕಲ್ಲಿನ ಮೇಲೆ (ರುಬ್ಬುವ ಕಲ್ಲು)   ಮೇಲೆ   ಬಿದ್ದ  ಕಾರಣ  ತಲೆಗೆ   ರಕ್ತಗಾಯವಾಗಿದ್ದು, ಅವಳು   ಮಾತನಾಡುವುದಿಲ್ಲ  ಎಂದು  ಹೇಳಿದ್ದು, ನಂತರ  ಚಿಕಿತ್ಸೆಯ  ಬಗ್ಗೆ ಪಿರ್ಯಾದಿದಾರರ ಗಂಡ   ಹಾಗೂ   ಆರೋಪಿ  ಹಾಲಾಡಿ  ತನಕ   ಆಟೋರಿಕ್ಷಾದಲ್ಲಿ ಬಂದು ಅಲ್ಲಿಂದ   ಪವನ್  ಇವರೊಂದಿಗೆ  ಸೇರಿ  108 ಅಂಬುಲೆನ್ಸ ವಾಹನದಲ್ಲಿ    ಕುಂದಾಪುರದ ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು, ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಮಂಗಳೂರು  ವೆನ್ಲಾಕ್   ಆಸ್ಪತ್ರೆಗೆ   ಕರೆದುಕೊಂಡು    ಹೋಗಿ  ದಿನಾಂಕ  19/09/2022 ರಂದು , 11:30  ಗಂಟೆಗೆ   ಪಾರ್ವತಿ  ಇವರನ್ನು   ಮಂಗಳೂರು   ವೆನ್ಲಾಕ್  ಆಸ್ಪತ್ರೆಯಲ್ಲಿ ಚಿಕಿತ್ಸೆಯ  ಬಗ್ಗೆ  ದಾಖಲು ಮಾಡಿರುತ್ತಾರೆ,  ಅಲ್ಲಿ  ಗಾಯಾಳು  ಶ್ರೀಮತಿ, ಪಾರ್ವತಿ  ಇವರು   ಪ್ರಜ್ಜಾ ಹೀನ   ಸ್ಥಿತಿಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದವರು  ,  ಚಿಕಿತ್ಸೆ  ಫಲಕಾರಿಯಾಗದೇ  ದಿನಾಂಕ 22/09/2022 ರಂದು ರಾತ್ರಿ 11:12 ಗಂಟೆಗೆ  ಮಂಗಳೂರು  ವೆನ್ಲಾಕ್  ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಆರೋಪಿ   ಕೃಷ್ಣ ನಾಯ್ಕ ಈತನು   ಶ್ರೀಮತಿ ಪಾರ್ವತಿ ಇವರ  ತಲೆಗೆ   ಹೊಡೆದು  ಸಾಯಿಸಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022  ಕಲಂ: 302, 201 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 24-09-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080