ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 24/08/2022 ರಂದು ಬೆಳಿಗ್ಗೆ ಸುಮಾರು 8;50 ಗಂಟೆಗೆ ಕುಂದಾಪುರ ತಾಲೂಕು, ಕಂದಾವರ   ಗ್ರಾಮದ  ಮೂಡ್ಲಕಟ್ಟೆ ಎಂ ಐ ಟಿ ಕಾಲೇಜಿನ ಎದುರು ರಸ್ತೆಯಲ್ಲಿ,  ಆಪಾದಿತ ಶಶಾಂತ  ಎಂಬವರು KA27-EL-6315  ನೇ ಮೋಟಾರ್ ಸೈಕಲ್ ನ್ನು ಉಳ್ಳೂರು ಕಡೆಯಿಂದ ಮೂಡ್ಲಕಟ್ಟೆಯ ಕಡೆಗೆ   ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು ಬಂದು ಕಾಲೇಜು ಬಸ್ಸ್ ನ್ನು ಓವರ್ ಟೇಕ್ ಮಾಡುತ್ತಾ , ಮೂಡ್ಲಕಟ್ಟೆ ಕಡೆಯಿಂದ ಉಳ್ಳೂರು  ಕಡೆಗೆ  ಪಿರ್ಯಾದಿದಾರರಾದ ಶ್ರೇಯಸ್  ಎಂಬವರು KA 19-U-6602 ನೇ ಬೈಕ್ ನ್ನು  ಸವಾರಿ ಮಾಡಿಕೊಂಡು  ಬರುತ್ತಿರುವಾಗ  ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ  ಬಲಕಾಲಿನ ಕಿರುಬೆರಳು ಮೂಳೆ ಮುರಿತಗೊಂಡಿದ್ದು ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 93/2022  ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಬ್ರಹ್ಮಾವರ: ದಿನಾಂಕ 23.08.2022 ರಂದು ಪಿರ್ಯಾದಿದಾರಾದ ಶ್ರೀಕಾಂತ್‌ ರವರು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಬಾರ್ಕೂರು – ಯಡ್ತಾಡಿ ರಸ್ತೆಯಲ್ಲಿ  ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ 9:00 ಗಂಟೆಯ ಸುಮಾರಿಗೆ ಯಡ್ತಾಡಿ ಗ್ರಾಮದ, ಯಡ್ತಾಡಿ ನಾರಾಯಣ ಪ್ರಸಾದ್‌ ರೈಸ್‌ ಮಿಲ್‌ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಯಡ್ತಾಡಿ ಕಡೆಗೆ ಆರೋಪಿ ಜಗದೀಶ್‌ ಆಚಾರ್ಯ ಎಂಬವರು ಅವರ ಬಾಬ್ತು KA.04.ME.6123 ನೇ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎದುರಿನಿಂದ ಅಂದರೆ ಯಡ್ತಾಡಿ ಕಡೆಯಿಂದ ಬಾರ್ಕೂರು ಕಡೆಗೆ ಮಂಜುನಾಥ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA.21.H.5482 ನೇ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದ ಪರಿಣಾಮ ಮಂಜುನಾಥ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಮೂಳೆ ಮುರಿತ ಉಂಟಾಗಿ ಹಾಗೂ ಬಲಕೈಯ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ, ಗಾಯಗೊಂಡ ಮಂಜುನಾಥ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 142/2022  ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿ ಸಂದೀಪ ಕುಮಾರ  ಇವರು ದಿನಾಂಕ 24-08-2022 ರಂದು ಶಿರೂರು ರೈಲ್ವೆ ಸ್ಟೇಷನ್ ನಲ್ಲಿ  ಕರ್ತವ್ಯ ದಲ್ಲಿರುವ ಸಮಯ ಬೆಳಗ್ಗೆ 08:57 ಗಂಟೆಗೆ ಶಿರೂರು ರೈಲ್ವೆ ಸ್ಟೇಷನನಿಂದ ರೈಲು ಗಾಡಿ ಸಂಖ್ಯೆ 09001 ಯು ಹೊರಟಿದ್ದು,  ರೈಲಿನಿಂದ ಸುಮಾರು 40 ರಿಂದ 45 ವರ್ಷದ ಅಪರಿಚಿದ ವ್ಯಕ್ತಿಯೊಬ್ಬ ಶಿರೂರು ಗ್ರಾಮದ ಶಿರೂರು ಕೋಟೆಮನೆ ಬ್ರಿಡ್ಜ ಬಳಿ ಬಿದ್ದಿರುವ ಬಗ್ಗೆ ಸೆಕ್ಷನ್ ಕಂಟ್ರೋಲ್ ಅವರಿಂದ ಬೆಳಗ್ಗೆ 09:10 ಗಂಟೆಗೆ ಪಿರ್ಯಾಧಿದಾರರಿಗೆ ವಿಷಯ ತಿಳಿರುತ್ತದೆ. ನಂತರ ಪಿರ್ಯಾಧಿದಾರರು ಟ್ರ್ಯಾಕ್ ಮೆಂಟೆನರ್ ಆದ ನಿಲೇಶ ರವರಿಗೆ ವಿಷಯ ತಿಳಿಸಿದ್ದು, ನಿಲೇಶ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅವರಿಚಿತ ವ್ಯಕ್ತಿಯು ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಯು.ಡಿ.ಆರ್ 45/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-08-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080