Feedback / Suggestions

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 23/07/2021 ರಂದು ಸದಾನಂದ ಕಿಣಿ ಎಂಬುವವರು ತ್ರಾಸಿ ಬೀಚ್‌ಬಳಿ, ಸನ್‌ ಲೈಟ್‌ ಲಾಡ್ಜ್‌ ಸಮೀಪ ಎನ್‌.ಹೆಚ್‌ರಸ್ತೆಯ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ನಾವುಂದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ KA-20-P-1907ನೇ ಮಾರುತಿ ಸ್ವಿಫ್ಟ್‌ಕಾರನ್ನು ಅದರ ಚಾಲಕ ಸಚಿನ್ ಎಂಬುವವರು ಅತೀವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸಿಕೊಂಡು ಬಂದು ಸದಾನಂದ ಕಿಣಿ ಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಸಂಜೆ 4:08 ಗಂಟೆಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಸದಾನಂದ ಕಿಣಿ ಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಎಂಬುದಾಗಿ ನವಿನ ಗಂಗೊಳ್ಳಿ (37), ತಂದೆ:ದಿ. ಮಂಜುನಾಥ ಪೂಜಾರಿ, ವಾಸ: ದೊಡ್ಡಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ:  ಪಿರ್ಯಾದಿದಾರರಾದ ಮಂಜುನಾಥ ನಾಯಕ್ (82), ತಂದೆ: ಸದಿಯಾ ನಾಯಕ್, ವಾಸ: ಕೆಮ್ಮಣ್‌ಕಡು, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು. ಇವರ ಅಜ್ಜ ದಿ| ಮಹಾದೇವ ನಾಯಕ್‌ರವರಿಗೆ  ಸೇರಿದ 2 ಎಕ್ರೆ ಜಾಗದಲ್ಲಿ  ತನ್ನ ಸಂಸಾರದೊಂದಿಗೆ ವಾಸವಾಗಿದ್ದು, ಸದ್ರಿ ಜಾಗವು ಅಜ್ಜನ 7 ಜನ ಮಕ್ಕಳಿಗೆ ಸಮಾನ ಪಾಲು ಆಗ ಬೇಕಾಗಿದ್ದು, ಆದರೆ ಪ್ರಸ್ತುತ ಜಾಗದ ದಾಖಲಾತಿ ಪತ್ರಗಳು ಅಜ್ಜನ ಮೊಮ್ಮಗ ದಿ. ರಮಾನಾಥ ನಾಯಕ್ ರವರ ಹೆಸರಿನಲ್ಲಿದ್ದು, ಅವರ ಮಗನಾದ 1ನೇ ಆರೋಪಿ ಆನಂದ ನಾಯಕ್ ಮತ್ತು ಅವರ ಮನೆಯವರು ಅನುಭವಿಸುತ್ತಿದ್ದು, ಸದ್ರಿ ಜಾಗದ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.  ಸದ್ರಿ ಜಾಗದಲ್ಲಿ 1ನೇ ಆರೋಪಿಯ ತಾಯಿ ಸಂಸಾರದೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿರುತ್ತಾರೆ. ಸದ್ರಿ ಜಾಗವು 1ನೇ ಆರೋಪಿಯ ತಂದೆಯ ಹೇಸರಿನಲ್ಲಿರುವುದರಿಂದ ಆರೋಪಿಯ ಮನೆಯವರು ಮಂಜುನಾಥ ನಾಯಕ್ ರವರಿಗೆ ಅಲ್ಲಿಂದ ಹೋಗುವಂತೆ ಒತ್ತಾಯಿಸಿ ಆಗಾಗ ಮನೆಗೆ ಬಂದು ಇವರಿಗೆ ಹಾಗೂ ಅವರ ಮನೆಯವರಿಗೆ ಬೈದು ನಿಂದಿಸಿ, ಬೆದರಿಕೆ ಹಾಕಿರುತ್ತಾರೆ.  ದಿನಾಂಕ:03/06/2021 ರಂದು ಮಧ್ಯಾಹ್ನ 3:30 ಗಂಟೆಗೆ 2ನೇ ಆರೋಪಿತೆಯಾದ ಆನಂದ ನಾಯಕ್ ನ ಹೆಂಡತಿ ಪುಷ್ಪಾ ಮತ್ತು 3ನೇ ಆರೋಪಿತೆಯಾದ ಆನಂದ ನಾಯಕ್ ನ ಅಣ್ಣನ ಹೆಂಡತಿ ಗೀತಾ ಇವರು ಮಂಜುನಾಥ ನಾಯಕ್ ರವರ ಮನೆಯ ಬಳಿ ಬಂದು ಇವರ ಮನೆಯ ಬಾವಿಗೆ ಆವರಣ ಕಟ್ಟುವ ವಿಚಾರದಲ್ಲಿ ಗಲಾಟೆ ಮಾಡಿ, ‘ ನೀವು ಈ ಜಾಗದಲ್ಲಿ ಯಾವುದೇ ಅಬಿವೃದ್ಧಿ ಕೆಲಸ ಮಾಡಬಾರದು, ಇದು ನಮಗೆ ಸೇರಿದ ಜಾಗ ‘ ಎಂದು ಹೇಳಿದ್ದು,ಆಗ ಮಂಜುನಾಥ ನಾಯಕ್ ರವರು ಇದು ನಮ್ಮ ಅಜ್ಜನಿಗೆ ಸೇರಿದ ಆಸ್ತಿ, ಇದರಲ್ಲಿ ಎಲ್ಲಾರಿಗೂ ಸಮಾನ ಪಾಲು ಇದೆ ಎಂದು ಹೇಳಿದರು. ಆಗ 2ನೇ ಆರೋಪಿತೆಯು ಅಂಗಳದಲ್ಲಿದ್ದ ಇಟ್ಟಿಗೆಯ ತುಂಡನ್ನು ಹೆಕ್ಕಿ, ನಿನಗೆ ಯಾವುದೇ ಜಾಗವಿಲ್ಲ, ಇಲ್ಲಿಂದ ಜಾಗ ಖಾಲಿ ಮಾಡು, ಎಂದು ಅವಾಚ್ಯವಾಗಿ ಬೈದು ಇಟ್ಟಿಗೆಯ ತುಂಡನ್ನು ಮಂಜುನಾಥ ನಾಯಕ್ ರವರ ಮೇಲೆ ಬಲವಾಗಿ ಎಸೆದಿದ್ದು, ಎಸೆದಿದ್ದು ಇಟ್ಟಿಗೆಯ ತುಂಡು ಇವರ ಎದೆಗೆ ತಾಗಿ ಒಳನೋವು ಉಂಟಾಗಿರುತ್ತದೆ. ಆಗ ಪಿರ್ಯಾದಿದಾರರ ಮನೆಯವರು ತಡೆಯಲು ಬಂದಾಗ 2 ಮತ್ತು 3ನೇ ಅರೋಪಿತೆಯರು ಮಂಜುನಾಥ ನಾಯಕ್ ಇವರ ಮಗಳು ಪ್ರತಿಮಾರವರ ಜುಟ್ಟನ್ನು ಹಿಡಿದು ತಿರುಗಿಸಿ, ಬೆನ್ನಿಗೆ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಕೆಳಗೆ ಬೀಳಿಸಿದರು. ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಮಂಜುನಾಥ ನಾಯಕ್ ರವರು ಅವರ ಅಜ್ಜನ ಆಸ್ತಿಯಲ್ಲಿ ಪಾಲು ಕೇಳಿ ನ್ಯಾಯಾಲಯದಲ್ಲಿ ದಾವೆ ಹುಡಿದ್ದರಿಂದ 1 ನೇ ಆರೋಪಿಯು ಸಿಟ್ಟುಗೊಂಡು ಅವರ ದುಷ್ಪ್ರೇರಣೆಯಿಂದ 2 & 3 ನೇ ಆರೋಪಿತೆಯರು ಈ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ:  323, 324,504,506,109 ಜೊತೆಗೆ 34 ಐಪಿಸಿಯಂತೆ ದಾಖಲಾಗಿರುತ್ತದೆ.

Last Updated: 24-07-2021 10:19 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080