ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/05/2022 ರಂದು ಪಿರ್ಯಾದಿದಾರರಾದ ಸತೀಶ (36), ತಂದೆ: ನಾಗರಾಜ ಮೊಗವೀರ  ವಾಸ: ಎಂ.ಜಿ.ಎಂ, ಕೆ.ಕೆ ಪೈ  ಕಾಂಪೌಂಡ್‌, ಕುಂಜಿಬೆಟ್ಟು ಪೋಸ್ಟ್‌, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಆಟೋ ರಿಕ್ಷಾದಲ್ಲಿ  ಅವರ ಮನೆಯಿಂದ ಬ್ರಹ್ಮಾವರ ಕಡೆಗೆ ಹೊರಟು ಬೆಳಿಗ್ಗೆ 08:50 ಗಂಟೆಗೆ ಉಪ್ಪೂರು ಗ್ರಾಮದ ತೆಂಕಬೆಟ್ಟು ಎಂಬಲ್ಲಿ ತಲುಪಿದಾಗ ಅವರ ಎದುರಿನಿಂದ ಆರೋಪಿ ಪ್ರಸನ್ನ ಅವರ KA-20-AB-3769 ನೇTATA  INTRA V30  ಟೆಂಪೊವನ್ನು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಂದು ವಾಹನವನ್ನು ಓವರ್‌ಟೇಕ್‌ ಮಾಡುವ ರಭಸದಲ್ಲಿ ಹತೋಟಿ ತಪ್ಪಿ ರಸ್ತೆಯ ಬದಿಯಲ್ಲಿ ಹಾಕಿರುವ ಅಲ್ಯೂಮಿನಿಯಂ ತಡೆಗೋಡೆಗೆ ಡಿಕ್ಕಿ ಹೊಡೆದು, ಅದೇ ರಭಸದಲ್ಲಿ ಸುಮಾರು 15 ಮೀಟರ್‌ ದೂರ ಚಲಾಯಿಸಿ ನಿಂತಿರುತ್ತದೆ.  ವಾಹನ ಅಲ್ಯೂಮಿನಿಯಂ ತಡೆಗೋಡೆಗೆ ಡಿಕ್ಕಿ ಡಿಕ್ಕಿ ಹೊಡೆದ ಪರಿಣಾಮ ಆರೋಪಿಯ ಪಕ್ಕದಲ್ಲಿ ಕೂತಿದ್ದ ನಾಗರಾಜ ರವರ ಬಲಕಾಲಿಗೆ ಅಲ್ಯೂಮಿನಿಯಂ ತಡೆಗೋಡೆ ಒಳಗೆ ಬಂದು ಅವರ ಕಾಲಿಗೆ ತಾಗಿ ಅವರ ಕಾಲು ಪಾದಕ್ಕಿಂತ ಸ್ವಲ್ಪ ಮೇಲೆ ಸಂಪೂರ್ಣ ತುಂಡಾಗಿರುತ್ತದೆ. ಅಲ್ಲದೇ ವಾಹನದ ಮುಂಭಾಗ ಸಂಪೂರ್ಣ ಜಖಂ  ಹಾಗೂ ಗ್ಲಾಸ್‌ ಸಹ ಪುಡಿಯಾಗಿರುತ್ತದೆ, ಗಾಯಾಳು ನಾಗರಾಜನನ್ನು ಚಿಕಿತ್ಸೆ ಬಗ್ಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 23/05/2022 ರಂದು ಮಧ್ಯಾಹ್ನ 12:45  ಗಂಟೆಗೆ  ಕುಂದಾಪುರ  ತಾಲೂಕಿನ, ದೇವಲ್ಕುಂದ ಗ್ರಾಮದ  ರಾಮಲಕ್ಷ್ಮಣ ಹಾಲ್‌ ಬಳಿ ರಸ್ತೆಯಲ್ಲಿ ಆಪಾದಿತ ಭಾಸ್ಕರ್‌ ಆಚಾರ್‌  KA-20-X-2452 ನೇ ಬೈಕಿನಲ್ಲಿ ಶಾಂತ ಎಂಬುವವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಹೋಗಿ, ಯಾವುದೇ  ಸೂಚನೆ ನೀಡದೇ  ಏಕಾಏಕಿ ರಸ್ತೆಯ ಎಡಬದಿಯಿಂದ ಬಲ ಬದಿಬದಿಗೆ ಅಂದರೆ  ರಾಮಲಕ್ಷ್ಮಣ ಹಾಲ್‌ ಕಡೆಗೆ ತಿರುಗಿಸಿದ ಕಾರಣ,  ಅದೇ  ದಿಕ್ಕಿನಲ್ಲಿ  ಹಿಂದುಗಡೆಯಲ್ಲಿ ಪಿರ್ಯಾದಿದಾರರಾದ ಗೌತಮ್‌ (22), ತಂದೆ:ಆನಂದ ಮಡಿವಾಳ, ವಾಸ:ಕಸ್ತೂರ್ಬ ನಗರ, ಚಿಟ್ಪಾಡಿ, ಉಡುಪಿ, ಉಡುಪಿ ತಾಲೂಕು ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EL-5447 TVS VICTOR ಬೈಕ್‌ ‌ಆಪಾದಿತನ ಬೈಕಿನ ಹಿಂಬದಿಗೆ ತಾಗಿ ಅಪಘಾತಕ್ಕೆ ಒಳಗಾಗಿ ರಸ್ತೆಗೆ ಬಿದ್ದು, ಪಿರ್ಯಾದಿದಾರರು, ಆಪಾದಿತ  ಹಾಗೂ ಶಾಂತ ರವರು ಗಾಯಗೊಂಡು  ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಎವುಲಿನ್ ಮಾರ್ಟಿಸ್ (70) ವಾಸ: ಮನೆ ನಂಬ್ರ 1-10(3),ವೆಲಂಕಣಿ ಹೌಸ್, ಕುಂತಳನಗರ, ಬಾಚೊಟ್ಟು, ಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಮಗ ವಲೇರಿಯನ್ ಡಿಸೋಜ (44) ರವರು ಟಿ.ಬಿ ಖಾಯಿಲೆಯಿಂದ ಬಳಲುತ್ತಿದ್ದು, ಮದುವೆಯಾಗಿರುವುದಿಲ್ಲ. ದಿನಾಂಕ 23/5/2022 ರಂದು ಬೆಳಿಗ್ಗೆ ಟಿ.ಬಿ ಖಾಯಿಲೆ ಉಲ್ಬಣಗೊಂಡವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ದಾಖಲಿಸಿದ್ದು ಬೆಳಿಗ್ಗೆ 10:00 ಗಂಟೆಗೆ ಪರೀಕ್ಷಿಸಿದ ಅಲ್ಲಿಯ ವೈದ್ಯರು ವಲೇರಿಯನ್ ಡಿಸೋಜರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13 /2022  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/05/2022 ರಂದು ಮುಕ್ತಾಬಾಯಿ, ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ  ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈನ ಶುಭಲಕ್ಷ್ಮಿ ಬಾರ್‌& ರೆಸ್ಟೋರೆಂಟ್‌ ಪಕ್ಕದ ಪಾನ್‌ ಬೀಡಾ ಶಾಪ್‌ನ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರ ಮರಕಾಲ (49), ತಂದೆ: ದಿ.ಸುರೇಶ್‌ ಮರಕಾಲ, ವಾಸ: ಅನ್ನಪೂರ್ಣೇಶ್ವರಿ ನಿಲಯ, ಬಿಲ್ಲಾಡಿ ಗ್ರಾಮ, ಜಾನುವಾರುಕಟ್ಟೆ ಅಂಚೆ, ಬ್ರಹ್ಮಾವರ ತಾಲೂಕು ಎಂಬಾತ ಮಟ್ಕಾ ಜುಗಾರಿ ನಡೆಸುತ್ತಿದ್ದುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂಪಾಯಿ 1050/- ,  ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ : 78 (I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 23/05/2022 ರಂದು ವಿನಯ ಕೆ, ಪೊಲೀಸ್ ಉಪ ನಿರೀಕ್ಷಕರು (ತನಿಖೆ), ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಐ.ಆರ್.ಬಿ ಕಟ್ಟಡದ ಹಿಂಬದಿಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು  ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ  ಮಾಹಿತಿ ಮೇರೆಗೆ  ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 1)ರಮೇಶ ನಾರಾಯಣ ನಾಯಕ್ (40), ತಂದೆ: ನಾರಾಯಣ ನಾಯ್ಕ್ , ವಾಸ: ತಲಗೋಡು ಮನೆ ಹಡಿನ್ ಗ್ರಾಮ ಭಟ್ಕಳ ತಾಲೂಕು ಉ ಕ ಜಿಲ್ಲೆ,  2] ರಾಜು ದುರ್ಗಪ್ಪ ನಾಯ್ಕ್ (42), ತಂದೆ: ದುರ್ಗಪ್ಪ ನಾಯ್ಕ್, ವಾಸ: ಚಿತ್ರಾಪುರ ಶಿರಾಲಿ ಗ್ರಾಮ ಭಟ್ಕಳ ತಾಲೂಕು ಉ ಕ ಜಿಲ್ಲೆ,  3] ಮಂಜುನಾಥ ಗಣಪಯ್ಯ ನಾಯ್ಕ್ (46), ತಂದೆ: ಗಣಪಯ್ಯ ನಾಯ್ಕ್, ವಾಸ: ತಲಾನ್ ಮುಚ್ಚಳ್ಳಿ ಗ್ರಾಮ ಭಟ್ಕಳ ತಾಲೂಕು ಉ ಕ ಜಿಲ್ಲೆ,  4] ಸತೀಶ ಮಂಜುನಾಥ ನಾಯ್ಕ್ (28), ತಂದೆ: ಮಂಜುನಾಥ ನಾಯ್ಕ್, ವಾಸ: ಹಕ್ಲ ಮನೆ ಶಿರಾಲಿ ಭಟ್ಕಳ ತಾಲೂಕು ಉ ಕ ಜಿಲ್ಲೆ, 5] ವಿನೋದ ಶನಿವಾರ್ ನಾಯ್ಕ್ (21), ತಂದೆ: ಶನಿವಾರ್ ಮಾದೇವ ನಾಯ್ಕ್, ವಾಸ: ದುರ್ಗ ನಾಯ್ಕರ ಮನೆ ಮುರ್ಡೇಶ್ವರ ಭಟ್ಕಳ ತಾಲೂಕು ಉ ಕ ಜಿಲ್ಲೆ ಇವರನ್ನು  ವಶಕ್ಕೆ ಪಡೆದುಕೊಂಡು  ಆಟಕ್ಕೆ ಬಳಸಿದ ಹಳೆಯ ನ್ಯೂಸ್‌ಪೇಪರ್‌, ಇಸ್ಪಿಟ್‌ಕಾರ್ಡ್-52, ಹಾಗೂ  5,380 /- ರೂಪಾಯಿ ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ. 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  23/05/2022 ರಂದು 15:30 ಗಂಟೆಗೆ ಆರೋಪಿ ಮಂಜಪ್ಪ (44), ತಂದೆ: ಹನುಮಂತಪ್ಪ, ವಾಸ: ಸ್ಯಾಬ್ರ ಕಟ್ಟೆ 5 ಸೆಂಟ್ಸು ಸ್ಯಾಬ್ರಕಟ್ಟೆ ಅಂಚೆ  ಯಡ್ಯಾಡಿ  ಗ್ರಾಮ  ಬ್ರಹ್ಮಾವರ ತಾಲೂಕು ಎಂಬಾತ ಬ್ರಹ್ಮಾವರ  ತಾಲೂಕಿನ ವಂಡಾರು  ಗ್ರಾಮದ  ಮಾರ್ವಿ ಎಂಬಲ್ಲಿ ಸಾರ್ವಜನಿಕ   ಬಸ್ಸು ನಿಲ್ದಾಣದ  ಬಳಿ  ಸಾರ್ವಜನಿಕ  ಸ್ಥಳದಲ್ಲಿ  ಅಕ್ರಮವಾಗಿ ಜನರನ್ನು ಸೇರಿಸಿ ಕೊಂಡು ಮಟ್ಕಾ ಜುಗಾರಿ ಆಟದ  ಬಗ್ಗೆ  ಹಣ ಸಂಗ್ರಹಮಾಡುತ್ತಿರುವಾಗ ಶ್ರೀಧರ ನಾಯ್ಕ, ಪೊಲೀಸ್‌ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್  ಠಾಣೆ ಇವರಿಗೆ ಬಂದ  ಮಾಹಿತಿ ಯಂತೆ ದಾಳಿ  ನಡೆಸಿ  ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ಮಟ್ಕಾ  ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ  ನಗದು ಹಣ  ರೂಪಾಯಿ 830/- ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 78(I),(III) ಕರ್ನಾಟಕ ಪೊಲೀಸ್‌ ಕಾಯ್ದೆ (ತಿದ್ದುಪಡಿ) 2021 ರಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ದಿನಾಂಕ 23/05/2022 ರಂದು ನಾರಾಯಣ, ಪೊಲೀಸ್‌ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಉಡುಪಿ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ  ಸ್ಥಳದಲ್ಲಿ ರೌಂಡ್ಸ್ ನಲ್ಲಿರುವಾಗ  ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ದೀಪಕ್ ರೈ (22), ತಂದೆ: ದಿವಾಕರ ರೈ ವಾಸ: ಶೋಭಾ ನಿವಾಸ ಹೌಸ್, ಸಂಪಿಗೆನಗರ ಜಂಕ್ಷನ್, ಉದ್ಯಾವರ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು,  ದಿನಾಂಕ 2/05/2022 ರಂದು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ  ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 23/05/2022 ರಂದು ಲಕ್ಷ್ಮಣ, ಪೊಲೀಸ್‌ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದ ಬಳಿ ರೌಂಡ್ಸ್‌ ನಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಇರ್ಷಾದ್ (25), ತಂದೆ: ಅಬ್ದುಲ್ ರೆಹಮಾನ್ ವಾಸ: ಸೌದತ್ ಮಂಜಿಲ್, ಈದು ಕ್ರಾಸ್, ಹೊಸ್ಮಾರು ಅಂಚೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 23/05/2022 ರಂದು ಆರೋಪಿ ಪ್ರಮೋದ  ಪೂಜಾರಿ,  ಗುಮ್ಮಲ ಬೆಳ್ಬೆ ಗ್ರಾಮ ಹೆಬ್ರಿ ತಾಲೂಕು  ಎಂಬಾತ ತಾಲೂಕಿನ  ಬೆಳ್ವೆ  ಗ್ರಾಮದ  ಗುಮ್ಮಲ ಎಂಬಲ್ಲಿ  ಹರಿಹರ  ಗಣಪತಿ  ಜನರಲ್   ಸ್ಟೋರ್  ಎಂಬ  ಹೆಸರಿನ   ಅಂಗಡಿಯ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ  ಹೊಂದದೇ  ಅಕ್ರಮವಾಗಿ ಶರಾಬು  ಮಾರಾಟ  ಮಾಡುತ್ತಿರುವಾಗ ಶ್ರೀಧರ ನಾಯ್ಕ , ಪೊಲೀಸ್‌ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್  ಠಾಣೆ ಇವರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಮಾರಾಟ  ಮಾಡಲು ರಟ್ಟಿನ ಬಾಕ್ಸನಲ್ಲಿ ಇಟ್ಟಿದ  Mysore Lancer  Whicky 90 Ml  41 ಸ್ಚಾಚೆಟ್  ಹಾಗೂ ನಗದು  ಹಣ  300/- ರೂಪಾಯಿ ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 32, 34 ಕರ್ನಾಟಕ  ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ    23/05/2022    ರಂದು   ಶ್ರೀಕಾಂತ  ಕೆ,   ಪೊಲೀಸ್ ಉಪಾಧೀಕ್ಷಕರು,  ಕುಂದಾಪುರ  ಉಪವಿಭಾಗ   ಇವರಿಗೆ ಬಂದ ಮಾಹಿತಿಯಂತೆ ಕುಂದಾಪುರ ತಾಲೂಕಿನ  ಸಿದ್ದಾಪುರ ಗ್ತಾಮದ ಮೇಲ್‌ ಜೆಡ್ಡು ಎಂಬಲ್ಲಿಗೆ  ಹೋದಾಗ  ಅಲ್ಲಿ  ಆರೋಪಿತೆ ಶ್ರೀಮತಿ ವನಜ (48), ಗಂಡ: ದಿ .ಉದಯ,  ವಾಸ: ಮೇಲ್ಜೆಡ್ಡು ಸಿದ್ದಾಪುರ  ಗ್ರಾಮ  ಕುಂದಾಪುರ  ತಾಲೂಕು ಇವರು ಯಾವುದೇ   ಪರವಾನಿಗೆ ಹೊಂದದೇ  ಅಕ್ರಮವಾಗಿ haywdas cheers whicky   90 ಎಮ್‌ಎಲ್‌‌ನ   34 ಸ್ಯಾಚೆಟ್   ಹಾಗೂ 180 ಎಮ್‌‌.ಎಲ್‌ನ  37  ಸ್ಚಾಚೆಟ್‌‌ಗಳನ್ನು ಆಕೆಯ  ವಶ  ಇರಿಸಿಕೊಂಡು  ಸಾರ್ವಜನಿಕರಿಗೆ  ಮಾರಾಟ  ಮಾಡುತ್ತಿದ್ದ  ಸಮಯ ದಾಳಿ  ನಡೆಸಿ  ಮದ್ಯದ ಸ್ಯಾಚೆಟ್ ಹಾಗೂ  ನಗದು  ಹಣ  400/- ರೂಪಾಯಿ  ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣ ಅಪರಾಧ ಕ್ರಮಾಂಕ 53/2022  ಕಲಂ: 32, 34  ಕರ್ನಾಟಕ  ಅಬಕಾರಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.    



     

ಇತ್ತೀಚಿನ ನವೀಕರಣ​ : 24-05-2022 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080