ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಕಿರಣ್ ಪೂಜಾರಿ (19), ತಂದೆ:ರಾಜು ಪೂಜಾರಿ, ವಾಸ: ಚಟ್ಟಾರಿಕಲ್ಲು, ಮಚ್ಚಟ್ಟು  ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 23/05/2021 ರಂದು ಬೆಳಿಗ್ಗೆ  10:30 ಗಂಟೆಗೆ ತನ್ನ KA-19-EB-9344 ನೇ ಮೋಟಾರು ಸೈಕಲ್ ನಲ್ಲಿ  ಹಿಂಬದಿ ಸಹ ಸವಾರರಾಗಿ ಅವರ ಚಿಕ್ಕ,ಮ್ಮ  ಮಾಲತಿ ಎಂಬುವವರನ್ನು ಕುಳ್ಳಿರಿಸಿಕೊಂಡು ಮದುವೆ ನಿಮಿತ್ತ ಹಳ್ಳಿಹೊಳೆ ಕಡೆಯಿಂದ ವಂಡ್ಸೆ  ಕಡೆಗೆ ವಂಡ್ಸೆ - ಬೆಳ್ಳಾಲ  ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ  ಚಿತ್ತೂರು ಗ್ರಾಮದ ಹಿಜಾಣ ಎಂಬಲ್ಲಿ ರಸ್ತೆಯ  ತಿರುವಿನಲ್ಲಿ  ಪಿರ್ಯಾದಿದಾರರ ಎದುರಿನಿಂದ ವಂಡ್ಸೆಯಿಂದ ಬೆಳ್ಳಾಲ ಕಡೆಗೆ ಆರೋಪಿ ಜೋಮನ್ KA-19-MC-1551 ನೇ ಮಾರುತಿ 800 ಕಾರನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಮಾಲತಿ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿಗೆ ತರಚಿದ ಗಾಯವಾಗಿದ್ದು  ಹಾಗೂ ಮಾಲತಿ ರವರಿಗೆ ಬಲ ಕಾಲಿನ ಒಳ ಜಖಂ ಆಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಬಾಬು ಪೂಜಾರಿ (54), ತಂದೆ:ಮಂಜು ಪೂಜಾರಿ , ವಾಸ;ಕೆಳ ಮನೆ ಹೊಸ್ಕೋಟೆ, ಬಿಜೂರು    ಗ್ರಾಮ, ಬೈಂದೂರು ತಾಲೂಕು ಇವರ ಹೆಂಡತಿ ಯ ಅಕ್ಕನ ಮಗ ರೋಹನ್ (14) ಇವರು ಉಪ್ಪುಂದದ ಜ್ಯೂನಿಯರ್ ಕಾಲೇಜಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 23/05/2021 ರಂದು ಮಧ್ಯಾಹ್ನ 1:15 ಗಂಟೆಗೆ ಪಿರ್ಯಾದಿದಾರರಿಗೆ ಆನಂದ್ ಎಂಬುವವರು ಕರೆ ಮಾಡಿ ರೋಹನ್ ನು ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು ಅದನ್ನು ನೋಡಿದ ರೋಹನ್ ನ ತಂದೆ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಲಾಗಿ ಪಿರ್ಯಾದಿದಾರರು  ಅಲ್ಲಿಗೆ ಹೋಗಿ ನೋಡಲಾಗಿ ರೋಹನ್ ನು ಮೃತಪಟ್ಟಿರುವುದಾಗಿ ತಿಳಿಯಿತು ವಿಷಯ ತಿಳಿಯಲಾಗಿ ರೋಹನ್ ನು ರೂಮಿನಲ್ಲಿ ಏಕಾಂಗಿಯಾಗಿ ಇರುತ್ತಿದ್ದು ಅಲ್ಲದೆ ಮೊಬೈಲ್ ನಲ್ಲಿ ಯಾವಾಗಲು ಗೇಮ್ ಆಡುತ್ತಿದ್ದು,ರೋಹನ್ ನಿಗೆ ಮನೆಯವರು ಮೊಬೈಲ್ ನಲ್ಲಿ ಮುಂದಕ್ಕೆ ಗೇಮ್ ಆಡಬಾರದು  ಓದಿನ ಕಡೆ ಗಮನ ಕೊಡು ಎಂದು ಬುದ್ದಿ ಮಾತು ಹೇಳಿದ್ದಕ್ಕೆ ಅದೇ ವಿಚಾರಕ್ಕೆ ಕೋಪಗೊಂಡು ರೋಹನ್ ನು ದಿನಾಂಕ 23/05/2021 ರಂದು ಮಧ್ಯಾಹ್ನ 12:30 ಗಂಟೆಯಿಂದ 13:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿ ಪಕ್ಕಾಸಿಗೆ ಬಿಳಿ ಬಣ್ಣದ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಕುಂದಾಪುರ: ಪಿರ್ಯಾದಿದಾರರಾದ ಅಭಿಷೇಕ್ (24), ತಂದೆ: ಸೂರ, ವಾಸ: ಬೆ.ಹೆಚ್.ಎಂ. ರಸ್ತೆ, ನಂದಿಬೆಟ್ಟು, ಕುಂದಾಪುರ ಇವರ ತಂದೆ ಸೂರ (50) ರವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿರುವುದಾಗಿದೆ. ಅವರಿಗೆ ಕಳೆದ ಒಂದು ವಾರದಿಂದ ವಿಪರೀತ ಬೇಧಿ ಹೊಟ್ಟೆನೋವು ಇದ್ದು ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದು ದಿನಾಂಕ 23/05/2021 ರಂದು 11:30 ಗಂಟೆಗೆ ವಿಪರೀತ ವಾಂತಿ ಮಾಡಿಕೊಂಡು ಹೊರಳಾಡುತ್ತಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಸೂರರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಉಡುಪಿ: ದಿನಾಂಕ 23/05/2021 ರಂದು ಸಂಜೆ ಪ್ರಮೋದ್‌ ಕುಮಾರ್‌.ಪಿ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಲಾಕ್ ಡೌನ್ ಪ್ರಯುಕ್ತ ಸಾರ್ವಜನಿಕರು ಕೊವಿಡ್-19 ಪ್ರಯುಕ್ತ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ  ಕ್ರಮಗಳ ಹಾಗೂ ಪ್ರಯಾಣಿಕರ ವಾಹನ  ಪರಿಶೀಲನೆ ಕರ್ತವ್ಯದಲ್ಲಿರುವಾಗ ವಲಸೆ ಕಾರ್ಮಿಕರನ್ನು ಕ್ರೂಸರ್ ವಾಹನದಲ್ಲಿ ದುಪ್ಪಟ್ಟು ಹಣ ಪಡೆದುಕೊಂಡು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಬಾಗಲಕೋಟೆ ಜಿಲ್ಲೆಗೆ  ಕರೆದುಕೊಂಡು ಹೋಗುತ್ತಿರುವುದಾಗಿ ಬಂದ ವರ್ತಮಾನ ಬಂದಂತೆ ಸ್ದಳಕ್ಕೆ ಹೋದಾಗ ಪ್ರಯಾಣಿಕರು ಅಲ್ಲಿಂದ ಓಡಿ ಹೋಗಿರುತ್ತಾರೆ. ಕ್ರೂಸರ್ ವಾಹನದ ಮಾಲೀಕ ಬಸವರಾಜ ಬಸಲಿಂಗಪ್ಪ ಅಂಗಡಿ ಕೋವಿಡ್-19 ರ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ  ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಸ್ಟೋಟ ಮತ್ತು ಹರಡುವುದನ್ನು ತಡೆಗಟ್ಟಲು ನಿರ್ಲಕ್ಷ ವಹಿಸಿರುತ್ತಾರೆ. ಈ ಬಗ್ಗೆ ಉಡಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಪಡುಬಿದ್ರಿ: ದೇಶಾದ್ಯಂತ ಹರಡುತ್ತಿರುವ  ಸಾಂಕ್ರಾಮಿಕ ರೋಗ  ಕೋರನಾ ವೈರಸ್‌(ಕೋವಿಡ್ -19 ) ಹರಡದಂತೆ ಮುಂಜಾಗೃತ ಕ್ರಮವಾಗಿ ಮಾನ್ಯ ಕರ್ನಾಟಕ ರಾಜ್ಯ ಸರಕಾರವು ಲಾಕ್‌ಡೌನ್‌ ಆದೇಶ ಪರಿಷ್ಕರಿಸಿ ದಿನಾಂಕ 12/05/2021 ರ ಬೆಳಿಗ್ಗೆ 06:00 ಗಂಟೆಯಿಂದ ದಿನಾಂಕ 24/05/2021 ರ ಬೆಳಿಗ್ಗೆ 06:00 ಗಂಟೆಗೆ ವರೆಗೆ ಲಾಕ್ ಡೌನ್  ಘೋಷಿಸಿದ್ದು, ಜಿಲ್ಲಾಧಿಕಾರಿ ಉಡುಪಿಯವರು ಕಲಂ 144 ಸಿಆರ್‌ಪಿಸಿ ಯಡಿ  ನಿಷೇದಾಜ್ಞೆಯನ್ನು ಆದೇಶಿಸಿ  ವಾಹನಗಳಲ್ಲಿ ಜನರ  ಅನಗತ್ಯ ಓಡಾಟವನ್ನು ನಿಷೇಧಿಸಿರುತ್ತಾರೆ. ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಡುವವರ ತಪಾಸಣೆಯ ಬಗ್ಗೆ ಪ್ರಕಾಶ್, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು ಇವರು ದಿನಾಂಕ 23/05/2021 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ಮಾಡುತ್ತಿರುವಾಗ 16:30 ಗಂಟೆಗೆ ಕಾಪು ತಾಲೂಕು ಬಡಾ ಗ್ರಾಮದ ಭಾಸ್ಕರನಗರದಲ್ಲಿರುವ ಸಿದ್ದಿಕ್ ಶಿರ್ವ ಎಂಬುವವರಿಗೆ ಸೇರಿದ ಖಾಸಗಿ ಮೈದಾನದಲ್ಲಿ ಅರೋಪಿತರುಗಳು 1) KA-20-EU-2288 ನೇ Honda Dio ದ್ವಿಚಕ್ರ ವಾಹನ, 2) KA20-EA-6961 ನೇ Star city ಬೈಕ್‌3) KA-20-EP0214  ನೇ  Yamaha Fz  ಬೈಕ್‌4) KA-19-ML-3852 ನೇ Maruthi Swift  ಕಾರು ಹಾಗೂ KA-20-EG-1418 ನೇ Honda Activa ದ್ವಿಚಕ್ರ ವಾಹನದಲ್ಲಿ ಸಳಕ್ಕೆ ಬಂದು ಕೋವಿಡ್‌19 ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ  ಸಾರ್ವಜನಿಕ ಸ್ಥಳದಲ್ಲಿ ಒಟ್ಟು ಸೇರಿ ಕ್ರಿಕೆಟ್‌ ಆಟ ಆಡಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು  ಕಂಡು ಬಂದಿರುತ್ತದೆ. ಆರೋಪಿತರಿಂದ ದ್ವಿಚಕ್ರ ವಾಹನಗಳು -04, ಕಾರು-01, ಕ್ರಿಕೆಟ್‌ ಆಡಲು ಉಪಯೋಗಿಸಿದ ಬ್ಯಾಟ್‌ಗಳು -03, ವಿಕೆಟ್‌-04 , ಟೆನ್ನಿಸ್‌ಬಾಲ್‌ ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 23/05/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮದ್ಯಾಹ್ನ 1:30 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕಾಗೇರಿಯಲ್ಲಿರುವ ಗಂಧರ್ವ ಹೋಟೇಲ್‌ನಲ್ಲಿ ಸಾರ್ವಜನಿಕರಿಗೆ ಊಟವನ್ನು ಕೊಟ್ಟು ಅಲ್ಲೇ ಊಟ ಮಾಡಲು ಅವಕಾಶ ನೀಡುತ್ತಿರು ವುದಾಗಿ ಮಾಹಿತಿ ತಿಳಿದುಬಂದಿದ್ದು,  ಮದ್ಯಾಹ್ನ 2:00 ಗಂಟೆಗೆ ಹೋಟೇಲ್‌ಗೆ ಹೋದಾಗ ಹೋಟೇಲಿನ ಒಳಗಡೆ ಸಾರ್ವಜನಿಕರಿಗೆ ಊಟವನ್ನು ಬಡಿಸುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ 10/05/2021 ರಿಂದ 24/05/2021 ರ ತನಕ  ಕೆಲವೊಂದು ಸಾರ್ವಜನಿಕ  ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿರುವ, ಆದೇಶದನ್ವಯ ಈ ಅವಧಿಯಲ್ಲಿ  ಹೋಟೇಲುಗಳಲ್ಲಿ ಸಾರ್ವಜನಿಕರಿಗೆ ಹೊರಗಿನಿಂದ ಪಾರ್ಸಲ್ ನೀಡಲು ಮಾತ್ರ  ಅವಕಾಶ  ಇದ್ದು  ಅಂಗಡಿಯ ಮಾಲಕರಾದ ಆಪಾದಿತರಾದ ಕೃಷ್ಣಯ್ಯ ಶೆಟ್ಟಿ ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅವರ ಬಾಬ್ತು ಗಂಧರ್ವ ಹೋಟೆಲ್‌ನಲ್ಲಿ  ಸಾರ್ವಜನಿಕರಿಗೆ ಊಟವನ್ನು  ಮಾಡಲು ಅವಕಾಶ ನೀಡಿ ನಿರ್ಲಕ್ಷ್ಯತನ ತೋರಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 24-05-2021 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080