ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ:

  • ಉಡುಪಿ: ಪಿರ್ಯಾದಿ ಶ್ಯಾಮ್ ಇವರು ದಿನಾಂಕ: 23/05/2021 ರಂದು ತನ್ನ ಸ್ನೇಹಿತರೊಂದಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿ ಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ ರಾತ್ರಿ 8:40 ಗಂಟೆಯ ಸಮಯಕ್ಕೆ ಚರಣ್, ಪುನೀತ್, ಫರ್ವೆಜ್, ಅಭಿ ಮತ್ತು ಇತರ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ತಲ್ವಾರ್ ಮತ್ತು ಮಂಡೆಕತ್ತಿಯಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು, ಪಿರ್ಯಾದುದಾರರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಿಂದಿನಿಂದ ತಲೆಗೆ ಮಂಡೆಕತ್ತಿಯಿಂದ ಹೊಡೆದಿರುತ್ತಾರೆ. ಆ ಸಮಯ ಪಿರ್ಯಾದುದಾರರ ಸ್ನೇಹಿತರು ಅಲ್ಲಿಗೆ ಬಂದಾಗ ಅವರುಗಳು ಬಂದಿದ್ದ ಬೈಕ್ ನಲ್ಲಿ ಹೋಗಿದ್ದು ಹೋಗುವಾಗ ಅವರ ಕೈಯಲ್ಲಿದ್ದ ತಲ್ವಾರ್ ಕೆಳಗೆ ಬಿದ್ದಿರುತ್ತದೆ. ಗಾಯಗೊಂಡ ಪಿರ್ಯಾದುದಾರರನ್ನು ಅವರ ಸ್ನೇಹಿತರು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಪೂರ್ವ ದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 85/2021ಕಲಂ: 143,147,148,307 ಜೊತೆಗೆ 149 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.

 ಇತರ ಪ್ರಕರಣಗಳು:

  • ಅಮಾಸೆಬೈಲು: ದಿನಾಂಕ 23/05/2021 ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ ಇವರು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10-05-2021  ರಿಂದ 24-05-2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಮಧ್ಯಾಹ್ನ 13:00 ಗಂಟೆಗೆ ಹೊಸಂಗಡಿ  ಗ್ರಾಮದ ಹೊಸಂಗಡಿ ಪೇಟೆಯ ಸರ್ಕಲ್ ಬಳಿ ಆಪಾದಿತನು KA 20 AA 6625 ನೇ ಅಟೋ ಚಾಲಕ ರತೀಶ್ ಶೆಟ್ಟಿಪ್ರಾಯ : 31 ವರ್ಷ ತಂದೆ: ತಿಮ್ಮಪ್ಪ ಶೆಟ್ಟಿ ವಾಸ: ಎಲಗಿನಬೇರು ತೊಂಬಟ್ಟು ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು ಈತನು ರಿಕ್ಷಾವನ್ನು     ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಸದ್ರಿ  ಮೇಲ್ಕಂಡ ಅಟೋ ರಿಕ್ಷಾ ಚಾಲಕ ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ಕೊರೊನಾ ವೈರಸ್ ಕಾಯಿಲೆ ತಡೆಗಟ್ಟುವ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವ ಸಾಧ್ಯತೆ ಉಂಟು ಮಾಡಿರುವುದರಿಂದ ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 24/2021 ಕಲಂ:269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
  • ಅಮಾಸೆಬೈಲು : ದಿನಾಂಕ 24/05/2021 ಎ.ಎಸ್.ಐ ಉಮೇಶ್ ನಾಯ್ಕ್, ಅಮಾಸೆಬೈಲು ಪೊಲೀಸು ಠಾಣೆ ಇವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24-05-2021  ರಿಂದ 07-06-2021 ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಬೆಳಿಗ್ಗೆ 10:30 ಗಂಟೆಗೆ ಹೊಸಂಗಡಿ  ಗ್ರಾಮದ ಹೊಸಂಗಡಿ ಪೇಟೆಯ ಸರ್ಕಲ್ ಬಳಿ ವಾಹನ ತಪಾಸಣೆ ಮಾಡಿಕೊಂಡಿರುವಾಗ ಆಪಾದಿತನು ರಮೇಶ್ ನಾಯ್ಕ ಪ್ರಾಯ 39 ವರ್ಷ ತಂದೆ:ಮಹಾಬಲ ನಾಯ್ಕ ಜಡ್ಡು ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು  ಈತನು KA 20 Y 2334 ನೇ TVS Max 4 R ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ.ಸದ್ರಿ  ಮೇಲ್ಕಂಡ ಮೋಟಾರು ಸೈಕಲ್ಲುಸವಾರನು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ಕೊರೊನಾ ವೈರಸ್ ಕಾಯಿಲೆ ತಡೆಗಟ್ಟುವ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವ ಸಾಧ್ಯತೆ ಉಂಟು ಮಾಡಿರುವುದರಿಂದ ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 25/2021 ಕಲಂ:269  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
  • ಉಡುಪಿ: ವಾಸಪ್ಪ ನಾಯ್ಕ್, ಪಿ.ಎಸ್.ಐ, ಉಡುಪಿ ನಗರ ಪೊಲೀಸ್ ಠಾಣೆ ಇವರು ದಿನಾಂಕ: 23/05/2021 ರಂದು ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ: 24/05/2021 ರಂದು  00:15 ಯಿಂದ 00:45 ಗಂಟೆಯ ಮಧ್ಯಾವಧಿಯಲ್ಲಿ 76 ಬಡಗುಬೆಟ್ಟುಗ್ರಾಮದ ಬೀಡಿನ ಗುಡ್ಡೆಯ ಜಂಕ್ಷನ್ ಬಳಿ ರೌಂಡ್ಸ್ ಕರ್ತವ್ಯ ಮಾಡುವ ಸಮಯ ವಲಸೆ ಕಾರ್ಮಿಕರನ್ನು ಕ್ರೂಸರ್ ವಾಹನದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಕುಳ್ಳಿರಿಸಿರುವುದನ್ನುಕಂಡು ಅಲ್ಲಿಗೆ ಹೋದಾಗ ಪ್ರಯಾಣಿಕರು ಅಲ್ಲಿಂದ ಓಡಿ ಹೋಗಿರುತ್ತಾರೆ. ಕ್ರೂಸರ್ ವಾಹನ ಮಾಲೀಕನನ್ನು ಈ ಬಗ್ಗೆ ವಿಚಾರಿಸಿದಾಗ ತಾನು ದುಪ್ಪಟ್ಟು ಹಣಕ್ಕೆ ಅವರನ್ನು ತನ್ನ ವಾಹನದಲ್ಲಿಬಾಗಲಕೋಟೆ ಜಿಲ್ಲೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಕ್ರೂಸರ್  ವಾಹನದ ಮಾಲೀಕ ದಾವಲ್‌ಸಾಬ್ ಪ್ರಾಯ 34 ವರ್ಷ, ತಂದೆ: ಅಮಿನ್‌ಸಾಬ್ ವಾಸ: ಕಮತಗಿ, ಹುನಗುಂದ  ತಾಲೂಕು, ಬಾಗಲಕೋಟೆ ಜಿಲ್ಲೆ ಈತನು ಕೋವಿಡ್-19  ರ ಬಗ್ಗೆ ಯಾವದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ  ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಸ್ಟೋಟ ಮತ್ತು ಹರಡುವುದನ್ನು ತಡೆಗಟ್ಟಲು ನಿರ್ಲಕ್ಷ ವಹಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 86/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.

ಕೊಲೆ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶ್ರೀಮತಿ ರೀತಾ ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದು ಅವರ ಗಂಡ ಬೆಳುವಾಯಿಯಲ್ಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ ಮಕ್ಕಳು ಆಕೆಯ ತಾಯಿಯ ಮನೆಯಲ್ಲಿ ಆಕೆಯ ತಾಯಿಯೊಂದಿಗೆ ವಾಸಮಾಡಿಕೊಂಡಿದ್ದು, ಪಿರ್ಯಾದಿ ರೀತಾಳು ಕಾರ್ಕಳ ತಾಲೂಕು ಮಾಳ ಗ್ರಾಮದ ಮುಕ್ಕಾಯಿ ಬಳಿ ಎಂಬಲ್ಲಿ ಇರುವ ಅವಳ ತಾಯಿಯ ಇನ್ನೊಂದು ಮನೆಯಲ್ಲಿ ಒಬ್ಬಳೇ ವಾಸಮಾಡಿಕೊಂಡಿದ್ದರು. ಆರೋಪಿ ಗುರುವ ಮೇರ ಹಾಗೂ ಮೃತ ಹರೀಶ್ ಪೂಜಾರಿ ಆಗಾಗ ಪಿರ್ಯಾದುದಾರರ ಮನೆಗೆ ಬಂದು ಹೋಗುತ್ತಿದ್ದರು. ನಿನ್ನೆ ದಿನ ದಿನಾಂಕ: 23/05/2021 ರಂದು ಬೆಳಿಗ್ಗೆಯಿಂದ ಹರೀಶ್ ಪೂಜಾರಿಯು ಪಿರ್ಯಾದುದಾರರ ಮನೆಯಲ್ಲಿ ಇದ್ದು ಸಂಜೆ ಆರೋಪಿ ಗುರುವ ಮೇರನು ಕೂಡಾ ಪಿರ್ಯಾದುದಾರರ ಮನೆಗೆ ಬಂದಿದ್ದನು. ಆರೋಪಿ ಗುರುವ ಮೇರನು ರಾತ್ರಿ 8:00 ಗಂಟೆ ಸಮಯಕ್ಕೆ ಊಟ ಮಾಡಿ ಮಲಗಿದ್ದ ಹರೀಶ್ ಪೂಜಾರಿಯ ತಲೆಗೆ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 62/2021 ಕಲಂ: 302 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 24/05/2021 ರಂದು  ಬೆಳಿಗ್ಗೆ   ಸುಮಾರು 9:30  ಗಂಟೆಗೆ,  ಕುಂದಾಪುರ ತಾಲೂಕು, ಬಸ್ರೂರು  ಗ್ರಾಮದ ಬಸ್ರೂರು ನಂದಿನಿ ಹೊಟೇಲ್‌‌‌ ಹತ್ತಿರ  ಎಸ್‌‌‌. ಹೆಚ್‌  52 ರಸ್ತೆಯಲ್ಲಿ,  ಆಪಾದಿತ ಜೀವನ್‌‌ ಎಂಬವರು KA19-D9697 ನೇ ಮಹೀಂದ್ರ  ಬೊಲೆರೋ ಗೂಡ್ಸ್‌ ವಾಹನವನ್ನು ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು, ಬಸ್ರೂರು ಗಣೇಶ್‌‌‌ ಡಿಪಾರ್ಟಮೆಂಟಲ್‌‌‌ ಸ್ಟೋರ್‌ ನಿಂದ ಬಸ್ರೂರು  ಕೊಳ್ಕೇರೆಯ ಮನೆಗೆ ಪಿರ್ಯಾದಿದಾರ ಜಗದೀಶ ಪೂಜಾರಿ  ಎಂಬವರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA20-L-0869ನೇ ಬೈಕಿಗೆ  ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಭುಜ, ಎಡಮೊಣಕೈಗೆಒಳಜಖಂ ಗಾಯ, ಬಲಕಾಲಿನ ಮುಂಗಾಲು ಗಂಟಿನ ಹತ್ತಿರ, ಹಾಗೂ ಎಡ ಹಣೆಗೆ ತರಚಿದ ಗಾಯವಾಗಿ  ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 54/2021 ಕಲಂ:279, 337 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
  • ಕಾರ್ಕಳ: ದಿನಾಂಕ: 24/05/2021 ರಂದು ಬೆಳಿಗ್ಗೆ 11:30 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೊಳಿ ಭುವನೇಶ್ವರಿ ಹೊಟೆಲ್ ಎದುರು ಹಾದುಹೋಗಿರುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕೆ,ಎ20-ಸಿ-7456 ನೇ ನಂಬ್ರದ ಗೂಡ್ಸ್ ವಾಹನದ ಚಾಲಕನು ತನ್ನ ಬಾಬ್ತು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಭುವನೇಶ್ವರಿ ಹೊಟೆಲ್ ಎದುರು ರೋಡ್  ಡಿವೈಡರ್ ನಿಂದ ಯು ಟರ್ನ ಮಾಡಿ ಬಜಗೊಳಿ ಕಡೆಗೆ ಬರುತ್ತಿದ್ದ ಕೆಎ 20 ಇಎಸ್ 2453 ನೇ ನಂಬ್ರದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಗೂಡ್ಸ್ ಗಾಡಿಯ ಅಡಿಗೆ ಸಿಕ್ಕಿ ಸುಮಾರು 75 ಮೀಟರ್ ದೂರ ಎಳೆದುಕೊಂಡು ಹೋಗಿದ್ದು ಈ ಅಪಘಾತದಿಂದ ಸ್ಕೂಟರ್ ಸವಾರ ದಾಮೋಧರ ಪ್ರಭು ಇವರ ತಲೆಗೆ, ಹೊಟ್ಟೆಗೆ, ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಗಾಯಾಳುವಿಗೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 63/2021 ಕಲಂ: 279, 338 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.     

ಇತ್ತೀಚಿನ ನವೀಕರಣ​ : 24-05-2021 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080