ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ (31), ತಂದೆ: ಚಿಕ್ಕಯ್ಯ ಪೂಜಾರಿ, ವಾಸ:ಸುಕ್ರಿನುಂಡಿಮನೆ ದೊಂಬೆ ಪಡುವರಿ ಗ್ರಾಮ ಬೈಂದೂರು ತಾಲೂಕು ಇವರು ಬೈಂದೂರು ಪೇಟೆಯಲ್ಲಿ ತನ್ನ ಆಟೋರಿಕ್ಷಾ ನಂಬ್ರ KA-20-D-8549 ನೇದರಲ್ಲಿ ಬಾಡಿಗೆ ಮಾಡಿಕೊಂಡಿದ್ದು  ದಿನಾಂಕ 23/04/2022 ರಂದು ಮದ್ಯಾಹ್ನ 2:15 ಗಂಟೆಗೆ  ಪದ್ಮಾವತಿ, ಮರ್ಲಿ, ಗಿರಿಜಾರವರು ಬೈಂದೂರಿನಿಂದ ದೊಂಬೆ ಕರಾವಳಿಗೆ  ಬಾಡಿಗೆಗೆ ಪಿರ್ಯಾದಿದಾರರ ರಿಕ್ಷಾವನ್ನು ಗೊತ್ತು ಮಾಡಿ ಪಿರ್ಯಾದಿದಾರರು ಬೈಂದೂರು ಸೊಮೇಶ್ವರ  ದೊಂಬೆ ಮಾರ್ಗವಾಗಿ ದೊಂಬೆ ಕರಾವಳಿ ಮನೆ ಕಡೆಗೆ ಹೋಗುತ್ತಿರುವಾಗ  ಪಡುವರಿ  ಗ್ರಾಮದ ನಾಗ ಮೊಗೇರ ರವರ ಮನೆ ಬಳಿ ತಲುಪಿದಾಗ  ಆರೋಪಿ ಜೆಸಿಬಿ ಚಾಲಕ  ಶಾಂತನು KA-20-D-074 ನಂಬ್ರದ ಜೆ.ಸಿಬಿಯನ್ನು ನಾಗ ಮೊಗೇರ ರವರ ಗದ್ದೆಯಿಂದ ಏಕಾಏಕಿಯಾಗಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಮಧ್ಯೆ  ಬಂದು  ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ  ಆಟೋರಿಕ್ಷಾದ ಬಲಭಾಗಕ್ಕ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಭಾಗಶ: ಜಖಂ ಗೊಂಡು  ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ  ಪದ್ಮಾವತಿ, ಮರ್ಲಿ, ಗಿರಿಜಾರವರರಿಗೆ  ಹಾಗೂ ಪಿರ್ಯಾದುದಾರರಿಗೆ ಗಾಯನೋವು ಆದವರನ್ನು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮರ್ಲಿ, ಗಿರಿಜಾ ಹಾಗೂ ಪಿರ್ಯಾದುದಾರರನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿದ್ದು ಪದ್ಮಾವತಿಯವರಿಗೆ ಬಲ ಕೈಗೆ ಹಾಗೂ  ಎದೆಗೆ ತೀವ್ರ ತರಹದ ಒಳನೋವು ಆದವರನ್ನು  ಹೆಚ್ಚಿನ  ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಸಾದ್ ಪೂಜಾರಿ (32), ತಂದೆ: ಕೃಷ್ಣ ಪೂಜಾರಿ, ವಾಸ: ಮನೆ ನಂ.4-23 ಚಂದು ಮೈದಾನ, ತಂತ್ರಿ ಮಾರ್ಗ, 2ನೇ ಅಡ್ಡರಸ್ತೆ, ಚಿಟ್ಪಾಡಿ,76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರೊಂದಿಗೆ ವಾಸವಿದ್ದ ಪಿರ್ಯಾದಿದಾರರ ಮಾವ ಸದಾನಂದ ಪೂಜಾರಿ(47)ರವರು ಖಿನ್ನತೆಯಿಂದ ಬಳಲುತ್ತಿದ್ದು, ದಿನಾಂಕ 23/04/2022 ರಂದು ಬೆಳಿಗ್ಗೆ 11:15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ನೆರೆಮನೆಯ ವಾಸಿ ಗುಲಾಬಿ ಎಂಬುವವರ ಬಾವಿಗೆ ಹಾರಿದ್ದು, ಬಾವಿಗೆ  ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ 12:30 ಗಂಟೆಗೆ ಪರೀಕ್ಷಿಸಿದ ವೈದ್ಯರು ಸದಾನಂದ ಪೂಜಾರಿ ಯವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 23/04/2022 ರಂದು  ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಇವರಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ  ತ್ರಾಸಿ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ  ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ ದಾಳಿ ನಡೆಸಿ ಮಟ್ಕಾ  ಬಗ್ಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನು ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿರುವುದಾಗಿ ಹಣವನ್ನು ಸಂಗ್ರಹಿಸಿ ಬಿಡ್ಡರ್ ರಾಮಚಂದ್ರ ಎಂಬಾತನಿಗೆ ನೀಡುತ್ತಿರುವುದಾಗಿ, ತನಗೆ ಕಮಿಷನ್ ನೀಡುತ್ತಿದ್ದು ಬಾಜಿಯಲ್ಲಿ ಗೆದ್ದವರಿಗೆ ಮರುದಿನ ಹಣವನ್ನು ಅವರೇ ಪಾವತಿಸುವುದಾಗಿ ತಿಳಿಸಿದ್ದು ಹೆಸರು ವಿಳಾಸ ವಿಚಾರಿಸಲಾಗಿ ರವಿ ಪೂಜಾರಿ ಪ್ರಾಯ: 32 ವರ್ಷ, ತಂದೆ: ಬಾಬು ಪೂಜಾರಿ, ವಾಸ: 5 ಸೆಂಟ್ಸ್ ಭರತ್ ನಗರ, ಹೋಲಿ ಕ್ರಾಸ್, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಎಂದು ತಿಳಿಸಿದ್ದು ಆತನ ಕೈಯಲ್ಲಿದ್ದ ಮಟ್ಕಾಚೀಟಿ-1, ಮಟ್ಕಾ ಜುಗಾರಿಗೆ ಸಂಗ್ರಹಿಸಿದ ನಗದು ಹಣ 1195/- ರೂಪಾಯಿ, ಬಾಲ್ ಪೆನ್-1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ:78(I),78(III) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 24-04-2022 09:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080