ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 21/02/2022 ರಂದು 16:00 ಗಂಟೆಗೆ ಪಿರ್ಯಾದಿದಾರರಾದ ರಂಜಿತ್  ಕುಮಾರ್ (23)ತಂದೆ: ಧರ್ಮರಾಜ್ ವಾಸ: ರಾಜೇಶ್ವರಿ ನಿಲಯ ಕಲ್ಲೋಟ್ಟೆ ಪೆರ್ವಾಜೆ ರೋಡ್  ಅಂಚೆ ಮತ್ತು ಗ್ರಾಮ ಕಾರ್ಕಳ ಇವರು ಆತನ ಗೆಳೆಯ ಶ್ರೀನಿಧಿ ಗುಜಾರಾನ್ ಎಂಬವರೊಂದಿಗೆ KA-20 EW-6324 ನೇ ನಂಬ್ರದ ಬುಲೆಟ್ ಬೈಕ್ ನಲ್ಲಿ ಬರುತ್ತಿರುವಾಗ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟ್‌ನ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ಕುದುರೆಮುಖ-ಕಾರ್ಕಳ  ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಳ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿರುವ KA-19 AB-1142 ನೇ ನಂಬ್ರದ ಟಿಪ್ಪರ್ ಚಾಲಕ ಅಶೋಕ ನಾಯಕ್ ಎಂಬವರು ತನ್ನ ಟಿಪ್ಪರ್ ರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಭಾಗಕ್ಕೆ ಚಲಾಯಿಸಿದ ಟಿಪ್ಪರ್ ಬೈಕಿಗೆ ತಾಗಿದ ಪರಿಣಾಮ ಬೈಕ್  ಸ್ಕೀಡ್ ಆಗಿ ಬೈಕ್ ಸವಾರ ಶ್ರೀನಿಧಿ ಗುಜಾರಾನ್ ಹಾಗೂ ರಂಜಿತ್‌ ಕುಮಾರ್‌ ರವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ರಂಜಿತ್‌ ರವರ ಮುಖ ಹಾಗೂ ಕೈಕಾಲು ಗಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸವಾರನ ತಲೆಯ ಹಿಂಭಾಗ ತೀವ್ರ ಗಾಯವಾಗಿ ರಕ್ತ ಬರುತ್ತಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು, ರಂಜಿತ್‌ ಇವರು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಇವರು ಚಿಕಿತ್ಸೆ ಪಡೆದುಕೊಂಡ ನಂತರ ಸವಾರ ಗಾಯಾಳುವಿನ ಆರೈಕೆಯಲ್ಲಿದ್ದು, ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಆಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುಬ್ಬಣ್ಣ ಶೆಟ್ಟಿ (45) ತಂದೆ:ಬಡಿಯ ಶೆಟ್ಟಿ ವಾಸ: ಬುಕ್ಕನಪಾಲು, ಜೋಗೂರು ಪಡುವರಿ ಗ್ರಾಮ, ಬೈಂದೂರು ಇವರ ಹೆಂಡತಿ ನಾಗರತ್ನ (35) ರವರು ಪಡುವರಿ ಗ್ರಾಮದ ಬುಕ್ಕನಪಾಲು, ಜೋಗೂರು ಎಂಬಲ್ಲಿ ಸುಬ್ಬಣ್ಣ ಇವರೊಂದಿಗೆ ವಾಸವಾಗಿದ್ದು, ನಾಗರತ್ನ ರವರು ಪ್ರತಿ ದಿನ ಬೆಳಿಗ್ಗೆ 5:00 ಗಂಟೆಗೆ ಎದ್ದು ಮನೆಯ ಬಳಿ ಇರುವ ತೆಂಗು, ಅಡಿಕೆ, ಬಾಳೆ, ಕಾಳು ಮೆಣಸು ಗಿಡಗಳಿಗೆ ಮನೆಯ ತೋಟದ ಬಾವಿಯಿಂದ ನೀರನ್ನು ಸೇದಿ ನೀರುಣಿಸುತ್ತಿದ್ದು ಅದರಂತೆ ದಿನಾಂಕ 24/02/2022 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ತೋಟಕ್ಕೆ ನೀರು ಹಾಕಲು ಮನೆಯಲ್ಲಿ ಮಲಗಿದ್ದಲ್ಲಿಂದ ಹೋಗಿದ್ದು ಬೆಳಿಗ್ಗೆ 7:00 ಗಂಟೆ ಆದರೂ ಮನೆಗೆ ವಾಪಾಸ್ಸು ಬಾರದೇ ಇದ್ದುದನ್ನು ಕಂಡು ಸುಬ್ಬಣ್ಣ ಶೆಟ್ಟಿ ರವರು ಹತ್ತಿರ ಮನೆಯ ಇತರರೊಂದಿಗೆ ಹುಡುಕಾಡುತ್ತಿರುವಾಗ ಮನೆಯ ತೋಟದ ಬಾವಿಯಲ್ಲಿ  ಕೊಡಪಾನ ಮತ್ತು ಹಗ್ಗ  ತೇಲಾಡುತ್ತಿರುವುದನ್ನು ನೋಡಿ, ಬಾವಿಯಲ್ಲಿ ಬಿದಿರಿನ ಕೊಕ್ಕೆಯ ಸಹಾಯದಿಂದ ಹುಡುಕಾಡಿದಾಗ ನಾಗರತ್ನ ರವರ ಮೃತ ಶರೀರ ಪತ್ತೆಯಾಗಿದ್ದು ನಾಗರತ್ನಾ ಇವರು ಬೆಳಿಗ್ಗೆ 05:00 ಗಂಟೆಯಿಂದ 7:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ತೋಟದ ಬಾವಿಯಲ್ಲಿ  ನೀರು ಸೇದುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು  ನೀರಿನಲ್ಲಿ  ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್  ಠಾಣಾ ಯು.ಡಿ.ಆರ್‌ ಕ್ರಮಾಂಕ 09/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ,       

ಇತ್ತೀಚಿನ ನವೀಕರಣ​ : 24-02-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080