Feedback / Suggestions

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ಉಮೇಶ ಆಚಾರ್ ಇವರು ದಿನಾಂಕ 23/01/2023 ರಂದು ಸಂಜೆ ಸಮಯ ಆಟೋ ರಿಕ್ಷಾವನ್ನು ಯಡ್ತರೆ ಜಂಕ್ಷನ ಬಳಿ ನಿಲ್ಲಿಸಿಕೊಂಡು ಬಾಡಿಗೆಗೆ ಕಾದುಕೊಂಡಿರುವಾಗ ಸಂಜೆ ಸಮಯ ಸುಮಾರು 7:20 ಗಂಟೆಗೆ ಅವರ ಪರಿಚಯದ ಕೃಷ್ಣಪ್ಪ ಶೆಟ್ಟಿ (ಪ್ರಾಯ 80 ವರ್ಷ) ಎಂಬವರು ದಿನಸಿ ಸಾಮಾನುಗಳನ್ನು ಖರೀದಿಸಲು ಯಡ್ತರೆ ಜಂಕ್ಷನ್ ನ ಕೊಲ್ಲೂರು ಕಡೆಗೆ ಹೋಗುವ ರಸ್ತೆಯಿಂದ ಬೈಂದೂರು ಹಳೆಯ ರಸ್ತೆಯಲ್ಲಿನ ಮುಡೂರ ಪೂಜಾರಿ ರವರ  ಅಂಗಡಿಗೆ ಹೋಗಲು ರಾಹೆ 66 ನೇದರ ಪೂರ್ವ ಬದಿಯ ರಸ್ತೆಯನ್ನು ದಾಟಿ ಪಶ್ಚಿಮ ಬದಿಯ ರಸ್ತೆಯನ್ನು ದಾಟಲು ಯಡ್ತರೆ ಜಂಕ್ಷನ್  ಯೂ-ಟರ್ನ್ ನ ಅಂಚಿನಲ್ಲಿ ನಿಂತುಕೊಂಡಿರುವಾಗ, ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಒಂದು ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯೂ ಟರ್ನ ಬಳಿ ತನ್ನ ಲಾರಿಯನ್ನು ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ಯೂ ಟರ್ನ್ ಅಂಚಿನಲ್ಲಿ ನಿಂತುಕೊಂಡಿದ್ದ ಕೃಷ್ಣಪ್ಪ ಶೆಟ್ಟಿ ರವರಿಗೆ ಲಾರಿಯಿಂದ ಢಿಕ್ಕಿ ಹೊಡೆದ  ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಅಪಘಾತಪಡಿಸಿದ ಲಾರಿಯ ಚಾಲಕನು ಲಾರಿಯನ್ನು ಸ್ವಲ್ಪ ದೂರ ಚಲಾಯಿಸಿ ನಿಲ್ಲಿಸಿದಾಗ ಫಿರ್ಯಾದಿದಾರರು ಲಾರಿ ನಂಬ್ರವನ್ನು ನೋಡಿದಾಗ  ಲಾರಿ ನಂಬ್ರ TN 29BD 7488  ಆಗಿದ್ದು ನಂತರ ಲಾರಿ ಚಾಲಕನು ಸ್ಥಳದಿಂದ ಲಾರಿಯನ್ನು ಚಲಾಯಿಸಿಕೊಂಡು ಭಟ್ಕಳ ಕಡೆಗೆ ಹೋಗಿರುತ್ತಾನೆ. ನಂತರ ಫಿರ್ಯಾದಿದಾರರು  ಹಾಗೂ ಇತರ ಸಾರ್ವಜನಿಕರೊಂದಿಗೆ ಸೇರಿ ಅಪಘಾತಕ್ಕೆ ಒಳಗಾದ ಕೃಷ್ಣಪ್ಪ ಶೆಟ್ಟಿ ರವರನ್ನು ಎತ್ತಿ ಉಪಚರಿಸಿದ್ದು, ಈ ಅಪಘಾತದಿಂದ ಕೃಷ್ಣಪ್ಪ ಶೆಟ್ಟಿಯವರಿಗೆ  ತಲೆಗೆ ಜಜ್ಜಿದ ಗಾಯ ಹಾಗೂ ಹಣೆಗೆ ತರಚಿದ ಗಾಯಗಳಾಗಿದ್ದು  , ನಂತರ ಪ್ರವೀಣ ಶೆಟ್ಟಿ ರವರ ಕಾರಿನಲ್ಲಿ ಕೃಷ್ಣಪ್ಪ ಶೆಟ್ಟಿ ರವರನ್ನ ಕುಳ್ಳಿರಿಸಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆನಂದ ಹಾಗೂ ವಿಜಯ ರವರು 108 ಅಂಬುಲೆನ್ಸ್ ನಲ್ಲಿ ಕುಂದಾಪುರಕ್ಕೆ ಕರೆದುಕೊಂಡು ಹೋಗಿ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು. ರಾತ್ರಿ 10:50 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಪ್ಪ ಶೆಟ್ಟಿ ರವರು ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ  TN 29BD 7488  ನೇ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಕಾರಣವಾಗಿದ್ದು. ಅಪಘಾತಪಡಿಸಿದ ಚಾಲಕನು ಅಪಘಾತ ಪಡಿಸಿ ಸ್ಥಳದಿಂದ ಪರಾರಿ ಆಗಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 14/2023 ಕಲಂ:279, 304 (A) ಐಪಿಸಿ & 134 A & B  IMV ACT ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  23.01.2023  ರಂದು 17;10  ಘಂಟೆಗೆ  ಆರೋಪಿ ಕೆಎ. 20 ಇಜೆ,. 8386 ನೇ ನಂಬ್ರದ ಮೋಟಾರ  ಸೈಕಲ್ ಸವಾರ ಸುಧೀರ  ಶೆಟ್ಟಿ  ಈತನು  ಕೆಎ.20 ಇಜೆ. 8386ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಹೈಸ್ಕೂಲ್ ಬಳಿ ಕಮಲಶಿಲೆ ಕ್ರಾಸ್  ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ಈ ಸಮಯ  ಅಕಸ್ಮಾತ್ ನಾಯಿ  ಅಡ್ಡ ಬಂದಾಗ  ಮೋಟಾರ್  ಸೈಕಲ್‌ಗೆ   ಬ್ರೇಕ್  ಹಾಕಿದಾಗ ಮೋಟಾರ್  ಸೈಕಲ್  ಆತನ  ನಿಯಂತ್ರಣ ತಪ್ಪಿ ರಸ್ತೆಯ  ಮದ್ಯದ  ಡಿವೈಂಡರ್‌‌ಗೆ   ಡಿಕ್ಕಿ ಹೊಡೆದಿದ್ದು, ಈ ಸಮಯ  ರಸ್ತೆಯ ಮೇಲೆ ಬಿದ್ದು ತಲೆ  ಕೈ  ಕಾಲಿಗೆ ಗಂಭೀರ  ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ  ಬಗ್ಗೆ ಮಣಿಪಾಲದ  ಕೆ,ಎಮ್.ಸಿ  ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 11/2023 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿ ಉದಯ ಇವರ ತಮ್ಮ  ಶಶಿಕುಮಾರ ಈತನು    ಹೆಂಡತಿ ಶೋಭಾ ಹಾಗೂ ಮಕ್ಕಳೊಂದಿಗೆ  ಕಾಲ್ತೋಡು ಗ್ರಾಮದ ಬ್ಯಾಟ್ಯಾಣಿ ಎಂಬಲ್ಲಿ  ಹೆಂಡತಿ  ಮನೆಯಲ್ಲಿ ವಾಸವಾಗಿದ್ದು   ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ.  ಶಶಿಕುಮಾರನು ವಿಪರೀತ ಮಧ್ಯಪಾನ ಮಾಡುವ ಸ್ವಭಾವವನ್ನು ಹೊಂದಿದ್ದು  ಮದ್ಯಸೇವನೆಯಿಂದ  ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 23/01/2023 ರಂದು  ಸಂಜೆ 6:30 ಗಂಟೆಯಿಂದ  ರಾತ್ರಿ 1:20 ಗಂಟೆಯ ಮದ್ಯಾವಧಿಯಲ್ಲಿ ತನ್ನ  ಮನೆಯಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯು.ಡಿ.ಆರ್ 04/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 24-01-2023 06:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080