ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಉಡುಪಿ : ಪಿರ್ಯಾದಿದಾರರಾದವಲೇರಿಯನ್ ರೋಡ್ರಿಗಸ್ (72) ವರ್ಷ ,ತಂದೆ: ಎಸ್.ಥಾಮಸ್ ರೋಡ್ರಿಗಸ್,ವಾಸ: ಮನೆ ನಂ:1-4-12-2ಎ, ವಿಲ್ಸನ್ ವಿಲ್ಲಾ, ಗುಂಡಿಬೈಲು ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರ ಹೆಂಡತಿಯ ಅಣ್ಣನ ಹೆಂಡತಿ ಐರಿನ್ ಡಿಮೆಲ್ಲೋ ರವರು ಮೇರಿ ವಿ ರೋಡ್ರಿಗಸ್ ರವರೊಂದಿಗೆ KA-20-EL-0354ನೇ ಸ್ಕೂಟರ್ ನಲ್ಲಿ ಸಹ ಸವಾರಳಾಗಿ ಕುಳ್ಳಿತುಕೊಂಡು ಉಡುಪಿ ಮಾರ್ಕೆಟ್ ಗೆ ಹೋಗಿ, ವಾಪಾಸು ಮನೆಯ ಕಡೆಗೆ ಕಲ್ಸಂಕ ಮಾರ್ಗವಾಗಿ ಜುಮಾದಿಕಟ್ಟೆಯ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ರಸಿಕಾ ಬಾರ್‌ಗಿಂತ ಸ್ಪಲ್ಪ ಮುಂದೆ ರಾಘವೇಂದ್ರ ಮೆಡಿಕಲ್ ಬಳಿ ತಲುಪುವಾಗ ರಸ್ತೆಯಲ್ಲಿರುವ ಹಂಪ್ಸ್ ಬಳಿ ಮೇರಿ.ವಿ ರೋಡ್ರಿಗಸ್ ರವರು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಓಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಸವಾರಳಾದ ಐರಿನ್ ಡಿಮೆಲ್ಲೋ ರವರು ನಿಯಂತ್ರಣ ತಪ್ಪಿ ಸ್ಕೂಟರ್ ನಿಂದ ರಸ್ತೆಗೆ ಬಿದ್ದು, ಚಿಕಿತ್ಸೆಯ ಬಗ್ಗೆ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆಯ ಪಡೆಯುತ್ತಿರುವುದಾಗಿದೆ.ಅಲ್ಲದೇ ಸ್ಕೂಟರ್ ಸವಾರಳಾದ ಮೇರಿ.ವಿ ರೋಡ್ರಿಗಸ್ ರವರಿಗೆ ಯಾವುದೇ ರಕ್ತಗಾಯವಾಗಿರುವುದಿಲ್ಲ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಅಮಾಸೆಬೈಲು: ದಿನಾಂಕ 21/10/2022 ರಂದು ಸುಬ್ಬಣ್ಣ ಬಿ,ಪೊಲೀಸ್‌ ಉಪನಿರೀಕ್ಷಕರು, ಅಮಾಸೆಬೈಲು ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಹೊಸಂಗಡಿ ಗ್ರಾಮದ ಕೆ ಪಿ ಸಿ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅನುಮಾನಾಸ್ಪದವಾಗಿ ನಿಷೇದಿತ ಮಾದಕ ದ್ರವ್ಯವಾದ ಗಾಂಜಾವನ್ನು ಸೇವಿಸುತ್ತಿದ್ದಾನೆ ಎಂಬ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬಾತನು ಅಮಲಿನಲ್ಲಿ ತೂರಾಡುತ್ತಿರುವಂತೆ ಕಂಡು ಬಂದಿದ್ದು ನಂತರ ಆತನನ್ನು ವಿಚಾರಿಸಲಾಗಿ ನಾಗರಾಜ (37) ಎಂಬುದಾಗಿ ತಿಳಿಸಿದ್ದು, ಆತನನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆತನು ಗಾಂಜಾ ಸೇವಿಸಿದ ಬಗ್ಗೆ ದಿನಾಂಕ 22/10/2022 ರಂದು ವೈದ್ಯಾಧಿಕಾರಿಯವರು ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: 27(b) ಎನ್‌.ಡಿ.ಪಿ.ಎಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 21/10/2022 ರಂದು 19:00 ಗಂಟೆಗೆ ಆರೋಪಿ ಮಾಣಿ ಪ್ರಣಾಮ ಕುಮಾರ್ (21) ಎಂಬಾತ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಪೇಟೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜ ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವ ಬಗ್ಗೆ ಬಂದ ಮೇರೆಗೆ ಶ್ರೀಧರ ನಾಯ್ಕ್, ಪೊಲೀಸ್‌ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್ ಠಾಣೆ ಇವರು ಆರೋಪಿಯನ್ನು ವೈದ್ಯಾಧಿಕಾರಿಯವರು ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರುಪಡಿಸಿ ಆತನ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಆಪಾದಿತ ಗಾಂಜಾ ಸೇವನೆ ಮಾಡಿರುವುದಾಗಿ ವರದಿ ನೀಡಿರುವುದಾಗಿದೆ.ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2022 ಕಲಂ: 27(b) ಎನ್‌.ಡಿ.ಪಿ.ಎಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-10-2022 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080