Feedback / Suggestions

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 16/09/2022 ರಂದು ಪಿರ್ಯಾದಿದಾರರಾದ ಪ್ರಭಾಕರ ಜೋಗಿ(66), ತಂದೆ: ದಿ.ಕೃಷ್ಣ ಜೋಗಿ, ವಾಸ: ಶೀಲಾ ನಿವಾಸ ಮುಖ್ಯರಸ್ತೆ ಮುನಿಯಾಲು ವರಂಗ ಗ್ರಾಮ ಇವರು ದೇವಿ ಪ್ರಸಾದ್ ಇವರು ಚಲಾಯಿಸುತ್ತಿದ್ದ KA-20-EX-0398 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಮುದ್ರಾಡಿ ಕಡೆಯಿಂದ ಮುನಿಯಲ್ ಕಡೆಗೆ ಹೋಗುತ್ತಿದ್ದು. ಅವರು ರಾತ್ರಿ 7:20 ಗಂಟೆಗೆ ವರಂಗ ಗ್ರಾಮದ ಚಟ್ಕಲ್ ಪಾದೆಯ ಹತ್ತಿರ ತಲುಪಿದಾಗ ಮೋಟಾರ್ ಸೈಕಲ್ ನ್ನು ಚಲಾಯಿಸುತ್ತಿದ್ದ ದೇವಿಪ್ರಸಾದ್ ಇವರು ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸವಾರನ ಹತೋಟಿ ತಪ್ಪಿದ ಪರಿಣಾಮ ಅವರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಯ ಬಲಬದಿಗೆ ಬಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿರುವುದಲ್ಲದೇ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದು. ಅಪಾದಿತ ದೇವಿ ಪ್ರಸಾದ್ ಇವರಿಗೆ ಯಾವುದೇ ನೋವು ಅಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ರೀನಾ ಮಂಡೆಲ್(35), ಗಂಡ: ಮುಕೇಶ  ಕುಮಾರ, ವಾಸ: ಆಂದ್ರಪ್ರದೇಶ ಇವರು 3 ದಿನದ ಹಿಂದೆ ಉಡುಪಿಗೆ ಬಂದು ಉದ್ಯಾವರ ಚರ್ಚ್  ಹಿಂದುಗಡೆ ಟೆಂಟ್ ಹಾಕಿಕೊಂಡು  ವಾಸ ಮಾಡಿಕೊಂಡಿದ್ದು ,ಊರೂರು ತಿರುಗಿ ಜೇನು ತೆಗಿಯುವ ಕೆಲಸ ಮಾಡಿಕೊಂಡಿತ್ತಾರೆ. ದಿನಾಂಕ 22/09/2022 ರಂದು ಬೆಳಿಗ್ಗೆ ಪಿರ್ಯಾದಿದಾರರ ಮಗಳ ಗಂಡ ಆಕಾಶ ಮತ್ತು ಪಿರ್ಯಾದಿದಾರರ ಅಕ್ಕನ ಮಗಳ ಗಂಡ  ರೋಶನ್ ಮತ್ತು ಪಿರ್ಯಾದಿದಾರರ ಮಗ ಆಶಿಕ್ (13 ರವರು  ಟೆಂಟ್ ನಿಂದ ಹೊರಟು ಕನ್ನರಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಲಕ್ಷ್ಮೀ  ಪ್ಲಾಟಿನಂ ಅಪಾರ್ಟ್ಮೆಂಟ್ ನಲ್ಲಿ  ಮೇಲುಗಡೆ  ಜೇನಿರುವುದನ್ನು  ನೋಡಿ ಪ್ಲಾಟಿನ ವಾರೀಸುದಾರರಾದ ಜಗದೀಶ ಕಾಮತ್ ರವರಲ್ಲಿ  ಜೇನು ತೆಗೆಯುವ ಬಗ್ಗೆ  ಕೇಳಿದ್ದು , ಜಗದೀಶ್ ಕಾಮತ್ ರವರು ಜೇನು ತೆಗೆದುಕೊಂಡು ಹೋಗುವಂತೆ  ತಿಳಿಸಿದಂತೆ  ಆಕಾಶ  ಮತ್ತು ರೋಶನ್ ರವರು ಬೆಳಿಗ್ಗೆ 09:30 ಗಂಟೆಗೆ ಅಪಾರ್ಟ್ಮೆಂಟ್  ಮೇಲೆ ಹೋಗಿ ಜೇನು ತೆಗೆಯುತ್ತಿರುವಾಗ ಪಿರ್ಯಾದಿದಾರರ  ಮಗ ಆಶಿಕ್ ನು ಅಪಾರ್ಟ್ಮೆಂಟ್ ನ ಮಹಡಿ ಮೇಲಿಂದ  ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದವ  ಆಯಾತಪ್ಪಿ  ಆಕಸ್ಮಿಕವಾಗಿ ಅಪಾರ್ಟ್ಮೆಂಟ್ ನ ಮಹಡಿಯಿಂದ ಕೆಳಗೆ ಇದ್ದು ತಲೆಗೆ ,ಎದೆಗೆ , ದೇಹದ ಇತರ ಭಾಗಗಳಿಗೆ ತೀವ್ರ ತರದ ಗಾಯವಾಗಿದ್ದು,ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿದ್ದು ,ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 11:30 ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 51/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ವೆಂಕಟೇಶ ಬಿರಾದಾರ ಪಾಟೀಲ (23), ತಂದೆ: ದಿ ರಾಮಚಂದ್ರ ಬಿರಾದಾರ , ವಾಸ: ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕು , ಜಮಖಂಡಿ ರಸ್ತೆ, ಜನತಾಫ್ಲಾಟ್‌ ಮುದೋಳ  ಇವರ ತಮ್ಮ  ಸುಭಾಸ ಪಾಟೀಲ(20) ಇವರು ಮುದ್ದೆಬಿಹಾಳದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/09/2022 ರಂದು ಸುಭಾಸ ರವರು ಕುಂದಾಪುರದ ಶಾಸ್ತೀಪಾರ್ಕ್‌ನಲ್ಲಿರುವ ಜೆ ಕೆ ಟವರ್‌ನ ಶುಭಲಕ್ಷ್ಮೀ ಎಂಬ ಲಾಡ್ಜಿನ 4ನೇ ಮಹಡಿಯಲ್ಲಿನ 405ನೇ ರೂಮ್‌ನಲ್ಲಿ ಫ್ಯಾನಿಗೆ ಬೆಡ್‌ಶೀಟಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ಮಾಹಿತಿ ತಿಳಿಯಿತು. ಸುಭಾಸನು ಯಾವುದೋ ವಿಚಾರದಲ್ಲಿ  ಬೇಸರಗೊಂಡು ಆತನು ಕೆಲಸ ಮಾಡುತ್ತಿದ್ದ ಮುದ್ದೆಬಿಹಾಳದಿಂದ ಕುಂದಾಪುರಕ್ಕೆ ಬಂದು  ಲಾಡ್ಜ್‌ರೂಮಿನಲ್ಲಿ ದಿನಾಂಕ 20/09/2022 ರಂದು ಬೆಳಿಗ್ಗೆ 06:20 ಗಂಟೆಯಿಂದ ದಿನಾಂಕ 22/09/2022ರಂದು ಬೆಳಿಗ್ಗೆ 06:45 ಗಂಟೆಯ ಮಧ್ಯಾವದಿಯಲ್ಲಿ  ಕುತ್ತಿಗೆಗೆ ನೇಣು ಬಿಗಿದು  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2022
    ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 22/09/2022 ರಂದು 17:00 ಗಂಟೆಗೆ ಪ್ರಮೋದ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಠಾಣೆಯಲ್ಲಿರುವಾಗ ಉಡುಪಿಯ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಠಾಣೆಯಲ್ಲಿರುವ ಇತರ ಅಧಿಕಾರಿ/ಸಿಬ್ಬಂದಿಯವರೊಂದಿಗೆ 17:15 ಗಂಟೆಗೆ ಸ್ಥಳಕ್ಕೆ ತಲುಪಿದ್ದು, ಸ್ಥಳದಲ್ಲಿ 25 ರಿಂದ 30 ಜನ ಸೇರಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಪಿ.ಎಫ್.ಐ ಪ್ರಮುಖರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿರುವ ವಿಚಾರದ ಕುರಿತು ಧಿಕ್ಕಾರ ಕೂಗುತ್ತಾ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಸಂಚರಿಸುವ ವಾಹನಗಳಿಗೆ ಅಡೆ ತಡೆಯನ್ನು ಉಂಟು ಮಾಡುತ್ತಿರುವುದು ಕಂಡು ಬಂದಿದ್ದು, ಆಗ ಸ್ಥಳದಲ್ಲಿ ಹಾಜರಿದ್ದವರಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಪರವಾನಿಗೆ ಇದೆಯೇ? ಎಂದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದು, ಅವರಿಗೆ ಸ್ಥಳದಿಂದ ಹೋಗಲು ಸೂಚನೆ ನೀಡಿದ್ದು, ಅವರುಗಳು ಸ್ಥಳದಿಂದ ಹೋಗಲು ಒಪ್ಪದಿದ್ದಾಗ ಕನಿಷ್ಟ ಬಲ ಪ್ರಯೋಗಿಸಿ ಸ್ಥಳದಿಂದ ಚದುರಿಸಲು ಪ್ರಯತ್ನಿಸಿದ್ದು, ಆದರೂ ಸಹ ಅವರುಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದುದರಿಂದ ಸಿಬ್ಬಂದಿಯವರ ಸಹಾಯದಿಂದ ಅವರುಗಳ ಪೈಕಿ  1) ಸಾದೀಕ್‌ ಅಹಮ್ಮದ್‌(40), 2) ಅಫ್ರೋಜ್‌ಕೆ (39), 3) ಇಲಿಯಾಸ್‌ ಸಾಹೇಬ್‌(46), 4) ಇರ್ಷಾದ್‌(37), 5) ಫಯಾಜ್‌ ಅಹಮ್ಮದ್‌(39), 6) ಮಹಮ್ಮದ್‌ ಅಶ್ರಫ್‌(43), 7) ಎ. ಹಾರೂನ್‌ ರಶೀದ್‌, 8) ಮೊಹಮ್ಮದ್‌ ಜುರೈಜ್‌ (42), 9) ಇಶಾಕ್‌ ಕಿದ್ವಾಯಿ  (30), 10) ಶೌಕತ್‌ಅಲಿ (31), 11) ಮಹಮ್ಮದ್‌ ಝಹೀದ್‌(24) ಇವರನ್ನು ವಶಕ್ಕೆ ಪಡೆಯಲಾಗಿದೆ. ಆಪಾದಿತರು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ರಸ್ತೆಯನ್ನು ತಡೆದು  ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆತಡೆಯನ್ನು ಉಂಟು ಮಾಡಿ ಸಾರ್ವಜನಿಕ ಉಪದ್ರವವನ್ನು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ:  143 147 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    
  • ಕಾರ್ಕಳ: ಪಿರ್ಯಾದಿದಾರರಾದ ಜೋಸೆಫ್ ಜೆ ಪಾಲಕುನ್ನಿಲ್ (47), ತಂದೆ: ಪಿ ವಿ ಜೋಸೆಫ್, ವಾಸ: ಪಾಲಕುನ್ನೆಲ್ ಹೌಸ್ ಯೊಡು ಪುಜ ವಜಿತ್ತಾಲ್ ಅಂಚೆ ಮಣಕ್ಕಡ್ ,ಇಡುಕ್ಕಿ ಕೇರಳ ರಾಜ್ಯ, ಹಾಲಿ:ಪುಷ್ಪನಿವಾಸ ನೂರಾಳ್ ಬೆಟ್ಟು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ವಿಜಯ ಕುಮಾರ್  ರವರ ತೋಟವನ್ನು ಲೀಸಿಗೆ ಪಡೆದುಕೊಂಡು ಅವರ ಮನೆಯ ಬಳಿ  ಕೃಷಿ ಕೆಲಸ ಮಾಡಿಕೊಂಡಿದ್ದು ವಿಜಯ್ ಕುಮಾರ್ ರವರ ತೋಟದ ಮನೆಯಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 16/09/2022 ರಂದು ಸಂಜೆ 5:30 ಗಂಟೆಗೆ ಆರೋಪಿ ವಿಜಯ ಕುಮಾರ್ ರವರು ಪಿರ್ಯಾದಿದಾರರು ವಾಸವಿರುವ ಮನೆಯ ಬಳಿಗೆ ಬಂದು, ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಕರೆದು ಲೀಸಿಗೆ ಪಡೆದ ತೋಟದಲ್ಲಿರುವ ವಸ್ತುಗಳನ್ನು ತೆಗೆಯುವ ವಿಚಾರದಲ್ಲಿ ಜಗಳ ಮಾಡಿ ಪಿರ್ಯಾದಿದಾರರ ಕುತ್ತಿಗೆಯನ್ನು ಹಿಡಿದು ಕೊಲೆ ಬೆದರಿಕೆ ಹಾಕಿದ್ದು, ಅವರಿಬ್ಬರ ನಡುವೆ ದೂಡಾಟದ ಸಮಯ ಪಿರ್ಯಾದಿದಾರರ ಮುಂಗಾಲಿಗೆ ಪೆಟ್ಟಾಗಿರುವುದಾಗಿ ನೀಡಿದ ದೂರಿನಂತೆ 122/2022 ಕಲಂ: 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

Last Updated: 23-09-2022 10:16 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080