ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಬ್ರಹ್ಮಾವರ:   ಬ್ರಹ್ಮಾವರ ತಾಲೂಕು,  52ನೇ ಹೇರೂರು ಗ್ರಾಮದ, ಬಂಡ್ಸಾಲೆಬೆಟ್ಟು  ಎಂಬಲ್ಲಿ ವಾಸವಾಗಿರುವ ಪಿರ್ಯಾದಿ ಪ್ರಭಾಕರ ಶೆಟ್ಟಿ ಇವರ ಭಾವ ಸಂಜೀವ ಹೆಗ್ಡೆ, ಪ್ರಾಯ: 64 ವರ್ಷ, ಎಂಬವರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಅವರು  ದಿನಾಂಕ: 16.08.2021 ರಂದು ಸಂಜೆ 4:00 ಗಂಟೆಗೆ ಮನೆಯಿಂದ ಹೊರಗೆ ಹೋದವರು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 155/2021 ಕಲಂ:   ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 21/08/2021 ರಂದು ಸಂಜೆ 6:00  ಗಂಟೆಯಿಂದ ದಿನಾಂಕ 23/08/2021 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು  ಕಾರ್ಕಳ ತಾಲೂಕು ಮುಂಡ್ಕೂರು  ಗ್ರಾಮದ ಮುಂಡ್ಕೂರು ಉಪ ಅಂಚೆ ಕಚೇರಿಯ ಕಿಟಕಿಯ ಸರಳನ್ನು ಯಾವುದೋ ಆಯುಧದಿಂದ ತುಂಡು ಮಾಡಿ ಒಳಪ್ರವೇಶಿಸಿ ಸುಮಾರು 4,500 ರೂ ಮೌಲ್ಯದ ಸಿ ಸಿ ಕ್ಯಾಮರಾದ   ಡಿ ವಿ  ಆರ್ ಹಾಗೂ ಹಾರ್ಡ್  ಡಿಸ್ಕ್ ನ್ನು  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಫಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ರಾಘವೇಂದ್ರ ದೇವಾಡಿಗ ಇವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು ದಿನಾಂಕ:22-08-2021 ರಂದು ಕೆಲಸ ಮುಗಿಸಿ ಮನೆಯಲ್ಲಿರುವಾಗ ಪಿರ್ಯಾದಿದಾರರ ಮನೆಯ ಎದುರುಗಡೆ ಹಾದು ಹೋಗುವ ಹಳೆ ಎಂ.ಬಿ ರಸ್ತೆಯಲ್ಲಿ ಸಮಯ ಸುಮಾರು 13:30 ಗಂಟೆಗೆ ಬೈಂದೂರು ಕಡೆಯಿಂದ ಯಡ್ತರೆ ಕಡೆಗೆ ಓರ್ವ ಸೈಕಲ್ ಸವಾರ ಸೈಕಲ್ ನಲ್ಲಿ ಹೋಗುತ್ತಿರುವಾಗ ಹಳೆ ಎಂ.ಬಿ ರಸ್ತೆಯ ಸೇತುವೆಯ ಮುಂಭಾಗ ಬೈಂದೂರು ಕಡೆಯಿಂದ ಯಡ್ತರೆ ಕಡೆಗೆ ಓರ್ವ ಮೋಟಾರ್ ಸೈಕಲ್ ಸವಾರನು ಆತನ ಬಾಬ್ತು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ತಕ್ಷಣ ಪಿರ್ಯಾದಿದಾರರು ಮನೆಯಿಂದ ಸ್ಥಳಕ್ಕೆ ಹೋಗಿ ನೋಡಲಾಗಿ ಪಿರ್ಯಾದಿದಾರರ ಪರಿಚಯದ ರಮೇಶ ಪೂಜಾರಿ ಆಗಿದ್ದು ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ KA20EL7370 ನೇ ಹಿರೋ ಮೋ.ಸೈಕಲ್ ಆಗಿರುತ್ತದೆ.ಗಾಯಗೊಂಡ ರಮೇಶ ಪೂಜಾರಿಯವರ ತಲೆಯಿಂದ ತೀವೃ ರಕ್ತ ಸ್ರಾವ ಆಗುತ್ತಿದ್ದು ಚಿಕಿತ್ಸೆ ಬಗ್ಗೆ ಗಾಯಾಳುವಿನ  ಮನೆಯವರೊಂದಿಗೆ ಪಿರ್ಯಾದಿದಾರರು ಅಂಬುಲೆನ್ಸ್ ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು ಈ ಅಪಘಾತದಿಂದ ರಮೇಶ ಪೂಜಾರಿಯವರ ತಲೆಗೆ ಗುದ್ದಿದ ರಕ್ತ ಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ:,  ಫಿರ್ಯಾದಿ ಸಮ್ಜಯ್‌ ಕುಮಾರ್‌ ಇವರ ಅಂಗಡಿಯಲ್ಲಿ ಸುಮಾರು 8 ವರ್ಷದಿಂದ ಕೆಲಸಮಾಡಿಕೊಂಡಿದ್ದ ಪಿರ್ಯಾದುದಾರರ ಸಂಬಂಧಿ ರಾಜಸ್ಥಾನ ಮೂಲದ ಪವನ್‌ ಕುಮಾರ್‌ (ಪ್ರಾಯ: 29) ಎಂಬವರು ಉಡುಪಿ ಬನ್ನಂಜೆ ಬಳಿ ಇರುವ ಲಿಟ್ಲ್‌ ಅರ್ಚನಾ ಅಪಾರ್ಟ್ ಮೆಂಟ್‌‌ನಲ್ಲಿ ವಾಸವಿದ್ದು ಕೆಲವು ವರ್ಷಗಳಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಈ ದಿನ ದಿನಾಂಕ: 23/08/2021ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರನ್ನು ಚಿಕಿತ್ಸೆಗಾಗಿ ಬೆಳಿಗ್ಗೆ ಸುಮಾರು 7:30 ಗಂಟೆಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ, ಪವನ್‌ ಕುಮಾರ್‌ನು  ಕರೆ ತರುವಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-08-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080