ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕುಂದಾಪುರ: ದಿನಾಂಕ 23/01/2022 ರಂದು ಬೆಳಿಗ್ಗೆ 6:20 ಗಂಟೆಗೆ, ಕುಂದಾಪುರ ತಾಲೂಕಿನ, ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್‌‌ ಬಳಿ, ಪೂರ್ವ ಬದಿಯ ಎನ್. ಹೆಚ್‌ 66 ರಸ್ತೆಯಲ್ಲಿ, ಆಪಾದಿತ ಸುರೇಂದ್ರ ಕೆ ನಾಯ್ಕ ಎಂಬುವವರು KA-20-AB-1801ನೇ ಅಟೋರಿಕ್ಷಾದಲ್ಲಿ ಪಿರ್ಯಾದಿದಾರರಾದ ಮಹಾಬಲ ರಾಮ ಚಂದನ್‌‌‌ (72), ತಂದೆ: ರಾಮ ಚಂದನ್‌ ,ವಾಸ: ನಂಬ್ರ 44, ಚಿಕ್ಕಮ್ಮ ನಿಲಯ, ಆದರ್ಶ ನಗರ, ಹಿಂದವಾಡಿ, ಬೆಳಗಾವಿ ತಾಲೂಕು & ಜಿಲ್ಲೆ ಇವರು ಪತ್ನಿ ಗಿರಿಜಾ ಹಾಗೂ ತಂಗಿ ತುಂಗ ಎಂಬುವವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ನಾಡಾ ಗುಡ್ಡೆಯಂಗಡಿ ಯಿಂದ ಕಟ್ ಬೇಲ್ತೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಎನ್.ಹೆಚ್‌ 66 ರಸ್ತೆಯಿಂದ ಕೊಲ್ಲೂರು ರಸ್ತೆಗೆ ತಿರುಗಿಸುವಾಗ ಎದುರುಗಡೆಯಿಂದ ಬಂದ ವಾಹನವನ್ನು ನೋಡಿ ಒಮ್ಮೆಲ್ಲೇ ಬ್ರೇಕ್‌ ಹಾಕಿದ ಪರಿಣಾಮ ಅಟೋರಿಕ್ಷಾ ಬಲ ಮಗ್ಗುಲಾಗಿ ರಸ್ತೆಯಲ್ಲಿ ಅಡ್ಡ ಬಿದ್ದು ಪಿರ್ಯಾದಿದಾರರ ಎಡಭುಜಕ್ಕೆ ಒಳನೋವು ಹಾಗೂ ಎಡಕೆನ್ನೆಗೆ ತರಚಿದ ಗಾಯ,ಗಿರಿಜಾರವರಿಗೆ ಎಡಕೈಯ ಮಣಿಗಂಟಿಗೆ ಒಳನೋವು ಹಾಗೂ ಹಣೆಗೆ ತರಚಿದ ಗಾಯ ಹಾಗೂ ಆಪಾದಿತನಿಗೆ ಎಡಕಾಲಿನ ಮುಂಗಾಲು ಗಂಟಿಗೆ ಹಾಗೂ ಎಡಎದೆಗೆ ಒಳನೋವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದ ನರಸಿಂಹ ಪೂಜಾರಿ (56), ತಂದೆ: ಮೂಡೂರ ಪೂಜಾರಿ, ವಾಸ: ಹಿಂಡಿಗಲ್ಲು ಮನೆ, ಆಕಳಬೈಲು ,ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರ ಮನೆಗೆ ಬಂದಿರುವ ಹುಬ್ಬಳ್ಳಿಯ ಸಂತೋಷನಗರದ ವಾಸಿ ವೆಂಕಟೇಶ್ (28 ) ರವರು ದಿನಾಂಕ 23/01/2022 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರ ಮಕ್ಕಳೊಂದಿಗೆ ಕಿರಿಮಂಜೇಶ್ವರ ಗ್ರಾಮದ ಆಕಳಬೈಲು ಎಂಬಲ್ಲಿನ ಮನೆಯ ಬಳಿಯ ಅರಬ್ಬಿ ಸಮುದ್ರದಕ್ಕೆ ಈಜಾಡಲು ಹೋದವರು ಸಮುದ್ರ ದಡದ ಬಳಿ ನೀರಿನಲ್ಲಿ ಈಜಾಡುತ್ತಿರುವಾಗ 11:00 ಗಂಟೆಗೆ ಸಮುದ್ರದ ಅಲೆಗೆ ಆಯತಪ್ಪಿ ನೀರಿನಲ್ಲಿ ಮುಳುಗಿದವರನ್ನು ನೀರಿನಿಂದ ಎತ್ತಿ ಚಿಕಿತ್ಸೆ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಲ್ಲಿ ವೈದ್ಯರು ಪರೀಕ್ಷೀಸಿ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ. ಮೃತ ವೆಂಕಟೇಶ್ ರವರು ಸಮುದ್ರದಲ್ಲಿ ಈಜಾಡುವಾಗ ಸಮುದ್ರದ ಅಲೆಗೆ ಆಯತಪ್ಪಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022 ಕಲಂ 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-01-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080