ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 21/09/2022 ರಂದು  ಪಿರ್ಯಾದಿದಾರರಾದ ಮಂಜುಳಾ (29), ಗಂಡ: ಶರಣಪ್ಪ ಬಾಲಪ್ಪ ಗಂಜಿಹಾಳ, ವಾಸ: ಪಾಲತಿ ಗ್ರಾಮ, ಜಲಕಮಲದಿನ್ನಿ, ಇಳಕಲ್‌ ತಾಲೂಕು, ಬಾಗಲಕೋಟೆ ಜಿಲ್ಲೆ, ಹಾಲಿ ವಿಳಾಸ: ಆಶಾ ಕಾಂಪ್ಲೆಕ್ಸ್‌, ಬಂಟಕಲ್‌ ಅಂಚೆ ಮತ್ತು ಶಿರ್ವ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಶರಣಪ್ಪ ಬಾಲಪ್ಪ ಗಂಜಿಹಾಳ (40) ರವರು ಮಗ ಶ್ರವಣಕುಮಾರ (6) ರವರೊಂದಿಗೆ  ದಿನಸಿ ಸಾಮಾಗ್ರಿಗಳನ್ನು ತರಲು   ಶಿರ್ವ ಗ್ರಾಮದ ಬಂಟಕಲ್ ಪೇಟೆಯಲ್ಲಿರುವ ಆಶಾ ಕಾಂಪ್ಲೆಕ್ಸ್ ಎದುರುಗಡೆ ಇರುವ ಸಾರ್ವಜನಿಕ  ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಂಜೆ 7:00 ಗಂಟೆಗೆ ಓರ್ವ  ಮೋಟಾರ್  ಸೈಕಲ್‌ ಸವಾರ ಶಂಕರಪುರ ಕಡೆಯಿಂದ ಶಿರ್ವ ಕಡೆಗೆ  ಅತೀ  ವೇಗ  ಹಾಗೂ ಅಜಾಗರೂಕತೆಯಿಂದ ತೀರಾ  ಎಡ ಬದಿಗೆ ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ  ಪಿರ್ಯಾದಿದಾರರ   ಗಂಡ  ಶರಣಪ್ಪ  ಬಾಲಪ್ಪ  ಗಂಜಿಹಾಳ  ಹಾಗೂ ಮಗ  ಶ್ರವಣ ಕುಮಾರನಿಗೆ ಡಿಕ್ಕಿ  ಹೊಡೆದು ಮೋಟಾರ್‌ ಸೈಕಲ್‌ನ್ನು  ಅಪಘಾತ ಸ್ಥಳದಲ್ಲಿಯೇ ಬಿಟ್ಟು ಓಡಿ  ಹೋಗಿರುತ್ತಾನೆ.  ಡಿಕ್ಕಿ  ಹೊಡೆದ  ಪರಿಣಾಮ ಇಬ್ಬರೂ  ರಸ್ತೆಗೆ ಬಿದ್ದವರನ್ನು ಕೂಡಲೇ  ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ  ಸಾರ್ವಜನಿಕರು  ಉಪಚರಿಸಿ ನೋಡಲಾಗಿ  ಇಬ್ಬರೂ ಪ್ರಜ್ಞಾ ಹೀನರಾಗಿದ್ದು ಮಾತನಾಡುತ್ತಿರಲಿಲ್ಲ.   ಪಿರ್ಯಾದಿದಾರರ ಗಂಡನ ತಲೆಗೆ ತೀವ್ರ  ತರದ ಒಳಜಖಂ ಆಗಿದ್ದು, ಎಡ  ಕಾಲಿಗೆ  ರಕ್ತಗಾಯವಾಗಿರುತ್ತದೆ.  ಮಗ ಶ್ರವಣ  ಕುಮಾರನಿಗೆ  ಬಲ ಕಾಲಿನ ಮೂಳೆ  ಮುರಿತದ ಒಳ ಜಖಂ ಹಾಗೂ  ತಲೆಗೆ, ಬಲಗಡೆ ಕೆನ್ನೆಗೆ, ರಕ್ತ ಗಾಯವಾಗಿರುತ್ತದೆ.  ನಂತರ ಅಪಘಾತಪಡಿಸಿದ  ಮೋಟಾರ್  ಸೈಕಲ್‌ನ  ನಂಬ್ರ ನೋಡಲಾಗಿ KA-20-ED-7566  ಆಗಿರುತ್ತದೆ. ಅಪಘಾತಕ್ಕೊಳಗಾಗಿ ಬಿದ್ದ ಗಂಡ  ಹಾಗೂ ಮಗನನ್ನು ಸಾರ್ವಜನಿಕರ  ಸಹಕಾರದಿಂದ  ಒಂದು ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿನ  ವೈದ್ಯಾಧಿಕಾರಿಯವರು ಗಂಡ ಶರಣಪ್ಪ ಬಾಲಪ್ಪ ಗಂಜಿಹಾಳ ರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ  ರಾತ್ರಿ 9:15 ಗಂಟೆಗೆ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ.  ಪಿರ್ಯಾದಿದಾರರ  ಮಗ ಶ್ರವಣ ಕುಮಾರನು ಒಳರೋಗಿಯಾಗಿ ದಾಖಲಾಗಿ ತುರ್ತು ಚಿಕಿತ್ಸಾ ಘಟಕದಲ್ಲಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 279, 338, 304(A) ಐಪಿಸಿ & 134 A&B IMV Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಶಂಶುದ್ದೀನ್(42), ತಂದೆ: ನಜೀರ್ ಅಹ್ಮದ್ ವಾಸ:ಗುಂಜಾನುಗುಡ್ಡೆ ,ನಾಗೂರು , ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 20/09/2022 ರಂದು ಸಂಜೆ 7:00 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಗುಂಜಾನುಗುಡ್ಡೆಯಲ್ಲಿನ ಅವರ ಮನೆಯಲ್ಲಿರುವಾಗ ಗುಂಜಾನುಗುಡ್ಡೆಯ ಶಾಲೆಯ ಬಳಿ ನಾಗೂರಿನಿಂದ ಹಳಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಮೋಟಾರು ಸೈಕಲ್ ಸವಾರರು ಬಿದ್ದ ಶಬ್ದ ಕೇಳಿ  ಸ್ಥಳಕ್ಕೆ ಹೋಗಿ ನೋಡಿದಲ್ಲಿ ಅವರ ಸಂಬಂಧಿಕರಾದ ಅಬ್ದುಲ್ ರೆಹಮಾನ್  ಮತ್ತು ಅಬ್ದುಲ್  ಸಮದ್ ಎಂಬುವವರು ಆಗಿದ್ದು ವಿಚಾರಿಸಿದಲ್ಲಿ  ಅಬ್ದುಲ್  ಸಮದ್ ರವರು ಅವರ KA-20-EX-7767 ನೇ ಮೋಟಾರು ಸೈಕಲ್ ನಲ್ಲಿ ತಮ್ಮ  ಅಬ್ದುಲ್ ರೆಹಮಾನ್ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ನಾಗೂರಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ಬರುತ್ತಿದ್ದಾಗ ಗುಂಜಾನುಗುಡ್ಡೆ ಶಾಲೆಯ ಬಳಿ ನಾಯಿಯೊಂದು ಅಡ್ಡ ಬಂದ  ಕಾರಣ ಮೋಟಾರು ಸೈಕಲ್ ಸವಾರನ ನಿಯಂತ್ರಣ ತಪ್ಪಿ  ಬಿದ್ದಿದ್ದು  ಅಪಘಾತದ ಪರಿಣಾಮ ಸಹ ಸವಾರರಾದ ಅಬ್ದುಲ್ ರೆಹಮಾನ್ ರವರಿಗೆ ಎಡಗೈ ತೋಳಿಗೆ ಒಳ ಜಖಂ ಉಂಟಾಗಿ, ಮುಖಕ್ಕೆ ,ಭುಜಕ್ಕೆ ತರಚಿದ ರಕ್ತಗಾಯವಾಗಿದ್ದು  ಹಾಗೂ ಸವಾರ ಅಬ್ದುಲ್ ಸಮದ್ ನಿಗೆ ಎಡ ಕೈ ತೋಳಿಗೆ ನೋವುಂಟಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಬ್ದುಲ್ ರೆಹಮಾನ್ ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿದ್ದು  ಅಬ್ದುಲ್ ಸಮದ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 191/2022 ಕಲಂ: 279 , 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶಾಹಿನ್‌ (46), ಗಂಡ:  ನಝೀರ್‌ ಅಹಮ್ಮದ್‌, ವಾಸ: ಪ್ಲಾಮ ಓಷನಿಕ್‌, ಬಿಜೈ, ಕಾಪಿಕಾಡು ರಸ್ತೆ ಭಾರತ್‌ ಮಾಲ್‌ ಹಿಂಬಾಗ  ಮಂಗಳೂರು-4 ಇವರ  ಚಿಕ್ಕಮ್ಮ ಅಸ್ಮತ್‌ (72) ರವರು  ದಿನಾಂಕ 21/09/2022 ರಂದು ಮಧ್ಯಾಹ್ನ 2:00 ಗಂಟೆಗೆ ಕಾಪುವಿನ ಉಳಿಯಾರಗೋಳಿ ಗ್ರಾಮದ ಕೋತಲ್‌ ಕಟ್ಟೆ ಎಂಬಲ್ಲಿರುವ  ಶ್ರೀ ಗಣೇಶ ಸವಿ೯ಸ್‌ ಸೆಂಟರ್‌ ಮುಂಭಾಗ ಮಂಗಳೂರು - ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪಶ್ಚಿಮ ಬದಿಯ ಅಂಚಿನಲ್ಲಿ  ನಿಂತಿರುವಾಗ  ಮಂಗಳೂರು ಕಡೆಯಿಂದ ರಂಜೀತ್‌ ಬಿ.ಕೆ ರವರು ತನ್ನ KA-20-C-1614ನೇ ಟಾಟಾ ಎಸ್‌ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿಯಾ೯ದಿದಾರರ  ಚಿಕ್ಕಮ್ಮ ಅಸ್ಮತ್‌ ರವರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದಿಂದ ಗಾಯಗೊಂಡ ಅವರನ್ನು ಸ್ಥಳೀಯರು ಯಾವುದೋ ಒಂದು  ವಾಹನದಲ್ಲಿ ಕುಳ್ಳಿರಿಸಿ ಉಡುಪಿಯ ಜಿಲ್ಲಾ  ಸಕಾ೯ರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಈ ಅಪಘಾತದಿಂದ ಪಿಯಾ೯ದಿದಾರರ ಚಿಕ್ಕಮ್ಮ ಅಸ್ಮತ್‌ ರವರ  ಬಲ ಕೈಗೆ, ಬಲ ಬದಿಯ ತಲೆಗೆ  ಹಾಗೂ  ಎರಡು ಕಾಲಿಗೆ ರಕ್ತಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ. ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಬಳಿಕ ಅಲ್ಲಿಂದ ಅಪಘಾತವಾದ ಸ್ಥಳಕ್ಕೆ ಬಂದು  ನಂತರ ಠಾಣೆಗೆ ಬಂದು ಠಾಣಾ ಆವರಣದಲ್ಲಿ ನಿಲ್ಲಿಸಿದ ಅಪಘಾತ ಪಡಿಸಿದ ವಾಹನವನ್ನು ನೋಡಿ ಬಂದು ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 108/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶಂಕರ ನಾಯ್ಕ (30), ತಂದೆ: ಗೋಪಾಲ ನಾಯ್ಕ, ವಾಸ: ದೊಡ್ಡಹಕ್ಲು ಹೆಸ್ಕುಂದ  ನಂಚಾರು ಗ್ರಾಮ ಇವರ ಅಣ್ಣ  ಉದಯ ನಾಯ್ಕ(35) ರವರು  ಗಾರೆ  ಕೆಲಸ ಮಾಡಿಕೊಂಡಿದ್ದು ದಿನಾಂಕ 19/09/2022 ರಂದು ಮಧ್ಯಾಹ್ನ ಸುಮಾರು 12:30 ಗಂಟೆಯ ಸಮಯಕ್ಕೆ ಮನೆಯ ಹತ್ತಿರದ ಸೀತಾನದಿಗೆ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಹೋದವರು ವಾಪಾಸ್ಸು ಬಾರದೇ ಇದ್ದು ನಂತರ ಹುಡುಕಾಡಿದಲ್ಲಿ ಆವರ್ಸೆ ಗ್ರಾಮದ ಕಿರಾಡಿ ಎಂಬಲ್ಲಿ ಸೀತಾನದಿಯಲ್ಲಿ  ಮೃತ ದೇಹ ದೊರೆತಿರುತ್ತದೆ. ಮೃತರು ಹೊಳೆಗೆ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜ್ಯಾರಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40 /2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕುಂದಾಪುರ: ದಿನಾಂಕ 17/09/2022 ರಂದು ಸಂಜೆ 04:00 ಗಂಟೆಯಿಂದ  ದಿನಾಂಕ 21/09/2022 ರಂದು ಬೆಳಿಗ್ಗೆ 11:45 ಗಂಟೆಯ ಮಧ್ಯಾವದಿಯಲ್ಲಿ ಪಿರ್ಯಾದಿದಾರರಾದ ರಾಧಿಕಾ ರಾವ್ ಕೆ(56), ಗಂಡ: ಕೆ ಸುಭಾಶ್ಚಂದ್ರ ಕೆ, ವಾಸ:ಹಂಸಧ್ವನಿ, ಸಂಜಯಗಾಂಧಿ ರಸ್ತೆ ಹಂಗಳೂರು ಗ್ರಾಮ ಕುಂದಾಪುರ ತಾಲೂಕು ಇವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ  ಮೀಟಿ ತೆರೆದು ಒಳಪ್ರವೇಶಿಸಿ ಮನೆಯ ಬೆಡ್ ರೂಂ ನ ಗೋದ್ರೇಜ್‌ನ ಲಾಕರ್ ಒಡೆದು ಅದರಲ್ಲಿದ್ದ ಬೆಳ್ಳಿಯ ಸಾಮಾಗ್ರಿಗಳಾದ ಬೆಳ್ಳಿಯ ಬಟ್ಟಲು-1, ಬೆಳ್ಳಿಯ ಚೊಂಬು-1, ಬೆಳ್ಳಿಯ ಲೋಟ -4 ಹಾಗೂ ನಗದು ರೂಪಾಯಿ 10,000/- ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬೆಳ್ಳಿಯ ಸಾಮಾಗ್ರಿಗಳ ಒಟ್ಟು ಮೌಲ್ಯ 85,000/- ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ದಿನಾಂಕ 20/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಬಂದ ಮಾಹಿತಿಯಂತೆ ಉಡುಪಿ ತಾಲೂಕು, ಮಣಿಪಾಲ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಕರಣ್ ಆರ್‌ ಕೆ (21) ಎಂಬಾತನನ್ನು ವಶಕ್ಕೆ ಪಡೆದು,  ಮೆಡಿಕಲ್ ತಪಾಸಣೆಗೊಳಪಡಿಸಿ ದಿನಾಂಕ 21/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಕರಣ್ ಆರ್‌ ಕೆ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 20/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ  ಇವರಿಗೆ ಬಂದ ಮಾಹಿತಿಯಂತೆ ಉಡುಪಿ ತಾಲೂಕು, ಮಣಿಪಾಲ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಪೂರ್ಣ ಸೋಮೇಶ್ವರ (23)  ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 21/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ಪೂರ್ಣ ಸೋಮೇಶ್ವರ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ದಿನಾಂಕ 20/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ  ಇವರಿಗೆ ಬಂದ ಮಾಹಿತಿಯಂತೆ  ಉಡುಪಿ ತಾಲೂಕು, ಮಣಿಪಾಲ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ನಿಯಾಲ್ ಗೋವೆಸ್ (20) ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 21/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ನಿಯಾಲ್ ಗೋವೆಸ್ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ದಿನಾಂಕ 20/09/2022 ರಂದು ನಾರಾಯಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ  ಇವರಿಗೆ ಬಂದ ಮಾಹಿತಿಯಂತೆ ಉಡುಪಿ ತಾಲೂಕು, ಮಣಿಪಾಲ ವಿದ್ಯಾರತ್ನ ನಗರದ ರೊಯಲ್ ಎಂಬಸ್ಸಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಕೆನ್ನೆತ್ ಡಿ’ಸೋಜ (27) ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 21/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ಕೆನ್ನೆತ್ ಡಿ’ಸೋಜ  ಗಾಂಜಾ ಸೇವನೆ ಮಾಡಿರುವುದುಖಚಿತ ಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022  ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 22-09-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080