ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಕುಂದಾಪುರ:  ಕುಂದಾಪುರ ತಾಲೂಕು ದೇವಲ್ಕುಂದ ಗ್ರಾಮದ ಆರೋಗ್ಯ ಉಪಕೇಂದ್ರದ ಬಳಿ ಬಚ್ಚು ಕುಂದರ್‌ರವರ ಮನೆಯಲ್ಲಿ ಬಾಡಿಗಗೆ ಇದ್ದ  ಆರೋಪಿತ ರವಿ ಆಚಾರಿ(43) ತನ್ನ ಪತ್ನಿ ಪೂರ್ಣಿಮ ರವರೊಂದಿಗೆ ಗಲಾಟೆ ಮಾಡುತ್ತಿದ್ದು ಇದರಿಂದ ಪೂರ್ಣಿಮಾರವರ ಅಣ್ಣ ರಾಘವೇಂದ್ರ ಆಚಾರ್ ರವರು ತನ್ನ ತಂಗಿ ಹಾಗೂ ಮಕ್ಕಳನ್ನು ತಮ್ಮ ಮನೆಯಾದ ಗುಡ್ಡದ ಹೊಸಹಳ್ಳಿಗೆ  ಕರೆದುಕೊಂಡು ಹೋಗಿರುತ್ತಾರೆ. ನಿನ್ನೆ ದಿನ ದಿನಾಂಕ:21-08-2022 ರಂದು ತಲ್ಲೂರಿನಲ್ಲಿ  ನಡೆದ ಸಂಬಂಧಿಕರ ಸೀಮಂತ(ಬಯಕೆ)ಕಾರ್ಯಕ್ರಮಕ್ಕೆ ಬಂದ ಪೂರ್ಣಿಮಾರವರು 15:30 ಗಂಟೆಗೆ ತನ್ನ ಗಂಡನ  ಬಾಡಿಗೆ ಮನೆಗೆ ಬಂದಿರುತ್ತಾರೆ. ಪೂರ್ಣಿಮಾರವರು ತಾಯಿಯ ಪೋನ್‌ ಕರೆಗೆ ಉತ್ತರಿಸುತ್ತಿದ್ದವರು ಆನಂತರ  ಉತ್ತರಿಸದೇ ಇದ್ದುದರಿಂದ  ಅನುಮಾನಗೊಂಡು. ಈ ದಿನ ದಿನಾಂಕ:22-08-2022 ರಂದು ಬೆಳಿಗ್ಗೆ 10:00 ಗಂಟೆಗೆ   ಫಿರ್ಯಾದಿ ರಾಘವೇಂದ್ರ ಆಚಾರ್ (42) ತಂದೆ:ಪುಟ್ಟಣ್ಣ ಆಚಾರ್ ವಾಸ:ಗುಡ್ಡದ ಹೊಸಹಳ್ಳಿ ಶಿಕಾರಿಪುರ ಇವರು ತಂಗಿಯ ಮನೆಗೆ  ಬಂದು ನೋಡಿದಾಗ ಮನೆ ಬಾಗಿಲು ಒಳಗಿಂದ ಲಾಕ್ ಆಗಿದ್ದು. ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಪೊಲೀಸ್ ಹಾಗೂ  ಊರಿನವರ ಸಮಕ್ಷಮ  ಮನೆಯ ಬಾಗಿಲನ್ನು11:00 ಗಂಟೆ ಸಮಯಕ್ಕೆ  ತೆಗೆಸಿ ಒಳ ಹೋಗಿ ನೋಡಿದಾಗ ಮನೆಯ ಛಾವಡಿಯಲ್ಲಿ  ಪೂರ್ಣಿಮಾರವರು  ರಕ್ತದ ಮಡುವಿನಲ್ಲಿ  ಮೃತಪಟ್ಟು ಬಿದ್ದಿದ್ದು ಹಾಗೂ  ಪಕ್ಕದಲ್ಲಿ ಆಕೆಯ ಗಂಡ ರವಿ ಆಚಾರಿ  ಕೂಡ ಮೃತಪಟ್ಟು ಬಿದ್ದಿರುವುದು ಕಂಡು ಬಂದಿರುತ್ತದೆ. ನಿನ್ನೆ ದಿನ ದಿನಾಂಕ:21-08-2022 ರ ಸಂಜೆಯ ವೇಳೆಯಿಂದ ಈ ದಿನ ದಿನಾಂಕ:22-08-2022 ರ 11:00 ಗಂಟೆ ಮಧ್ಯಾವದಿಯಲ್ಲಿ ರವಿ ಆಚಾರಿಯು ಹೆಂಡತಿಯೊಂದಿಗೆ ಗಲಾಟೆ ಮಾಡಿ ವಾಹನದ ಕಬ್ಬಿಣದ ಬ್ಲೇಡ್ ನಿಂದ ತನ್ನ  ಪತ್ನಿ ಪೂರ್ಣಿಮಾಳಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದು ಬಳಿಕ  ಮೊದಲೇ ತಂದಿರಿಸಿದ್ದ ವಿಷ ಹಾಗೂ ಮದ್ಯವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ :39/2022ಕಲಂ: 302 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.


ಇತರ ಪ್ರಕರಣ

  • ಬೈಂದೂರು: ದಿನಾಂಕ : 21-08-2022 ರಂದು ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು ಸಿಬ್ಬಂದಿಗಳೊದಿಗೆ ಸಮಯ ಸುಮಾರು 13-30 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ರೈಲ್ವೆ ನಿಲ್ದಾಣದ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಆದಿಲ್  ಶೇಖ್ ಪ್ರಾಯ 27 ವರ್ಷ, ತಂದೆ: ದಿ.ಶೇಖ್ ಹುಸೇನ್ ವಾಸ: ಮನೆ ನಂಬ್ರ 12/120 ಆರ್ಮೆ,ಕರಿಕಟ್ಟೆ,  ಶಿರೂರು ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಈತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಸದ್ರಿ ವ್ಯಕ್ತಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಅವರನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಠಾಣೆಗೆ ಹಾಜರುಪಡಿಸಿದ್ದು , ಸದ್ರಿ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ : 21-08-2022 ರಂದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಆದಿಲ್  ಶೇಖ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 166/2022 ಕಲಂ : 27(B) NDPS ACT-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ನಿರಂಜನ್ ಗೌಡ ಬಿ ಎಸ್  ಪೊಲೀಸ್ ಉಪನಿರೀಕ್ಷಕರು,    ಬೈಂದೂರು ಪೊಲೀಸ್ ಠಾಣೆ. ಬೈಂದೂರು ಇವರು ದಿನಾಂಕ 21/08/2022 ರಂದು ಸಿಬ್ಬಂದಿಯವರೊಂಧಿಗೆ ಸಮಯ ಸುಮಾರು 14:00 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಮಾರ್ಕೇಟ್ ಬಳಿ ರೌಂಡ್ಸ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ನಯೀಮ್ ಖಾನ್ (30ವರ್ಷ) ತಂದೆ: ಮೊಹಮ್ಮದ್ ರಫಿಕ್ ಪಠಾಣ್ ವಾಸ:ಆರ್ಮೆ ಕರಿಕಟ್ಟೆ ಶಿರೂರು ಗ್ರಾಮ ಬೈಂದೂರು ತಾಲೂಕು ರವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದು ಸದ್ರಿ ಆರೋಪಿಯು ನಿಷೇದಿತ  ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ಹೆಚ್ ಸಿ 114 ನೇ ನಾಗೇಂದ್ರ ರವರೊಂದಿಗೆ  ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ದಿನಾಂಕ 21/08/2022 ರಂದು ನಯೀಮ್ ಖಾನ್ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿಯನ್ನು ನೀಡಿರುತ್ತಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ  167/2022  ಕಲಂ 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಕಂಬಳಕಟ್ಟು ಎಂಬಲ್ಲಿ  ವಾಸವಾಗಿರುವ ಪಿರ್ಯಾದಿ ಶೋಭಾ,(53) ಗಂಡ: ರಾಜು ಪೂಜಾರಿ, ವಾಸ: ಕಂಬಳಕಟ್ಟು, ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಮ್ಮನಾದ ಭಾಸ್ಕರ, ಪ್ರಾಯ: 47 ವರ್ಷ ಎಂಬವರಿಗೆ ಏಳು ವರ್ಷಗಳಿಂದ ತಲೆ ಸುತ್ತು ಬರುತ್ತಿದ್ದು, ದಿನಾಂಕ: 21.08.2022 ರಂದು ಸಂಜೆ 6:30 ಗಂಟೆಯಿಂದ ದಿನಾಂಕ 22.08.2022 ರಂದು ಬೆಳಿಗ್ಗೆ 07:30 ಗಂಟೆಯ ಮಧ್ಯಾವದಿಯಲ್ಲಿ ಅವರು ಮನೆಯ ಬಾವಿಯ ನೀರು ಎತ್ತಲು ಹೋದಾಗ ಆಕಸ್ಮಾತ್‌ ಆಗಿ ತಲೆ ಸುತ್ತು ಬಂದೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿಯೋ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ.  ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 40/2022 ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.


ಗಂಡಸು ಕಾಣೆ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಉಮೇಶ್ (26) ತಂದೆ: ತಂದೆ: ಶೀನ ನಾಯ್ಕ್ ವಾಸ: ಸಲಗೇರಿ ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರ ಅಣ್ಣ ನಾಗರಾಜ  (37 ವರ್ಷ) ಪ್ರಾಯರವರು ಕೊಲ್ಲೂರಿನಲ್ಲಿ ಸಣ್ಣ ಪಾಸ್ಟ್ ಪುಡ್ ಅಂಡಿಯನ್ನು ನಡೆಸಿಕೊಂಡಿದ್ದು ಸುಮಾರು 2 ತಿಂಗಳಿನಿಂದ ಅಂಗಡಿಯಲ್ಲಿ ಮಲಗಿಕೊಂಡು ಮನೆಗೆ ಬಾರದೇ ಮಧ್ಯವೆಸನಿಯಾಗಿದ್ದು ಮಾನಸಿಕ ಅಸ್ವಸ್ಥಗೊಂಡಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತಿದ್ದು.  ಕೊಲ್ಲೂರಿನಿಂದ ಕುಂದಾಪುರಕ್ಕೆ  ದಿನಾಂಕ: 10-08-2022 ರಂದು ಬೆಳಿಗ್ಗೆ 8:00 ಗಂಟೆಗೆ  ಹೋದವರು ಅಂಗಡಿ ವಾಪಾಸ್ಸು  ಬಾರದೇ ಇದ್ದು ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್‌  ಠಾಣೆ  ಅ.ಕ್ರ: 39/2022 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-08-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080