Feedback / Suggestions

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 21/07/2022 ರಂದು ರಾತ್ರಿ ಸುಮಾರು 9:00 ಗಂಟೆಗೆ,  ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಪಾರಿಜಾತ ಹೊಟೇಲ್‌ಬಳಿಯ, ಪಿರ್ಯಾದಿ ರವೀಂದ್ರ ಪ್ರಾಯ  45   ವರ್ಷ   ತಂದೆ ಪದ್ಮನಾಥಆಚಾರ್ಯ   ವಾಸ:   ಪ್ರೇಮಾ ನಿಲಯ, ಪಾರಿಜಾತ ಹೊಟೇಲ್‌ಎದುರು ಮುಖ್ಯ ರಸ್ತೆ, ಕಸಬಾ ಗ್ರಾಮ 0.ರವರ ಮ್ಯಾನರ್‌” ಹೆಸರಿನ ಬಟ್ಟೆ ಅಂಗಡಿ ಎದುರುಗಡೆ ಪುರಸಭಾ ರಸ್ತೆಯಲ್ಲಿ, ಆಪಾದಿತ ವಿಜಯ ಕುಮಾರ್‌ಎಂಬವರು  KA20-EP-5548ನೇ ಬೈಕ್‌‌ನ್ನು ಕುಂದಾಪುರ ಹೊಸ ಬಸ್‌ನಿಲ್ದಾಣದ ಕಡೆಯಿಂದ ಶಾಸ್ತ್ರಿಸರ್ಕಲ್‌ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪಾರಿಜಾತ ಹೊಟೇಲ್‌ಕಡೆಯಿಂದ ಪಿರ್ಯಾದಿದಾರರ ಅಂಗಡಿ ಕಡೆಗೆ ರಸ್ತೆ ದಾಟುತ್ತ ರಸ್ತೆಯ ಅಂಚಿಗೆ ತಲುಪುತ್ತಿದ್ದ  ಪುಂಡಲೀಕರವರಿಗೆ ಡಿಕ್ಕಿ ಹೊಡೆದ  ಪರಿಣಾಮ ಪುಂಡಲೀಕರವರ ತಲೆಗೆ, ಹಣೆಗೆ ಒಳಜಖಂ ರಕ್ತಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಒಳರೋಗಿಯಾಗಿ ದಾಖಲಾದವರು, ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 22/07/2022 ರಂದು ಬೆಳಿಗ್ಗೆ 06:00 ಗಂಟೆಗೆ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022   ಕಲಂ: 279, 304 (ಎ)  ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.


 ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿ ಅಶೋಕ ಪೂಜಾರಿ, ಪ್ರಾಯ: 56 ವರ್ಷ, ತಂದೆ: ಗೋವಿಂದ ಪೂಜಾರಿ, ವಾಸ: ರುಕ್ಕು ಸದನ, ಕೋಡಿ ಇವರು ಕೆಎ-03-4570 ನೇ ನೊಂದಣಿ ಸಂಖ್ಯೆಯ  “ಅದಿತಿ” ಎಂಬ ಹೆಸರಿನ 370 ಮಾದರಿಯ ಮೀನುಗಾರಿಕಾ ಬೋಟಿನ ಮಾಲೀಕರಾಗಿದ್ದು ಮತ್ತು ಪಿರ್ಯಾದಿದಾರರ ನೆರೆಮನೆಯ ಸುರೇಶ ಖಾರ್ವಿ ಎಂಬುವವರು ಕೆಎ-03 ಎಮ್.ಎಮ್ 3457 ನೇ ನೊಂದಣಿ ಸಂಖ್ಯೆಯ ಅಮ್ಮ ಚಕ್ರಮ್ಮ ಎಂಬ ಹೆಸರಿನ 370 ಮಾದರಿಯ ಮೀನುಗಾರಿಕಾ ಬೋಟಿನ ಮಾಲೀಕರಾಗಿದ್ದು, ಮಳೆಗಾಲದ ಸಮಯವಾದ್ದರಿಂದ  ಸದ್ರಿ ಮೀನುಗಾರಿಕಾ ಬೋಟುಗಳನ್ನು  ಕುಂದಾಪುರ ಕಸಬ ಗ್ರಾಮದ ಕೋಡಿ ಸಿ ವಾಕ್ ಬಳಿ ನಿಲ್ಲಿಸುತ್ತಿರುವುದಾಗಿದೆ. ಎಂದಿನಂತೆ ದಿನಾಂಕ 17.07.2022 ರಂದು ಬೆಳಿಗ್ಗೆ ಪಿರ್ಯಾದುದಾರರು ಮತ್ತು ಅವರ  ನೆರೆಮನೆಯ ಸುರೇಶ ಖಾರ್ವಿರವರು ಎಂಜಿನ್ ಸ್ಟಾರ್ಟ ಮಾಡುವರೇ ಬೋಟ್ ನಿಲ್ಲಿಸಿದ ಸ್ಥಳಕ್ಕೆ ತೆರಳಿ ಇಂಜಿನ್  ಸ್ಟಾರ್ಟ್ ಮಾಡುವಾಗ ಎಂಜಿನ್ ಸ್ಟಾರ್ಟ್ ಆಗದೇ ಇದ್ದು, ಬೋಟ್ ನ ಬ್ಯಾಟರಿ ಬಾಕ್ಸ್ ತೆಗೆದು ನೋಡಿದಾಗ 2 ಬೋಟ್ ನ ತಲಾ 2 ಬ್ಯಾಟರಿಗಳು ಕಾಣೆಯಾಗಿರುವುದು ಕಂಡು ಬಂದಿದ್ದು, ಯಾರೋ ಕಳ್ಳರು  ದಿನಾಂಕ 16-07-2022 ರಂದು 22:00 ಗಂಟೆಯಿಂದ ದಿನಾಂಕ  17-07-2022 ರಂದು ಬೆಳಿಗ್ಗೆ 09:00 ಗಂಟೆಯ ಮದ್ಯಾವಧಿಯಲ್ಲಿ  24 ವ್ಯಾಟ್ ನ ತಲಾ 8000 ಮೌಲ್ಯದ 2 ಬೋಟ್ ನ ತಲಾ 2 ಬ್ಯಾಟರಿಯಂತೆ ಒಟ್ಟು 4 ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಬ್ಯಾಟರಿಗಳ ಒಟ್ಟು ಮೌಲ್ಯ 32,000/- ರೂಪಾಯಿಗಳಾಗಿರಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 77/2022ಕಲಂ: 380 ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 22/07/2022ರಂದು ಬೆಳಿಗ್ಗೆ 07:30  ಗಂಟೆಗೆ ಫಿರ್ಯಾದಿ ಶ್ರೀ ಪ್ರಸಾದ್ ಕುಮಾರ್ ಕೆ  ಪಿಎಸ್‌ಐ(ತನಿಖೆ-1) ಉಡುಪಿ ನಗರ ಪೊಲೀಸ್‌ ಠಾಣೆ ಉಡುಪಿ ಇವರು ಇಲಾಖಾ ಹೊಯ್ಸಳ ವಾಹನದಲ್ಲಿ ಉಡುಪಿ ಪೇಟೆಯಲ್ಲಿ ವಿಶೇಷ ಕರ್ತವ್ಯದಲ್ಲಿದ್ದಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ  ಸಿಟಿ  ಬಸ್‌ ನಿಲ್ದಾಣದ  ಬಳಿಯಲ್ಲಿರುವ ಮಲ್ಪೆ ಬಸ್  ನಿಲ್ದಾಣದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದಾಗಿ ಭಾತ್ಮಿದಾರೊಬ್ಬರು ನೀಡಿದ ಖಚಿತ ಮಾಹಿತಿಯಂತೆ  ಫಿರ್ಯಾದುದಾರರು ಸದ್ರಿ ಮಾಹಿತಿಯನ್ನು ಪೊಲೀಸ್‌ ನಿರೀಕ್ಷಕರಿಗೆ ತಿಳಿಸಿ, ಅವರ ಮೌಖಿಕ ಆದೇಶದಂತೆ  ಠಾಣಾ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 07:45 ಗಂಟೆಗೆ ಧಾಳಿ ನಡೆಸಿ,  ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಚಂದ್ರ ಶೆಟ್ಟಿ ಮತ್ತು ಕರಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 3ನೇ ಆಪಾದಿತನಾದ  ಲಿಯೋ ಕರ್ನೆಲಿಯೋ ನ ಪರವಾಗಿ ಆತನ ಹೆಂಡತಿಯಾದ 4 ನೇ ಆಪಾದಿತೆಯಾದ ಶ್ರೀಮತಿ  ಗ್ರೆಟ್ಟಾ ಬಾಯಿ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂ 3680 /- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌, ಮತ್ತು ಆರೋಪಿತರ  ವಶದಲ್ಲಿದ್ದ ಅಂದಾಜು 800/- ರೂಪಾಯಿ ಮೌಲ್ಯದ ಲಾವ ಕಂಪೆನಿಯ ಕಪ್ಪು  ಬಣ್ಣದ   ಕೀ ಪ್ಯಾಡ್ ಮೊಬೈಲ್ ಫೋನ್‌ ಅದರಲ್ಲಿ9945980837 ನಂಬರಿನ ಏರ್ ಟೆಲ್ ಸಿಮ್‌ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   115/2022, ಕಲಂ: 78(1), (3) KP ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

Last Updated: 22-07-2022 06:31 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080