Feedback / Suggestions

ಅಪಘಾತ ಪ್ರಕರಣ

ಕೋಟ: ಫಿರ್ಯಾದಿ ವಿದ್ಯಾಧರ ಶೆಟ್ಟಿ ಇವರು ದಿನಾಂಕ: 22/04/2023 ರಂದು ಬೆಳಿಗ್ಗೆ 09:50 ಗಂಟೆಗೆ ಕುಂದಾಪುರ- ಉಡುಪಿ ರಾ.ಹೆ.-66 ರ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಚಿತ್ರಪಾಡಿ ಪರಿವರ್ತನಾ ಆಸ್ಪತ್ರೆಯ ಎದುರು ತಲುಪಿದಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬಸ್ಸು ನಂ KA-20-C-6566 ‘ಭಾರತಿ ಎಕ್ಸಪ್ರೆಸ್ ‘ ಬಸ್ ಚಾಲಕ ಕಾರ್ತಿಕ್ ಎಂಬುವವನು ಅತೀವೇಗ, ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು ಬಂದು ಪಶ್ಚಿಮ ಬದಿಯಿಂದ ಪೂರ್ವದ ಡಿವೈಡರ್ ಬಳಿ ನಡೆದುಕೊಂಡು ಬರುತ್ತಿದ್ದ ರಘುರಾಮ ಶೆಟ್ಟಿ ಎಂಬುವವರಿಗೆ ಡಿಕ್ಕಿ ಹೊಡೆದಿದ್ದು ಬಸ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹತ್ತಿ ಕುಂದಾಪುರ-ಉಡುಪಿ ರಾ. ಹೆ. -66 ರಲ್ಲಿ ಇಳಿದು ನಿಂತಿರುತ್ತದೆ. ಪರಿಣಾಮ ಪಾದಾಚಾರಿ ರಘುರಾಮ ಶೆಟ್ಟಿರವರಿಗೆ ತಲೆಗೆ  ಹಾಗೂ ದೇಹದ ಇತರ ಬಾಗಗಳಿಗೆ ತೀವ್ರ ತರವಾದ ರಕ್ತಗಾಯವಾಗಿದ್ದು,  ಅಪಘಾತದ ತೀವ್ರತೆಗೆ ರಘುರಾಮ ಶೆಟ್ಟಿ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2023 ಕಲಂ: 279, 304 (ಎ)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಗೊಳ್ಳಿ: ಪಿರ್ಯಾದಿದಾರರಾದ ರತ್ನಾಕರ ಆಚಾರ್ ರವರು ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಲ್ಲಿ ಸುನಿಲ್‌ ಪೂಜಾರಿ ರವರೊಂದಿಗೆ ದಿನಾಂಕ: 21.04.2023 ರಂದು ರಾತ್ರಿ ರಾಹೆ -66 ರಸ್ತೆಯಲ್ಲಿ ತ್ರಾಸಿಯಿಂದ ಕುಂದಾಪುರ ಕಡೆಗೆ ಹೋಗುತ್ತೀರುವಾಗ ಸಮಯ ಸುಮಾರು 23:15 ಗಂಟೆಗೆ ಹೊಸಾಡು ಗ್ರಾಮದ Essar ಪೆಟ್ರೋಲ್‌ ಬಂಕ್‌ ಬಳಿ ತಲುಪುವಾಗ ರಾಹೆ -66 ರಸ್ತೆಯ ಬಲಬದಿಯಲ್ಲಿ ನಾಗೇಶ ಪೂಜಾರಿ ಎಂಬವರು ರಸ್ತೆ ದಾಟಲು ನಿಂತು ಕೊಂಡಿರುತ್ತಾರೆ. ಆ ಸಮಯ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ KA.20.MB.8965 ನೇ ಕಾರಿನ ಚಾಲಕ ಸ್ಟಾನಿ ಡಿಸಿಲ್ವಾ ರವರು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ರಸ್ತೆಯ   ತೀರ ಬಲಬದಿಗೆ ಚಲಾಯಿಸಿ ರಸ್ತೆ ದಾಟಲು ನಿಂತುಕೊಂಡಿದ್ದ ನಾಗೇಶ ಪೂಜಾರಿ ರವರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ನಾಗೇಶ ಪೂಜಾರಿಯವರು ರಸ್ತೆಗೆ ಬಿದ್ದು ಹಣೆಗೆ, ಮುಖಕ್ಕೆ ರಕ್ತಗಾಯವಾಗಿರುತ್ತದೆ. ಹಾಗೂ ಎಡಕಾಲಿನ ಮೂಳೆಮುರಿತ ಉಂಟಾಗಿರುತ್ತದೆ.  ಗಾಯಗೊಂಡ ನಾಗೇಶ ಪೂಜಾರಿರವರನ್ನು  ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಹಾಗೂ ಸುನಿಲ್‌ ಪೂಜಾರಿ ರವರು  ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರಿಕ್ಷಿಸಿ 23:45 ಗಂಟೆಗೆ ನಾಗೇಶ ಪೂಜಾರಿ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ಪಿರ್ಯಾದಿ ವಿಶುಶೆಟ್ಟಿ  ಇವರು  ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯದಿದಾರರು ದಿನಾಂಕ:21-04-2023 ರಂದು ತನ್ನ ಮೋಟಾರು ಸೈಕಲ್ ನಲ್ಲಿ ಅಂಬಲಪಾಡಿ ಕಡೆಯಿಂದ ಸಂತೆಕಟ್ಟೆ ಕಡೆಗೆ ರಾ.ಹೆ 66 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 7-30 ಗಂಟೆಗೆ ಪುತ್ತೂರು ಗ್ರಾಮದ ನಿಟ್ಟೂರು ಸ್ಟೇಟ್ ಹೋಮ್ ಬಳಿ ತಲುಪುವಾಗ ಪಿರ್ಯಾದಿದಾರರ ಮುಂದುಗಡೆ ಅಂದರೇ, ಅಂಬಲಪಾಡಿ ಕಡೆಯಿಂದ ಸಂತೆಕಟ್ಟೆ ಕಡೆಗೆ KA20EH0321 ನೇ ಮೋಟಾರ್ ಸೈಕಲ್ ಸವಾರ ಪ್ರಶಾಂತ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿಕೊಂಡು ಬಂದು  ರಸ್ತೆಯ ಬದಿಯಲ್ಲಿ  ನಿಂತುಕೊಂಡಿದ್ದ ಓರ್ವ ವ್ಯಕ್ತಿಗೆ ಡಿಕ್ಕಿ ಹೊಡೆದನು ಪರಿಣಾಮ ಆ ವ್ಯಕ್ತಿಯು  ರಸ್ತೆಗೆ ಬಿದ್ದು,ತಲೆಗೆ ಗಂಭೀರ ಸ್ವರೂಪದ ರಕ್ತಗಾಯ, ಬೆನ್ನಿಗೆ ಕೈಗೆ ತರಚಿದ ಗಾಯ ಆಗಿದ್ದು ಅಲ್ಲದೇ ಆರೋಪಿ ಮೋಟಾರ್ ಸೈಕಲ್ ಸವಾರ ಪ್ರಶಾಂತನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಣ್ಣಪುಟ್ಟ ಗಾಯವಾಗಿ ಆಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿ ಸವಾರನು ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ ಅಫಘಾತಕ್ಕೊಳಗಾದ ವ್ಯಕ್ತಿಯು ಹೈಟೆಕ್ ಆಸ್ಪತ್ರೆಯಲ್ಲಿ ರ್ಪಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023 ಕಲಂ 279 337,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕುಂದಾಪುರ: ದಿನಾಂಕ 22/04/2023 ರಂದು ಬೆಳಿಗ್ಗೆ ಸಮಯ ಸುಮಾರು 08:10 ಗಂಟೆಗೆ, ಕುಂದಾಪುರ ತಾಲೂಕಿನ, ಕೋಟೇಶ್ವರ  ಗ್ರಾಮದ ಕೋಟೇಶ್ವರ ಫ್ಲೈ ಓವರ್‌  ಬಳಿ NH 66 ರಸ್ತೆಯಲ್ಲಿ, ಆಪಾದಿತ ಪ್ರತೀಕ ಎಂಬವರು KA 02- HQ- 2763 ನೇ ಮೋಟಾರ್‌ ಸೈಕಲ್‌ ನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಮತ್ತು ಅಡ್ಡಾದಿಡ್ಡಿಯಾಗಿ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬರುತ್ತಾ ದೂರುದಾರ ಶಾನ್‌ವಾಝ್‌ ರವರು ಉಡುಪಿಯಿಂದ ಕುಂದಾಪುರದ ಕಡೆಗೆ ಚಲಾಯಿಸಿಕೊಂಡಿದ್ದ KA 19–ME-6556 ನೇ ಕಾರನ್ನು ಓವರ್‌ ಟೇಕ್‌ ಮಾಡುವರೇ ಹೋಗಿ ಹತೋಟಿ ತಪ್ಪಿ ಕಾರಿನ ಬಲಬದಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಕಾರನ್ನು ಜಖಂಗೊಳಿಸಿದ್ದು ,ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಆಪಾದಿತನನ್ನು ದೂರುದಾರರು ಚಿಕಿತ್ಸೆಗೆ ಕೋಟೇಶ್ವರದ ಎನ್‌ ಆರ್‌ ಆಚಾರ್ಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023   ಕಲಂ 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

 

ಉಡುಪಿ:, ದಿನಾಂಕ: 20.04.2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶಿಮ್ರಾ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿ ಕೀರ್ತಿ ಕುಮಾರ್.ಕೆ ಈತನನ್ನು ಕೇಶವ ಗೌಡ ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು  ವಶಕ್ಕೆ ಪಡೆದ್ದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 22.04.2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಕೀರ್ತಿ ಕುಮಾರ್.ಕೆ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ ಈ ಬಗ್ಗೆ ಸೆನ್‌  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ದಿನಾಂಕ 03.04.2023 ರಂದು ಪಿರ್ಯಾದಿ ಆಯೂಶ್ ಹೆಚ್. ಚೌದ್ರಿ ಇವರಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ +9184584669139 ನೇದರಿಂದ ವಾಟ್ಸ್ ಅಪ್ ಮುಖೇನ ಟಾಸ್ಕ್ ನಡೆಸಿ ಹಣ ಗಳಿಸುವಂತೆ ಸಂದೇಶ ಕಳುಹಿಸಿದ್ದು, ಟೆಲಿಗ್ರಾಮ್ ಮುಖೇನ ಲಿಂಕ್ ಒಂದನ್ನು ಕಳುಹಿಸಿ, ಟಾಸ್ಕ್ ನಡೆಸುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಮೊದಲಿಗೆ 1000/- ಹಣವನ್ನು ಆರೋಪಿ ಸದ್ರಿ ಲಿಂಕ್ ನಲ್ಲಿ ಕಳುಹಿಸಿದ ಯು.ಪಿ.ಐ. ಮುಖೇನ ಹಣ ಕಳುಹಿಸಿರುತ್ತಾರೆ.  ಇದೇ ರೀತಿಯಾದ ಆರೋಪಿಗಳು ಒಟ್ಟು ರೂ. 27,000/- ಹಣವನ್ನು  ಪಿರ್ಯಾದಿದಾರರಿಂದ ಪಡೆದು, ಟಾಸ್ಕ್ ಕಂಪ್ಲೀಟ್ ಆದರೂ ಹಣ ಮರು ಪಾವತಿ ಮಾಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2023  ಕಲಂ: 66(D)   ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಬ್ರಿ: ದಿನಾಂಕ:22/04/2023 ರಂದು ನಂದಕುಮಾರ.ಎಂ.ಎಂ, ಪಿಎಸ್ ಐ,  ಹೆಬ್ರಿ ಪೊಲೀಸ್ ಠಾಣೆ ಇವರು  ಸಿಬ್ಬಂದಿಗಳೊಂದಿಗೆ ಕಬ್ಬಿನಾಲೆ ಗ್ರಾಮದ ಕೊಂಕಣಾರ ಬೆಟ್ಟು ಎಂಬಲ್ಲಿ ರೌಂಡ್ಸ್ ನಲ್ಲಿರುವಾಗ ಕೊಂಕಣಾರ ಬೆಟ್ಟು ಬಸ್ಸು ನಿಲ್ದಾಣದ ಬದಿಯಲ್ಲಿ ಅಪಾದಿತ ಸುಧಾಕರ ಪೂಜಾರಿ ಈತನು ಸಾರ್ವಜನಿಕ ಸ್ಥಳದಲ್ಲಿ ಹಳದಿ ಬಣ್ಣದ ಬಟ್ಟೆಯ ಕೈಚೀಲದಲ್ಲಿ ಮದ್ಯದ ಪ್ಯಾಕೇಟ್ ನ್ನು ತನ್ನ ಸ್ವಾದೀನದಲ್ಲಿಟ್ಟು ಕೊಂಡು ಯಾವುದೇ ಪರವಾನಿಗೆ ಪಡೆಯದೇ ಗಿರಾಕಿಗಳಿಗೆ ಅಕ್ರಮವಾಗಿ ಮದ್ಯವನ್ನು ಸೇವಿಸಲು ಅನುವು ಮಾಡಿಕೊಡುತ್ತಿರುವುದನ್ನು ಪತ್ತೆ ಹಚ್ಚಿ ಬೆಳಿಗ್ಗೆ 11-00 ಗಂಟೆಗೆ ವಶಕ್ಕೆ ಪಡೆದು ಅತನ ವಶದಲ್ಲಿ ಚೀಲದಲ್ಲಿದ್ದ ಸುಮಾರು 1,000/-ರೂ ಮೌಲ್ಯದ  1) 90 ml ನ HAYWARDS CHEERS WHISKY  ಎಂದು ಬರೆದಿರುವ ಮದ್ಯ ತುಂಬಿದ ಒಟ್ಟು 20 ಪ್ಯಾಕೇಟ್ ಮತ್ತು 2) 90ml ನ HAYWARDS CHEERS WHISKY  ಎಂದು ಬರೆದಿರುವ 5 ಖಾಲಿ ಪ್ಯಾಕೇಟ್ ಗಳು 3) ಖಾಲಿ ಪ್ಲಾಸ್ಟಿಕ್ ಲೋಟ-2, 4) ಹಳದಿ ಬಣ್ಣದ ಬಟ್ಟೆಯ ಕೈ-ಚೀಲ -1, 5) ಗಿರಾಕಿಗಳಿಂದ ಸಂಗ್ರಹಿಸಿದ 210/-ರೂ ಇವುಗಳನ್ನು ಮಹಜರು ಮೂಲಕ ಸ್ವಾದೀನ ಪಡಿಸಿಕೊಂಡಿದ್ದು ಈ ಬಗ್ಗೆ ಹೆಬ್ರಿ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 US 15(A), 32(3) KP ACT  ನಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

ಬೈಂದೂರು: ಫಿರ್ಯಾದಿ ಸುನೀತಾ ಇವರ ತಂದೆ ಮೃತ ರಾಮ ಪೂಜಾರಿಯವರು  ಮನೆಯಲ್ಲಿದ್ದು ಮದ್ಯ  ವ್ಯಸನಿಯಾಗಿದ್ದು ಎಂದಿನಂತೆ ದಿನಾಂಕ 21/04/2023 ರಂದು ಸಂಜೆ 20:30  ಗಂಟೆಯ  ಸಮಯಕ್ಕೆ  ಪೇಟೆಗೆ ಹೋಗಿ ಮದ್ಯ ಪಾನ ಮಾಡಿ ಮನೆಗೆ ಬಂದವರು ತನಗೆ  ಕುಡಿಯಲು ಕೊಟ್ಟ ಹಣ ಸಾಕಾಗುತ್ತಿಲ್ಲ ಎಂದು ಅವರಷ್ಟಕ್ಕೆ  ಬೈಯುತ್ತಿದ್ದು ಸ್ವಲ್ಪ ಸಮಯದ ನಂತರ ಊಟಕ್ಕೆ ಕರೆಯಲು ಹುಡುಕಾಡಿದಾಗ  ಫಿರ್ಯಾದಿದಾರರ ತಂದೆ ಮಾತನಾಡದೆ ಇದ್ದು ಎಲ್ಲಿಯಾದರು ಮಲಗಿ ಕೊಂಡಿರಬಹುದೆಂದು ಫಿರ್ಯಾದಿದಾರರು  ಹಾಗೂ  ತಾಯಿ ಟಾರ್ಜ್ ಹಾಕಿ ಹುಡುಕುತ್ತಾ ಹೋದಾಗ ದಸ್ತಗಿರಿ ಎಂಬುವವರ ಜಾಗ ದಲ್ಲಿರುವ ಗೇರು ಮರಕ್ಕೆ ಫಿರ್ಯಾದಿದಾರ ತಂದೆ ರಾಮ  ಪೂಜಾರಿಯವರು ಹಗ್ಗಕಟ್ಟಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 23/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೈಂದೂರು: ಫಿರ್ಯಾದಿ ರಾಮ ಖಾರ್ವಿ ಇವರ ದೋಣಿಯಲ್ಲಿ  ನಾಗರಾಜ (43 ವರ್ಷ) ರವರು ಕೆಲಸ ಮಾಡಿಕೊಂಡಿದ್ದು ಅದರಂತೆ ದಿನಾಂಕ 21/04/2023 ರಂದು ಫಿರ್ಯಾದಿದಾರರು, ನಾಗರಾಜ  ಹಾಗೂ ಇತರರೊಂದಿಗೆ  ದೋಣಿಯಲ್ಲಿ  ಮೀನುಗಾರಿಕೆ  ಬಗ್ಗೆ   ಉಪ್ಪುಂದ ಗ್ರಾಮದ  ಮಡಿಕಲ್ ಜಟ್ಟಿ ಯಿಂದ ಅರಬ್ಬಿ ಸಮುದ್ರಕ್ಕೆ  ಹೊರಟಿದ್ದು  ಫಿರ್ಯಾದುದಾರರ  ದೋಣಿಯು ಮಡಿಕಲ್ ಜಟ್ಟಿಯಿಂದ  ಸುಮಾರು 12 ನಾಟಿಕಲ್ ಮೈಲು ದೂರದಲ್ಲಿ  ಮೀನುಗಾರಿಕೆ ಮಾಡುತ್ತಿರುವಾಗ  ಸಂಜೆ 4:00 ಗಂಟೆ ಸಮಯದಲ್ಲಿ  ನಾಗರಾಜ ರವರು  ದೋಣಿಯಲ್ಲಿ ಬಲೆಯನ್ನು  ಎಳೆಯುತ್ತಿರುವಾಗ ಸಮುದ್ರದ ಅಲೆಯ ಹೊಡೆತಕ್ಕೆ  ನಾಗರಾಜ್ ರವರು ಕಾಲಿನ ಆಯತಪ್ಪಿ  ದೋಣಿಯಿಂದ  ಆಕಸ್ಮಿಕವಾಗಿ ಸಮುದ್ರಕ್ಕೆ  ಬಿದ್ದವರನ್ನು  ಕೂಡಲೇ ಫಿರ್ಯಾದುದಾರರು ಹಾಗೂ ಇತರರು ಸೇರಿ  ನೀರಿನಿಂದ ಮೇಲಕ್ಕೆ  ಎತ್ತಿ ಉಪಚರಿಸಿ ಅಸ್ವಸ್ಥಗೊಂಡ ನಾಗರಾಜ್ ರವನ್ನು ದಡಕ್ಕೆ ತಂದು ಚಿಕಿತ್ಸೆ  ಬಗ್ಗೆ  108 ಅಂಬುಲೆನ್ಸ್  ನಲ್ಲಿಉಡುಪಿ   ಅಜ್ಜರಕಾಡು ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಪರೀಕ್ಷಿಸಿದ  ವೈದ್ಯರು  ನಾಗರಾಜ್ ರವರು  ರಾತ್ರಿ  9:22 ಗಂಟೆಗೆ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 24/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ಪಿರ್ಯಾದಿ ಶೈಲಾ ಹೆಗ್ಡೆ ಇವರ ಗಂಡ ರೋಶನ್‌ ಹೆಗ್ಡೆ ಪ್ರಾಯ: 41 ವರ್ಷ ಎಂಬವರು ವ್ಯಾಪಾರದಲ್ಲಿ ನಷ್ಟ ಹೊಂದಿ ಚಿಂತೆಗೆ ಒಳಗಾಗಿ ಆರೋಗ್ಯ ಹಾನಿಯಾಗಿ, ದಿನಾಂಕ 21/04/2023 ರಂದು ಸಂಜೆ ಉಡುಪಿ ಹಳೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಸಿಲ್ವರ್‌ ಕಾಯಿನ್‌ ರೆಸ್ಟೋರೆಂಟ್‌ ಬಳಿ ಕುಸಿದು ಬಿದ್ದವರನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು, ರೋಶನ್‌ ಹೆಗ್ಡೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 20/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕುಂದಾಪುರ: ಪಿರ್ಯಾದಿ ಗುಲಾಬಿ   ಇವರ ಅಣ್ಣನಾದ  ಕೃಷ್ಣ  ಪ್ರಾಯ: 46 ವರ್ಷರವರು  ಕುಂದಾಪುರ ತಾಲೂಕಿನ ವಡೇರ ಹೋಬಳಿ ಗ್ರಾಮದ ಬಿ ಸಿ ರೋಡ್‌ ನ 81-D/9 ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಮದುವೆಯಾಗದೇ ಹಾಗೂ ಕೆಲಸಕ್ಕೆ ಹೋಗದೆ ಮನೆಯಲ್ಲೆ  ಇರುತ್ತಾರೆ. ಪಿರ್ಯಾದಿದಾರರ ಅಣ್ಣ ಸುಮಾರು 2-3 ದಿನಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು ಯಾರೊಂದಿಗೂ ಮಾತನಾಡುತ್ತಿರಲಿಲ್ಲ.  ದಿನಾಂಕ 22/04/2023 ರಂದು ಪಿರ್ಯಾದಿದಾರರ ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯ ಒಳಗಡೆ ಪಿರ್ಯಾದಿದಾರರ ಅಣ್ಣ ಕೃಷ್ಣ ಒಬ್ಬನೇ ಇದ್ದು, ಸುಮಾರು 13:45 ಗಂಟೆಯ ಸುಮಾರಿಗೆ ಮನೆಯ ಒಳಗಿನಿಂದ ಶಬ್ದ ಬಂದಿದ್ದು , ಕೂಡಲೇ ಪಿರ್ಯಾದಿದಾರರು ಮನೆಯ ಒಳಗಡೆ ಬಂದು ನೋಡುವಾಗ ಪಿರ್ಯಾದಿದಾರರ ಅಣ್ಣ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 20/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 22-04-2023 06:07 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080