ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ಛಾಯ ಗುರುರಾಜ್‌‌ (40) ಗಂಡ: ಗುರುರಾಜ್ ರಾವ್‌‌ಬಿ. ವಾಸ: ಪುತ್ಥಳಿ ಮನೆ, ರಥಬೀದಿ, ಬಾರ್ಕೂರು ಹೊಸಾಳ ಗ್ರಾಮ ಬ್ರಹ್ಮಾವರ ಇವರ ಗಂಡನಾದ ಗುರುರಾಜ್‌ ರಾವ್‌‌ ಬಿ. (47) ರವರು ಬಾರ್ಕೂರು N.J.C ಕಾಲೇಜ್‌‌ನಲ್ಲಿ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಶರಾಬು ಕುಡಿಯುವ ಹವ್ಯಾಸ ಹೊಂದಿರುತ್ತಾರೆ. ಅವರಿಗೆ ಕುಡಿತ ಬಿಡಿಸುವ ಬಗ್ಗೆ ಕೋಟಾದ ಪರಿವರ್ತನಾ ಕೇಂದ್ರ ಹಾಗೂ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು, ಆದರೆ ಅವರು ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳದೇ ಮಾನಸಿಕವಾಗಿ ವಿಚಲಿತರಾಗಿರುತ್ತಾರೆ. ಅವರು Acidity ಸಮಸ್ಯೆಯಿಂದ ಕಳೆದ 2-3 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿರುವುದಾಗಿದೆ. ಗುರುರಾಜ್‌ ರಾವ್‌‌ ಬಿ. ರವರು ಶರಾಬು ಕುಡಿತ ನಿಲ್ಲಿಸಿದ ಮೇಲೆ ಮಾನಸಿಕವಾಗಿ ವಿಚಲಿತರಾದ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21/04/2021 ರಂದು  ರಾತ್ರಿ 10:30 ಗಂಟೆಯಿಂದ ದಿನಾಂಕ 22/04/2021 ರ ಬೆಳಿಗ್ಗೆ 06:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ದಕ್ಷಿಣ ಭಾಗಕ್ಕೆ ಇರುವ ವಾಹನ ಪಾರ್ಕಿಂಗ್ ಸ್ಥಳದ ಕಬ್ಬಿಣದ ರೋಡ್‌ಗೆ ಹಳೆಯ ನೈಲಾನ್ ರೋಪ್ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌‌ ಕ್ರಮಾಂಕ 24/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 21/04/2021 ರಂದು ರಾತ್ರಿ ಸಮಯ ಸುಮಾರು 10:00 ಗಂಟೆಗೆ ಪಿರ್ಯಾದಿದಾರರಾದ ಪ್ರಿಯರಂಜನ್ (52) ತಂದೆ: ನರಸಿಂಹ ವಾಸ:ಶ್ರೀ ದೇವಿ ಪ್ರಸನ್ನ ಕುಂಬ್ರಿ ಹಳಅಳಿವೆ ಕೋಟೇಶ್ವರ ಗ್ರಾಮ,ಕುಂದಾಪುರ ಇವರು ಹಾಗೂ ಅವರ ಸ್ನೇಹಿತ ಶ್ರಿಕಾಂತರವರು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕುಂಬ್ರಿ ಹಳೆಅಳಿವೆ ಎಂಬಲ್ಲಿರುವ ತನ್ನ ಮನೆಯ ಬಳಿ ಇರುವ ದಾರಿಯಲ್ಲಿ ಮಾತನಾಡುತ್ತಿರುವಾಗ ಸಂದೀಪನು ಅಲ್ಲಿಗೆ ಬಂದಿದ್ದು, ಆಗ ಪ್ರಿಯರಂಜನ್ ರವರು ಸಂದೀಪನಲ್ಲಿ ಒಂದು ವಾರದ ಹಿಂದೆ ಶ್ರೀಕಾಂತನ ಅಣ್ಣನಿಗೆ ಯಾಕೆ ಹೊಡೆದಿದ್ದು, ಎಂದು ಕೆಳಿದಾಗ ಸಂದೀಪನು ಅವಾಚ್ಯವಾಗಿ ಬೈದು ನಿನಗೆ ಸಹ ಹೊಡೆಯುತ್ತೇನೆ ಎಂದು ಕೊಲೆ ಮಾಡುವ ಉದ್ದೇಶದಿಂದ ಆತನು ತಂದಿರುವ ಕತ್ತಿಯಿಂದ ಪ್ರಿಯರಂಜನ್ ರವರ ತಲೆಯ ಎಡಬದಿಗೆ ಹೊಡೆದು ಗಾಯಗೊಳಿಸಿದ್ದು, ಆಗ ತಪ್ಪಿಸಲು ಬಂದ ಶ್ರೀಕಾಂತ ನಿಗೆ ಕೈಯಿಂದ ಕೆನ್ನೆಗೆ ಹೊಡೆದು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲವಾಗಿ ಕೊಲೆ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021  ಕಲಂ: 323, 504, 506, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-04-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080